ETV Bharat / bharat

ಲಾರಿಗೆ ಡಿಕ್ಕಿ ಹೊಡೆದ ಬೈಕ್: ಮೂವರು ಸಹೋದರರ ದುರ್ಮರಣ

author img

By

Published : Aug 9, 2022, 8:13 PM IST

ಸಹೋದರರನ್ನು ಶಾಲೆಗೆ ಬಿಟ್ಟು ಬರಲು ತೆರಳುತ್ತಿದ್ದಾಗ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

Bike hit the lorry in Telangana
Bike hit the lorry in Telangana

ಮೇದಕ್​(ತೆಲಂಗಾಣ): ತೆಲಂಗಾಣದ ಮೇದಕ್ ಜಿಲ್ಲೆಯ ಚೇಗುಂಟಾ ಬಳಿ ಇಂದು ಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಹೋದರರು ದುರ್ಮರಣಕ್ಕೀಡಾಗಿದ್ದಾರೆ. ಲಾರಿಗೆ ಬೈಕ್ ಡಿಕ್ಕಿ ಹೊಡೆದು ಘಟನೆ ನಡೆದಿದೆ ಎಂದು ಹೇಳಲಾಗ್ತಿದೆ.

ಅಪಘಾತದಲ್ಲಿ ಚೇಗುಂಟಾ ವಿಭಾಗದ ಉಳ್ಳಿ ತಿಮ್ಮಯಪಲ್ಲಿ ನಿವಾಸಿಗಳಾದ ರಾಕೇಶ್ (20), ಪ್ರದೀಪ್ (15) ಮತ್ತು ಅರವಿಂದ್ (14) ಎಂಬ ಸಹೋದರರು ಸಾವಿಗೀಡಾಗಿದ್ದಾರೆ. ಪ್ರದೀಪ್ ಮತ್ತು ಅರವಿಂದ್ ಚೇಗುಂಟಾದ ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ಓದುತ್ತಿದ್ದಾರೆ. ಬೆಳಗ್ಗೆ ರಾಕೇಶ್ ತನ್ನ ಇಬ್ಬರು ಸಹೋದರರನ್ನು ದ್ವಿಚಕ್ರ ವಾಹನದಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾಗ ನಿಯಂತ್ರಣ ಕಳೆದುಕೊಂಡ ಬೈಕ್ ​ಲಾರಿಗೆ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: ಸರ್ಕಾರಿ ಬಸ್​​-ಆಟೋ ಅಪಘಾತ: 8 ಮಹಿಳೆಯರು ಸೇರಿ 9 ಜನರ ದುರ್ಮರಣ

ಅಪಘಾತದಲ್ಲಿ ರಾಕೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪ್ರದೀಪ್ ಮತ್ತು ಅರವಿಂದ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಅಸನೀಗಿದ್ದಾರೆ.

ಮೇದಕ್​(ತೆಲಂಗಾಣ): ತೆಲಂಗಾಣದ ಮೇದಕ್ ಜಿಲ್ಲೆಯ ಚೇಗುಂಟಾ ಬಳಿ ಇಂದು ಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಹೋದರರು ದುರ್ಮರಣಕ್ಕೀಡಾಗಿದ್ದಾರೆ. ಲಾರಿಗೆ ಬೈಕ್ ಡಿಕ್ಕಿ ಹೊಡೆದು ಘಟನೆ ನಡೆದಿದೆ ಎಂದು ಹೇಳಲಾಗ್ತಿದೆ.

ಅಪಘಾತದಲ್ಲಿ ಚೇಗುಂಟಾ ವಿಭಾಗದ ಉಳ್ಳಿ ತಿಮ್ಮಯಪಲ್ಲಿ ನಿವಾಸಿಗಳಾದ ರಾಕೇಶ್ (20), ಪ್ರದೀಪ್ (15) ಮತ್ತು ಅರವಿಂದ್ (14) ಎಂಬ ಸಹೋದರರು ಸಾವಿಗೀಡಾಗಿದ್ದಾರೆ. ಪ್ರದೀಪ್ ಮತ್ತು ಅರವಿಂದ್ ಚೇಗುಂಟಾದ ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ಓದುತ್ತಿದ್ದಾರೆ. ಬೆಳಗ್ಗೆ ರಾಕೇಶ್ ತನ್ನ ಇಬ್ಬರು ಸಹೋದರರನ್ನು ದ್ವಿಚಕ್ರ ವಾಹನದಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾಗ ನಿಯಂತ್ರಣ ಕಳೆದುಕೊಂಡ ಬೈಕ್ ​ಲಾರಿಗೆ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: ಸರ್ಕಾರಿ ಬಸ್​​-ಆಟೋ ಅಪಘಾತ: 8 ಮಹಿಳೆಯರು ಸೇರಿ 9 ಜನರ ದುರ್ಮರಣ

ಅಪಘಾತದಲ್ಲಿ ರಾಕೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪ್ರದೀಪ್ ಮತ್ತು ಅರವಿಂದ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಅಸನೀಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.