ETV Bharat / bharat

'world trauma day' : ಆಘಾತ ತೀವ್ರ ಮಾನಸಿಕ ಅಸ್ವಸ್ಥತೆಗೆ ಕಾರಣವಾಗಬಹುದು

author img

By

Published : Oct 17, 2021, 8:40 PM IST

ಪ್ರತಿ ವರ್ಷ ಅಕ್ಟೋಬರ್ 17 ರಂದು 'ವಿಶ್ವ ಮಾನಸಿಕ ಆಘಾತ ದಿನ'ವನ್ನು ಆಚರಿಸಲಾಗುತ್ತದೆ.ರಸ್ತೆ ಅಪಘಾತಗಳು, ಬೆಂಕಿ, ಸುಟ್ಟಗಾಯಗಳು, ಜಲಪಾತಗಳ ನಮ್ಮ ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಮತ್ತು ಆಘಾತಕ್ಕೆ ಕಾರಣವಾಗಬಹುದು. ಇಂತಹ ಸನ್ನಿವೇಶಗಳಲ್ಲಿ ಉಂಟಾಗುವ ಆಘಾತಗಳನ್ನು ತಪ್ಪಿಸಲು ಅನುಸರಿಸಬೇಕಾದ ಎಲ್ಲಾ ಸುರಕ್ಷತಾ ಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಗುರಿಯೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ.

world trauma day
ವಿಶ್ವ ಮಾನಸಿಕ ಆಘಾತ ದಿನ

ನಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ವಿವಿಧ ಸನ್ನಿವೇಶಗಳಿವೆ. ಅದು ಆಘಾತ ಅಥವಾ ಶಾಕ್​ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಪ್ರೀತಿ ಪಾತ್ರರ ಸಾವು ಮನಸ್ಸಿಗೆ ಹಾಗೂ ಬದುಕಿಗೆ ಹತ್ತಿರವಾದವರು ದೂರವಾಗುವುದು, ಅನಾರೋಗ್ಯ, ಹಿಂಸೆ, ವೈಫಲ್ಯ, ನೈಸರ್ಗಿಕ ವಿಪತ್ತು ಅಥವಾ ಅಂಗವೈಕಲ್ಯ ಮುಂತಾದ ಸನ್ನಿವೇಶಗಳು ಕೆಲವು ಕಾರಣಗಳಾಗಿರಬಹುದು. ಅಲ್ಲದೆ, ಆರಂಭಿಕ ಹಂತದಲ್ಲಿ ಸ್ಥಿತಿಯನ್ನು ನಿರ್ಲಕ್ಷಿಸಿದರೆ, ಅದು ತೀವ್ರವಾಗಬಹುದು ಮತ್ತು ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್‌ನ ರೂಪವನ್ನು ಪಡೆಯಬಹುದು.

ಆದ್ದರಿಂದ ಪ್ರತಿ ವರ್ಷ ಆಘಾತ ಮತ್ತು ನಮ್ಮ ಜೀವನದ ಮೇಲೆ ಮತ್ತು ನಮ್ಮ ಪ್ರೀತಿಪಾತ್ರರ ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು, ಅಕ್ಟೋಬರ್ 17 ಅನ್ನು ವಿಶ್ವ ಆಘಾತ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷದ ಈ ದಿನಾಚರಣೆಯ ಥೀಮ್ ''Timely Response Saves Lives''. (''ಸಕಾಲಿಕ ಪ್ರತಿಕ್ರಿಯೆ ಜೀವಗಳನ್ನು ಉಳಿಸುತ್ತದೆ")

Traumaದ ಲಕ್ಷಣಗಳು : ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ಆಘಾತ(Trauma )ವು ವಿಶ್ವದಾದ್ಯಂತ ಸಾವು ಮತ್ತು ಅಂಗವೈಕಲ್ಯಕ್ಕೆ ಅತಿದೊಡ್ಡ ಮತ್ತು ಪ್ರಮುಖ ಕಾರಣವಾಗಿದೆ. ಇದು ಒಬ್ಬರ ಸಾಮಾಜಿಕ, ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ಆರೋಗ್ಯ ಹಾಗೂ ಅವರ ನಡವಳಿಕೆಯ ಮೇಲೆ ಪರಿಣಾಮ ಬೀರುವುದರಿಂದ ಆಘಾತ(Trauma)ವನ್ನು ಒಂದೇ ಸ್ಥಿತಿ ಎಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ.

ಆಘಾತದಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ಈ ಕೆಳಗಿನ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ:

  • ಕೋಪ, ಕಿರಿಕಿರಿ ಮತ್ತು ಹಠಾತ್ ಮನಸ್ಥಿತಿಯ ಬದಲಾವಣೆ
  • ದುಃಖ, ಹತಾಶೆ
  • ಒಂಟಿತನ
  • ಎಲ್ಲದರಲ್ಲೂ ಆಸಕ್ತಿ ಕಳೆದುಕೊಳ್ಳುವುದು
  • ಎಲ್ಲರಿಂದ ದೂರ ಇರಲು ಬಯಸುವುದು
  • ಭಯ, ಚಿಂತೆ
  • ನಿದ್ರಾಹೀನತೆ
  • ಗಾಬರಿ
  • ಅಪನಂಬಿಕೆ
  • ಭಾವನಾತ್ಮಕ ಆಘಾತ

ಆಘಾತಕ್ಕೆ ಮುಖ್ಯ ಕಾರಣ : ರಸ್ತೆ ಅಪಘಾತಗಳನ್ನು ವಿಶ್ವದಾದ್ಯಂತ ಆಘಾತಕ್ಕೆ ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಹೆಚ್‌ಒ) ಪ್ರಕಾರ, ಸುಮಾರು 50 ಪ್ರತಿಶತ ರಸ್ತೆ ಅಪಘಾತಗಳು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸಂಭವಿಸುತ್ತವೆ.

ಭಾರತದ ಬಗ್ಗೆ ಹೇಳುವುದಾದರೆ, 2013ರಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಪ್ರಕಾರ, ರಸ್ತೆ ಅಪಘಾತಗಳಲ್ಲಿ ಸುಮಾರು 1 ಲಕ್ಷ 37 ಸಾವಿರ ಜನರು ಸಾವನ್ನಪ್ಪಿದ್ದಾರೆ. ಅಂದಿನಿಂದ ಈ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ.

ಪ್ರತಿ ವರ್ಷ, ಪ್ರಪಂಚಾದ್ಯಂತ ಸುಮಾರು 5 ಮಿಲಿಯನ್ ಜನರು ಗಾಯಗಳಿಂದ ಸಾಯುತ್ತಾರೆ. ಭಾರತದಲ್ಲಿ ಮಾತ್ರ, ಪ್ರತಿ ವರ್ಷ ಒಂದು ಮಿಲಿಯನ್ ಜನರು ಸಾಯುತ್ತಾರೆ ಮತ್ತು 20 ಮಿಲಿಯನ್ ಜನರು ಗಾಯಗಳಿಂದ ಆಸ್ಪತ್ರೆಗೆ ದಾಖಲಾಗುತ್ತಾರೆ ಎಂದು ಅಂದಾಜಿಸಲಾಗಿದೆ. ರಸ್ತೆ ಅಪಘಾತಗಳ ಹೊರತಾಗಿ, ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನೂ ನಮ್ಮ ದೇಶದಲ್ಲಿ ಆಘಾತದ ಮುಖ್ಯ ಕಾರಣಗಳಲ್ಲಿ ಪರಿಗಣಿಸಲಾಗಿದೆ.

ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?

ನಮಗೆಲ್ಲರಿಗೂ ತಿಳಿದಿರುವಂತೆ, ‘ಗುಣಪಡಿಸುವುದಕ್ಕಿಂತ ತಡೆಗಟ್ಟುವುದು ಉತ್ತಮ(Prevention is better than cure)’. ಹೀಗಾಗಿ, ಆಘಾತದಂತಹ ಪರಿಸ್ಥಿತಿಯನ್ನು ತಪ್ಪಿಸಲು, ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಮುಖ್ಯ.

  • ರಸ್ತೆ ಸುರಕ್ಷತಾ ನಿಯಮಗಳು, ಸಂಚಾರ ಸಿಗ್ನಲ್​​ ಮತ್ತು ಸಂಚಾರ ನಿಯಮಗಳನ್ನು ಅನುಸರಿಸಿ.
  • ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಯಾವಾಗಲೂ ಹೆಲ್ಮೆಟ್ ಧರಿಸಿ. ದ್ವಿಚಕ್ರ ವಾಹನ ಸವಾರಿ ಮಾಡುವ ಇಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಬಳಸಬೇಕು.
  • ಡ್ರೈವ್​ ಮಾಡುವಾಗ ನಿಮ್ಮ ಮೊಬೈಲ್ ಬಳಸಬೇಡಿ.
  • ಮನೆಯಲ್ಲಿರುವ ಮಕ್ಕಳ ಸುರಕ್ಷತೆಗೆ ವಿಶೇಷ ಗಮನ ಕೊಡಿ. ಮಕ್ಕಳನ್ನು ಎಲೆಕ್ಟ್ರಾನಿಕ್ಸ್ ಮತ್ತು ಸ್ವಿಚ್ ಬೋರ್ಡ್‌ಗಳಿಂದ ಹಾಗೂ ಚೂಪಾದ ವಸ್ತುಗಳಿಂದ ದೂರವಿಡಿ.
  • ಮೆಟ್ಟಿಲುಗಳು, ಬಾಲ್ಕನಿ, ಟೆರೆಸ್ ಮತ್ತು ಕಿಟಕಿಗಳ ಬಳಿ ಇದ್ದಾಗ ಮಕ್ಕಳ ವಿಚಾರದಲ್ಲಿ ಜಾಗರೂಕರಾಗಿರಿ.
  • CPR (Cardiopulmonary resuscitation)ದಂತಹ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸುವ ತಂತ್ರಗಳ ಬಗ್ಗೆ ತಿಳಿದಿರಲಿ.
  • ಮನೆಯಲ್ಲಿ ಮತ್ತು ನಿಮ್ಮ ವಾಹನದಲ್ಲಿ ಯಾವಾಗಲೂ ಪ್ರಥಮ ಚಿಕಿತ್ಸಾ ಕಿಟ್ ಅನ್ನು ಇಟ್ಟುಕೊಂಡಿರಿ.

ಟ್ರಾಮಾದಿಂದ ಬಳಲುತ್ತಿರುವವರಿಗೆ ಹೇಗೆ ಸಹಾಯ ಮಾಡಬಹುದು?

ಸಕಾಲಿಕ ಆರೈಕೆ ಮತ್ತು ನೆರವು ನೀಡಿದರೆ ಜನರು ಆಘಾತಗಳಿಂದ ಚೇತರಿಸಿಕೊಳ್ಳಬಹುದು. ಆದರೆ, ಆಘಾತಕ್ಕೊಳಗಾಗಿರುವವರ ಕುಟುಂಬ ಮತ್ತು ಸ್ನೇಹಿತರು ತಮ್ಮ ಭರವಸೆ ಕಳೆದುಕೊಳ್ಳದಿರುವುದು ಮತ್ತು ಕೆಟ್ಟ ಸನ್ನಿವೇಶಗಳಲ್ಲಿಯೂ ಸಹ ಅವರಿಗೆ ಸಹಾಯ ಮಾಡುವುದು ಮುಖ್ಯ. ಅವರನ್ನು ನೋಡಿಕೊಳ್ಳುವವರು ರೋಗಿಯೊಂದಿಗೆ ತಾಳ್ಮೆಯಿಂದಿರಬೇಕು.

ಇದರೊಂದಿಗೆ ಆಘಾತಕ್ಕೊಳಗಾಗಿರುವವರ ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಲು ಮತ್ತು ಅವನ ಸುತ್ತಲಿನ ಪರಿಸರವನ್ನು ಆಹ್ಲಾದಕರವಾಗಿಡಲು ಪ್ರಯತ್ನಿಸಬೇಕು. ಅವರ ಭಯವನ್ನು ಹೋಗಲಾಡಿಸಲು ಮತ್ತು ಜೀವನ ಮುಂದುವರಿಸಲು ಅವರಿಗೆ ಸಹಾಯ ಮಾಡಿ.

ನಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ವಿವಿಧ ಸನ್ನಿವೇಶಗಳಿವೆ. ಅದು ಆಘಾತ ಅಥವಾ ಶಾಕ್​ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಪ್ರೀತಿ ಪಾತ್ರರ ಸಾವು ಮನಸ್ಸಿಗೆ ಹಾಗೂ ಬದುಕಿಗೆ ಹತ್ತಿರವಾದವರು ದೂರವಾಗುವುದು, ಅನಾರೋಗ್ಯ, ಹಿಂಸೆ, ವೈಫಲ್ಯ, ನೈಸರ್ಗಿಕ ವಿಪತ್ತು ಅಥವಾ ಅಂಗವೈಕಲ್ಯ ಮುಂತಾದ ಸನ್ನಿವೇಶಗಳು ಕೆಲವು ಕಾರಣಗಳಾಗಿರಬಹುದು. ಅಲ್ಲದೆ, ಆರಂಭಿಕ ಹಂತದಲ್ಲಿ ಸ್ಥಿತಿಯನ್ನು ನಿರ್ಲಕ್ಷಿಸಿದರೆ, ಅದು ತೀವ್ರವಾಗಬಹುದು ಮತ್ತು ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್‌ನ ರೂಪವನ್ನು ಪಡೆಯಬಹುದು.

ಆದ್ದರಿಂದ ಪ್ರತಿ ವರ್ಷ ಆಘಾತ ಮತ್ತು ನಮ್ಮ ಜೀವನದ ಮೇಲೆ ಮತ್ತು ನಮ್ಮ ಪ್ರೀತಿಪಾತ್ರರ ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು, ಅಕ್ಟೋಬರ್ 17 ಅನ್ನು ವಿಶ್ವ ಆಘಾತ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷದ ಈ ದಿನಾಚರಣೆಯ ಥೀಮ್ ''Timely Response Saves Lives''. (''ಸಕಾಲಿಕ ಪ್ರತಿಕ್ರಿಯೆ ಜೀವಗಳನ್ನು ಉಳಿಸುತ್ತದೆ")

Traumaದ ಲಕ್ಷಣಗಳು : ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ಆಘಾತ(Trauma )ವು ವಿಶ್ವದಾದ್ಯಂತ ಸಾವು ಮತ್ತು ಅಂಗವೈಕಲ್ಯಕ್ಕೆ ಅತಿದೊಡ್ಡ ಮತ್ತು ಪ್ರಮುಖ ಕಾರಣವಾಗಿದೆ. ಇದು ಒಬ್ಬರ ಸಾಮಾಜಿಕ, ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ಆರೋಗ್ಯ ಹಾಗೂ ಅವರ ನಡವಳಿಕೆಯ ಮೇಲೆ ಪರಿಣಾಮ ಬೀರುವುದರಿಂದ ಆಘಾತ(Trauma)ವನ್ನು ಒಂದೇ ಸ್ಥಿತಿ ಎಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ.

ಆಘಾತದಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ಈ ಕೆಳಗಿನ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ:

  • ಕೋಪ, ಕಿರಿಕಿರಿ ಮತ್ತು ಹಠಾತ್ ಮನಸ್ಥಿತಿಯ ಬದಲಾವಣೆ
  • ದುಃಖ, ಹತಾಶೆ
  • ಒಂಟಿತನ
  • ಎಲ್ಲದರಲ್ಲೂ ಆಸಕ್ತಿ ಕಳೆದುಕೊಳ್ಳುವುದು
  • ಎಲ್ಲರಿಂದ ದೂರ ಇರಲು ಬಯಸುವುದು
  • ಭಯ, ಚಿಂತೆ
  • ನಿದ್ರಾಹೀನತೆ
  • ಗಾಬರಿ
  • ಅಪನಂಬಿಕೆ
  • ಭಾವನಾತ್ಮಕ ಆಘಾತ

ಆಘಾತಕ್ಕೆ ಮುಖ್ಯ ಕಾರಣ : ರಸ್ತೆ ಅಪಘಾತಗಳನ್ನು ವಿಶ್ವದಾದ್ಯಂತ ಆಘಾತಕ್ಕೆ ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಹೆಚ್‌ಒ) ಪ್ರಕಾರ, ಸುಮಾರು 50 ಪ್ರತಿಶತ ರಸ್ತೆ ಅಪಘಾತಗಳು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸಂಭವಿಸುತ್ತವೆ.

ಭಾರತದ ಬಗ್ಗೆ ಹೇಳುವುದಾದರೆ, 2013ರಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಪ್ರಕಾರ, ರಸ್ತೆ ಅಪಘಾತಗಳಲ್ಲಿ ಸುಮಾರು 1 ಲಕ್ಷ 37 ಸಾವಿರ ಜನರು ಸಾವನ್ನಪ್ಪಿದ್ದಾರೆ. ಅಂದಿನಿಂದ ಈ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ.

ಪ್ರತಿ ವರ್ಷ, ಪ್ರಪಂಚಾದ್ಯಂತ ಸುಮಾರು 5 ಮಿಲಿಯನ್ ಜನರು ಗಾಯಗಳಿಂದ ಸಾಯುತ್ತಾರೆ. ಭಾರತದಲ್ಲಿ ಮಾತ್ರ, ಪ್ರತಿ ವರ್ಷ ಒಂದು ಮಿಲಿಯನ್ ಜನರು ಸಾಯುತ್ತಾರೆ ಮತ್ತು 20 ಮಿಲಿಯನ್ ಜನರು ಗಾಯಗಳಿಂದ ಆಸ್ಪತ್ರೆಗೆ ದಾಖಲಾಗುತ್ತಾರೆ ಎಂದು ಅಂದಾಜಿಸಲಾಗಿದೆ. ರಸ್ತೆ ಅಪಘಾತಗಳ ಹೊರತಾಗಿ, ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನೂ ನಮ್ಮ ದೇಶದಲ್ಲಿ ಆಘಾತದ ಮುಖ್ಯ ಕಾರಣಗಳಲ್ಲಿ ಪರಿಗಣಿಸಲಾಗಿದೆ.

ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?

ನಮಗೆಲ್ಲರಿಗೂ ತಿಳಿದಿರುವಂತೆ, ‘ಗುಣಪಡಿಸುವುದಕ್ಕಿಂತ ತಡೆಗಟ್ಟುವುದು ಉತ್ತಮ(Prevention is better than cure)’. ಹೀಗಾಗಿ, ಆಘಾತದಂತಹ ಪರಿಸ್ಥಿತಿಯನ್ನು ತಪ್ಪಿಸಲು, ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಮುಖ್ಯ.

  • ರಸ್ತೆ ಸುರಕ್ಷತಾ ನಿಯಮಗಳು, ಸಂಚಾರ ಸಿಗ್ನಲ್​​ ಮತ್ತು ಸಂಚಾರ ನಿಯಮಗಳನ್ನು ಅನುಸರಿಸಿ.
  • ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಯಾವಾಗಲೂ ಹೆಲ್ಮೆಟ್ ಧರಿಸಿ. ದ್ವಿಚಕ್ರ ವಾಹನ ಸವಾರಿ ಮಾಡುವ ಇಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಬಳಸಬೇಕು.
  • ಡ್ರೈವ್​ ಮಾಡುವಾಗ ನಿಮ್ಮ ಮೊಬೈಲ್ ಬಳಸಬೇಡಿ.
  • ಮನೆಯಲ್ಲಿರುವ ಮಕ್ಕಳ ಸುರಕ್ಷತೆಗೆ ವಿಶೇಷ ಗಮನ ಕೊಡಿ. ಮಕ್ಕಳನ್ನು ಎಲೆಕ್ಟ್ರಾನಿಕ್ಸ್ ಮತ್ತು ಸ್ವಿಚ್ ಬೋರ್ಡ್‌ಗಳಿಂದ ಹಾಗೂ ಚೂಪಾದ ವಸ್ತುಗಳಿಂದ ದೂರವಿಡಿ.
  • ಮೆಟ್ಟಿಲುಗಳು, ಬಾಲ್ಕನಿ, ಟೆರೆಸ್ ಮತ್ತು ಕಿಟಕಿಗಳ ಬಳಿ ಇದ್ದಾಗ ಮಕ್ಕಳ ವಿಚಾರದಲ್ಲಿ ಜಾಗರೂಕರಾಗಿರಿ.
  • CPR (Cardiopulmonary resuscitation)ದಂತಹ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸುವ ತಂತ್ರಗಳ ಬಗ್ಗೆ ತಿಳಿದಿರಲಿ.
  • ಮನೆಯಲ್ಲಿ ಮತ್ತು ನಿಮ್ಮ ವಾಹನದಲ್ಲಿ ಯಾವಾಗಲೂ ಪ್ರಥಮ ಚಿಕಿತ್ಸಾ ಕಿಟ್ ಅನ್ನು ಇಟ್ಟುಕೊಂಡಿರಿ.

ಟ್ರಾಮಾದಿಂದ ಬಳಲುತ್ತಿರುವವರಿಗೆ ಹೇಗೆ ಸಹಾಯ ಮಾಡಬಹುದು?

ಸಕಾಲಿಕ ಆರೈಕೆ ಮತ್ತು ನೆರವು ನೀಡಿದರೆ ಜನರು ಆಘಾತಗಳಿಂದ ಚೇತರಿಸಿಕೊಳ್ಳಬಹುದು. ಆದರೆ, ಆಘಾತಕ್ಕೊಳಗಾಗಿರುವವರ ಕುಟುಂಬ ಮತ್ತು ಸ್ನೇಹಿತರು ತಮ್ಮ ಭರವಸೆ ಕಳೆದುಕೊಳ್ಳದಿರುವುದು ಮತ್ತು ಕೆಟ್ಟ ಸನ್ನಿವೇಶಗಳಲ್ಲಿಯೂ ಸಹ ಅವರಿಗೆ ಸಹಾಯ ಮಾಡುವುದು ಮುಖ್ಯ. ಅವರನ್ನು ನೋಡಿಕೊಳ್ಳುವವರು ರೋಗಿಯೊಂದಿಗೆ ತಾಳ್ಮೆಯಿಂದಿರಬೇಕು.

ಇದರೊಂದಿಗೆ ಆಘಾತಕ್ಕೊಳಗಾಗಿರುವವರ ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಲು ಮತ್ತು ಅವನ ಸುತ್ತಲಿನ ಪರಿಸರವನ್ನು ಆಹ್ಲಾದಕರವಾಗಿಡಲು ಪ್ರಯತ್ನಿಸಬೇಕು. ಅವರ ಭಯವನ್ನು ಹೋಗಲಾಡಿಸಲು ಮತ್ತು ಜೀವನ ಮುಂದುವರಿಸಲು ಅವರಿಗೆ ಸಹಾಯ ಮಾಡಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.