ETV Bharat / bharat

ಟೂಲ್​ ಕಿಟ್​ ಪ್ರಕರಣ: ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ನಿಕಿತಾ ಜಾಕೋಬ್

author img

By

Published : Feb 15, 2021, 3:38 PM IST

Updated : Feb 15, 2021, 4:46 PM IST

ಟೂಲ್​ಕಿಟ್​ ಪ್ರಕರಣದಲ್ಲಿ ಜಾಕೋಬ್ ಮತ್ತು ಇನ್ನೋರ್ವ ಆರೋಪಿ ವಿರುದ್ಧ ದೆಹಲಿ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಈ ಹಿನ್ನೆಲೆ ಬಾಂಬೆ ಹೈಕೋರ್ಟ್​ಗೆ ನಿರೀಕ್ಷಣಾ ಜಾಮೀನು ಕೋರಿ ನಿಕಿತಾ ಜಾಕೋಬ್ ಅರ್ಜಿ ಸಲ್ಲಿಸಿದ್ದಾರೆ.

ಬಾಂಬೆ ಹೈಕೋರ್ಟ್​ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ನಿಕಿತಾ ಜಾಕೋಬ್
ಬಾಂಬೆ ಹೈಕೋರ್ಟ್​ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ನಿಕಿತಾ ಜಾಕೋಬ್

ಮುಂಬೈ: ರೈತರ ಪ್ರತಿಭಟನೆಗೆ ಸಂಬಂಧಿಸಿದ “ಟೂಲ್​ಕಿಟ್” ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲೆ ನಿಕಿತಾ ಜಾಕೋಬ್ ಬಾಂಬೆ ಹೈಕೋರ್ಟ್​ನಲ್ಲಿ ನಿರೀಕ್ಷಣಾ ಜಾಮೀನು ಟರ್ಜಿ ಸಲ್ಲಿಸಿದ್ದಾರೆ.

ಟೂಲ್​ಕಿಟ್​ ಪ್ರಕರಣದಲ್ಲಿ ಜಾಕೋಬ್ ಮತ್ತು ಇನ್ನೋರ್ವ ಆರೋಪಿ ವಿರುದ್ಧ ದೆಹಲಿ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ತುರ್ತು ವಿಚಾರಣೆ ಕೋರಿ ಜಾಕೋಬ್ ತಮ್ಮ ಮನವಿಯನ್ನು ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಜಾಕೋಬ್ 4 ವಾರಗಳವರೆಗೆ ಪ್ರಯಾಣಿಸುವ ವೇಳೆ ಬಂಧಿಸದಂತೆ ನಿರೀಕ್ಷಣಾ ಜಾಮೀನು ಕೋರಿದ್ದಾರೆ. ಅಲ್ಲದೇ ಯಾವುದೇ ವಿಪರೀತ ಕ್ರಮಗಳನ್ನು ಕೈಗೊಳ್ಳಬಾರದು ಎಂಬ ಮನವಿಯನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ: ಪಂಚಮಸಾಲಿ ಸಮಾವೇಶಕ್ಕೆ ಅಗತ್ಯ ಭದ್ರತೆ: ಬಸವರಾಜ್​ ಬೊಮ್ಮಾಯಿ

ತನಿಖೆಯ ಹೆಸರಿನಲ್ಲಿ ಯಾವುದೇ ಅಪರಾಧ ಮಾಡದಿದ್ದರೂ ಸುಳ್ಳು ಮತ್ತು ಕ್ಷುಲ್ಲಕ ಪ್ರಕರಣದಲ್ಲಿ ಬಂಧಿಸಬಹುದೆಂಬ ಹೆದರಿಕೆಯಿಂದ ಜಾಕೋಬ್ ಈ ಅರ್ಜಿ ಸಲ್ಲಿಸಿದ್ದಾರಂತೆ. ನಿಕಿತಾ ಜಾಕೋಬ್ ತಮ್ಮನ್ನು ತಾವು ಪರಿಸರ ಕಾರ್ಯಕರ್ತೆ ಎಂದೂ ಹೇಳಿಕೊಳ್ಳುತ್ತಾರೆ.

ಈ ಮನವಿಯು ನ್ಯಾಯಮೂರ್ತಿ ಪಿ.ಡಿ.ನಾಯಕ್ ಅವರ ಏಕಪೀಠದ ಮುಂದೆ ಸಲ್ಲಿಕೆಯಾಗಿದ್ದು, ನಾಳೆ ವಿಚಾರಣೆ ನಡೆಯಲಿದೆ.

ಮುಂಬೈ: ರೈತರ ಪ್ರತಿಭಟನೆಗೆ ಸಂಬಂಧಿಸಿದ “ಟೂಲ್​ಕಿಟ್” ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲೆ ನಿಕಿತಾ ಜಾಕೋಬ್ ಬಾಂಬೆ ಹೈಕೋರ್ಟ್​ನಲ್ಲಿ ನಿರೀಕ್ಷಣಾ ಜಾಮೀನು ಟರ್ಜಿ ಸಲ್ಲಿಸಿದ್ದಾರೆ.

ಟೂಲ್​ಕಿಟ್​ ಪ್ರಕರಣದಲ್ಲಿ ಜಾಕೋಬ್ ಮತ್ತು ಇನ್ನೋರ್ವ ಆರೋಪಿ ವಿರುದ್ಧ ದೆಹಲಿ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ತುರ್ತು ವಿಚಾರಣೆ ಕೋರಿ ಜಾಕೋಬ್ ತಮ್ಮ ಮನವಿಯನ್ನು ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಜಾಕೋಬ್ 4 ವಾರಗಳವರೆಗೆ ಪ್ರಯಾಣಿಸುವ ವೇಳೆ ಬಂಧಿಸದಂತೆ ನಿರೀಕ್ಷಣಾ ಜಾಮೀನು ಕೋರಿದ್ದಾರೆ. ಅಲ್ಲದೇ ಯಾವುದೇ ವಿಪರೀತ ಕ್ರಮಗಳನ್ನು ಕೈಗೊಳ್ಳಬಾರದು ಎಂಬ ಮನವಿಯನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ: ಪಂಚಮಸಾಲಿ ಸಮಾವೇಶಕ್ಕೆ ಅಗತ್ಯ ಭದ್ರತೆ: ಬಸವರಾಜ್​ ಬೊಮ್ಮಾಯಿ

ತನಿಖೆಯ ಹೆಸರಿನಲ್ಲಿ ಯಾವುದೇ ಅಪರಾಧ ಮಾಡದಿದ್ದರೂ ಸುಳ್ಳು ಮತ್ತು ಕ್ಷುಲ್ಲಕ ಪ್ರಕರಣದಲ್ಲಿ ಬಂಧಿಸಬಹುದೆಂಬ ಹೆದರಿಕೆಯಿಂದ ಜಾಕೋಬ್ ಈ ಅರ್ಜಿ ಸಲ್ಲಿಸಿದ್ದಾರಂತೆ. ನಿಕಿತಾ ಜಾಕೋಬ್ ತಮ್ಮನ್ನು ತಾವು ಪರಿಸರ ಕಾರ್ಯಕರ್ತೆ ಎಂದೂ ಹೇಳಿಕೊಳ್ಳುತ್ತಾರೆ.

ಈ ಮನವಿಯು ನ್ಯಾಯಮೂರ್ತಿ ಪಿ.ಡಿ.ನಾಯಕ್ ಅವರ ಏಕಪೀಠದ ಮುಂದೆ ಸಲ್ಲಿಕೆಯಾಗಿದ್ದು, ನಾಳೆ ವಿಚಾರಣೆ ನಡೆಯಲಿದೆ.

Last Updated : Feb 15, 2021, 4:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.