ETV Bharat / bharat

ಎದುರಿಗೆ ಬಂದು ಡಿಕ್ಕಿ ಹೊಡೆದ ‘ಯಮರಾಜ’.. ಒಬ್ಬನೇ ಮಗ, ತಂದೆ - ತಾಯಿ ಕಳೆದುಕೊಂಡ ವ್ಯಕ್ತಿ!

author img

By

Published : Jul 27, 2021, 11:31 AM IST

ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ವಿಕಾರಾಬಾದ್​ನಲ್ಲಿ ಸಂಭವಿಸಿದೆ.

Three people killed in road accident, Three people killed in road accident in Vikarabad, Vikarabad crime news, ರಸ್ತೆ ಅಪಘಾತದಲ್ಲಿ ಮೂವರು ಸಾವು, ವಿಕಾರಾಬಾದ್​ ರಸ್ತೆ ಅಪಘಾತದಲ್ಲಿ ಮೂವರು ಸಾವು, ವಿಕಾರಾಬಾದ್​ ಅಪರಾಧ ಸುದ್ದಿ,
ಒಬ್ಬನೇ ಮಗ, ತಂದೆ-ತಾಯಿಯನ್ನು ಕಳೆದುಕೊಂಡ ವ್ಯಕ್ತಿ

ವಿಕಾರಾಬಾದ್​: ಸಂಬಂಧಿಕರೊಬ್ಬರ ಮನೆಯಲ್ಲಿ ನಡೆದ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ಸಂದಂರ್ಭದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬ ಮೂವರು ಸಾವನ್ನಪ್ಪಿದ್ದಾರೆ. ಈ ಘಟನೆ ಪೂಡೂರಿನಲ್ಲಿ ಸಂಭವಿಸಿದೆ.

ವಿಕಾರಾಬಾದ್​ನ ಬಿಟಿಎಸ್​ ಕಾಲೋನಿ ನಿವಾಸಿ ಎರ್ರಪಲ್ಲಿ ಸಂತೋಷ್​ರೆಡ್ಡಿ, ಹೆಂಡ್ತಿ ಸ್ವಾತಿ ಸಾಫ್ಟ್​ವೇರ್​ ಉದ್ಯೋಗಸ್ಥರು. ಸಂತೋಷ್​ ರೆಡ್ಡಿ ಹೈದರಾಬಾದ್​ನಲ್ಲಿ ಕೆಲಸ ಮಾಡುತ್ತಿದ್ದು, ಸಂತೋಷ್​ ಪತ್ನಿ ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿದ್ದಾರೆ.

ಸಮೀಪದ ಬಂಧುಗಳ ಕಾರ್ಯಕ್ರಮವೊಂದಕ್ಕೆ ಹಾಜರಾಗಲು ಕಾರಿನಲ್ಲಿ ಸಂತೋಷ್​ ರೆಡ್ಡಿ, ಆತನ ತಂದೆ ಮಲ್ಲಿಕಾರ್ಜುನ್​ ರೆಡ್ಡಿ (61), ತಾಯಿ ರಾಜಲಕ್ಷ್ಮಿ ಮತ್ತು ಮಗ ದೇವಾನ್ಷ್​ ರೆಡ್ಡಿ (6) ಸೇರಿ ವಿಕಾರಾಬಾದ್​ಗೆ ಭಾನುವಾರ ತೆರಳಿದ್ದು. ಭಾನುವಾರ ತಡರಾತ್ರಿಯವರೆಗೆ ಕಾರ್ಯಕ್ರಮ ನಡೆದ ಹಿನ್ನೆಲೆ ಅವರು ಸೋಮವಾರ ಬೆಳಗ್ಗೆ 7 ಗಂಟೆಗೆ ವಿಕಾರಾಬಾದ್​ನಿಂದ ತಮ್ಮ ಊರಿನತ್ತ ಪ್ರಯಾಣ ಬೆಳಸಿದ್ದರು.

ಇಲ್ಲಿನ ಕೊಂಡಪಲ್ಲಿ ಗೇಟ್​ ದಾಟಿದಾಕ್ಷಣವೇ ಎದುರಿಗೆ ಬಂದ ಕ್ವಾಲಿಸ್​ ಕಾರು ನಿಯಂತ್ರಣ ತಪ್ಪಿ ಇವರ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸಂತೋಷ್​ ರೆಡ್ಡಿ ಮಗ ದೇವಾನ್ಷ್​ ರೆಡ್ಡಿ, ಸಂತೋಷ್​ ರೆಡ್ಡಿ ತಂದೆ ಮಲ್ಲಿಕಾರ್ಜುನ್​ ರೆಡ್ಡಿ ಮತ್ತು ಆತನ ತಾಯಿ ರಾಜಲಕ್ಷ್ಮಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಇನ್ನು ಸಂತೋಷ್​ ರೆಡ್ಡಿಗೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.

ಸಂತೋಷ್​ ರೆಡ್ಡಿಗೆ ದೇವಾನ್ಷ್​ ಒಬ್ಬನೇ ಮಗನಾಗಿದ್ದಾನೆ. ಈ ಅಪಘಾತ ಸಂಭವಿಸಿರುವ ಬಗ್ಗೆ ಸಂತೋಷ್ ರೆಡ್ಡಿ ಪತ್ನಿ ಸ್ವಾತಿಗೆ ಮಾಹಿತಿ ತಿಳಿಸಿದ್ದು, ಅಮೆರಿಕದಿಂದ ಸ್ವಗ್ರಾಮಕ್ಕೆ ಮರಳುತ್ತಿದ್ದಾರೆ. ಈ ಘಟನೆ ಕುರಿತು ಪೂಡೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಕಾರಾಬಾದ್​: ಸಂಬಂಧಿಕರೊಬ್ಬರ ಮನೆಯಲ್ಲಿ ನಡೆದ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ಸಂದಂರ್ಭದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬ ಮೂವರು ಸಾವನ್ನಪ್ಪಿದ್ದಾರೆ. ಈ ಘಟನೆ ಪೂಡೂರಿನಲ್ಲಿ ಸಂಭವಿಸಿದೆ.

ವಿಕಾರಾಬಾದ್​ನ ಬಿಟಿಎಸ್​ ಕಾಲೋನಿ ನಿವಾಸಿ ಎರ್ರಪಲ್ಲಿ ಸಂತೋಷ್​ರೆಡ್ಡಿ, ಹೆಂಡ್ತಿ ಸ್ವಾತಿ ಸಾಫ್ಟ್​ವೇರ್​ ಉದ್ಯೋಗಸ್ಥರು. ಸಂತೋಷ್​ ರೆಡ್ಡಿ ಹೈದರಾಬಾದ್​ನಲ್ಲಿ ಕೆಲಸ ಮಾಡುತ್ತಿದ್ದು, ಸಂತೋಷ್​ ಪತ್ನಿ ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿದ್ದಾರೆ.

ಸಮೀಪದ ಬಂಧುಗಳ ಕಾರ್ಯಕ್ರಮವೊಂದಕ್ಕೆ ಹಾಜರಾಗಲು ಕಾರಿನಲ್ಲಿ ಸಂತೋಷ್​ ರೆಡ್ಡಿ, ಆತನ ತಂದೆ ಮಲ್ಲಿಕಾರ್ಜುನ್​ ರೆಡ್ಡಿ (61), ತಾಯಿ ರಾಜಲಕ್ಷ್ಮಿ ಮತ್ತು ಮಗ ದೇವಾನ್ಷ್​ ರೆಡ್ಡಿ (6) ಸೇರಿ ವಿಕಾರಾಬಾದ್​ಗೆ ಭಾನುವಾರ ತೆರಳಿದ್ದು. ಭಾನುವಾರ ತಡರಾತ್ರಿಯವರೆಗೆ ಕಾರ್ಯಕ್ರಮ ನಡೆದ ಹಿನ್ನೆಲೆ ಅವರು ಸೋಮವಾರ ಬೆಳಗ್ಗೆ 7 ಗಂಟೆಗೆ ವಿಕಾರಾಬಾದ್​ನಿಂದ ತಮ್ಮ ಊರಿನತ್ತ ಪ್ರಯಾಣ ಬೆಳಸಿದ್ದರು.

ಇಲ್ಲಿನ ಕೊಂಡಪಲ್ಲಿ ಗೇಟ್​ ದಾಟಿದಾಕ್ಷಣವೇ ಎದುರಿಗೆ ಬಂದ ಕ್ವಾಲಿಸ್​ ಕಾರು ನಿಯಂತ್ರಣ ತಪ್ಪಿ ಇವರ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸಂತೋಷ್​ ರೆಡ್ಡಿ ಮಗ ದೇವಾನ್ಷ್​ ರೆಡ್ಡಿ, ಸಂತೋಷ್​ ರೆಡ್ಡಿ ತಂದೆ ಮಲ್ಲಿಕಾರ್ಜುನ್​ ರೆಡ್ಡಿ ಮತ್ತು ಆತನ ತಾಯಿ ರಾಜಲಕ್ಷ್ಮಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಇನ್ನು ಸಂತೋಷ್​ ರೆಡ್ಡಿಗೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.

ಸಂತೋಷ್​ ರೆಡ್ಡಿಗೆ ದೇವಾನ್ಷ್​ ಒಬ್ಬನೇ ಮಗನಾಗಿದ್ದಾನೆ. ಈ ಅಪಘಾತ ಸಂಭವಿಸಿರುವ ಬಗ್ಗೆ ಸಂತೋಷ್ ರೆಡ್ಡಿ ಪತ್ನಿ ಸ್ವಾತಿಗೆ ಮಾಹಿತಿ ತಿಳಿಸಿದ್ದು, ಅಮೆರಿಕದಿಂದ ಸ್ವಗ್ರಾಮಕ್ಕೆ ಮರಳುತ್ತಿದ್ದಾರೆ. ಈ ಘಟನೆ ಕುರಿತು ಪೂಡೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.