ಕರೂರ್ (ತಮಿಳುನಾಡು): ಪಿಎಂ ರೈತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಕೇಂದ್ರ ಮೂರು ನೂತನ ಕೃಷಿ ಕಾನೂನುಗಳನ್ನು ಜಾರಿಗೆ ತಂದಿದ್ದು, ಅದು ಭಾರತೀಯ ಕೃಷಿಯನ್ನು ನಾಶಪಡಿಸುತ್ತದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ತಮಿಳುನಾಡಿನ ಕರೂರ್ನಲ್ಲಿ ನಡೆದ ಕಾಂಗ್ರೆಸ್ ರೋಡ್ ಶೋನಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ, ಕೇಂದ್ರ 2-3 ದೊಡ್ಡ ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರಿಸಲಿದೆ. ರೈತರು ತಮ್ಮನ್ನು ರಕ್ಷಿಸಿಕೊಳ್ಳಲು ನ್ಯಾಯಾಲಯಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಒಂದು ಕಾನೂನು ಸ್ಪಷ್ಟವಾಗಿ ಹೇಳುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಇಂದು ರಾಷ್ಟ್ರೀಯ ಮತದಾರರ ದಿನ: ಚುನಾವಣಾ ಆಯೋಗದ ಕೊಡುಗೆ ಪ್ರಶಂಸಿದ ಮೋದಿ
ಕಳೆದ ಆರು ವರ್ಷಗಳಲ್ಲಿ ನಾವು ಪ್ರಧಾನಿ ಅವರ ಕೆಲಸ ನೋಡುವುದಾದರೆ, ಭಾರತದ ಆರ್ಥಿಕತೆ ಆ ಮೂಲಕ ದೇಶ ಬಡವಾಗಿದೆ. ದೇಶ ಎರಡು ಭಾಗವಾಗಿರುವುದು ಎದ್ದು ಕಾಣುತ್ತಿದೆ. ದೇಶಾದ್ಯಂತ ಆರ್ಎಸ್ಎಸ್ - ಬಿಜೆಪಿ ಸಿದ್ದಾಂತವನ್ನ ಪ್ರಚುರ ಪಡಿಸಲಾಗುತ್ತಿದೆ. ನಮ್ಮ ಅತಿದೊಡ್ಡ ಶಕ್ತಿ ಎಂದರೆ ಆರ್ಥಿಕತೆಯನ್ನ ಸರ್ವನಾಶ ಮಾಡಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆಕ್ರೋಶ ಹೊರ ಹಾಕಿದ್ದಾರೆ.