ಮುಂಬೈ: ಕೋವಿಡ್ ಅವಧಿಯಲ್ಲಿ ದೇಶದ ಜನರಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಬಿಜೆಪಿ ಹಿಂದೂ - ಮುಸ್ಲಿಂ ಗಲಭೆಗಳನ್ನು ಪ್ರಚೋದಿಸಲು ಪ್ರಯತ್ನಿಸುತ್ತದೆ ಎಂದು ವಂಚಿತ ಬಹುಜನ ಒಕ್ಕೂಟದ ನಾಯಕ ಪ್ರಕಾಶ್ ಅಂಬೇಡ್ಕರ್ ಆರೋಪಿಸಿದ್ದಾರೆ.
ಮುಂಬೈನಲ್ಲಿ ಮರಾಠಿ ಪತ್ರಿಕಾ ಸಂಘ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಗಲಭೆಗಳನ್ನು ತಡೆಗಟ್ಟಲು 'ಲಾಭ ಮೊಹಮ್ಮದ್ ಮತ್ತು ಇತರ ಧಾರ್ಮಿಕ ಮುಖ್ಯಸ್ಥರು ಅಪಪ್ರಚಾರ ನಿಷೇಧ 2021' ಅನ್ನು ಅಂಗೀಕರಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಿದರು. ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಈ ಕಾನೂನನ್ನು ಪರಿಚಯಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಂಬೇಡ್ಕರ್ ಹೇಳಿದರು.
ಭಾರತವು ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ಸಣ್ಣ ಹಾಗೂ ದೊಡ್ಡ ದೊಡ್ಡ ಜನಾಂಗೀಯ ಗಲಭೆಗಳಿಗೆ ಸಾಕ್ಷಿಯಾಗಿದೆ. ಇದರಲ್ಲಿ ಅನೇಕ ಜನರನ್ನು ಹತ್ಯೆ ಮಾಡಲಾಗಿದೆ. ಹಿಂದೂ, ಮುಸ್ಲಿಂ, ಸಿಖ್ಖರು, ಪಾರ್ಸಿಗಳು ಮತ್ತು ಬೌದ್ಧರಿಗೆ ಇದರ ಬಗ್ಗೆ ಅವರಿದೆ. ಅನೇಕ ಜೀವಗಳನ್ನು ಬಲಿ ತೆಗೆದುಕೊಂಡ ಕೋಮು ಗಲಭೆಗಳ ಹಿಂದಿನ ಕಾರ್ಯತಂತ್ರಗಳ ಬಗ್ಗೆ ಈಗ ಅರ್ಥಮಾಡಿಕೊಂಡಿದ್ದಾರೆ ಎಂದರು.
ಇದನ್ನೂ ಓದಿ: ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಜೂ.28ರ ವರೆಗೆ ಎನ್ಐಎ ವಶಕ್ಕೆ ನೀಡಿದ ಕೋರ್ಟ್
ದೇವಾಲಯ, ಮಸೀದಿಯಲ್ಲಿ ಮಾಂಸ ಎಸೆಯುವುದು, ಪ್ರಚೋದನಕಾರಿ ಮತ್ತು ಆಕ್ಷೇಪಾರ್ಹ ಭಾಷೆ ಬಳಸಿ ಗುಂಪುಗಳನ್ನು ಪ್ರಚೋದಿಸುವುದು, ಸುಳ್ಳು ಆರೋಪಗಳಿಂದ ಪರಸ್ಪರರ ಮೇಲೆ ಹಲ್ಲೆ ಮಾಡುವುದು, ವದಂತಿಗಳನ್ನು ಹರಡುವುದು ಇವೆಲ್ಲವೂ ಸಮಾಜ ವಿರೋಧಿ ಸಂಘಟನೆಗಳ ಪಿತೂರಿಗಳು ಎಂಬುದನ್ನ ಸಮಾಜ ಅರಿತುಕೊಂಡಿದೆ. ಈ ಎಲ್ಲ ಪಿತೂರಿಗಳು ವಿಫಲವಾದಾಗ, ಬಾಂಬ್ ಸ್ಫೋಟ ಮತ್ತು ಗುಂಪುದಾಳಿಯಂತಹ ಕೃತ್ಯಗಳನ್ನು ಕೈಗೊಳ್ಳಲಾಗುತ್ತದೆ. ಮುಜಾಫರ್ಪುರದಲ್ಲಿ ಮಾಡಿದ ಪ್ರಯತ್ನ ವಿಫಲವಾಗಿದೆ ಎಂದು ಪ್ರಕಾಶ್ ಹೇಳಿದ್ದಾರೆ.
ಎಲ್ಲ ರಂಗಗಳಲ್ಲೂ ಪ್ರಸ್ತುತ ಸರ್ಕಾರದ ವೈಫಲ್ಯ ಈಗ ಮುನ್ನೆಲೆಗೆ ಬಂದಿದೆ. ಮುಸ್ಲೀಮರು ಮತ್ತು ಇತರ ಧಾರ್ಮಿಕ ಗುಂಪುಗಳ ಭಾವನೆಗಳನ್ನು ಪ್ರಚೋದಿಸಲು ಭಾವನಾತ್ಮಕ ಮತ್ತು ಧಾರ್ಮಿಕ ಕುಶಲತೆಯನ್ನು ಬಳಸಲಾಗುತ್ತದೆ ಎಂದು ನಮಗೆ ಈಗ ಮನವರಿಕೆಯಾಗಿದೆ. ಭಾವನಾತ್ಮಕ ಮತ್ತು ಧಾರ್ಮಿಕ ಸಮಸ್ಯೆಗಳನ್ನು ಈಗ ಪವಿತ್ರ ಕುರಾನ್, ಪ್ರವಾದಿ ಮಹಮ್ಮದ್ ಹೆಸರಿನ ಕೆಲವು ಸಂಸ್ಥೆಗಳು ತಿಳಿಸುತ್ತವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೋವಿಶೀಲ್ಡ್ ಲಸಿಕೆ ಪಡೆದಿದ್ದಕ್ಕೆ ಹಲವು ಕಾಯಿಲೆಗಳು ಗುಣಮುಖವಾದವಂತೆ:ಎಲ್ಲಿ?
ಮಸೂದೆಯನ್ನು ಸಮಾವೇಶದಲ್ಲಿ ಮಂಡಿಬೇಕು
ಇತರೆ ಗುರುಗಳು ಅಥವಾ ವ್ಯಕ್ತಿಗಳನ್ನು ಉಲ್ಲೇಖಿಸಿ ಅವಹೇಳನಕಾರಿ ಮತ್ತು ಆಕ್ರಮಣಕಾರಿ ಭಾಷೆಯನ್ನು ಬಳಸುವುದರ ಮೂಲಕ ಸಮಾಜವನ್ನು ಪ್ರಚೋದಿಸಲಾಗುವುದು ಮತ್ತು ದೇಶದಲ್ಲಿ ಗಲಭೆಯ ವಾತಾವರಣವನ್ನು ಸೃಷ್ಟಿಸಲಾಗುವುದು ಎಂದು ಅಭಿಪ್ರಾಯಪಟ್ಟಿದ್ದೇವೆ.
'ಲಾಭ ಮೊಹಮ್ಮದ್ ಮತ್ತು ಇತರ ಧಾರ್ಮಿಕ ಮುಖ್ಯಸ್ಥರು ಅಪಪ್ರಚಾರ ನಿಷೇಧ 2021 ಕಾಯ್ದೆಯನ್ನು ಜಾರಿಗೆ ತರಬೇಕು. ದೇಶದಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ಜನಾಂಗೀಯ ಭಾವನೆಗಳಿಗೆ ಕಳಂಕವಾಗದಂತೆ ನಾವು ಈ ಕಾನೂನನ್ನು ಪ್ರಸ್ತಾಪಿಸುತ್ತಿದ್ದೇವೆ. ಸಂಸತ್ತು ಮತ್ತು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮುಂಬರುವ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.