ETV Bharat / bharat

ಎಲ್‌ಇಟಿ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಜಾಮೀನುರಹಿತ ವಾರೆಂಟ್​ ಹೊರಡಿಸಿದ ಎನ್​ಐಎ

author img

By

Published : Feb 7, 2021, 7:47 AM IST

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ನಿಧಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದ್ದ, ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್‌ಇಟಿ) ಮುಖ್ಯಸ್ಥ ಮತ್ತು 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ವಿರುದ್ಧ ಎನ್‌ಐಎ ನ್ಯಾಯಾಲಯ ಶನಿವಾರ ವಾರೆಂಟ್​ ಹೊರಡಿಸಿದೆ.

Terror funding case
ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದಂತೆ ಹಣ ನೀಡಲು ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದ್ದ, ಲಷ್ಕರ್-ಎ-ತೈಬಾ (ಎಲ್‌ಇಟಿ) ಮುಖ್ಯಸ್ಥ ಹಫೀಜ್​ ಸಯೀದ್​​ ಮತ್ತು ಇತರರ ವಿರುದ್ಧ ದೆಹಲಿಯ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಜಾಮೀನು ರಹಿತ ವಾರೆಂಟ್​ ಹೊರಡಿಸಿದೆ.

ಅಕ್ರಮ ಹಣ ವರ್ಗಾಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ವಿವಿಧ ನಿಬಂಧನೆಗಳ ಅಡಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ ಚಾರ್ಜ್‌ಶೀಟ್​ನ್ನು ಪರಿಗಣಿಸಿದ ನಂತರ ನ್ಯಾಯಾಲಯ ಈ ಆದೇಶ ನೀಡಿದೆ.

ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ವಿಶೇಷ ನ್ಯಾಯಾಧೀಶ ಪ್ರವೀಣ್ ಸಿಂಗ್ ಅವರು, ಕಾಶ್ಮೀರಿ ಉದ್ಯಮಿ ಜಹೂರ್ ಅಹ್ಮದ್ ಷಾ ವಟಾಲಿ, ಪ್ರತ್ಯೇಕತಾವಾದಿ ಅಲ್ತಾಫ್ ಅಹ್ಮದ್ ಷಾ ಅಲಿಯಾಸ್ ಫುಂಟೂಶ್ ಮತ್ತು ಯುಎಇ ಮೂಲದ ಉದ್ಯಮಿ ನೇವಲ್ ಕಿಶೋರ್ ಕಪೂರ್ ವಿರುದ್ಧ ವಾರೆಂಟ್​​ ಹೊರಡಿಸಿದ್ದಾರೆ. ವಟಾಲಿ, ಶಾ ಮತ್ತು ಕಪೂರ್ ಅವರನ್ನು ಪ್ರಸ್ತುತ ತಿಹಾರ್ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.

ಓದಿ: ಶಾಕಿಂಗ್​: 60 ಲಕ್ಷ ರೂ. ಇನ್ಸುರೆನ್ಸ್​ ಹಣಕ್ಕಾಗಿ ಪತ್ನಿಯನ್ನೇ ಕೊಲ್ಲಿಸಿದ ಪಾಪಿ ಪತಿ!

ನ್ಯಾಯಾಲಯವು ವಟಾಲಿಯ ಕಂಪನಿಯ ಟ್ರಿಸನ್ ಫಾರ್ಮ್ಸ್ ಮತ್ತು ಕನ್ಸ್​​ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್‌ಗೆ ಸಮನ್ಸ್ ಜಾರಿಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧ್ವಂಸಕ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ನಡೆಸಲು ಪಿತೂರಿ ನಡೆಸಲಾಗಿದೆ ಎಂದು ಇಡಿ ಪರ ವಿಶೇಷ ಸಾರ್ವಜನಿಕ ಅಭಿಯೋಜಕ ನಿತೇಶ್ ರಾಣಾ ನ್ಯಾಯಾಲಯಕ್ಕೆ ತಿಳಿಸಿದರು.

ಪಾಕಿಸ್ತಾನದ ಏಜೆನ್ಸಿಗಳ ಮೂಲಕ ಹವಾಲಾ ವಿತರಕರು ಮತ್ತು ಇತರ ವಿವಿಧ ಮೂಲಗಳ ಮೂಲಕ ಹಣ ಪಡೆದ ಕಾರ್ಯಕರ್ತರ ಜಾಲವನ್ನು ಆರೋಪಿಗಳು ಸ್ಥಾಪಿಸಿದ್ದಾರೆ ಎಂದು ರಾಣಾ ನ್ಯಾಯಾಲಯಕ್ಕೆ ವಿವರಿಸಿದ್ದಾರೆ. ಎನ್ಐಎ ತನಿಖೆ ನಡೆಸುತ್ತಿರುವ ಪ್ರತ್ಯೇಕ ಪ್ರಕರಣದ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿದೆ. ಈ ಹಿಂದೆ ಏಜೆನ್ಸಿಯು ವಿವಿಧ ಆರೋಪಿಗಳ ಮೇಲೆ ಚಾರ್ಜ್‌ಶೀಟ್ ಸಲ್ಲಿಸಿದೆ.

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದಂತೆ ಹಣ ನೀಡಲು ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದ್ದ, ಲಷ್ಕರ್-ಎ-ತೈಬಾ (ಎಲ್‌ಇಟಿ) ಮುಖ್ಯಸ್ಥ ಹಫೀಜ್​ ಸಯೀದ್​​ ಮತ್ತು ಇತರರ ವಿರುದ್ಧ ದೆಹಲಿಯ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಜಾಮೀನು ರಹಿತ ವಾರೆಂಟ್​ ಹೊರಡಿಸಿದೆ.

ಅಕ್ರಮ ಹಣ ವರ್ಗಾಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ವಿವಿಧ ನಿಬಂಧನೆಗಳ ಅಡಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ ಚಾರ್ಜ್‌ಶೀಟ್​ನ್ನು ಪರಿಗಣಿಸಿದ ನಂತರ ನ್ಯಾಯಾಲಯ ಈ ಆದೇಶ ನೀಡಿದೆ.

ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ವಿಶೇಷ ನ್ಯಾಯಾಧೀಶ ಪ್ರವೀಣ್ ಸಿಂಗ್ ಅವರು, ಕಾಶ್ಮೀರಿ ಉದ್ಯಮಿ ಜಹೂರ್ ಅಹ್ಮದ್ ಷಾ ವಟಾಲಿ, ಪ್ರತ್ಯೇಕತಾವಾದಿ ಅಲ್ತಾಫ್ ಅಹ್ಮದ್ ಷಾ ಅಲಿಯಾಸ್ ಫುಂಟೂಶ್ ಮತ್ತು ಯುಎಇ ಮೂಲದ ಉದ್ಯಮಿ ನೇವಲ್ ಕಿಶೋರ್ ಕಪೂರ್ ವಿರುದ್ಧ ವಾರೆಂಟ್​​ ಹೊರಡಿಸಿದ್ದಾರೆ. ವಟಾಲಿ, ಶಾ ಮತ್ತು ಕಪೂರ್ ಅವರನ್ನು ಪ್ರಸ್ತುತ ತಿಹಾರ್ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.

ಓದಿ: ಶಾಕಿಂಗ್​: 60 ಲಕ್ಷ ರೂ. ಇನ್ಸುರೆನ್ಸ್​ ಹಣಕ್ಕಾಗಿ ಪತ್ನಿಯನ್ನೇ ಕೊಲ್ಲಿಸಿದ ಪಾಪಿ ಪತಿ!

ನ್ಯಾಯಾಲಯವು ವಟಾಲಿಯ ಕಂಪನಿಯ ಟ್ರಿಸನ್ ಫಾರ್ಮ್ಸ್ ಮತ್ತು ಕನ್ಸ್​​ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್‌ಗೆ ಸಮನ್ಸ್ ಜಾರಿಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧ್ವಂಸಕ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ನಡೆಸಲು ಪಿತೂರಿ ನಡೆಸಲಾಗಿದೆ ಎಂದು ಇಡಿ ಪರ ವಿಶೇಷ ಸಾರ್ವಜನಿಕ ಅಭಿಯೋಜಕ ನಿತೇಶ್ ರಾಣಾ ನ್ಯಾಯಾಲಯಕ್ಕೆ ತಿಳಿಸಿದರು.

ಪಾಕಿಸ್ತಾನದ ಏಜೆನ್ಸಿಗಳ ಮೂಲಕ ಹವಾಲಾ ವಿತರಕರು ಮತ್ತು ಇತರ ವಿವಿಧ ಮೂಲಗಳ ಮೂಲಕ ಹಣ ಪಡೆದ ಕಾರ್ಯಕರ್ತರ ಜಾಲವನ್ನು ಆರೋಪಿಗಳು ಸ್ಥಾಪಿಸಿದ್ದಾರೆ ಎಂದು ರಾಣಾ ನ್ಯಾಯಾಲಯಕ್ಕೆ ವಿವರಿಸಿದ್ದಾರೆ. ಎನ್ಐಎ ತನಿಖೆ ನಡೆಸುತ್ತಿರುವ ಪ್ರತ್ಯೇಕ ಪ್ರಕರಣದ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿದೆ. ಈ ಹಿಂದೆ ಏಜೆನ್ಸಿಯು ವಿವಿಧ ಆರೋಪಿಗಳ ಮೇಲೆ ಚಾರ್ಜ್‌ಶೀಟ್ ಸಲ್ಲಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.