ಚೆನ್ನೈ: ಸೂಪರ್ಸ್ಟಾರ್ ರಜಿನಿಕಾಂತ್ ಅವರು ಫೆಬ್ರವರಿ 7 ರಂದು ಕಿಂಗ್ಸ್ ಹೋಟೆಲ್ ಉದ್ಘಾಟನಾ ಸಮಾರಂಭಕ್ಕೆ ಹೋಗಿದ್ದರು. ದೀರ್ಘ ಸಮಯದ ನಂತರ ಅವರನ್ನು ಕಂಡು ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದರು.
ರಜಿನಿಕಾಂತ್ ಅವರು ತಮ್ಮ ಪತ್ನಿ ಲತಾ ಮತ್ತು ಕಿರಿಯ ಪುತ್ರಿ ಸೌಂದರ್ಯ ಅವರೊಂದಿಗೆ ಕಿಂಗ್ಸ್ ಹೋಟೆಲ್ ಉದ್ಘಾಟನಾ ಸಮಾರಂಭಕ್ಕೆ ತೆರಳಿದ್ದರು. ಅಣ್ಣಾತ್ತೆ ಚಿತ್ರದ ಚಿತ್ರೀಕರಣದ ವೇಳೆಯೂ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಈಗ ಸಾರ್ವಜನಿಕ ಸಮಾರಂಭದಲ್ಲಿ ರಜಿನಿಕಾಂತ್ ಅವರನ್ನು ನೋಡಿ ಅವರ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ.
ಈಗ ರಜಿನಿಕಾಂತ್ ಅವರ ಮುಂದಿನ ಚಿತ್ರವನ್ನು ಸನ್ ಪಿಕ್ಚರ್ಸ್ ಬ್ಯಾನರ್ ಅಡಿ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಹಾಗಾಗಿ, ಅವರ ಅಭಿಮಾನಿಗಳು ಪ್ರೊಡಕ್ಷನ್ ಹೌಸ್ ನಿಂದ ಅಧಿಕೃತ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಓದಿ: ನನ್ನ ವಿರುದ್ಧ ಎಫ್ಐಆರ್ ದಾಖಲಿಸಿ ಅರೆಸ್ಟ್ ಮಾಡಲಿ, ನಾನಂತೂ ತನಿಖೆಗೆ ಸಹಕಾರ ಕೊಡ್ತೇನೆ: ಶಾಸಕ ರಾಜ್ಕುಮಾರ್ ಪಾಟೀಲ್