ETV Bharat / bharat

'ಲಡ್ಕಿ ಹೂಂ, ಲಡ್​ ಸಕ್ತಿ ಹೂಂ'..ಮಹಿಳಾ ಕಾಂಗ್ರೆಸ್​​ ಮ್ಯಾರಥಾನ್​ನಲ್ಲಿ ಕಾಲ್ತುಳಿತ.. ಬಾಲಕಿಯರಿಗೆ ಗಾಯ! - ಕಾಂಗ್ರೆಸ್​ನ ಲಡ್ಕಿ ಹೂ ಲಾಡ್ ಸಕ್ತಿ ಹೂ ಮ್ಯಾರಥಾನ್​ನಲ್ಲಿ ಕಾಲ್ತುಳಿತ

Stampede in Congress marathon in UP : ಉತ್ತರ ಪ್ರದೇಶದ ಬರೇಲಿಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ 'ಮಹಿಳಾ ಮ್ಯಾರಥಾನ್'ನಲ್ಲಿ ಕಾಲ್ತುಳಿತದ ವಾತಾವರಣ ನಿರ್ಮಾಣವಾದ ಬಗ್ಗೆ ವರದಿಯಾಗಿದೆ.

Stampede in Congress marathon in Bareilly, Stampede in Congress marathon in Uttar Pradesh, Congress Ladki hoon Lad Sakti hoon marathon, Stampede in Congress Ladki hoon Lad Sakti hoon marathon, ಬರೇಲಿಯಲ್ಲಿ ಕಾಂಗ್ರೆಸ್​ ಮ್ಯಾರಾಥಾನ್​ನಲ್ಲಿ ಕಾಲ್ತುಳಿತ, ಉತ್ತರಪ್ರದೇಶದಲ್ಲಿ ಬರೇಲಿಯಲ್ಲಿ ಕಾಂಗ್ರೆಸ್​ ಮ್ಯಾರಾಥಾನ್​ನಲ್ಲಿ ಕಾಲ್ತುಳಿತ, ಕಾಂಗ್ರೆಸ್​ನ ಲಡ್ಕಿ ಹೂ ಲಾಡ್ ಸಕ್ತಿ ಹೂ ಮ್ಯಾರಾಥಾನ್​ನಲ್ಲಿ ಕಾಲ್ತುಳಿತ, ಉತ್ತರಪ್ರದೇಶ ಚುನಾವಣೆ ಸುದ್ದಿ,
ಕಾಂಗ್ರೆಸ್​​ ಮ್ಯಾರಾಥಾನ್​ನಲ್ಲಿ ಕಾಲ್ತುಳಿತ
author img

By

Published : Jan 4, 2022, 2:44 PM IST

Updated : Jan 4, 2022, 5:04 PM IST

ಬರೇಲಿ : ಈ ವರ್ಷ ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆ ಕಾಂಗ್ರೆಸ್​ ಭರ್ಜರಿಯಾಗಿ ತಯಾರಿ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್​ ಚುನಾವಣಾ ಕಾರ್ಯಕ್ರಮದ ಹಿನ್ನೆಲೆ ಆಯೋಜಿಸಿದ್ದ ಮ್ಯಾರಥಾನ್​​ನಲ್ಲಿ ಕಾಲ್ತುಳಿತ ಉಂಟಾಗಿದೆ.

'ಲಡ್ಕಿ ಹೂಂ, ಲಡ್ ಸಕ್ತಿ ಹೂಂ' (ನಾನು ಹುಡುಗಿ ಮತ್ತು ನಾನೂ ಹೋರಾಡಬಲ್ಲೆ) ಎಂಬ ಘೋಷ ವಾಕ್ಯದೊಂದಿಗೆ ಚುನಾವಣಾ ಪ್ರಚಾರಕ್ಕಾಗಿ ವಿಶೇಷ ಕಾರ್ಯಕ್ರಮವೊಂದನ್ನು ರೂಪಿಸಿದೆ. ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

ಕಾಂಗ್ರೆಸ್​ ಚುನಾವಣಾ ಜಾಥ ಹಿನ್ನೆಲೆ ಆಯೋಜಿಸಿದ್ದ ಮ್ಯಾರಥಾನ್​​ನಲ್ಲಿ ಇಂತಹ ಘಟನೆ ನಡೆದಿದೆ. ಬಾಲಕಿಯರು ಓಡುವಾಗ ಮುಗ್ಗರಿಸಿ ಬಿದ್ದಿರುವ ವಿಡಿಯೋಗಳು ಈಗ ವೈರಲ್​ ಆಗಿವೆ. ಬಾಲಕಿಯರು ಬಿದ್ದಿದ್ದರಿಂದ ಹಿಂದಿನಿಂದ ಬರುತ್ತಿದ್ದವರು ಹಠಾತ್​ ಆಗಿ ತಮ್ಮ ಓಟ ನಿಲ್ಲಿಸಬೇಕಾಯಿತು. ಹಾಗೂ ಮುಂಜೋಲಿ ತಡೆಯದೇ ಕೆಳಕ್ಕುರಳಬೇಕಾದ ಪರಿಸ್ಥಿತಿಗೆ ಕಾರಣವಾಯಿತು.

ಕ್ಷಮೆ ಕೇಳಿದ ಮಾಜಿ ಮೇಯರ್​ ಅರೋನ್..​

ಮ್ಯಾರಥಾನ್​​ನಲ್ಲಿ ಆದ ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್​ ನಾಯಕಿ ಹಾಗೂ ಬರೇಲಿ ಮಾಜಿ ಮೇಯರ್​​ ಸುಪ್ರಿಯಾ ಅರೋನ್​, ಆತಂಕಪಡುವ ಅಗತ್ಯವೇನೂ ಇಲ್ಲ. ಎಲ್ಲವೂ ಸರಿಯಾಗಿಯೇ ಇದೆ ಎಂದು ಹೇಳಿದ್ದಾರೆ. ಬಾಲಕಿಯರು ಎಡವಿ ಬೀಳುವುದು ಸ್ವಾಭಾವಿಕವಾದದ್ದು. ಆದರೂ ನಾವು ಈ ಘಟನೆಗೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ಇದೊಂದು ಪಿತೂರಿ ಎಂದೂ ಆರೋಪ..

ಇದೇ ವೇಳೆ ಮಾತನಾಡಿದ ಅವರು, ಚುನಾವಣೆಗೆ ಮುನ್ನ ಕಾಂಗ್ರೆಸ್​ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬರುತ್ತಿರುವುದರಿಂದ ಹೀಗೆ ಮಾಡಿಸಿ ವಿಡಿಯೋ ಹರಿ ಬಿಟ್ಟಿರುವುದು ಕಾಂಗ್ರೆಸ್ ವಿರುದ್ಧದ ಪಿತೂರಿಯೂ ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಓದಿ: ಟಾಯ್ಲೆಟ್ ರೂಂನಲ್ಲಿ ಬುಸ್-ಬುಸ್​, ನೋಡಿದವರು ಠುಸ್-ಠುಸ್​.. ನಾಗನಿಗೆ ಮಹಿಳೆಯಿಂದ ಆರತಿ!

ಕಾಲ್ತುಳಿತಕ್ಕೆ ಒಳಗಾಗಿ ಗಾಯಗೊಂಡ ಬಾಲಕಿಯರು ಆಸ್ಪತ್ರೆಗೆ ಶಿಫ್ಟ್​​

ಕಾಲ್ತುಳಿತದಂತಹ ಪರಿಸ್ಥಿತಿಯಲ್ಲಿ ಗಾಯಗೊಂಡ ನಂತರ ಕನಿಷ್ಠ ಮೂವರು ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ ಎನ್ನಲಾಗ್ತಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದಾರೆ.

ಡಿಸೆಂಬರ್​ 28ರಂದು ಕಾಂಗ್ರೆಸ್ ಇದೇ ಮಾದರಿಯ ಮ್ಯಾರಥಾನ್​ ಅನ್ನು ಲಖನೌದಲ್ಲಿ ಆಯೋಜಿಸಿತ್ತು. ಉತ್ತರಪ್ರದೇಶ ಕಾಂಗ್ರೆಸ್​ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಸೇರಿದಂತೆ ಹಿರಿಯ ನಾಯಕರ ಸಮ್ಮುಖದಲ್ಲಿ ಮಹಿಳೆಯರು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು.

ಬರೇಲಿ : ಈ ವರ್ಷ ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆ ಕಾಂಗ್ರೆಸ್​ ಭರ್ಜರಿಯಾಗಿ ತಯಾರಿ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್​ ಚುನಾವಣಾ ಕಾರ್ಯಕ್ರಮದ ಹಿನ್ನೆಲೆ ಆಯೋಜಿಸಿದ್ದ ಮ್ಯಾರಥಾನ್​​ನಲ್ಲಿ ಕಾಲ್ತುಳಿತ ಉಂಟಾಗಿದೆ.

'ಲಡ್ಕಿ ಹೂಂ, ಲಡ್ ಸಕ್ತಿ ಹೂಂ' (ನಾನು ಹುಡುಗಿ ಮತ್ತು ನಾನೂ ಹೋರಾಡಬಲ್ಲೆ) ಎಂಬ ಘೋಷ ವಾಕ್ಯದೊಂದಿಗೆ ಚುನಾವಣಾ ಪ್ರಚಾರಕ್ಕಾಗಿ ವಿಶೇಷ ಕಾರ್ಯಕ್ರಮವೊಂದನ್ನು ರೂಪಿಸಿದೆ. ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

ಕಾಂಗ್ರೆಸ್​ ಚುನಾವಣಾ ಜಾಥ ಹಿನ್ನೆಲೆ ಆಯೋಜಿಸಿದ್ದ ಮ್ಯಾರಥಾನ್​​ನಲ್ಲಿ ಇಂತಹ ಘಟನೆ ನಡೆದಿದೆ. ಬಾಲಕಿಯರು ಓಡುವಾಗ ಮುಗ್ಗರಿಸಿ ಬಿದ್ದಿರುವ ವಿಡಿಯೋಗಳು ಈಗ ವೈರಲ್​ ಆಗಿವೆ. ಬಾಲಕಿಯರು ಬಿದ್ದಿದ್ದರಿಂದ ಹಿಂದಿನಿಂದ ಬರುತ್ತಿದ್ದವರು ಹಠಾತ್​ ಆಗಿ ತಮ್ಮ ಓಟ ನಿಲ್ಲಿಸಬೇಕಾಯಿತು. ಹಾಗೂ ಮುಂಜೋಲಿ ತಡೆಯದೇ ಕೆಳಕ್ಕುರಳಬೇಕಾದ ಪರಿಸ್ಥಿತಿಗೆ ಕಾರಣವಾಯಿತು.

ಕ್ಷಮೆ ಕೇಳಿದ ಮಾಜಿ ಮೇಯರ್​ ಅರೋನ್..​

ಮ್ಯಾರಥಾನ್​​ನಲ್ಲಿ ಆದ ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್​ ನಾಯಕಿ ಹಾಗೂ ಬರೇಲಿ ಮಾಜಿ ಮೇಯರ್​​ ಸುಪ್ರಿಯಾ ಅರೋನ್​, ಆತಂಕಪಡುವ ಅಗತ್ಯವೇನೂ ಇಲ್ಲ. ಎಲ್ಲವೂ ಸರಿಯಾಗಿಯೇ ಇದೆ ಎಂದು ಹೇಳಿದ್ದಾರೆ. ಬಾಲಕಿಯರು ಎಡವಿ ಬೀಳುವುದು ಸ್ವಾಭಾವಿಕವಾದದ್ದು. ಆದರೂ ನಾವು ಈ ಘಟನೆಗೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ಇದೊಂದು ಪಿತೂರಿ ಎಂದೂ ಆರೋಪ..

ಇದೇ ವೇಳೆ ಮಾತನಾಡಿದ ಅವರು, ಚುನಾವಣೆಗೆ ಮುನ್ನ ಕಾಂಗ್ರೆಸ್​ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬರುತ್ತಿರುವುದರಿಂದ ಹೀಗೆ ಮಾಡಿಸಿ ವಿಡಿಯೋ ಹರಿ ಬಿಟ್ಟಿರುವುದು ಕಾಂಗ್ರೆಸ್ ವಿರುದ್ಧದ ಪಿತೂರಿಯೂ ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಓದಿ: ಟಾಯ್ಲೆಟ್ ರೂಂನಲ್ಲಿ ಬುಸ್-ಬುಸ್​, ನೋಡಿದವರು ಠುಸ್-ಠುಸ್​.. ನಾಗನಿಗೆ ಮಹಿಳೆಯಿಂದ ಆರತಿ!

ಕಾಲ್ತುಳಿತಕ್ಕೆ ಒಳಗಾಗಿ ಗಾಯಗೊಂಡ ಬಾಲಕಿಯರು ಆಸ್ಪತ್ರೆಗೆ ಶಿಫ್ಟ್​​

ಕಾಲ್ತುಳಿತದಂತಹ ಪರಿಸ್ಥಿತಿಯಲ್ಲಿ ಗಾಯಗೊಂಡ ನಂತರ ಕನಿಷ್ಠ ಮೂವರು ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ ಎನ್ನಲಾಗ್ತಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದಾರೆ.

ಡಿಸೆಂಬರ್​ 28ರಂದು ಕಾಂಗ್ರೆಸ್ ಇದೇ ಮಾದರಿಯ ಮ್ಯಾರಥಾನ್​ ಅನ್ನು ಲಖನೌದಲ್ಲಿ ಆಯೋಜಿಸಿತ್ತು. ಉತ್ತರಪ್ರದೇಶ ಕಾಂಗ್ರೆಸ್​ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಸೇರಿದಂತೆ ಹಿರಿಯ ನಾಯಕರ ಸಮ್ಮುಖದಲ್ಲಿ ಮಹಿಳೆಯರು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು.

Last Updated : Jan 4, 2022, 5:04 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.