ನವದೆಹಲಿ: ಡೆಡ್ಲಿ ವೈರಸ್ ಕೊರೊನಾ ಸೋಂಕಿನಿಂದಾಗಿ ಅನೇಕ ಮಕ್ಕಳು ತಮ್ಮ ಪೋಷಕರು, ಕುಟುಂಬ ಕಳೆದುಕೊಂಡು ಅನಾಥವಾಗಿದ್ದು, ಅವರ ಮುಂದಿನ ಭವಿಷ್ಯ ಏನು ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ. ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಗೆ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪತ್ರ ಬರೆದಿದ್ದಾರೆ.
ಕೋವಿಡ್ನಿಂದಾಗಿ ಪೋಷಕರು ಅಥವಾ ಕುಟುಂಬದಲ್ಲಿ ಕೆಲಸ ಮಾಡ್ತಿದ್ದ ಸದಸ್ಯರನ್ನ ಕಳೆದುಕೊಂಡಿರುವ ಮಕ್ಕಳಿಗೆ ನವೋದಯ ವಿದ್ಯಾಲಯದಲ್ಲಿ ಉಚಿತವಾಗಿ ಶಿಕ್ಷಣ ನೀಡುವಂತೆ ಕೋರಿ ಅವರು ಪತ್ರ ಬರೆದಿದ್ದಾರೆ. ದೇಶಾದ್ಯಂತ 661 ನವೋದಯ ವಿದ್ಯಾಲಯಗಳಿವೆ. ಇಲ್ಲಿ ಕೋವಿಡ್ನಿಂದ ಕುಟುಂಬ ಕಳೆದುಕೊಂಡಿರುವ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಬಹುದು ಎಂದಿದ್ದಾರೆ. ಇದು ಸಾಧ್ಯವಾಗದೇ ಹೋದರೆ ಅವರು ಉತ್ತಮ ಭವಿಷ್ಯ ಕಳೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
![Sonia writes letter to PM](https://etvbharatimages.akamaized.net/etvbharat/prod-images/nat-soniagandhiletter-20052021-niyamika_20052021145323_2005f_1621502603_553.jpg)
ಇದನ್ನೂ ಓದಿ: ದೇಶದಲ್ಲಿ ಕೋವಿಡ್ ಅಬ್ಬರ.. ಈ ವಿಚಾರವಾಗಿ ಮೋದಿಗೆ ಪತ್ರ ಬರೆದ ಸೋನಿಯಾ!
ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ಈಗಾಗಲೇ ಅನೇಕ ಮಕ್ಕಳು ತಮ್ಮ ಪೋಷಕರು ಹಾಗೂ ಕುಟುಂಬದ ಸದಸ್ಯರನ್ನ ಕಳೆದುಕೊಂಡು ಅನಾಥವಾಗಿದ್ದಾರೆ. ಇದರ ಮಧ್ಯೆ ಸೋನಿಯಾ ಗಾಂಧಿ ಬರೆದಿರುವ ಪತ್ರ ಮಹತ್ವ ಪಡೆದುಕೊಂಡಿದೆ.
ಕೋವಿಡ್ಗೋಸ್ಕರ ದೇಶಾದ್ಯಂತ ಉಚಿತ ವ್ಯಾಕ್ಸಿನ್ ನೀಡುವಂತೆ ಸೇರಿ ಅನೇಕ ವಿಷಯವನ್ನಿಟ್ಟುಕೊಂಡು ಸೋನಿಯಾ ಈಗಾಗಲೇ ಪ್ರಧಾನಿಗೆ ಪತ್ರ ಬರೆದಿದ್ದಾರೆ.