ETV Bharat / bharat

ಭೀಕರ ರಸ್ತೆ ಅಪಘಾತ: ಇಬ್ಬರು ಸಹೋದರಿಯರ ದುರ್ಮರಣ, ಒಬ್ಬಳ ಸ್ಥಿತಿ ಗಂಭೀರ - ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ

sisters died in road accident: ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಹೋದರಿಯರು ದುರ್ಮರಣಕ್ಕೀಡಾಗಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿಯಲ್ಲಿ ನಡೆದಿದೆ.

sisters died in road accident
sisters died in road accident
author img

By

Published : Dec 27, 2021, 4:52 PM IST

ರಂಗಾರೆಡ್ಡಿ(ತೆಲಂಗಾಣ): ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಹೋದರಿಯರು ದುರ್ಮರಣಕ್ಕೀಡಾಗಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದ್ದು, ಒಬ್ಬಳು ಗಂಭೀರವಾಗಿ ಗಾಯಗೊಂಡಿದೆ. ಸುದ್ದಿ ಕೇಳುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಂಗಾರೆಡ್ಡಿ ಜಿಲ್ಲೆಯ ಮೊಯಿನಾಬಾದ್​​ನ ರೆಡ್ಡಿಪಲ್ಲಿ ಗ್ರಾಮದ ಶಿಕ್ಷಕ ಲಕ್ಷ್ಮಣ್​​ ಅವರ ಕಿರಿಯ ಮಗಳು ಪ್ರೇಮಿಕಾ ಹಾಗೂ ಅಕ್ಷಯಾ ಮೃತ ದುರ್ದೈವಿಗಳು. ಲಕ್ಷ್ಮಣ್​ ಅವರ ಸಹೋದರ ಶ್ರೀನಿವಾಸ್​ ಅವರ ಪುತ್ರಿ ಅಕ್ಷಯಾ ಜೊತೆಗೆ ಸೌಮ್ಯ ಹಾಗೂ ಪ್ರೇಮಿಕಾ ದ್ವಿಚಕ್ರ ವಾಹನದಲ್ಲಿ ಹೊರಗಡೆ ತೆರಳಿದ್ದರು.

ಈ ವೇಳೆ, ಚೇವೆಲ್ಲಾ ಕಡೆಯಿಂದ ಬಂದ ಕಾರು ಸ್ಕೂಟರ್​ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಪ್ರೇಮಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಸೌಮ್ಯ ಹಾಗೂ ಅಕ್ಷಯಾಗೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅಕ್ಷಯಾ ಕೂಡ ಸಾವನ್ನಪ್ಪಿದ್ದಾಳೆ.

sisters died in road accident
ರಸ್ತೆ ಅಪಘಾತದಲ್ಲಿ ಸಹೋದರಿಯರಿಬ್ಬರ ದುರ್ಮರಣ

ಇದನ್ನೂ ಓದಿರಿ: ರಾತ್ರಿ ಕರ್ಫ್ಯೂ, ಬೆಳಗ್ಗೆ ಬೃಹತ್​​ ಚುನಾವಣಾ ರ್‍ಯಾಲಿ.. ಬಿಜೆಪಿ ವಿರುದ್ಧ ವರುಣ್​ ಗಾಂಧಿ ವಾಗ್ದಾಳಿ..

ಸದ್ಯ ಸೌಮ್ಯಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಸಾವು - ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾಳೆ. ಇಬ್ಬರು ಸಹೋದರಿಯರ ಸಾವಿನ ಸುದ್ದಿ ಹಾಗೂ ಮತ್ತೋರ್ವ ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸಂಕಟ ತಡೆದುಕೊಳ್ಳದ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪೊಲೀಸರು ಕಾರು ಚಾಲಕ ಮದ್ಯದ ಅಮಲಿನಲ್ಲಿದ್ದು, ಅತಿಯಾದ ವೇಗದಿಂದ ಕಾರು ಚಲಾವಣೆ ಮಾಡಿರುವುದೇ ಅಪಘಾತಕ್ಕೆ ಕಾರಣವಾಗಿದ್ದು, ಆದಷ್ಟು ಬೇಗ ಆತನ ಬಂಧನ ಮಾಡಲಾಗುವುದು ಎಂದಿದ್ದಾರೆ.

ರಂಗಾರೆಡ್ಡಿ(ತೆಲಂಗಾಣ): ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಹೋದರಿಯರು ದುರ್ಮರಣಕ್ಕೀಡಾಗಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದ್ದು, ಒಬ್ಬಳು ಗಂಭೀರವಾಗಿ ಗಾಯಗೊಂಡಿದೆ. ಸುದ್ದಿ ಕೇಳುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಂಗಾರೆಡ್ಡಿ ಜಿಲ್ಲೆಯ ಮೊಯಿನಾಬಾದ್​​ನ ರೆಡ್ಡಿಪಲ್ಲಿ ಗ್ರಾಮದ ಶಿಕ್ಷಕ ಲಕ್ಷ್ಮಣ್​​ ಅವರ ಕಿರಿಯ ಮಗಳು ಪ್ರೇಮಿಕಾ ಹಾಗೂ ಅಕ್ಷಯಾ ಮೃತ ದುರ್ದೈವಿಗಳು. ಲಕ್ಷ್ಮಣ್​ ಅವರ ಸಹೋದರ ಶ್ರೀನಿವಾಸ್​ ಅವರ ಪುತ್ರಿ ಅಕ್ಷಯಾ ಜೊತೆಗೆ ಸೌಮ್ಯ ಹಾಗೂ ಪ್ರೇಮಿಕಾ ದ್ವಿಚಕ್ರ ವಾಹನದಲ್ಲಿ ಹೊರಗಡೆ ತೆರಳಿದ್ದರು.

ಈ ವೇಳೆ, ಚೇವೆಲ್ಲಾ ಕಡೆಯಿಂದ ಬಂದ ಕಾರು ಸ್ಕೂಟರ್​ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಪ್ರೇಮಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಸೌಮ್ಯ ಹಾಗೂ ಅಕ್ಷಯಾಗೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅಕ್ಷಯಾ ಕೂಡ ಸಾವನ್ನಪ್ಪಿದ್ದಾಳೆ.

sisters died in road accident
ರಸ್ತೆ ಅಪಘಾತದಲ್ಲಿ ಸಹೋದರಿಯರಿಬ್ಬರ ದುರ್ಮರಣ

ಇದನ್ನೂ ಓದಿರಿ: ರಾತ್ರಿ ಕರ್ಫ್ಯೂ, ಬೆಳಗ್ಗೆ ಬೃಹತ್​​ ಚುನಾವಣಾ ರ್‍ಯಾಲಿ.. ಬಿಜೆಪಿ ವಿರುದ್ಧ ವರುಣ್​ ಗಾಂಧಿ ವಾಗ್ದಾಳಿ..

ಸದ್ಯ ಸೌಮ್ಯಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಸಾವು - ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾಳೆ. ಇಬ್ಬರು ಸಹೋದರಿಯರ ಸಾವಿನ ಸುದ್ದಿ ಹಾಗೂ ಮತ್ತೋರ್ವ ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸಂಕಟ ತಡೆದುಕೊಳ್ಳದ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪೊಲೀಸರು ಕಾರು ಚಾಲಕ ಮದ್ಯದ ಅಮಲಿನಲ್ಲಿದ್ದು, ಅತಿಯಾದ ವೇಗದಿಂದ ಕಾರು ಚಲಾವಣೆ ಮಾಡಿರುವುದೇ ಅಪಘಾತಕ್ಕೆ ಕಾರಣವಾಗಿದ್ದು, ಆದಷ್ಟು ಬೇಗ ಆತನ ಬಂಧನ ಮಾಡಲಾಗುವುದು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.