ETV Bharat / bharat

Facebook Live ನಲ್ಲೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ! ತಮಿಳುನಾಡಿನ ತಿರುಪ್ಪುರ್‌ನಲ್ಲಿ ವಿಚಿತ್ರ ಘಟನೆ

author img

By

Published : Jul 23, 2020, 7:46 PM IST

Updated : Mar 2, 2021, 12:18 PM IST

'ಇಂತಹ ನಾಚಿಕೆಗೇಡಿನ ಸಮಾಜದಲ್ಲಿ ಬದುಕಲು ನಾನು ಇಷ್ಟಪಡುವುದಿಲ್ಲ'- ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಡೆತ್‌ನೋಟ್‌ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.

facebook death
facebook death

ತಿರುಪೂರ್ ​(ತಮಿಳುನಾಡು): 37 ವರ್ಷದ ವ್ಯಕ್ತಿಯೋರ್ವ ತಂದೆಗೆ ದೂರವಾಣಿ ಕರೆ​ ಮಾಡಿ, ತದನಂತರ ಫೇಸ್​ಬುಕ್​ ಲೈವ್​ ಮೂಲಕವೇ ಆತ್ಮಹತ್ಯೆಗೆ ಶರಣಾಗಿರುವ ವಿಚಿತ್ರ ಘಟನೆ ತಮಿಳುನಾಡಿನ ತಿರುಪೂರ್​ದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವ್ಯಕ್ತಿಯ ಹೆಸರು ರಾಮಕುಮಾರ್. ಖಾಸಗಿ ಕಂಪನಿಯಲ್ಲಿ ಚಾಲಕರಾಗಿ​ ಕೆಲಸ ಮಾಡುತ್ತಿದ್ದ ಇವರಿಗೆ ಪತ್ನಿ ಸುಕನ್ಯಾ (34) ಹಾಗೂ 13 ವರ್ಷದ ಮಗ ಇದ್ದಾರೆ. ಅದೇನಾಯ್ತೋ ಗೊತ್ತಿಲ್ಲ!, ನಿನ್ನೆ ತಂದೆಗೆ ಫೋನ್​ ಮಾಡಿರುವ ಈತ, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ಜೊತೆಗೆ ತಾನು ತೆಗೆದುಕೊಳ್ಳುತ್ತಿರುವ ನಿರ್ಧಾರದ ವಿಡಿಯೋ ಫೇಸ್​ಬುಕ್​ನಲ್ಲಿ ಲೈವ್​ ಪ್ರಸಾರ ಮಾಡುವುದಾಗಿಯೂ ಹೇಳಿದ್ದರಂತೆ.

ಫೇಸ್​ಬುಕ್​ನಲ್ಲಿ ಆತ್ಮಹತ್ಯೆಯ ವಿಡಿಯೋ ನೋಡಿರುವ ಈತನ ಗೆಳೆಯರು ತಕ್ಷಣ ಪತ್ನಿಗೆ ಕರೆ ಮಾಡಿ ಸುದ್ದಿ ಮುಟ್ಟಿಸಿದ್ದಾರೆ. ಆಕೆ ಮನೆಗೆ ಬಂದು ನೋಡುವಷ್ಟರಲ್ಲಿ ಫ್ಯಾನ್​​ನಲ್ಲಿ ಮೃತದೇಹ ನೇತಾಡುತ್ತಿತ್ತು. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈದ್ಯರು ಆತ ಸಾವನ್ನಪ್ಪಿದ್ದಾಗಿ ಘೋಷಿಸಿದ್ದಾರೆ.

ಈತ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದಲ್ಲಿ ಮರಣ ಪತ್ರ​ ದೊರೆತಿದ್ದು, ಅದರಲ್ಲಿ ನನ್ನ ಸಾವಿಗೆ ಯಾರೂ ಕಾರಣವಲ್ಲ. ಇಂತಹ ನಾಚಿಕೆಗೇಡಿನ ಜಗತ್ತಿನಲ್ಲಿ ನಾನು ಬದುಕಲು ಇಷ್ಟಪಡುವುದಿಲ್ಲ ಎಂದು ಬರೆದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ತಿರುಪೂರ್ ​(ತಮಿಳುನಾಡು): 37 ವರ್ಷದ ವ್ಯಕ್ತಿಯೋರ್ವ ತಂದೆಗೆ ದೂರವಾಣಿ ಕರೆ​ ಮಾಡಿ, ತದನಂತರ ಫೇಸ್​ಬುಕ್​ ಲೈವ್​ ಮೂಲಕವೇ ಆತ್ಮಹತ್ಯೆಗೆ ಶರಣಾಗಿರುವ ವಿಚಿತ್ರ ಘಟನೆ ತಮಿಳುನಾಡಿನ ತಿರುಪೂರ್​ದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವ್ಯಕ್ತಿಯ ಹೆಸರು ರಾಮಕುಮಾರ್. ಖಾಸಗಿ ಕಂಪನಿಯಲ್ಲಿ ಚಾಲಕರಾಗಿ​ ಕೆಲಸ ಮಾಡುತ್ತಿದ್ದ ಇವರಿಗೆ ಪತ್ನಿ ಸುಕನ್ಯಾ (34) ಹಾಗೂ 13 ವರ್ಷದ ಮಗ ಇದ್ದಾರೆ. ಅದೇನಾಯ್ತೋ ಗೊತ್ತಿಲ್ಲ!, ನಿನ್ನೆ ತಂದೆಗೆ ಫೋನ್​ ಮಾಡಿರುವ ಈತ, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ಜೊತೆಗೆ ತಾನು ತೆಗೆದುಕೊಳ್ಳುತ್ತಿರುವ ನಿರ್ಧಾರದ ವಿಡಿಯೋ ಫೇಸ್​ಬುಕ್​ನಲ್ಲಿ ಲೈವ್​ ಪ್ರಸಾರ ಮಾಡುವುದಾಗಿಯೂ ಹೇಳಿದ್ದರಂತೆ.

ಫೇಸ್​ಬುಕ್​ನಲ್ಲಿ ಆತ್ಮಹತ್ಯೆಯ ವಿಡಿಯೋ ನೋಡಿರುವ ಈತನ ಗೆಳೆಯರು ತಕ್ಷಣ ಪತ್ನಿಗೆ ಕರೆ ಮಾಡಿ ಸುದ್ದಿ ಮುಟ್ಟಿಸಿದ್ದಾರೆ. ಆಕೆ ಮನೆಗೆ ಬಂದು ನೋಡುವಷ್ಟರಲ್ಲಿ ಫ್ಯಾನ್​​ನಲ್ಲಿ ಮೃತದೇಹ ನೇತಾಡುತ್ತಿತ್ತು. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈದ್ಯರು ಆತ ಸಾವನ್ನಪ್ಪಿದ್ದಾಗಿ ಘೋಷಿಸಿದ್ದಾರೆ.

ಈತ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದಲ್ಲಿ ಮರಣ ಪತ್ರ​ ದೊರೆತಿದ್ದು, ಅದರಲ್ಲಿ ನನ್ನ ಸಾವಿಗೆ ಯಾರೂ ಕಾರಣವಲ್ಲ. ಇಂತಹ ನಾಚಿಕೆಗೇಡಿನ ಜಗತ್ತಿನಲ್ಲಿ ನಾನು ಬದುಕಲು ಇಷ್ಟಪಡುವುದಿಲ್ಲ ಎಂದು ಬರೆದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Last Updated : Mar 2, 2021, 12:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.