ETV Bharat / bharat

ಕೆಂಪು ಡೈರಿ ಕಾಂಗ್ರೆಸ್‌ ಪಕ್ಷದ ಸೋಲಿನ ಕರೆ ಗಂಟೆ: ರಾಜಸ್ಥಾನದ ಭವಿಷ್ಯ ನುಡಿದ ಪ್ರಧಾನಿ ಮೋದಿ

author img

By

Published : Jul 27, 2023, 3:29 PM IST

ಬಹುಚರ್ಚಿತ ಕೆಂಪು ಡೈರಿ ಕಾಂಗ್ರೆಸ್‌ ಪಕ್ಷದ ಸೋಲಿನ ಕರೆ ಗಂಟೆ. ಆ ಪಕ್ಷದ ಝೂಟ್​ ಕಿ ದುಕಾನ್ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ರಾಹುಲ್​ ಗಾಂಧಿ ಇತ್ತೀಚೆಗೆ ಬಳಸಿದ್ದ ಮೊಹಬ್ಬತ್ ಕಿ ದುಕಾನ್ ಹೇಳಿಕೆಗೆ ಪ್ರಧಾನಿ ಮೋದಿ ಹೀಗೆ ಹೇಳಿದ್ದಾರೆ.

ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಸಿಕರ್ (ರಾಜಸ್ಥಾನ): ರಾಜಸ್ಥಾನದ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೃತೃತ್ವದ ಇಲ್ಲಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಕ್ಷ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಹುಚರ್ಚಿತ ಕೆಂಪು ಡೈರಿ ಪ್ರಸ್ತಾಪ ಮಾಡಿದ ಅವರು, ಈ ರಹಸ್ಯ ಕೆಂಪು ಡೈರಿ ಕಾಂಗ್ರೆಸ್​ ಪಕ್ಷದ "ಝೂಟ್​ ಕಿ ದುಕಾನ್"ನ (ಸುಳ್ಳಿನ ಅಂಗಡಿ) ಮತ್ತೊಂದು ಹೊಸ ಯೋಜನೆಯಾಗಿದೆ ಎಂದು ವ್ಯಂಗ್ಯವಾಡಿದರು.

  • Mahatma Gandhi had once given the slogan - Quit India - 'Angrezon India Chhoddo'. The British had to leave the country. Similarly, we have taken the resolve to build a prosperous India. Like Mahatma Gandhi gave the slogan for 'Quit India', today's mantra is 'Bhrashtachar… pic.twitter.com/kxEW3312El

    — ANI (@ANI) July 27, 2023 " class="align-text-top noRightClick twitterSection" data=" ">

ರಾಜೇಂದ್ರ ಸಿಂಗ್ ಗುಡಾ ಈ ಕೆಂಪು ಡೈರಿ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಸಚಿವ ಸ್ಥಾನದಿಂದ ವಜಾಗೊಂಡಿದ್ದಾರೆ. ಈ ಡೈರಿಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಅಕ್ರಮ ಹಣಕಾಸು ವ್ಯವಹಾರಗಳ ವಿವರಗಳು ಅಡಗಿದ್ದು ಇದೊಂದು ಕಾಂಗ್ರೆಸ್​ನ "ಝೂಟ್​​ ಕಿ ದುಕಾನ್"ನ ಹೊಸ ಯೋಜನೆಯಾಗಿದೆ. ಇದೇ ಡೈರಿ ಮುಂಬರುವ ರಾಜ್ಯ ವಿಧಾನಸಭೆಯಲ್ಲ ಕಾಂಗ್ರೆಸ್​ ಪಕ್ಷವನ್ನು ಸೋಲಿಸಲಿದೆ. ಕಾರಣ ಸೋಲಿಸುವಂತಹ ಕರಾಳ ಕೃತ್ಯಗಳು ಆ ಕೆಂಪು ಡೈರಿಯಲ್ಲಿ ದಾಖಲಾಗಿವೆ ಎಂದು ಅವರು ಹೇಳಿದ್ದಾರೆ.

  • #WATCH | Rajasthan: Prime Minister Narendra Modi takes a dig at Congress govt says, "The central government is working for the development of youth...But what is happening in Rajasthan? Youth's future is being played with in Rajasthan. A paper leak program is being run in the… pic.twitter.com/AY9Ci2kvYq

    — ANI (@ANI) July 27, 2023 " class="align-text-top noRightClick twitterSection" data=" ">

ವಿವಿಧ ನೇಮಕಾತಿ ಅಕ್ರಮ ಸೇರಿದಂತೆ ಕಾಂಗ್ರೆಸ್​ ಪಕ್ಷದ ಕರಾಳ ಕೃತ್ಯಗಳು ಆ ಕೆಂಪು ಡೈರಿಯಲ್ಲಿ ಅಡಗಿವೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರ ಯುವಜನರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ನೀಡಿದೆ. ಆದರೆ, ರಾಜಸ್ಥಾನದಲ್ಲಿ ಏನಾಗುತ್ತಿದೆ? ರಾಜಸ್ಥಾನದಲ್ಲಿ ಯುವಕರ ಭವಿಷ್ಯದೊಂದಿಗೆ ಆಟವಾಡುತ್ತಿದೆ. ನೇಮಕಾತಿ ಪತ್ರಿಕೆ ಸೋರಿಕೆ ಮಾಡುವುದರಲ್ಲಿ ತೊಡಗಿದೆ. ರಾಜ್ಯದ ಯುವಕರು ಸಮರ್ಥರಿದ್ದಾರೆ. ಆದರೆ, ಇಲ್ಲಿನ ಕಾಂಗ್ರೆಸ್​ ಸರ್ಕಾರ ಅವರ ಭವಿಷ್ಯವನ್ನು ಹಾಳು ಮಾಡುತ್ತಿದೆ. ಯುವಕರ ಕನಸು ನನಸಾಗಿಸಲು ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದರು.

ತಾಳ್ಮೆಗೂ ಒಂದು ಮಿತಿ ಇದೆ. ಯಾವುದೇ ಕಾರಣಕ್ಕೂ ಇಲ್ಲಿನ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಸಹಿಸಿಕೊಳ್ಳುವುದಿಲ್ಲ ಎಂದು ರಾಜ್ಯದ ಜನರೇ ಹೇಳುತ್ತಿದ್ದಾರೆ. ಈ ಭ್ರಷ್ಟ ಸರ್ಕಾರ ತೊಲಗಬೇಕು. ಕಮಲ ಅರಳಬೇಕು ಎಂದು ಒಂದೇ ಒಂದು ಘೋಷಣೆ ಜನರಿಂದ ಕೇಳಿ ಬರುತ್ತಿದೆ. ಅದು ಈ ಬಾರಿ ಈಡೇರಲಿದೆ ಎಂದು ಅಶೋಕ್ ಗೆಹ್ಲೋಟ್ ನೃತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಿಸಾನ್​ ಸಮೃದ್ಧಿ ಕೇಂದ್ರಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪಿಎಂ: ಇದಕ್ಕೂ ಮುನ್ನ 1.25 ಲಕ್ಷ ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಮೋದಿ, ಕೇಂದ್ರ ಸರ್ಕಾರ ರೈತರ ಏಳಿಗೆಗೆ ದಾರಿ ಮಾಡಿಕೊಡುವ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಕಳೆದ ಒಂಬತ್ತು ವರ್ಷಗಳಿಂದ ರೈತರಿಗಾಗಿ ಕಿಸಾನ್ ಸಮೃದ್ಧಿ ಸೇರಿ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದೆ. ಅವರಿಗೆ ಬೀಜದಿಂದ ಮಾರುಕಟ್ಟೆವರೆಗೆ ವ್ಯವಸ್ಥೆ ಮಾಡಿದೆ. ಭಾರತವು ಹಳ್ಳಿಗಳಿಂದ ತುಂಬಿದ ರಾಷ್ಟ್ರ. ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ಮಾತ್ರ ಭಾರತ ಅಭಿವೃದ್ಧಿ ಹೊಂದಲು ಸಾಧ್ಯ.

  • #WATCH | Rajasthan: Prime Minister Narendra Modi says, "CM Ashok Gehlot has been ill for some time now & has injured his leg. He was supposed to attend the program today, but could not due to his health conditions. I pray for his good health..." pic.twitter.com/T46ke7wNmb

    — ANI (@ANI) July 27, 2023 " class="align-text-top noRightClick twitterSection" data=" ">

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ನಗರಗಳಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಹಳ್ಳಿಗಳಲ್ಲಿ ಒದಗಿಸಲು ಕೆಲಸ ಮಾಡುತ್ತಿದೆ. ಯೂರಿಯಾ ಬೆಲೆಯಿಂದ ರೈತರು ಸಂಕಷ್ಟಕ್ಕೆ ಒಳಗಾಗಲು ನಮ್ಮ ಸರ್ಕಾರ ಬಿಡುವುದಿಲ್ಲ. ಭಾರತದ ರೈತರು ಒಂದು ಯೂರಿಯಾ ಚೀಲಕ್ಕೆ 266 ರೂ.ಗೆ ನೀಡಿದರೆ, ಪಾಕಿಸ್ತಾನದಲ್ಲಿ ಸುಮಾರು 800 ರೂ.ಗೆ, ಬಾಂಗ್ಲಾದೇಶದಲ್ಲಿ 720 ರೂ.ಗೆ ಮತ್ತು ಚೀನಾದಲ್ಲಿ 2,100 ರೂ.ಗೆ ಲಭ್ಯವಿದೆ ಎಂದು ಕೆಲವು ಅಂಕಿ-ಅಂಶಗಳನ್ನು ಹೇಳಿದರು.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ, ಅವರ ಕಾಲಿನ ಸಮಸ್ಯೆಯಿಂದಾಗಿ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಅವರು ಬೇಗ ಗುಣಮುಖರಾಗಲಿ ಎಂದು ಪ್ರಧಾನಿ ಮೋದಿ ಇದೇ ವೇಳೆ ಅವರ ಆಶಿಸಿದರು. ಆದರೆ, ಸಿಕಾರ್ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ತಮ್ಮ ಭಾಷಣವನ್ನು ರದ್ದುಗೊಳಿಸಿದೆ ಎಂದು ಗೆಹ್ಲೋಟ್ ಆರೋಪಿಸಿದ್ದಾರೆ.

ಇದನ್ನೂ ಓದಿ: "ಕೆಂಪು ಡೈರಿ" ಬಹಿರಂಗಕ್ಕೆ ಒತ್ತಾಯ: ಸ್ವಪಕ್ಷದ ವಿರುದ್ಧ ಹರಿಹಾಯ್ದು ಸಚಿವ ಸ್ಥಾನ ಕಳೆದುಕೊಂಡ ಕೈ ಮುಖಂಡನಿಗೆ ವಿಧಾನಸಭೆ ಪ್ರವೇಶಕ್ಕೆ ನಿರ್ಬಂಧ

ಸಿಕರ್ (ರಾಜಸ್ಥಾನ): ರಾಜಸ್ಥಾನದ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೃತೃತ್ವದ ಇಲ್ಲಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಕ್ಷ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಹುಚರ್ಚಿತ ಕೆಂಪು ಡೈರಿ ಪ್ರಸ್ತಾಪ ಮಾಡಿದ ಅವರು, ಈ ರಹಸ್ಯ ಕೆಂಪು ಡೈರಿ ಕಾಂಗ್ರೆಸ್​ ಪಕ್ಷದ "ಝೂಟ್​ ಕಿ ದುಕಾನ್"ನ (ಸುಳ್ಳಿನ ಅಂಗಡಿ) ಮತ್ತೊಂದು ಹೊಸ ಯೋಜನೆಯಾಗಿದೆ ಎಂದು ವ್ಯಂಗ್ಯವಾಡಿದರು.

  • Mahatma Gandhi had once given the slogan - Quit India - 'Angrezon India Chhoddo'. The British had to leave the country. Similarly, we have taken the resolve to build a prosperous India. Like Mahatma Gandhi gave the slogan for 'Quit India', today's mantra is 'Bhrashtachar… pic.twitter.com/kxEW3312El

    — ANI (@ANI) July 27, 2023 " class="align-text-top noRightClick twitterSection" data=" ">

ರಾಜೇಂದ್ರ ಸಿಂಗ್ ಗುಡಾ ಈ ಕೆಂಪು ಡೈರಿ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಸಚಿವ ಸ್ಥಾನದಿಂದ ವಜಾಗೊಂಡಿದ್ದಾರೆ. ಈ ಡೈರಿಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಅಕ್ರಮ ಹಣಕಾಸು ವ್ಯವಹಾರಗಳ ವಿವರಗಳು ಅಡಗಿದ್ದು ಇದೊಂದು ಕಾಂಗ್ರೆಸ್​ನ "ಝೂಟ್​​ ಕಿ ದುಕಾನ್"ನ ಹೊಸ ಯೋಜನೆಯಾಗಿದೆ. ಇದೇ ಡೈರಿ ಮುಂಬರುವ ರಾಜ್ಯ ವಿಧಾನಸಭೆಯಲ್ಲ ಕಾಂಗ್ರೆಸ್​ ಪಕ್ಷವನ್ನು ಸೋಲಿಸಲಿದೆ. ಕಾರಣ ಸೋಲಿಸುವಂತಹ ಕರಾಳ ಕೃತ್ಯಗಳು ಆ ಕೆಂಪು ಡೈರಿಯಲ್ಲಿ ದಾಖಲಾಗಿವೆ ಎಂದು ಅವರು ಹೇಳಿದ್ದಾರೆ.

  • #WATCH | Rajasthan: Prime Minister Narendra Modi takes a dig at Congress govt says, "The central government is working for the development of youth...But what is happening in Rajasthan? Youth's future is being played with in Rajasthan. A paper leak program is being run in the… pic.twitter.com/AY9Ci2kvYq

    — ANI (@ANI) July 27, 2023 " class="align-text-top noRightClick twitterSection" data=" ">

ವಿವಿಧ ನೇಮಕಾತಿ ಅಕ್ರಮ ಸೇರಿದಂತೆ ಕಾಂಗ್ರೆಸ್​ ಪಕ್ಷದ ಕರಾಳ ಕೃತ್ಯಗಳು ಆ ಕೆಂಪು ಡೈರಿಯಲ್ಲಿ ಅಡಗಿವೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರ ಯುವಜನರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ನೀಡಿದೆ. ಆದರೆ, ರಾಜಸ್ಥಾನದಲ್ಲಿ ಏನಾಗುತ್ತಿದೆ? ರಾಜಸ್ಥಾನದಲ್ಲಿ ಯುವಕರ ಭವಿಷ್ಯದೊಂದಿಗೆ ಆಟವಾಡುತ್ತಿದೆ. ನೇಮಕಾತಿ ಪತ್ರಿಕೆ ಸೋರಿಕೆ ಮಾಡುವುದರಲ್ಲಿ ತೊಡಗಿದೆ. ರಾಜ್ಯದ ಯುವಕರು ಸಮರ್ಥರಿದ್ದಾರೆ. ಆದರೆ, ಇಲ್ಲಿನ ಕಾಂಗ್ರೆಸ್​ ಸರ್ಕಾರ ಅವರ ಭವಿಷ್ಯವನ್ನು ಹಾಳು ಮಾಡುತ್ತಿದೆ. ಯುವಕರ ಕನಸು ನನಸಾಗಿಸಲು ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದರು.

ತಾಳ್ಮೆಗೂ ಒಂದು ಮಿತಿ ಇದೆ. ಯಾವುದೇ ಕಾರಣಕ್ಕೂ ಇಲ್ಲಿನ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಸಹಿಸಿಕೊಳ್ಳುವುದಿಲ್ಲ ಎಂದು ರಾಜ್ಯದ ಜನರೇ ಹೇಳುತ್ತಿದ್ದಾರೆ. ಈ ಭ್ರಷ್ಟ ಸರ್ಕಾರ ತೊಲಗಬೇಕು. ಕಮಲ ಅರಳಬೇಕು ಎಂದು ಒಂದೇ ಒಂದು ಘೋಷಣೆ ಜನರಿಂದ ಕೇಳಿ ಬರುತ್ತಿದೆ. ಅದು ಈ ಬಾರಿ ಈಡೇರಲಿದೆ ಎಂದು ಅಶೋಕ್ ಗೆಹ್ಲೋಟ್ ನೃತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಿಸಾನ್​ ಸಮೃದ್ಧಿ ಕೇಂದ್ರಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪಿಎಂ: ಇದಕ್ಕೂ ಮುನ್ನ 1.25 ಲಕ್ಷ ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಮೋದಿ, ಕೇಂದ್ರ ಸರ್ಕಾರ ರೈತರ ಏಳಿಗೆಗೆ ದಾರಿ ಮಾಡಿಕೊಡುವ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಕಳೆದ ಒಂಬತ್ತು ವರ್ಷಗಳಿಂದ ರೈತರಿಗಾಗಿ ಕಿಸಾನ್ ಸಮೃದ್ಧಿ ಸೇರಿ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದೆ. ಅವರಿಗೆ ಬೀಜದಿಂದ ಮಾರುಕಟ್ಟೆವರೆಗೆ ವ್ಯವಸ್ಥೆ ಮಾಡಿದೆ. ಭಾರತವು ಹಳ್ಳಿಗಳಿಂದ ತುಂಬಿದ ರಾಷ್ಟ್ರ. ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ಮಾತ್ರ ಭಾರತ ಅಭಿವೃದ್ಧಿ ಹೊಂದಲು ಸಾಧ್ಯ.

  • #WATCH | Rajasthan: Prime Minister Narendra Modi says, "CM Ashok Gehlot has been ill for some time now & has injured his leg. He was supposed to attend the program today, but could not due to his health conditions. I pray for his good health..." pic.twitter.com/T46ke7wNmb

    — ANI (@ANI) July 27, 2023 " class="align-text-top noRightClick twitterSection" data=" ">

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ನಗರಗಳಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಹಳ್ಳಿಗಳಲ್ಲಿ ಒದಗಿಸಲು ಕೆಲಸ ಮಾಡುತ್ತಿದೆ. ಯೂರಿಯಾ ಬೆಲೆಯಿಂದ ರೈತರು ಸಂಕಷ್ಟಕ್ಕೆ ಒಳಗಾಗಲು ನಮ್ಮ ಸರ್ಕಾರ ಬಿಡುವುದಿಲ್ಲ. ಭಾರತದ ರೈತರು ಒಂದು ಯೂರಿಯಾ ಚೀಲಕ್ಕೆ 266 ರೂ.ಗೆ ನೀಡಿದರೆ, ಪಾಕಿಸ್ತಾನದಲ್ಲಿ ಸುಮಾರು 800 ರೂ.ಗೆ, ಬಾಂಗ್ಲಾದೇಶದಲ್ಲಿ 720 ರೂ.ಗೆ ಮತ್ತು ಚೀನಾದಲ್ಲಿ 2,100 ರೂ.ಗೆ ಲಭ್ಯವಿದೆ ಎಂದು ಕೆಲವು ಅಂಕಿ-ಅಂಶಗಳನ್ನು ಹೇಳಿದರು.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ, ಅವರ ಕಾಲಿನ ಸಮಸ್ಯೆಯಿಂದಾಗಿ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಅವರು ಬೇಗ ಗುಣಮುಖರಾಗಲಿ ಎಂದು ಪ್ರಧಾನಿ ಮೋದಿ ಇದೇ ವೇಳೆ ಅವರ ಆಶಿಸಿದರು. ಆದರೆ, ಸಿಕಾರ್ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ತಮ್ಮ ಭಾಷಣವನ್ನು ರದ್ದುಗೊಳಿಸಿದೆ ಎಂದು ಗೆಹ್ಲೋಟ್ ಆರೋಪಿಸಿದ್ದಾರೆ.

ಇದನ್ನೂ ಓದಿ: "ಕೆಂಪು ಡೈರಿ" ಬಹಿರಂಗಕ್ಕೆ ಒತ್ತಾಯ: ಸ್ವಪಕ್ಷದ ವಿರುದ್ಧ ಹರಿಹಾಯ್ದು ಸಚಿವ ಸ್ಥಾನ ಕಳೆದುಕೊಂಡ ಕೈ ಮುಖಂಡನಿಗೆ ವಿಧಾನಸಭೆ ಪ್ರವೇಶಕ್ಕೆ ನಿರ್ಬಂಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.