ETV Bharat / bharat

ಕೇಂದ್ರ ಸಚಿವರ ಪತ್ರದ ಬಳಿಕ ಅಲೋಪತಿ ವೈದ್ಯಕಿಯ ಪದ್ಧತಿ ವಿರುದ್ಧದ ಹೇಳಿಕೆ ಹಿಂಪಡೆದ ರಾಮ್‌ದೇವ್ - Ramdev Withdraws Allopathy Remarks news

ಅಲೋಪಥಿ ವೈದ್ಯಕೀಯ ಚಿಕಿತ್ಸಾ ಪದ್ಧತಿ ಬಗ್ಗೆ ನೀಡಿದ್ದ ವಿವಾದಿತ ಹೇಳಿಕೆಯನ್ನು ಯೋಗ ಗುರು ಬಾಬಾ ರಾಮದೇವ್ ಹಿಂಪಡೆದುಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, 'ನಾನು ಎಲ್ಲ ರೀತಿಯ ಔಷಧೀಯ ಪದ್ಧತಿಗಳನ್ನು ಗೌರವಿಸುತ್ತೇನೆ' ಎಂದಿದ್ದಾರೆ.

Ramdev Withdraws Allopathy Remarks
ಕ್ಷಮೆಯಾಚಿಸಿದ ಯೋಗ ಗುರು
author img

By

Published : May 24, 2021, 7:38 AM IST

ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ಪತ್ರದ ಬೆನ್ನಲ್ಲೇ ಯೋಗ ಗುರು ಬಾಬಾ ರಾಮದೇವ್ ಅಲೋಪಥಿ ಔಷಧದ ಕುರಿತಂತೆ ನೀಡಿದ್ದ ವಿವಾದಿತ ಹೇಳಿಕೆಯನ್ನು ಹಿಂಪಡೆದುಕೊಂಡಿದ್ದಾರೆ.

ಕೇಂದ್ರ ಆರೋಗ್ಯ ಸಚಿವರ ಪತ್ರದಲ್ಲೇನಿತ್ತು?

"ದೇಶದಲ್ಲಿ ಅನೇಕ ಆರೋಗ್ಯ ಸಿಬ್ಬಂದಿ ಕೋವಿಡ್​ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಇದೀಗ ನೀವು​ ನೀಡಿರುವ ಹೇಳಿಕೆಯಿಂದಾಗಿ ದೇಶದ ಹಲವು ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಅಲ್ಲದೆ, ಕೊವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಅಲೋಪಥಿಕ್​ ವೈದ್ಯಕೀಯ ಸಿಬ್ಬಂದಿಗೆ ಅಗೌರವ ತೋರಿಸಿದಂತಾಗಿದೆ" ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ಅವರು ಬಾಬಾ ರಾಮ್​ದೇವ್‌ಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

  • संपूर्ण देशवासियों के लिए #COVID19 के खिलाफ़ दिन-रात युद्धरत डॉक्टर व अन्य स्वास्थ्यकर्मी देवतुल्य हैं।

    बाबा @yogrishiramdev जी के वक्तव्य ने कोरोना योद्धाओं का निरादर कर,देशभर की भावनाओं को गहरी ठेस पहुंचाई।

    मैंने उन्हें पत्र लिखकर अपना आपत्तिजनक वक्तव्य वापस लेने को कहा है। pic.twitter.com/QBXCdaRQb1

    — Dr Harsh Vardhan (@drharshvardhan) May 23, 2021 " class="align-text-top noRightClick twitterSection" data=" ">

ಕೇಂದ್ರ ಸಚಿವರ ಸೂಚನೆಯ ಬೆನ್ನಲ್ಲೇ ರಾಮ್‌ದೇವ್‌ ಟ್ವೀಟ್​ ಮಾಡಿದ್ದು, ತಾವು ನೀಡಿದ ಹೇಳಿಕೆಯನ್ನು ಹಿಂಪಡೆದಿದ್ದಾರೆ.

ಹೇಳಿಕೆ ಹಿಂಪಡೆದ ಯೋಗ ಗುರು:

"ನಾನು ಎಲ್ಲ ರೀತಿಯ ಔಷಧೀಯ ಪದ್ಧತಿಗಳನ್ನು ಗೌರವಿಸುತ್ತೇನೆ. ವೈದ್ಯಕೀಯ ಪದ್ಧತಿಗಳ ಹೇಳಿಕೆಯ ವಿವಾದಕ್ಕೆ ವಿಷಾದಿಸುತ್ತಾ ನನ್ನ ಹೇಳಿಕೆಯನ್ನು ಹಿಂತೆಗೆದುಕೊಳ್ಳುತ್ತೇನೆ" ಎಂದು ಟ್ವೀಟ್​ ಮಾಡಿದ್ದಾರೆ.

  • माननीय श्री @drharshvardhan जी आपका पत्र प्राप्त हुआ,
    उसके संदर्भ में चिकित्सा पद्दतियों के संघर्ष के इस पूरे विवाद को खेदपूर्वक विराम देते हुए मैं अपना वक्तव्य वापिस लेता हूँ और यह पत्र आपको संप्रेषित कर रहा हूं- pic.twitter.com/jEAr59VtEe

    — स्वामी रामदेव (@yogrishiramdev) May 23, 2021 " class="align-text-top noRightClick twitterSection" data=" ">

ಬಾಬಾ ರಾಮದೇವ್​ ನೀಡಿದ್ದ ಹೇಳಿಕೆ ಏನು?

"ಅಲೋಪಥಿ ಮೂರ್ಖ ವಿಜ್ಞಾನ ಮತ್ತು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದಿಸಲ್ಪಟ್ಟಿರುವ ರೆಮಿಡಿಸಿವಿರ್, ಫೆವಿಫ್ಲೂ ಮತ್ತಿತರ ಔಷಧಗಳು, ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ವಿಫಲವಾಗಿವೆ. ಅಲೋಪಥಿ ಔಷಧದಿಂದ ಲಕ್ಷಾಂತರ ರೋಗಿಗಳು ಸಾವನ್ನಪ್ಪಿದ್ದಾರೆ" ಎಂದು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ವಿಡಿಯೋ ವೈರಲ್​ ಆಗಿತ್ತು.

  • Till now it was still tolerable but this video by Ramdev has crossed all limits. I am not against Ayurveda but this fraud man is making serious allegations now!Considering the following this bigot has,he is nothing less than a pandemic now ! He should be taught his limits ASAP ! pic.twitter.com/d0twVO4ZNc

    — Tushar Mehta (@dr_tushar_mehta) May 21, 2021 " class="align-text-top noRightClick twitterSection" data=" ">

ಕಾನೂನು ಕ್ರಮಕ್ಕೆ ಆಗ್ರಹಿಸಿದ್ದ ಡಿಎಂಎ:

ಭಾರತೀಯ ವೈದ್ಯಕೀಯ ಸಂಸ್ಥೆ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿತ್ತು. ದೆಹಲಿ ವೈದ್ಯಕೀಯ ಸಂಘವೂ (ಡಿಎಂಎ) ಸಹ ರಾಮ್‌ದೇವ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಕೇಂದ್ರ ಆರೋಗ್ಯ ಇಲಾಖೆಯನ್ನು ಒತ್ತಾಯಿಸಿತ್ತು.

ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ಪತ್ರದ ಬೆನ್ನಲ್ಲೇ ಯೋಗ ಗುರು ಬಾಬಾ ರಾಮದೇವ್ ಅಲೋಪಥಿ ಔಷಧದ ಕುರಿತಂತೆ ನೀಡಿದ್ದ ವಿವಾದಿತ ಹೇಳಿಕೆಯನ್ನು ಹಿಂಪಡೆದುಕೊಂಡಿದ್ದಾರೆ.

ಕೇಂದ್ರ ಆರೋಗ್ಯ ಸಚಿವರ ಪತ್ರದಲ್ಲೇನಿತ್ತು?

"ದೇಶದಲ್ಲಿ ಅನೇಕ ಆರೋಗ್ಯ ಸಿಬ್ಬಂದಿ ಕೋವಿಡ್​ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಇದೀಗ ನೀವು​ ನೀಡಿರುವ ಹೇಳಿಕೆಯಿಂದಾಗಿ ದೇಶದ ಹಲವು ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಅಲ್ಲದೆ, ಕೊವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಅಲೋಪಥಿಕ್​ ವೈದ್ಯಕೀಯ ಸಿಬ್ಬಂದಿಗೆ ಅಗೌರವ ತೋರಿಸಿದಂತಾಗಿದೆ" ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ಅವರು ಬಾಬಾ ರಾಮ್​ದೇವ್‌ಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

  • संपूर्ण देशवासियों के लिए #COVID19 के खिलाफ़ दिन-रात युद्धरत डॉक्टर व अन्य स्वास्थ्यकर्मी देवतुल्य हैं।

    बाबा @yogrishiramdev जी के वक्तव्य ने कोरोना योद्धाओं का निरादर कर,देशभर की भावनाओं को गहरी ठेस पहुंचाई।

    मैंने उन्हें पत्र लिखकर अपना आपत्तिजनक वक्तव्य वापस लेने को कहा है। pic.twitter.com/QBXCdaRQb1

    — Dr Harsh Vardhan (@drharshvardhan) May 23, 2021 " class="align-text-top noRightClick twitterSection" data=" ">

ಕೇಂದ್ರ ಸಚಿವರ ಸೂಚನೆಯ ಬೆನ್ನಲ್ಲೇ ರಾಮ್‌ದೇವ್‌ ಟ್ವೀಟ್​ ಮಾಡಿದ್ದು, ತಾವು ನೀಡಿದ ಹೇಳಿಕೆಯನ್ನು ಹಿಂಪಡೆದಿದ್ದಾರೆ.

ಹೇಳಿಕೆ ಹಿಂಪಡೆದ ಯೋಗ ಗುರು:

"ನಾನು ಎಲ್ಲ ರೀತಿಯ ಔಷಧೀಯ ಪದ್ಧತಿಗಳನ್ನು ಗೌರವಿಸುತ್ತೇನೆ. ವೈದ್ಯಕೀಯ ಪದ್ಧತಿಗಳ ಹೇಳಿಕೆಯ ವಿವಾದಕ್ಕೆ ವಿಷಾದಿಸುತ್ತಾ ನನ್ನ ಹೇಳಿಕೆಯನ್ನು ಹಿಂತೆಗೆದುಕೊಳ್ಳುತ್ತೇನೆ" ಎಂದು ಟ್ವೀಟ್​ ಮಾಡಿದ್ದಾರೆ.

  • माननीय श्री @drharshvardhan जी आपका पत्र प्राप्त हुआ,
    उसके संदर्भ में चिकित्सा पद्दतियों के संघर्ष के इस पूरे विवाद को खेदपूर्वक विराम देते हुए मैं अपना वक्तव्य वापिस लेता हूँ और यह पत्र आपको संप्रेषित कर रहा हूं- pic.twitter.com/jEAr59VtEe

    — स्वामी रामदेव (@yogrishiramdev) May 23, 2021 " class="align-text-top noRightClick twitterSection" data=" ">

ಬಾಬಾ ರಾಮದೇವ್​ ನೀಡಿದ್ದ ಹೇಳಿಕೆ ಏನು?

"ಅಲೋಪಥಿ ಮೂರ್ಖ ವಿಜ್ಞಾನ ಮತ್ತು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದಿಸಲ್ಪಟ್ಟಿರುವ ರೆಮಿಡಿಸಿವಿರ್, ಫೆವಿಫ್ಲೂ ಮತ್ತಿತರ ಔಷಧಗಳು, ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ವಿಫಲವಾಗಿವೆ. ಅಲೋಪಥಿ ಔಷಧದಿಂದ ಲಕ್ಷಾಂತರ ರೋಗಿಗಳು ಸಾವನ್ನಪ್ಪಿದ್ದಾರೆ" ಎಂದು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ವಿಡಿಯೋ ವೈರಲ್​ ಆಗಿತ್ತು.

  • Till now it was still tolerable but this video by Ramdev has crossed all limits. I am not against Ayurveda but this fraud man is making serious allegations now!Considering the following this bigot has,he is nothing less than a pandemic now ! He should be taught his limits ASAP ! pic.twitter.com/d0twVO4ZNc

    — Tushar Mehta (@dr_tushar_mehta) May 21, 2021 " class="align-text-top noRightClick twitterSection" data=" ">

ಕಾನೂನು ಕ್ರಮಕ್ಕೆ ಆಗ್ರಹಿಸಿದ್ದ ಡಿಎಂಎ:

ಭಾರತೀಯ ವೈದ್ಯಕೀಯ ಸಂಸ್ಥೆ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿತ್ತು. ದೆಹಲಿ ವೈದ್ಯಕೀಯ ಸಂಘವೂ (ಡಿಎಂಎ) ಸಹ ರಾಮ್‌ದೇವ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಕೇಂದ್ರ ಆರೋಗ್ಯ ಇಲಾಖೆಯನ್ನು ಒತ್ತಾಯಿಸಿತ್ತು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.