ETV Bharat / bharat

ರಾಜಸ್ಥಾನದಲ್ಲಿ ಕಾಂಗ್ರೆಸ್​ ಸೋಲು ಸ್ವೀಕರಿಸಿದ ಗೆಹ್ಲೋಟ್ : ಸಂಜೆ ಸಿಎಂ ಸ್ಥಾನಕ್ಕೆ ರಾಜೀನಾಮೆ

author img

By ETV Bharat Karnataka Team

Published : Dec 3, 2023, 4:04 PM IST

Updated : Dec 3, 2023, 4:33 PM IST

Rajasthan Assembly Election Result : ಇಂದು ಸಂಜೆ 5.30ರ ಸುಮಾರಿಗೆ ರಾಜಸ್ಥಾನ ಸಿಎಂ ಸ್ಥಾನಕ್ಕೆ ಅಶೋಕ್​ ಗೆಹ್ಲೋಟ್​ ರಾಜೀನಾಮೆ ನೀಡಲಿದ್ದಾರೆ.

rajasthan-assembly-election-result-cm-ashok-gehlot-accepts-defeat
ರಾಜಸ್ಥಾನದಲ್ಲಿ ಕಾಂಗ್ರೆಸ್​ ಸೋಲು ಸ್ವೀಕರಿಸಿದ ಗೆಹ್ಲೋಟ್ : ಸಂಜೆ ಸಿಎಂ ಸ್ಥಾನಕ್ಕೆ ರಾಜೀನಾಮೆ

ಜೋಧ್​ಪುರ್​ (ರಾಜಸ್ಥಾನ) : ಪಂಚರಾಜ್ಯ ವಿಧಾನಸಭೆ ಚುನಾವಣೆಯ ಪೈಕಿ ನಾಲ್ಕು ರಾಜ್ಯಗಳ ಫಲಿತಾಂಶ ಈಗಾಗಲೇ ಹೊರಬಿದ್ದಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢದಲ್ಲಿ ಬಿಜೆಪಿ ಗೆದ್ದು ಬೀಗಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್​​ ಜಯ ಸಾಧಿಸಿದೆ.

ಮತ್ತೊಂದೆಡೆ ರಾಜಸ್ಥಾನದಲ್ಲಿ ಕಾಂಗ್ರೆಸ್​ ಪಕ್ಷದ ಸೋಲನ್ನು ಸ್ವೀಕರಿಸಿರುವ ಸಿಎಂ ಅಶೋಕ್​ ಗೆಹ್ಲೋಟ್​ ಅವರು ಇಂದು ಸಂಜೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. 5.30ರ ಸುಮಾರಿಗೆ ರಾಜ್ಯಪಾಲ ಕಲ್​ರಾಜ್​ ಮಿಶ್ರಾ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ. ರಾಜ್ಯದಲ್ಲಿ 114 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿದ್ದು, ಆಡಳಿತಾರೂಢ ಕಾಂಗ್ರೆಸ್​ 70 ಸ್ಥಾನಕ್ಕೆ ಕುಸಿದಿದೆ. ಇತರರು 15 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಸಿಎಂ ಅಶೋಕ್​ ಗೆಹ್ಲೋಟ್​ಗೆ ಜಯ : ಸರ್ದಾರ್​ಪುರ್​ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧಿಸಿದ್ದ ಸಿಎಂ ಅಶೋಕ್​ ಗೆಹ್ಲೋಟ್​ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇವರು ಬಿಜೆಪಿಯ ಮಹೇಂದ್ರ ಸಿಂಗ್​ ರಾಥೋರ್​ ವಿರುದ್ಧ ಗೆಲುವು ಸಾಧಿಸಿದರು. ಗೆಹ್ಲೋಟ್​ ಅವರು 95,409 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ 69,521 ಮತಗಳನ್ನು ಗಳಿಸಿ 25,888 ಮತಗಳ ಅಂತರದಿಂದ ಸೋಲನುಭವಿಸಿದರು.

ಸರ್ದಾರ್​ಪುರ್​ ವಿಧಾನಸಭಾ ಕ್ಷೇತ್ರವು ತೀವ್ರ ಪೈಪೋಟಿಗೆ ಕಾರಣವಾಗಿತ್ತು. ಈ ಕ್ಷೇತ್ರದಿಂದ ಕಾಂಗ್ರೆಸ್​ ಹಿರಿಯ ನಾಯಕ ಅಶೋಕ್​ ಗೆಹ್ಲೋಟ್​ ಸತತ ಗೆಲುವು ದಾಖಲಿಸಿದ್ದರು. ಒಟ್ಟು 6 ಬಾರಿ ಈ ಕ್ಷೇತ್ರದಿಂದ ಅಶೋಕ್​ ಗೆಹ್ಲೋಟ್​ ಗೆಲುವು ಸಾಧಿಸಿದ್ದಾರೆ. ಗೆಹ್ಲೋಟ್​ 1977ರಲ್ಲಿ ಮೊದಲ ಬಾರಿಗೆ ಸರ್ದಾರ್​ಪುರ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು, ಬಳಿಕ ಇದೇ ಕ್ಷೇತ್ರದಿಂದ ಸತತವಾಗಿ ಸ್ಪರ್ಧಿಸುತ್ತಾ ಬರುತ್ತಿದ್ದಾರೆ.

1998ರಲ್ಲಿ ಕಾಂಗ್ರೆಸ್​ ನಾಯಕ ಮಾನ್​ಸಿಂಗ್​ ದೋರಾ ಅವರು ಅಶೋಕ್​ ಗೆಹ್ಲೋಟ್​ ಅವರಿಗೆ ಈ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದರು. ದೋರಾ ಅವರ ರಾಜೀನಾಮೆ ನಂತರ ಅಶೋಕ್​ ಗೆಹ್ಲೋಟ್​ ಇಲ್ಲಿ ನಡೆದ ಉಪಚುನಾವಣೆಯಲ್ಲಿ ಗೆದ್ದು, ಮೊದಲ ಬಾರಿಗೆ ಶಾಸಕರಾಗಿದ್ದರು. ಇದಕ್ಕೂ ಮುನ್ನ ಗೆಹ್ಲೋಟ್​ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. 1998ರ ಉಪಚುನಾವಣೆ ನಂತರ ಗೆಹ್ಲೋಟ್​ ಸರ್ದಾರ್​​ಪುರ್​ ಕ್ಷೇತ್ರದಿಂದ ಸತತ ಆರು ಬಾರಿ ಸ್ಪರ್ಧಿಸಿ ಶಾಸಕರಾಗಿದ್ದಾರೆ.

ಗೆಹ್ಲೋಟ್​ಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯು ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೆ ಅವರ ಆಪ್ತರಾದ ಪ್ರೊ. ಮಹೇಂದ್ರ ಸಿಂಗ್​ ರಾಥೋರ್​ ಅವರನ್ನು ಕಣಕ್ಕೆ ಇಳಿಸಿತ್ತು. ಅದರೆ ಬಿಜೆಪಿ ಲೆಕ್ಕಾಚಾರ ಮತ್ತು ರಾಥೋರ್​ ಪ್ರಭಾವ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ. ಇದರಿಂದಾಗಿ ಸಿಎಂ ಅಶೋಕ್​ ಗೆಹ್ಲೋಟ್​ ವಿರುದ್ಧ ರಾಥೋರ್​ ಸೋಲನ್ನು ಅನುಭವಿಸಿದ್ದಾರೆ.

ಇದನ್ನೂ ಓದಿ : ರಾಜಸ್ಥಾನದಲ್ಲಿ ಬಿಜೆಪಿಗೆ ಅಧಿಕಾರ: ಆಧ್ಯಾತ್ಮಿಕ ನಾಯಕನಿಗೆ ಸಿಎಂ ಹುದ್ದೆ?

ಜೋಧ್​ಪುರ್​ (ರಾಜಸ್ಥಾನ) : ಪಂಚರಾಜ್ಯ ವಿಧಾನಸಭೆ ಚುನಾವಣೆಯ ಪೈಕಿ ನಾಲ್ಕು ರಾಜ್ಯಗಳ ಫಲಿತಾಂಶ ಈಗಾಗಲೇ ಹೊರಬಿದ್ದಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢದಲ್ಲಿ ಬಿಜೆಪಿ ಗೆದ್ದು ಬೀಗಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್​​ ಜಯ ಸಾಧಿಸಿದೆ.

ಮತ್ತೊಂದೆಡೆ ರಾಜಸ್ಥಾನದಲ್ಲಿ ಕಾಂಗ್ರೆಸ್​ ಪಕ್ಷದ ಸೋಲನ್ನು ಸ್ವೀಕರಿಸಿರುವ ಸಿಎಂ ಅಶೋಕ್​ ಗೆಹ್ಲೋಟ್​ ಅವರು ಇಂದು ಸಂಜೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. 5.30ರ ಸುಮಾರಿಗೆ ರಾಜ್ಯಪಾಲ ಕಲ್​ರಾಜ್​ ಮಿಶ್ರಾ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ. ರಾಜ್ಯದಲ್ಲಿ 114 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿದ್ದು, ಆಡಳಿತಾರೂಢ ಕಾಂಗ್ರೆಸ್​ 70 ಸ್ಥಾನಕ್ಕೆ ಕುಸಿದಿದೆ. ಇತರರು 15 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಸಿಎಂ ಅಶೋಕ್​ ಗೆಹ್ಲೋಟ್​ಗೆ ಜಯ : ಸರ್ದಾರ್​ಪುರ್​ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧಿಸಿದ್ದ ಸಿಎಂ ಅಶೋಕ್​ ಗೆಹ್ಲೋಟ್​ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇವರು ಬಿಜೆಪಿಯ ಮಹೇಂದ್ರ ಸಿಂಗ್​ ರಾಥೋರ್​ ವಿರುದ್ಧ ಗೆಲುವು ಸಾಧಿಸಿದರು. ಗೆಹ್ಲೋಟ್​ ಅವರು 95,409 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ 69,521 ಮತಗಳನ್ನು ಗಳಿಸಿ 25,888 ಮತಗಳ ಅಂತರದಿಂದ ಸೋಲನುಭವಿಸಿದರು.

ಸರ್ದಾರ್​ಪುರ್​ ವಿಧಾನಸಭಾ ಕ್ಷೇತ್ರವು ತೀವ್ರ ಪೈಪೋಟಿಗೆ ಕಾರಣವಾಗಿತ್ತು. ಈ ಕ್ಷೇತ್ರದಿಂದ ಕಾಂಗ್ರೆಸ್​ ಹಿರಿಯ ನಾಯಕ ಅಶೋಕ್​ ಗೆಹ್ಲೋಟ್​ ಸತತ ಗೆಲುವು ದಾಖಲಿಸಿದ್ದರು. ಒಟ್ಟು 6 ಬಾರಿ ಈ ಕ್ಷೇತ್ರದಿಂದ ಅಶೋಕ್​ ಗೆಹ್ಲೋಟ್​ ಗೆಲುವು ಸಾಧಿಸಿದ್ದಾರೆ. ಗೆಹ್ಲೋಟ್​ 1977ರಲ್ಲಿ ಮೊದಲ ಬಾರಿಗೆ ಸರ್ದಾರ್​ಪುರ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು, ಬಳಿಕ ಇದೇ ಕ್ಷೇತ್ರದಿಂದ ಸತತವಾಗಿ ಸ್ಪರ್ಧಿಸುತ್ತಾ ಬರುತ್ತಿದ್ದಾರೆ.

1998ರಲ್ಲಿ ಕಾಂಗ್ರೆಸ್​ ನಾಯಕ ಮಾನ್​ಸಿಂಗ್​ ದೋರಾ ಅವರು ಅಶೋಕ್​ ಗೆಹ್ಲೋಟ್​ ಅವರಿಗೆ ಈ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದರು. ದೋರಾ ಅವರ ರಾಜೀನಾಮೆ ನಂತರ ಅಶೋಕ್​ ಗೆಹ್ಲೋಟ್​ ಇಲ್ಲಿ ನಡೆದ ಉಪಚುನಾವಣೆಯಲ್ಲಿ ಗೆದ್ದು, ಮೊದಲ ಬಾರಿಗೆ ಶಾಸಕರಾಗಿದ್ದರು. ಇದಕ್ಕೂ ಮುನ್ನ ಗೆಹ್ಲೋಟ್​ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. 1998ರ ಉಪಚುನಾವಣೆ ನಂತರ ಗೆಹ್ಲೋಟ್​ ಸರ್ದಾರ್​​ಪುರ್​ ಕ್ಷೇತ್ರದಿಂದ ಸತತ ಆರು ಬಾರಿ ಸ್ಪರ್ಧಿಸಿ ಶಾಸಕರಾಗಿದ್ದಾರೆ.

ಗೆಹ್ಲೋಟ್​ಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯು ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೆ ಅವರ ಆಪ್ತರಾದ ಪ್ರೊ. ಮಹೇಂದ್ರ ಸಿಂಗ್​ ರಾಥೋರ್​ ಅವರನ್ನು ಕಣಕ್ಕೆ ಇಳಿಸಿತ್ತು. ಅದರೆ ಬಿಜೆಪಿ ಲೆಕ್ಕಾಚಾರ ಮತ್ತು ರಾಥೋರ್​ ಪ್ರಭಾವ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ. ಇದರಿಂದಾಗಿ ಸಿಎಂ ಅಶೋಕ್​ ಗೆಹ್ಲೋಟ್​ ವಿರುದ್ಧ ರಾಥೋರ್​ ಸೋಲನ್ನು ಅನುಭವಿಸಿದ್ದಾರೆ.

ಇದನ್ನೂ ಓದಿ : ರಾಜಸ್ಥಾನದಲ್ಲಿ ಬಿಜೆಪಿಗೆ ಅಧಿಕಾರ: ಆಧ್ಯಾತ್ಮಿಕ ನಾಯಕನಿಗೆ ಸಿಎಂ ಹುದ್ದೆ?

Last Updated : Dec 3, 2023, 4:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.