ETV Bharat / bharat

ಮಾಜಿ ಪ್ರಧಾನಿ ವಾಜಪೇಯಿ ಸ್ಮಾರಕಕ್ಕೆ ರಾಹುಲ್ ಗಾಂಧಿ ಭೇಟಿ: ನಮನ ಸಲ್ಲಿಕೆ

author img

By

Published : Dec 26, 2022, 5:14 PM IST

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮಾಜಿ ಪ್ರಧಾನಿ ಅಟಲ್​​ ಬಿಹಾರಿ ವಾಜಪೇಯಿ ಅವರ ಸ್ಮಾರಕ್ಕಕೆ ಭೇಟಿ ನೀಡಿ ಪುಷ್ಪಾರ್ಚನೆ ನಡೆಸಿದರು. ಈ ಮೂಲಕ ದೇಶದ ಗಮನ ಸೆಳೆದಿದ್ದಾರೆ.

ವಾಜಪೇಯಿ ಅವರ ಸ್ಮಾರಕಕ್ಕೆ ರಾಹುಲ್ ಗಾಂಧಿ ಭೇಟಿ
ವಾಜಪೇಯಿ ಅವರ ಸ್ಮಾರಕಕ್ಕೆ ರಾಹುಲ್ ಗಾಂಧಿ ಭೇಟಿ

ನವದೆಹಲಿ: ಮಾಜಿ ಪ‍್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸಮಾಧಿ ಸ್ಥಳಕ್ಕೆ ಸೋಮವಾರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿ ನೀಡಿ, ಗೌರವ ಸಲ್ಲಿಸಿದ್ದಾರೆ.

ಮೋದಿಗೆ ರಾಜಧರ್ಮದ ಬಗ್ಗೆ ಪಾಠ: ಪ್ರಧಾನಿ ನರೇಂದ್ರ ಮೋದಿ ಅವರು ಅಟಲ್‌ಜಿ ಅವರ ರಾಜಧರ್ಮವನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳಬೇಕು ಎಂದು ಕಾಂಗ್ರೆಸ್​ ಹೇಳಿದೆ. 2002 ರಲ್ಲಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಟಲ್​ಜಿ ಇಂದಿನ ಪ್ರಧಾನಿಗೆ ರಾಜಧರ್ಮದ ಪಾಠವನ್ನು ಹೇಳಿಕೊಟ್ಟಿದ್ದರು. ರಾಜಕೀಯವನ್ನು ತುಂಬು ಹೃದಯದಿಂದ ಮಾಡಬೇಕು. ಇಂದು ಆ ರೀತಿಯ ರಾಜಕೀಯವನ್ನು ರಾಹುಲ್​ ಗಾಂಧಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಸುಪ್ರಿಯಾ ಶ್ರೀನಾಟೆ ಹೇಳಿದ್ದಾರೆ.

ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ಚರಣ್ ಸಿಂಗ್, ರಾಜೀವ್ ಗಾಂಧಿ ಅವರ ಸ್ಮಾರಕ ಮತ್ತು ಮಹಾತ್ಮ ಗಾಂಧಿಯವರ ಸ್ಮಾರಕಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ ಕೆಲವೇ ಗಂಟೆಗಳ ನಂತರ, ಕಾಂಗ್ರೆಸ್​ನಿಂದ ಈ ರೀತಿಯ ಪ್ರತಿಕ್ರಿಯೆ ಬಂದಿದೆ.

ಅಟಲ್‌ಜಿ ಅವರ ಪ್ರಕಾರ, ರಾಷ್ಟ್ರ ನಿರ್ಮಾಣದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಕೊಡುಗೆ ಇದೆ. ನೀವು ತಪಸ್ಸು ಮಾಡಿದಾಗ, ಎಲ್ಲರನ್ನು ಒಂದುಗೂಡಿಸಲು ಪ್ರಯತ್ನಿಸುತ್ತೀರಿ. ಬಿಜೆಪಿ ನಾಯಕರು ಯಾತ್ರೆಯಲ್ಲಿ ಪಾಲ್ಗೊಳ್ಳಲು ಬಯಸಿದರೆ, ಅವರಿಗೆ ಸ್ವಾಗತವಿದೆ ಎಂದು ಅವರು ಹೇಳಿದರು.

ವಾಜಪೇಯಿ ಅವರ ಸ್ಮಾರಕಕ್ಕೆ ರಾಹುಲ್ ಗಾಂಧಿ ಭೇಟಿ
ವಾಜಪೇಯಿ ಅವರ ಸ್ಮಾರಕಕ್ಕೆ ರಾಹುಲ್ ಗಾಂಧಿ ಭೇಟಿ

ಮೋದಿ ಗುರಿಯಾಗಿಸಿ ಹೇಳಿಕೆ: ಕಾಂಗ್ರೆಸ್ ವಕ್ತಾರರು ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ಈ ರೀತಿ ಹೇಳಿಕೆ ನೀಡಿದ್ದಾರೆ. ಆದರೆ ಅವರು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಗೆ ಲಗತ್ತಿಸಲಾದ ಮತ್ತು ಗೌರವ್ ಪಾಂಡಿ ಅವರು ಇಂದು ಬೆಳಗ್ಗೆ ಮಾಡಿದ ವಿವಾದಾತ್ಮಕ ಟ್ವೀಟ್‌ ಬಗ್ಗೆ ಪ್ರತಿಕ್ರಿಯಿಸಿಲ್ಲ. ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ಟೀಕಿಸಿ ಟ್ವೀಟ್ ಮಾಡಲಾಗಿದ್ದು, ನಂತರ ಅದನ್ನು ತೆಗೆಯಲಾಗಿದೆ.

ಮೋದಿ ರಾಜಧರ್ಮ ಪಾಲಿಸಿಲ್ಲ: 2002ರಲ್ಲಿ ಈಗಿನ ಪ್ರಧಾನಿಗೆ ಅಟಲ್​ಜಿ ರಾಜಧರ್ಮದ ಬಗ್ಗೆ ಹೇಳುವಾಗ ಅವರು, ಸಂವಿಧಾನದ ಪರವಾಗಿ ಇದ್ದರು. ಆದರೆ, ಪ್ರಧಾನಿ ಮೋದಿ ಆ ಪಾಠ ಕಲಿಯಲಿಲ್ಲ ಮತ್ತು ಸಂವಿಧಾನವನ್ನು ದೂರ ಇಟ್ಟಿದ್ದಾರೆ. ಅವರು ಸಂವಿಧಾನವನ್ನು ಅನುಸರಿಸುತ್ತಾರೆ ಮತ್ತು ಸಮಾಜದ ಕೆಲವು ವರ್ಗಗಳ ಗುರಿಯನ್ನು ಈಡೇರುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಶ್ರಿನಾಟೆ ಹೇಳಿದರು.

ಸಂವಿಧಾನ ರಕ್ಷಿಸುವ ಪ್ರಯತ್ನಕ್ಕೆ ಗೌರವ: ವಾಜಪೇಯಿ ಸ್ಮಾರಕದಲ್ಲಿ ರಾಹುಲ್​ ಗಾಂಧಿ ಭೇಟಿ ನೀಡಿರುವುದು, ಅಟಲ್​ಜಿ ಅವರು ಸಂವಿಧಾನ ರಕ್ಷಿಸುವ ಪ್ರಯತ್ನಕ್ಕೆ ಗೌರವದ ಸಂಕೇತವಾಗಿದೆ. ಡಿಸೆಂಬರ್ 25 ರಿಂದ ಜನವರಿ 2 ರವರೆಗೆ ಭಾರತ್ ಜೋಡೋ ಯಾತ್ರೆಯಿಂದ ರಾಹುಲ್​ ಗಾಂಧಿ ವಿರಾಮವನ್ನು ಪಡೆದಿದ್ದಾರೆ. ಬಿಜೆಪಿ ನಿರಂತರವಾಗಿ ಯಾತ್ರೆಯನ್ನು ಅಪಹಾಸ್ಯ ಮಾಡಲು ಮತ್ತು ಹಳಿತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಆಡಳಿತ ಪಕ್ಷ ಇದರಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಕಾಂಗ್ರೆಸ್​ ಹೇಳಿದೆ.

ರಾಹುಲ್ ಗಾಂಧಿ ಅವರು ಸೆಪ್ಟೆಂಬರ್ 7 ರಂದು ಭಾರತ್​ ಜೋಡೋ ಯಾತ್ರೆಯನ್ನು ಆರಂಭಿಸಿದಾಗಿನಿಂದ ಬಿಜೆಪಿ ಟೀಕೆಯನ್ನು ಮಾಡುತ್ತಿದೆ. ಪಿಎಂ ಮೋದಿ ಮತ್ತು ಪಕ್ಷದ ಮುಖ್ಯಸ್ಥರು ಸೇರಿದಂತೆ ಅವರ ಉನ್ನತ ನಾಯಕರ ಆಜ್ಞೆಯ ಮೇರೆಗೆ ಬಿಜೆಪಿ ಟ್ರೋಲ್‌ಗಳನ್ನು ಮಾಡುತ್ತಿದೆ ಎಂದು ಶ್ರೀನಾಟೆ ಹೇಳಿದರು.

ಇದನ್ನೂ ಓದಿ: ಮೇ ಅಟಲ್ ಹೂನ್: ವಾಜಪೇಯಿ ಬಯೋಪಿಕ್ ಫಸ್ಟ್ ಲುಕ್ ರಿಲೀಸ್

ಕಾಂಗ್ರೆಸ್ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಪ್ರಕಾರ, ಇಂಟಲಿಜೆನ್ಸ್ ಬ್ಯೂರೋ ಇತ್ತೀಚೆಗೆ ಹರಿಯಾಣದಲ್ಲಿ ಯಾತ್ರೆಯಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ಏನು ನಡೆಯುತ್ತಿದೆ ಎಂದು ತನಿಖೆ ನಡೆಸುತ್ತಿದೆ. ಯಾತ್ರೆ ಪಾರದರ್ಶಕವಾಗಿದೆ. ಇತ್ತೀಚೆಗೆ, ಭಾರತ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದ ಕಂಟೈನರ್‌ನಲ್ಲಿ ಇಬ್ಬರು ಹರಿಯಾಣ ಗುಪ್ತಚರ ಅಧಿಕಾರಿಗಳು ಪತ್ತೆಯಾಗಿದ್ದಾರೆ. ಅವರನ್ನು ಹಿಡಿದಾಗ, ಅವರು ವಾಶ್‌ರೂಮ್‌ಗಳನ್ನು ಬಳಸಲು ಒಳಗೆ ಹೋಗಿದ್ದಾರೆ ಎಂದು ಹೇಳಿದರು.

ನವದೆಹಲಿ: ಮಾಜಿ ಪ‍್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸಮಾಧಿ ಸ್ಥಳಕ್ಕೆ ಸೋಮವಾರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿ ನೀಡಿ, ಗೌರವ ಸಲ್ಲಿಸಿದ್ದಾರೆ.

ಮೋದಿಗೆ ರಾಜಧರ್ಮದ ಬಗ್ಗೆ ಪಾಠ: ಪ್ರಧಾನಿ ನರೇಂದ್ರ ಮೋದಿ ಅವರು ಅಟಲ್‌ಜಿ ಅವರ ರಾಜಧರ್ಮವನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳಬೇಕು ಎಂದು ಕಾಂಗ್ರೆಸ್​ ಹೇಳಿದೆ. 2002 ರಲ್ಲಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಟಲ್​ಜಿ ಇಂದಿನ ಪ್ರಧಾನಿಗೆ ರಾಜಧರ್ಮದ ಪಾಠವನ್ನು ಹೇಳಿಕೊಟ್ಟಿದ್ದರು. ರಾಜಕೀಯವನ್ನು ತುಂಬು ಹೃದಯದಿಂದ ಮಾಡಬೇಕು. ಇಂದು ಆ ರೀತಿಯ ರಾಜಕೀಯವನ್ನು ರಾಹುಲ್​ ಗಾಂಧಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಸುಪ್ರಿಯಾ ಶ್ರೀನಾಟೆ ಹೇಳಿದ್ದಾರೆ.

ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ಚರಣ್ ಸಿಂಗ್, ರಾಜೀವ್ ಗಾಂಧಿ ಅವರ ಸ್ಮಾರಕ ಮತ್ತು ಮಹಾತ್ಮ ಗಾಂಧಿಯವರ ಸ್ಮಾರಕಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ ಕೆಲವೇ ಗಂಟೆಗಳ ನಂತರ, ಕಾಂಗ್ರೆಸ್​ನಿಂದ ಈ ರೀತಿಯ ಪ್ರತಿಕ್ರಿಯೆ ಬಂದಿದೆ.

ಅಟಲ್‌ಜಿ ಅವರ ಪ್ರಕಾರ, ರಾಷ್ಟ್ರ ನಿರ್ಮಾಣದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಕೊಡುಗೆ ಇದೆ. ನೀವು ತಪಸ್ಸು ಮಾಡಿದಾಗ, ಎಲ್ಲರನ್ನು ಒಂದುಗೂಡಿಸಲು ಪ್ರಯತ್ನಿಸುತ್ತೀರಿ. ಬಿಜೆಪಿ ನಾಯಕರು ಯಾತ್ರೆಯಲ್ಲಿ ಪಾಲ್ಗೊಳ್ಳಲು ಬಯಸಿದರೆ, ಅವರಿಗೆ ಸ್ವಾಗತವಿದೆ ಎಂದು ಅವರು ಹೇಳಿದರು.

ವಾಜಪೇಯಿ ಅವರ ಸ್ಮಾರಕಕ್ಕೆ ರಾಹುಲ್ ಗಾಂಧಿ ಭೇಟಿ
ವಾಜಪೇಯಿ ಅವರ ಸ್ಮಾರಕಕ್ಕೆ ರಾಹುಲ್ ಗಾಂಧಿ ಭೇಟಿ

ಮೋದಿ ಗುರಿಯಾಗಿಸಿ ಹೇಳಿಕೆ: ಕಾಂಗ್ರೆಸ್ ವಕ್ತಾರರು ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ಈ ರೀತಿ ಹೇಳಿಕೆ ನೀಡಿದ್ದಾರೆ. ಆದರೆ ಅವರು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಗೆ ಲಗತ್ತಿಸಲಾದ ಮತ್ತು ಗೌರವ್ ಪಾಂಡಿ ಅವರು ಇಂದು ಬೆಳಗ್ಗೆ ಮಾಡಿದ ವಿವಾದಾತ್ಮಕ ಟ್ವೀಟ್‌ ಬಗ್ಗೆ ಪ್ರತಿಕ್ರಿಯಿಸಿಲ್ಲ. ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ಟೀಕಿಸಿ ಟ್ವೀಟ್ ಮಾಡಲಾಗಿದ್ದು, ನಂತರ ಅದನ್ನು ತೆಗೆಯಲಾಗಿದೆ.

ಮೋದಿ ರಾಜಧರ್ಮ ಪಾಲಿಸಿಲ್ಲ: 2002ರಲ್ಲಿ ಈಗಿನ ಪ್ರಧಾನಿಗೆ ಅಟಲ್​ಜಿ ರಾಜಧರ್ಮದ ಬಗ್ಗೆ ಹೇಳುವಾಗ ಅವರು, ಸಂವಿಧಾನದ ಪರವಾಗಿ ಇದ್ದರು. ಆದರೆ, ಪ್ರಧಾನಿ ಮೋದಿ ಆ ಪಾಠ ಕಲಿಯಲಿಲ್ಲ ಮತ್ತು ಸಂವಿಧಾನವನ್ನು ದೂರ ಇಟ್ಟಿದ್ದಾರೆ. ಅವರು ಸಂವಿಧಾನವನ್ನು ಅನುಸರಿಸುತ್ತಾರೆ ಮತ್ತು ಸಮಾಜದ ಕೆಲವು ವರ್ಗಗಳ ಗುರಿಯನ್ನು ಈಡೇರುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಶ್ರಿನಾಟೆ ಹೇಳಿದರು.

ಸಂವಿಧಾನ ರಕ್ಷಿಸುವ ಪ್ರಯತ್ನಕ್ಕೆ ಗೌರವ: ವಾಜಪೇಯಿ ಸ್ಮಾರಕದಲ್ಲಿ ರಾಹುಲ್​ ಗಾಂಧಿ ಭೇಟಿ ನೀಡಿರುವುದು, ಅಟಲ್​ಜಿ ಅವರು ಸಂವಿಧಾನ ರಕ್ಷಿಸುವ ಪ್ರಯತ್ನಕ್ಕೆ ಗೌರವದ ಸಂಕೇತವಾಗಿದೆ. ಡಿಸೆಂಬರ್ 25 ರಿಂದ ಜನವರಿ 2 ರವರೆಗೆ ಭಾರತ್ ಜೋಡೋ ಯಾತ್ರೆಯಿಂದ ರಾಹುಲ್​ ಗಾಂಧಿ ವಿರಾಮವನ್ನು ಪಡೆದಿದ್ದಾರೆ. ಬಿಜೆಪಿ ನಿರಂತರವಾಗಿ ಯಾತ್ರೆಯನ್ನು ಅಪಹಾಸ್ಯ ಮಾಡಲು ಮತ್ತು ಹಳಿತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಆಡಳಿತ ಪಕ್ಷ ಇದರಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಕಾಂಗ್ರೆಸ್​ ಹೇಳಿದೆ.

ರಾಹುಲ್ ಗಾಂಧಿ ಅವರು ಸೆಪ್ಟೆಂಬರ್ 7 ರಂದು ಭಾರತ್​ ಜೋಡೋ ಯಾತ್ರೆಯನ್ನು ಆರಂಭಿಸಿದಾಗಿನಿಂದ ಬಿಜೆಪಿ ಟೀಕೆಯನ್ನು ಮಾಡುತ್ತಿದೆ. ಪಿಎಂ ಮೋದಿ ಮತ್ತು ಪಕ್ಷದ ಮುಖ್ಯಸ್ಥರು ಸೇರಿದಂತೆ ಅವರ ಉನ್ನತ ನಾಯಕರ ಆಜ್ಞೆಯ ಮೇರೆಗೆ ಬಿಜೆಪಿ ಟ್ರೋಲ್‌ಗಳನ್ನು ಮಾಡುತ್ತಿದೆ ಎಂದು ಶ್ರೀನಾಟೆ ಹೇಳಿದರು.

ಇದನ್ನೂ ಓದಿ: ಮೇ ಅಟಲ್ ಹೂನ್: ವಾಜಪೇಯಿ ಬಯೋಪಿಕ್ ಫಸ್ಟ್ ಲುಕ್ ರಿಲೀಸ್

ಕಾಂಗ್ರೆಸ್ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಪ್ರಕಾರ, ಇಂಟಲಿಜೆನ್ಸ್ ಬ್ಯೂರೋ ಇತ್ತೀಚೆಗೆ ಹರಿಯಾಣದಲ್ಲಿ ಯಾತ್ರೆಯಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ಏನು ನಡೆಯುತ್ತಿದೆ ಎಂದು ತನಿಖೆ ನಡೆಸುತ್ತಿದೆ. ಯಾತ್ರೆ ಪಾರದರ್ಶಕವಾಗಿದೆ. ಇತ್ತೀಚೆಗೆ, ಭಾರತ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದ ಕಂಟೈನರ್‌ನಲ್ಲಿ ಇಬ್ಬರು ಹರಿಯಾಣ ಗುಪ್ತಚರ ಅಧಿಕಾರಿಗಳು ಪತ್ತೆಯಾಗಿದ್ದಾರೆ. ಅವರನ್ನು ಹಿಡಿದಾಗ, ಅವರು ವಾಶ್‌ರೂಮ್‌ಗಳನ್ನು ಬಳಸಲು ಒಳಗೆ ಹೋಗಿದ್ದಾರೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.