ಜೈಪುರ: ಅಲ್ವಾರ್ ಕಿವುಡ ಮತ್ತು ಮೂಕ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ರಾಜಸ್ಥಾನದ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ. ಈ ವಿಷಯದಲ್ಲಿ ಗೆಹ್ಲೋಟ್ ಸರ್ಕಾರದ ವಿರುದ್ಧ ಬಿಜೆಪಿ ನಿರಂತರವಾಗಿ ಆಕ್ರಮಣಕಾರಿ ದಾಳಿ ಮಾಡುತ್ತಿದೆ.
ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಅಲ್ವಾರ್ನಲ್ಲಿ ಸಂತ್ರಸ್ತ ಬಾಲಕಿಯ ತಂದೆಯೊಂದಿಗೆ ಮಾತನಾಡಿದ್ದಾರೆ. ಈ ಮಾಹಿತಿಯನ್ನು ಉತ್ತರ ಪ್ರದೇಶದ ಸಹ ಉಸ್ತುವಾರಿ ಕಾಂಗ್ರೆಸ್ ಕಾರ್ಯದರ್ಶಿ ಧೀರಜ್ ಗುರ್ಜರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
![Priyanka Gandhi Talks to The Father Of Alwar Case Victim jaipur latest hindi news rajasthan news update Priyanka Seek Infornmation On Alwar Case From CM Gehlot Rajasthan Political News Twist In Alwar Rape Case ಅಲ್ವಾರ ಸಂತ್ರಸ್ತೆ ಕುಟುಂಬದ ಜೊತೆ ಮಾತನಾಡಿದ ಪ್ರಿಯಾಂಕಾ ಗಾಂಧಿ ಅತ್ಯಾಚಾರದ ಬಗ್ಗೆ ಸಿಎಂರಿಂದ ವರದಿ ಪಡೆದ ಪ್ರಿಯಾಂಕಾ ಗಾಂಧಿ ಜೈಪುರ ಅತ್ಯಾಚಾರ ಸುದ್ದಿ ಉತ್ತರ ಪ್ರದೇಶದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ](https://etvbharatimages.akamaized.net/etvbharat/prod-images/rj-jpr-01-dheerajgurjar-av-9024297_15012022073932_1501f_1642212572_878.jpg)
![Priyanka Gandhi Talks to The Father Of Alwar Case Victim jaipur latest hindi news rajasthan news update Priyanka Seek Infornmation On Alwar Case From CM Gehlot Rajasthan Political News Twist In Alwar Rape Case ಅಲ್ವಾರ ಸಂತ್ರಸ್ತೆ ಕುಟುಂಬದ ಜೊತೆ ಮಾತನಾಡಿದ ಪ್ರಿಯಾಂಕಾ ಗಾಂಧಿ ಅತ್ಯಾಚಾರದ ಬಗ್ಗೆ ಸಿಎಂರಿಂದ ವರದಿ ಪಡೆದ ಪ್ರಿಯಾಂಕಾ ಗಾಂಧಿ ಜೈಪುರ ಅತ್ಯಾಚಾರ ಸುದ್ದಿ ಉತ್ತರ ಪ್ರದೇಶದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ](https://etvbharatimages.akamaized.net/etvbharat/prod-images/rj-jpr-01-dheerajgurjar-av-9024297_15012022073932_1501f_1642212572_942.jpg)
ಅಲ್ವಾರ್ನಲ್ಲಿ ನಡೆದಿರುವ ಘಟನೆ ಅಸಹನೀಯವಾಗಿದೆ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ. ಪ್ರಿಯಾಂಕಾ ಗಾಂಧಿ ಸಂತ್ರಸ್ತೆಯ ತಂದೆಯೊಂದಿಗೆ ಫೋನ್ ಮೂಲಕ ಮಾತನಾಡಿದ್ದಾರೆ ಮತ್ತು ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನೀಡಿದ್ದಾರೆ. ಅಲ್ಲದೇ, ಯಾವುದೇ ರೀತಿಯ ಸಹಾಯಕ್ಕಾಗಿ ನೇರವಾಗಿ ಸಂಪರ್ಕಿಸಲು ಸಂತ್ರಸ್ತೆ ಕುಟುಂಬಕ್ಕೆ ತಿಳಿಸಿದ್ದಾರೆ.
ಸಂತ್ರಸ್ತೆಯ ತಂದೆಯೊಂದಿಗೆ ಮಾತನಾಡುವುದರೊಂದಿಗೆ ಪ್ರಿಯಾಂಕಾ ಗಾಂಧಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಂದ ಈ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಧೀರಜ್ ಗುರ್ಜರ್ ಟ್ವೀಟ್ನಲ್ಲಿ ತಿಳಿಸಿದ್ದಾರೆ. ಸಂತ್ರಸ್ತೆಗೆ ಚಿಕಿತ್ಸೆ ನೀಡಬೇಕು, ಸಂತ್ರಸ್ತೆಯ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಮತ್ತು ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಇದೇ ವೇಳೆ, ಒತ್ತಾಯಿಸಿದ್ದಾರೆ.
ಅತ್ಯಾಚಾರವೇ ನಡೆದಿಲ್ಲ...!
ಅಲ್ವಾರ್ನಲ್ಲಿ ಕಿವುಡ ಮತ್ತು ಮೂಕ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಶುಕ್ರವಾರ ಹೊಸ ಟ್ವಿಸ್ಟ್ ಸಿಕ್ಕಿದೆ. ಜೈಪುರದ ಜೆಕೆ ಲೋನ್ ಆಸ್ಪತ್ರೆಯಲ್ಲಿ 5 ವೈದ್ಯರ ತಂಡ ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಿದೆ ಎಂದು ಅಲ್ವಾರ್ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಅವರ ವರದಿಯನ್ನು ಅಲ್ವಾರ್ ಪೊಲೀಸರು ಸ್ವೀಕರಿಸಿದ ವರದಿ ಪ್ರಕಾರ ಬಾಲಕಿಯ ಮೇಲೆ ಅತ್ಯಾಚಾರ ನಡೆದಿಲ್ಲ. ಹುಡುಗಿಯ ಗುಪ್ತ ಅಂಗಾಂಗಗಳು ಸಂಪೂರ್ಣವಾಗಿ ಚೆನ್ನಾಗಿವೆ ಎಂದು ವೈದ್ಯರ ತಂಡ ಹೇಳಿದೆ.