ETV Bharat / bharat

ಅರ್ಚಕರ ಕ್ರಿಕೆಟ್; ಪಂಚೆ ಕಟ್ಟಿ ಬ್ಯಾಟ್​ ಹಿಡಿದ ಪೂಜಾರಿಗಳು! ವಿಡಿಯೋ...

ವಿನೂತನ ಕ್ರಿಕೆಟ್​ ಪಂದ್ಯಾವಳಿಯೊಂದನ್ನು ಆಯೋಜನೆ ಮಾಡಲಾಗಿದೆ. ಈ ಪಂದ್ಯಾವಳಿಯಲ್ಲಿ ಕೇವಲ ಅರ್ಚಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

author img

By

Published : Mar 26, 2021, 12:45 PM IST

Priests cricket tournament, Priests cricket tournament organized, Priests cricket tournament organized in Bhimavaram, Bhimavaram news, Priests cricket tournament news, ಅರ್ಚಕರು ಕ್ರಿಕೆಟ್​ ಪಂದ್ಯಾವಳಿ, ಭೀಮಾವರಂನಲ್ಲಿ ಅರ್ಚಕರು ಕ್ರಿಕೆಟ್​ ಪಂದ್ಯಾವಳಿ, ಭೀಮಾವರಂನಲ್ಲಿ ಅರ್ಚಕರು ಕ್ರಿಕೆಟ್​ ಪಂದ್ಯಾವಳಿ ಆಯೋಜನೆ, ಅರ್ಚಕರು ಕ್ರಿಕೆಟ್​ ಪಂದ್ಯಾವಳಿ ಸುದ್ದಿ,
ಅರ್ಚಕರು ಕ್ರಿಕೆಟ್​ ಪಂದ್ಯಾವಳಿ ಆಯೋಜನೆ

ಪಶ್ಚಿಮ ಗೋದಾವರಿ: ಆಲಯದಲ್ಲಿ ಪೂಜೆ ಮಾಡಿಕೊಂಡು, ಯಾವಾಗಲೂ ಆಧ್ಯಾತ್ಮಿಕ ಚಿಂತನೆಯಲ್ಲಿ ಇರುವ ಪುರೋಹಿತರು ಮೈದಾನದಲ್ಲಿ ಸಿಕ್ಸ್​ ಮತ್ತು ಬೌಂಡರಿಗಳ ಸುರಿಮಳೆಗೈಯುತ್ತಿದ್ದಾರೆ.

ಹೌದು, ಭೀಮಾವರಂನಲ್ಲಿ ಅರ್ಚಕರಿಗಾಗಿಯೇ ಕ್ರಿಕೆಟ್​ ಪಂದ್ಯಾವಳಿ ಆಯೋಜಿಸಲಾಗಿದೆ. ಇಲ್ಲಿನ ಎಸ್​ಆರ್​ಕೆಆರ್​ ಎಂಜಿನಿಯರಿಂಗ್​ ಕಾಲೇಜು​ ಮೈದಾನದಲ್ಲಿ ಕ್ರಿಕೆಟ್​ ಪಂದ್ಯಾವಳಿ ನಡೆಯುತ್ತಿದ್ದು, ತೆಲಂಗಾಣದಿಂದ ಒಟ್ಟು 19 ತಂಡಗಳು ಭಾಗಿಯಾಗಿವೆ.

ಅರ್ಚಕರ ಕ್ರಿಕೆಟ್​ ಪಂದ್ಯಾವಳಿ ಆಯೋಜನೆ

ಈ ಪಂದ್ಯಾವಳಿ ನಾಳೆ ಮುಕ್ತಾಯವಾಗಲಿದ್ದು, ಪ್ರಥಮ ಬಹುಮಾನ 60 ಸಾವಿರ ನಗದು ಮತ್ತು ಟ್ರೋಫಿ, ಎರಡನೇ ಬಹುಮಾನ 30 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವುದೆಂದು ಆಯೋಜಕರು ತಿಳಿಸಿದ್ದಾರೆ.

ಒಟ್ನಲ್ಲಿ ಬರೀ ಪೂಜೆ, ಪುನಸ್ಕಾರ ಎಂದು ದೇವಾಲಯದಲ್ಲೇ ಕಾಲ ಕಳೆಯುವ ಪುರೋಹಿತರಿಗೆ ಈ ಕ್ರಿಕೆಟ್​ ಪಂದ್ಯಾವಳಿ ಉತ್ಸಾಹ ತಂದಿದೆ.

ಪಶ್ಚಿಮ ಗೋದಾವರಿ: ಆಲಯದಲ್ಲಿ ಪೂಜೆ ಮಾಡಿಕೊಂಡು, ಯಾವಾಗಲೂ ಆಧ್ಯಾತ್ಮಿಕ ಚಿಂತನೆಯಲ್ಲಿ ಇರುವ ಪುರೋಹಿತರು ಮೈದಾನದಲ್ಲಿ ಸಿಕ್ಸ್​ ಮತ್ತು ಬೌಂಡರಿಗಳ ಸುರಿಮಳೆಗೈಯುತ್ತಿದ್ದಾರೆ.

ಹೌದು, ಭೀಮಾವರಂನಲ್ಲಿ ಅರ್ಚಕರಿಗಾಗಿಯೇ ಕ್ರಿಕೆಟ್​ ಪಂದ್ಯಾವಳಿ ಆಯೋಜಿಸಲಾಗಿದೆ. ಇಲ್ಲಿನ ಎಸ್​ಆರ್​ಕೆಆರ್​ ಎಂಜಿನಿಯರಿಂಗ್​ ಕಾಲೇಜು​ ಮೈದಾನದಲ್ಲಿ ಕ್ರಿಕೆಟ್​ ಪಂದ್ಯಾವಳಿ ನಡೆಯುತ್ತಿದ್ದು, ತೆಲಂಗಾಣದಿಂದ ಒಟ್ಟು 19 ತಂಡಗಳು ಭಾಗಿಯಾಗಿವೆ.

ಅರ್ಚಕರ ಕ್ರಿಕೆಟ್​ ಪಂದ್ಯಾವಳಿ ಆಯೋಜನೆ

ಈ ಪಂದ್ಯಾವಳಿ ನಾಳೆ ಮುಕ್ತಾಯವಾಗಲಿದ್ದು, ಪ್ರಥಮ ಬಹುಮಾನ 60 ಸಾವಿರ ನಗದು ಮತ್ತು ಟ್ರೋಫಿ, ಎರಡನೇ ಬಹುಮಾನ 30 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವುದೆಂದು ಆಯೋಜಕರು ತಿಳಿಸಿದ್ದಾರೆ.

ಒಟ್ನಲ್ಲಿ ಬರೀ ಪೂಜೆ, ಪುನಸ್ಕಾರ ಎಂದು ದೇವಾಲಯದಲ್ಲೇ ಕಾಲ ಕಳೆಯುವ ಪುರೋಹಿತರಿಗೆ ಈ ಕ್ರಿಕೆಟ್​ ಪಂದ್ಯಾವಳಿ ಉತ್ಸಾಹ ತಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.