ETV Bharat / bharat

ಚಿಕ್ಕಪ್ಪ -ಮಗನ ನಡುವೆ ಮತ್ತೆ ಕಂದಕ.. ಬಿಜೆಪಿ ನಾಯಕರ ಟ್ವಿಟರ್​ ಫಾಲೋ ಮಾಡಿದ ಶಿವಪಾಲ್​ ಯಾದವ್​!

author img

By

Published : Apr 2, 2022, 6:55 PM IST

ಕಳೆದ ಮಾರ್ಚ್​ 26 ರಂದು ನಡೆದ ಎಸ್​​​ಪಿ ಶಾಸಕಾಂಗ ಪಕ್ಷದ ಸಭೆಗೆ ಶಿವಪಾಲ್​ ಯಾದವ್​ ಅವರನ್ನು ಆಹ್ವಾನಿಸಿರಲಿಲ್ಲ. ಇದು ಯಾದವ್​ ಅವರಲ್ಲಿ ಬೇಸರ ತರಿಸಿತ್ತು. ಇದೇ ಕಾರಣಕ್ಕೆ ಅವರು ಲಖನೌದಿಂದ ಇಟಾವಾಗೆ ತೆರಳಿದ್ದರು. ಅಲ್ಲಿಂದ ದೆಹಲಿಗೆ ತೆರಳಿ ಬಿಜೆಪಿ ಹಿರಿಯ ನಾಯಕರ ಜತೆ ಸಭೆ ನಡೆಸಿದ್ದರು.

pragatisheel-samajwadi-party-president-shivpal-yadav-follows-top-bjp-leaders
ಚಿಕ್ಕಪ್ಪ -ಮಗನ ನಡುವೆ ಮತ್ತೆ ಕಂದಕ.. ಬಿಜೆಪಿ ನಾಯಕರ ಟ್ವಿಟರ್​ ಫಾಲೋ ಮಾಡಿದ ಶಿವಪಾಲ್​ ಯಾದವ್​!

ಲಖನೌ: ಪ್ರಗತಿಶೀಲ ಸಮಾಜವಾದಿ ಪಕ್ಷದ ಅಧ್ಯಕ್ಷ ಶಿವಪಾಲ್ ಯಾದವ್ ಅವರ ನಡೆ ಸಮಾಜವಾದಿ ಪಕ್ಷದಲ್ಲಿ ಸಂಚಲನ ಸೃಷ್ಟಿಸಿದೆ. ಶಿವಪಾಲ್ ಯಾದವ್, ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಅವರನ್ನು ಟ್ವಿಟರ್​ನಲ್ಲಿ ಫಾಲೋ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಶಿವಪಾಲ್ ಯಾದವ್ ಬಿಜೆಪಿಯ ದೊಡ್ಡ ದೊಡ್ಡ ನಾಯಕರನ್ನು ಫಾಲೋ ಮಾಡುತ್ತಿರುವುದು ಇದೇ ಮೊದಲು.

ಈ ಹಿನ್ನೆಲೆಯಲ್ಲಿ ಶಿವಪಾಲ್​ ಯಾದವ್​ ಅವರ ಈ ನಡೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಮಾರ್ಚ್​ 26 ರಂದು ನಡೆದ ಎಸ್​​​ಪಿ ಶಾಸಕಾಂಗ ಪಕ್ಷದ ಸಭೆಗೆ ಶಿವಪಾಲ್​ ಯಾದವ್​ ಅವರನ್ನು ಆಹ್ವಾನಿಸಿರಲಿಲ್ಲ. ಇದು ಯಾದವ್​ ಅವರಲ್ಲಿ ಬೇಸರ ತರಿಸಿತ್ತು. ಇದೇ ಕಾರಣಕ್ಕೆ ಅವರು ಲಖನೌದಿಂದ ಇಟಾವಾಗೆ ತೆರಳಿದ್ದರು. ಅಲ್ಲಿಂದ ದೆಹಲಿಗೆ ತೆರಳಿ ಬಿಜೆಪಿಯ ಹಿರಿಯ ನಾಯಕರ ಜತೆ ಸಭೆ ನಡೆಸಿದ್ದರು.

ಸಿಎಂ ಯೋಗಿ ಆದಿತ್ಯನಾಥ ಭೇಟಿ ಮಾಡಿದ್ದ ಶಿವಪಾಲ್​: ದೆಹಲಿಯಿಂದ ಲಖನೌಗೆ ಮರಳಿದ ನಂತರ ಅವರು ಸಿಎಂ ಯೋಗಿ ಆದಿತ್ಯನಾಥ್ ಮತ್ತು ಜಲಶಕ್ತಿ ಸಚಿವ ಸ್ವತಂತ್ರ ದೇವ್ ಸಿಂಗ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ಶಿವಪಾಲ್ ಯಾದವ್ ಬಿಜೆಪಿ ಸೇರಬಹುದು ಎಂಬ ಊಹಾಪೋಹಗಳು ಹಬ್ಬಿದ್ದವು.

ಎಸ್​​ಪಿಯಿಂದ ದೂರವಾಗಿದ್ದ ಶಿವಪಾಲ್​ ಯಾದವ್​ 2022ರ ಯುಪಿ ವಿಧಾನಸಭೆ ಚುನಾವಣೆಗೂ ಮುನ್ನ ಅಖಿಲೇಶ್‌ ಯಾದವ್‌ ಜತೆ ಸೇರಿಕೊಂಡಿದ್ದರು. ಆ ಬಳಿಕ ಶಿವಪಾಲ್​ ಯಾದವ್​ ಅವರೊಂದಿಗಿನ ಮನಸ್ಥಾಪ ಕಡಿಮೆ ಆಗಿತ್ತು. ಆದರೀಗ ಮತ್ತೆ ಇಬ್ಬರ ನಡುವೆ ಬಿರುಕು ಕಾಣಿಸಿಕೊಂಡಿದೆ. ಶಿವಪಾಲ್ ಯಾದವ್ ಅವರ ಆಪ್ತರಿಗೆ ಟಿಕೆಟ್ ಸಿಗದಿರುವುದು ಹಾಗೂ ತಮ್ಮ ಬಗ್ಗೆ ಅಖಿಲೇಶ್​ ನಿರ್ಲಕ್ಷ್ಯ ಧೋರಣೆ ತೆಳೆದಿದ್ದಾರೆ ಎಂಬ ಕಾರಣಕ್ಕೆ ಶಿವಪಾಲ್​ ಯಾದವ್​ ಕೋಪಗೊಂಡಿದ್ದಾರೆ.

ಅಷ್ಟೇ ಅಲ್ಲ ಶಾಸಕಾಂಗ ಪಕ್ಷದ ಸಭೆಗೆ ಕರೆಯದ ಹಿನ್ನೆಲೆ ಅಸಮಾಧಾನಗೊಂಡು, ಮುಲಾಯಂ ಸಿಂಗ್ ಯಾದವ್ ಅವರನ್ನು ಭೇಟಿ ಮಾಡಿ ವಿಷಯ ಗಮನಕ್ಕೆ ತಂದಿದ್ದಾರೆ. ಆ ಬಳಿಕ ಅವರು ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದು, ಆ ಬಳಿಕ ಟ್ವಿಟರ್​ನಲ್ಲಿ ಬಿಜೆಪಿ ನಾಯಕರನ್ನು ಫಾಲೋ ಮಾಡುತ್ತಿರುವುದು ಸಂಚಲನಕ್ಕೆ ಕಾರಣವಾಗಿದೆ.

ಇದನ್ನು ಓದಿ:ಹರ್ಷ ಕೊಲೆ ಪ್ರಕರಣ : ಎನ್ಐಎ ತಂಡ ಶಿವಮೊಗ್ಗಕ್ಕೆ ಭೇಟಿ, ತನಿಖೆ ಚುರುಕು

ಲಖನೌ: ಪ್ರಗತಿಶೀಲ ಸಮಾಜವಾದಿ ಪಕ್ಷದ ಅಧ್ಯಕ್ಷ ಶಿವಪಾಲ್ ಯಾದವ್ ಅವರ ನಡೆ ಸಮಾಜವಾದಿ ಪಕ್ಷದಲ್ಲಿ ಸಂಚಲನ ಸೃಷ್ಟಿಸಿದೆ. ಶಿವಪಾಲ್ ಯಾದವ್, ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಅವರನ್ನು ಟ್ವಿಟರ್​ನಲ್ಲಿ ಫಾಲೋ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಶಿವಪಾಲ್ ಯಾದವ್ ಬಿಜೆಪಿಯ ದೊಡ್ಡ ದೊಡ್ಡ ನಾಯಕರನ್ನು ಫಾಲೋ ಮಾಡುತ್ತಿರುವುದು ಇದೇ ಮೊದಲು.

ಈ ಹಿನ್ನೆಲೆಯಲ್ಲಿ ಶಿವಪಾಲ್​ ಯಾದವ್​ ಅವರ ಈ ನಡೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಮಾರ್ಚ್​ 26 ರಂದು ನಡೆದ ಎಸ್​​​ಪಿ ಶಾಸಕಾಂಗ ಪಕ್ಷದ ಸಭೆಗೆ ಶಿವಪಾಲ್​ ಯಾದವ್​ ಅವರನ್ನು ಆಹ್ವಾನಿಸಿರಲಿಲ್ಲ. ಇದು ಯಾದವ್​ ಅವರಲ್ಲಿ ಬೇಸರ ತರಿಸಿತ್ತು. ಇದೇ ಕಾರಣಕ್ಕೆ ಅವರು ಲಖನೌದಿಂದ ಇಟಾವಾಗೆ ತೆರಳಿದ್ದರು. ಅಲ್ಲಿಂದ ದೆಹಲಿಗೆ ತೆರಳಿ ಬಿಜೆಪಿಯ ಹಿರಿಯ ನಾಯಕರ ಜತೆ ಸಭೆ ನಡೆಸಿದ್ದರು.

ಸಿಎಂ ಯೋಗಿ ಆದಿತ್ಯನಾಥ ಭೇಟಿ ಮಾಡಿದ್ದ ಶಿವಪಾಲ್​: ದೆಹಲಿಯಿಂದ ಲಖನೌಗೆ ಮರಳಿದ ನಂತರ ಅವರು ಸಿಎಂ ಯೋಗಿ ಆದಿತ್ಯನಾಥ್ ಮತ್ತು ಜಲಶಕ್ತಿ ಸಚಿವ ಸ್ವತಂತ್ರ ದೇವ್ ಸಿಂಗ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ಶಿವಪಾಲ್ ಯಾದವ್ ಬಿಜೆಪಿ ಸೇರಬಹುದು ಎಂಬ ಊಹಾಪೋಹಗಳು ಹಬ್ಬಿದ್ದವು.

ಎಸ್​​ಪಿಯಿಂದ ದೂರವಾಗಿದ್ದ ಶಿವಪಾಲ್​ ಯಾದವ್​ 2022ರ ಯುಪಿ ವಿಧಾನಸಭೆ ಚುನಾವಣೆಗೂ ಮುನ್ನ ಅಖಿಲೇಶ್‌ ಯಾದವ್‌ ಜತೆ ಸೇರಿಕೊಂಡಿದ್ದರು. ಆ ಬಳಿಕ ಶಿವಪಾಲ್​ ಯಾದವ್​ ಅವರೊಂದಿಗಿನ ಮನಸ್ಥಾಪ ಕಡಿಮೆ ಆಗಿತ್ತು. ಆದರೀಗ ಮತ್ತೆ ಇಬ್ಬರ ನಡುವೆ ಬಿರುಕು ಕಾಣಿಸಿಕೊಂಡಿದೆ. ಶಿವಪಾಲ್ ಯಾದವ್ ಅವರ ಆಪ್ತರಿಗೆ ಟಿಕೆಟ್ ಸಿಗದಿರುವುದು ಹಾಗೂ ತಮ್ಮ ಬಗ್ಗೆ ಅಖಿಲೇಶ್​ ನಿರ್ಲಕ್ಷ್ಯ ಧೋರಣೆ ತೆಳೆದಿದ್ದಾರೆ ಎಂಬ ಕಾರಣಕ್ಕೆ ಶಿವಪಾಲ್​ ಯಾದವ್​ ಕೋಪಗೊಂಡಿದ್ದಾರೆ.

ಅಷ್ಟೇ ಅಲ್ಲ ಶಾಸಕಾಂಗ ಪಕ್ಷದ ಸಭೆಗೆ ಕರೆಯದ ಹಿನ್ನೆಲೆ ಅಸಮಾಧಾನಗೊಂಡು, ಮುಲಾಯಂ ಸಿಂಗ್ ಯಾದವ್ ಅವರನ್ನು ಭೇಟಿ ಮಾಡಿ ವಿಷಯ ಗಮನಕ್ಕೆ ತಂದಿದ್ದಾರೆ. ಆ ಬಳಿಕ ಅವರು ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದು, ಆ ಬಳಿಕ ಟ್ವಿಟರ್​ನಲ್ಲಿ ಬಿಜೆಪಿ ನಾಯಕರನ್ನು ಫಾಲೋ ಮಾಡುತ್ತಿರುವುದು ಸಂಚಲನಕ್ಕೆ ಕಾರಣವಾಗಿದೆ.

ಇದನ್ನು ಓದಿ:ಹರ್ಷ ಕೊಲೆ ಪ್ರಕರಣ : ಎನ್ಐಎ ತಂಡ ಶಿವಮೊಗ್ಗಕ್ಕೆ ಭೇಟಿ, ತನಿಖೆ ಚುರುಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.