ETV Bharat / bharat

ದೇಶದಲ್ಲಿ ಕಾಂಗ್ರೆಸ್​ ಲೂಟಿ ಮುಂದೆ 'ಮನಿ ಹೀಸ್ಟ್​' ಕಾಲ್ಪನಿಕ ಕಥೆ ಯಾರಿಗೆ ಬೇಕು: ಮೋದಿ ಟಾಂಗ್​

author img

By ETV Bharat Karnataka Team

Published : Dec 12, 2023, 6:53 PM IST

PM Modi dig at Congress: ಕಾಂಗ್ರೆಸ್​ ಸಂಸದ ಧೀರಜ್​ ಸಾಹು ಅವರಿಗೆ ಸಂಬಂಧಿಸಿದ ಒಡಿಶಾ ಮೂಲದ ಬೌಧ್​ ಡಿಸ್ಟಿಲರಿ​ ಪ್ರೈವೇಟ್​ ಲಿಮಿಟೆಡ್​ ಕಚೇರಿಗಳ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, 350 ಕೋಟಿಗೂ ಹೆಚ್ಚು ನಗರು ಹಾಗೂ ಸುಮಾರು 3 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು.

Prime Minister Narendra Modi
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಕಾಂಗ್ರೆಸ್​ ಸಂಸದ ಧೀರಜ್​ ಸಾಹು ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಿದ್ದ ತೆರಿಗೆ ಇಲಾಖೆ ಅಧಿಕಾರಿಗಳು 350 ಕೋಟಿಗೂ ಹೆಚ್ಚು ನಗದು ಹಾಗೂ ಸುಮಾರು 3 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • देशवासी इन नोटों के ढेर को देखें और फिर इनके नेताओं के ईमानदारी के 'भाषणों' को सुनें... 😂😂😂

    जनता से जो लूटा है, उसकी पाई-पाई लौटानी पड़ेगी, यह मोदी की गारंटी है।

    ❌❌❌💵 💵 💵❌❌❌ pic.twitter.com/O2pEA4QTOj

    — Narendra Modi (@narendramodi) December 8, 2023 " class="align-text-top noRightClick twitterSection" data=" ">

ಎಣಿಕೆಗೆ ಸಿಗದಷ್ಟು ನಗದು ದೊರಕಿರುವ ಈ ಪ್ರಕರಣವನ್ನು ಪ್ರಸಿದ್ಧ ವೆಬ್​ ಸಿರೀಸ್​ 'ಮನಿ ಹೀಸ್ಟ್​' ಗೆ ಹೋಲಿಸಿರುವ ಪ್ರಧಾನಿ ಮೋದಿ, ಎಕ್ಸ್​ನಲ್ಲಿ ಪೋಸ್ಟ್​ನಲ್ಲಿ, "ಕಳೆದ 70 ವರ್ಷಗಳಿಂದ ಭಾರತದಲ್ಲಿ ಕಾಂಗ್ರೆಸ್​ ದರೋಡೆ ಮಾಡುತ್ತಿರುವಾಗ, ಯಾರಿಗೆ ಬೇಕು ಈ 'ಮನಿ ಹೀಸ್ಟ್'​ ಕಾಲ್ಪನಿಕ ಕಥೆ" ಎಂದು ಟಾಂಗ್​ ಕೊಟ್ಟಿದ್ದಾರೆ. ಪೋಸ್ಟ್​ ಜೊತೆಗೆ ಬಿಜೆಪಿ ತನ್ನ ಖಾತೆಯಲ್ಲಿ 'ಕಾಂಗ್ರೆಸ್​ ಪ್ರೆಸೆಂಟ್ಸ್​ ದಿ ಮನಿ ಹೀಸ್ಟ್​' ಎನ್ನುವ ಕ್ಯಾಪ್ಷನ್​ನೊಂದಿಗೆ ಹಂಚಿಕೊಂಡಿರುವ ವಿಡಿಯೋವನ್ನೂ ಶೇರ್​ ಮಾಡಿಕೊಂಡಿದ್ದಾರೆ.

  • In India, who needs 'Money Heist' fiction, when you have the Congress Party, whose heists are legendary for 70 years and counting! https://t.co/J70MCA5lcG

    — Narendra Modi (@narendramodi) December 12, 2023 " class="align-text-top noRightClick twitterSection" data=" ">

ಸಂಸದ ಧೀರಜ್​ ಸಾಹುಗೆ ಸಂಬಂಧಿಸಿದ ಒಡಿಶಾ ಮೂಲದ ಬೌಧ್​ ಡಿಸ್ಟಿಲರಿ​ ಪ್ರೈವೇಟ್​ ಲಿಮಿಟೆಡ್​ ಕಚೇರಿಗಳ ಮೇಲೆ ಹಾಗೂ ಜಾರ್ಖಂಡ್​ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಇದಕ್ಕೆ ಸಂಬಂಧಿಸಿದ ಸಂಸ್ಥೆಗಳ ಮೇಲೆ ಡಿಸೆಂಬರ್​ 6ರಂದು ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಲೆಕ್ಕಕ್ಕೆ ಸಿಗದಷ್ಟು ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ದಾಳಿಯ ದೃಶ್ಯಗಳು ವೈರಲ್​ ಆದ ಬೆನ್ನಲ್ಲೇ ಬಿಜೆಪಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದೆ.

  • In India, who needs 'Money Heist' fiction, when you have the Congress Party, whose heists are legendary for 70 years and counting! https://t.co/J70MCA5lcG

    — Narendra Modi (@narendramodi) December 12, 2023 " class="align-text-top noRightClick twitterSection" data=" ">

ಪ್ರಧಾನಿ ನರೇಂದ್ರ ಮೋದಿ ಅವರೂ ಎಕ್ಸ್​ ಪೋಸ್ಟ್​ ಮೂಲಕ ವಾಗ್ದಾಳಿ ನಡೆಸಿದ್ದು, "ದೇಶದ ಜನರು ಈ ಕರೆನ್ಸಿ ನೋಟುಗಳ ರಾಶಿಯನ್ನು ನೋಡಬೇಕು. ನಂತರ ತಮ್ಮ ನಾಯಕರ ಪ್ರಾಮಾಣಿಕ ಭಾಷಣಗಳನ್ನು ಕೇಳಬೇಕು. ಸಾರ್ವಜನಿಕರಿಂದ ಲೂಟಿ ಮಾಡಿದ ಪ್ರತಿ ಪೈಸೆಯನ್ನೂ ಹಿಂತಿರುಗಿಸಬೇಕು. ಇದು ಮೋದಿ ಗ್ಯಾರಂಟಿ" ಎಂದು ಹೇಳಿದ್ದಾರೆ.

ಮೋದಿ ಸರ್ಕಾರ ಮಾಡಿದ್ದ ನೋಟು ಅಮಾನ್ಯೀಕರಣದ ಯಶಸ್ಸನ್ನು ಪ್ರಶ್ನಿಸಿ ಕಾಂಗ್ರೆಸ್​ ಸಂಸದ ಧೀರಜ್​ ಸಾಹು ಅವರು ಮಾಡಿದ್ದ ಹಳೆಯ ಟ್ವೀಟ್​ಗಳನ್ನು ಬಿಜೆಪಿ ನಾಯಕರು ಹಂಚಿಕೊಂಡಿದ್ದು, ನೋಟು ನಿಷೇಧದ ನಂತರವೂ ಜನರು ಇನ್ನೂ ಕಪ್ಪು ಹಣವನ್ನು ಹೇಗೆ ಹೊಂದಿದ್ದಾರೆ." ಎಂದು ಪ್ರಶ್ನಿಸಿದ್ದಾರೆ.

  • In India, who needs 'Money Heist' fiction, when you have the Congress Party, whose heists are legendary for 70 years and counting! https://t.co/J70MCA5lcG

    — Narendra Modi (@narendramodi) December 12, 2023 " class="align-text-top noRightClick twitterSection" data=" ">

ದೇಶದಲ್ಲಿ ಇದುವರೆಗೆ ನಡೆದ ಕಾರ್ಯಾಚರಣೆಗಳಲ್ಲಿ, ಒಂದೇ ಬಾರಿಗೆ ಅತಿ ಹೆಚ್ಚು ನಗದು ದೊರೆತಿರುವ ದಾಳಿ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ದಾಳಿ ವೇಳೆ ದೊರೆತ ನಗದನ್ನು 176 ಬ್ಯಾಗ್​ಗಳಲ್ಲಿ ತುಂಬಿ ಎಸ್​ಬಿಐ ಶಾಖೆಗೆ ತಲುಪಿಸಲಾಗಿತ್ತು. ಎಣಿಕೆಗಾಗಿ ಒಟ್ಟು 40 ಯಂತ್ರಗಳನ್ನು ಹಾಗೂ 60 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನಿರಂತರವಾಗಿ 5 ದಿನಗಳಿಗೂ ಹೆಚ್ಚು ಕಾಲ ಎಣಿಕೆ ಕಾರ್ಯ ಕೈಗೊಳ್ಳಲಾಗಿತ್ತು. ಎಣಿಕೆ ವೇಳೆ ಯಂತ್ರಗಳು ಕೆಟ್ಟು ಹೋಗುತ್ತಿದ್ದ ಯಂತ್ರಗಳನ್ನು ತಕ್ಷಣ ರಿಪೇರಿ ಮಾಡಲು ಕೆಲ ಮೆಕ್ಯಾನಿಕ್​ಗಳನ್ನೂ ಶಾಖೆಯಲ್ಲಿ ಇರಿಸಲಾಗಿತ್ತು.

ಇದನ್ನೂ ಓದಿ: ಕಾಂಗ್ರೆಸ್ ಸಂಸದ ಸಾಹು ಮೇಲಿನ ಐಟಿ ದಾಳಿ; ಐದನೇ ದಿನವೂ ಮುಂದುವರಿದ ಹಣ ಎಣಿಕೆ

ನವದೆಹಲಿ: ಕಾಂಗ್ರೆಸ್​ ಸಂಸದ ಧೀರಜ್​ ಸಾಹು ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಿದ್ದ ತೆರಿಗೆ ಇಲಾಖೆ ಅಧಿಕಾರಿಗಳು 350 ಕೋಟಿಗೂ ಹೆಚ್ಚು ನಗದು ಹಾಗೂ ಸುಮಾರು 3 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • देशवासी इन नोटों के ढेर को देखें और फिर इनके नेताओं के ईमानदारी के 'भाषणों' को सुनें... 😂😂😂

    जनता से जो लूटा है, उसकी पाई-पाई लौटानी पड़ेगी, यह मोदी की गारंटी है।

    ❌❌❌💵 💵 💵❌❌❌ pic.twitter.com/O2pEA4QTOj

    — Narendra Modi (@narendramodi) December 8, 2023 " class="align-text-top noRightClick twitterSection" data=" ">

ಎಣಿಕೆಗೆ ಸಿಗದಷ್ಟು ನಗದು ದೊರಕಿರುವ ಈ ಪ್ರಕರಣವನ್ನು ಪ್ರಸಿದ್ಧ ವೆಬ್​ ಸಿರೀಸ್​ 'ಮನಿ ಹೀಸ್ಟ್​' ಗೆ ಹೋಲಿಸಿರುವ ಪ್ರಧಾನಿ ಮೋದಿ, ಎಕ್ಸ್​ನಲ್ಲಿ ಪೋಸ್ಟ್​ನಲ್ಲಿ, "ಕಳೆದ 70 ವರ್ಷಗಳಿಂದ ಭಾರತದಲ್ಲಿ ಕಾಂಗ್ರೆಸ್​ ದರೋಡೆ ಮಾಡುತ್ತಿರುವಾಗ, ಯಾರಿಗೆ ಬೇಕು ಈ 'ಮನಿ ಹೀಸ್ಟ್'​ ಕಾಲ್ಪನಿಕ ಕಥೆ" ಎಂದು ಟಾಂಗ್​ ಕೊಟ್ಟಿದ್ದಾರೆ. ಪೋಸ್ಟ್​ ಜೊತೆಗೆ ಬಿಜೆಪಿ ತನ್ನ ಖಾತೆಯಲ್ಲಿ 'ಕಾಂಗ್ರೆಸ್​ ಪ್ರೆಸೆಂಟ್ಸ್​ ದಿ ಮನಿ ಹೀಸ್ಟ್​' ಎನ್ನುವ ಕ್ಯಾಪ್ಷನ್​ನೊಂದಿಗೆ ಹಂಚಿಕೊಂಡಿರುವ ವಿಡಿಯೋವನ್ನೂ ಶೇರ್​ ಮಾಡಿಕೊಂಡಿದ್ದಾರೆ.

  • In India, who needs 'Money Heist' fiction, when you have the Congress Party, whose heists are legendary for 70 years and counting! https://t.co/J70MCA5lcG

    — Narendra Modi (@narendramodi) December 12, 2023 " class="align-text-top noRightClick twitterSection" data=" ">

ಸಂಸದ ಧೀರಜ್​ ಸಾಹುಗೆ ಸಂಬಂಧಿಸಿದ ಒಡಿಶಾ ಮೂಲದ ಬೌಧ್​ ಡಿಸ್ಟಿಲರಿ​ ಪ್ರೈವೇಟ್​ ಲಿಮಿಟೆಡ್​ ಕಚೇರಿಗಳ ಮೇಲೆ ಹಾಗೂ ಜಾರ್ಖಂಡ್​ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಇದಕ್ಕೆ ಸಂಬಂಧಿಸಿದ ಸಂಸ್ಥೆಗಳ ಮೇಲೆ ಡಿಸೆಂಬರ್​ 6ರಂದು ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಲೆಕ್ಕಕ್ಕೆ ಸಿಗದಷ್ಟು ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ದಾಳಿಯ ದೃಶ್ಯಗಳು ವೈರಲ್​ ಆದ ಬೆನ್ನಲ್ಲೇ ಬಿಜೆಪಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದೆ.

  • In India, who needs 'Money Heist' fiction, when you have the Congress Party, whose heists are legendary for 70 years and counting! https://t.co/J70MCA5lcG

    — Narendra Modi (@narendramodi) December 12, 2023 " class="align-text-top noRightClick twitterSection" data=" ">

ಪ್ರಧಾನಿ ನರೇಂದ್ರ ಮೋದಿ ಅವರೂ ಎಕ್ಸ್​ ಪೋಸ್ಟ್​ ಮೂಲಕ ವಾಗ್ದಾಳಿ ನಡೆಸಿದ್ದು, "ದೇಶದ ಜನರು ಈ ಕರೆನ್ಸಿ ನೋಟುಗಳ ರಾಶಿಯನ್ನು ನೋಡಬೇಕು. ನಂತರ ತಮ್ಮ ನಾಯಕರ ಪ್ರಾಮಾಣಿಕ ಭಾಷಣಗಳನ್ನು ಕೇಳಬೇಕು. ಸಾರ್ವಜನಿಕರಿಂದ ಲೂಟಿ ಮಾಡಿದ ಪ್ರತಿ ಪೈಸೆಯನ್ನೂ ಹಿಂತಿರುಗಿಸಬೇಕು. ಇದು ಮೋದಿ ಗ್ಯಾರಂಟಿ" ಎಂದು ಹೇಳಿದ್ದಾರೆ.

ಮೋದಿ ಸರ್ಕಾರ ಮಾಡಿದ್ದ ನೋಟು ಅಮಾನ್ಯೀಕರಣದ ಯಶಸ್ಸನ್ನು ಪ್ರಶ್ನಿಸಿ ಕಾಂಗ್ರೆಸ್​ ಸಂಸದ ಧೀರಜ್​ ಸಾಹು ಅವರು ಮಾಡಿದ್ದ ಹಳೆಯ ಟ್ವೀಟ್​ಗಳನ್ನು ಬಿಜೆಪಿ ನಾಯಕರು ಹಂಚಿಕೊಂಡಿದ್ದು, ನೋಟು ನಿಷೇಧದ ನಂತರವೂ ಜನರು ಇನ್ನೂ ಕಪ್ಪು ಹಣವನ್ನು ಹೇಗೆ ಹೊಂದಿದ್ದಾರೆ." ಎಂದು ಪ್ರಶ್ನಿಸಿದ್ದಾರೆ.

  • In India, who needs 'Money Heist' fiction, when you have the Congress Party, whose heists are legendary for 70 years and counting! https://t.co/J70MCA5lcG

    — Narendra Modi (@narendramodi) December 12, 2023 " class="align-text-top noRightClick twitterSection" data=" ">

ದೇಶದಲ್ಲಿ ಇದುವರೆಗೆ ನಡೆದ ಕಾರ್ಯಾಚರಣೆಗಳಲ್ಲಿ, ಒಂದೇ ಬಾರಿಗೆ ಅತಿ ಹೆಚ್ಚು ನಗದು ದೊರೆತಿರುವ ದಾಳಿ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ದಾಳಿ ವೇಳೆ ದೊರೆತ ನಗದನ್ನು 176 ಬ್ಯಾಗ್​ಗಳಲ್ಲಿ ತುಂಬಿ ಎಸ್​ಬಿಐ ಶಾಖೆಗೆ ತಲುಪಿಸಲಾಗಿತ್ತು. ಎಣಿಕೆಗಾಗಿ ಒಟ್ಟು 40 ಯಂತ್ರಗಳನ್ನು ಹಾಗೂ 60 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನಿರಂತರವಾಗಿ 5 ದಿನಗಳಿಗೂ ಹೆಚ್ಚು ಕಾಲ ಎಣಿಕೆ ಕಾರ್ಯ ಕೈಗೊಳ್ಳಲಾಗಿತ್ತು. ಎಣಿಕೆ ವೇಳೆ ಯಂತ್ರಗಳು ಕೆಟ್ಟು ಹೋಗುತ್ತಿದ್ದ ಯಂತ್ರಗಳನ್ನು ತಕ್ಷಣ ರಿಪೇರಿ ಮಾಡಲು ಕೆಲ ಮೆಕ್ಯಾನಿಕ್​ಗಳನ್ನೂ ಶಾಖೆಯಲ್ಲಿ ಇರಿಸಲಾಗಿತ್ತು.

ಇದನ್ನೂ ಓದಿ: ಕಾಂಗ್ರೆಸ್ ಸಂಸದ ಸಾಹು ಮೇಲಿನ ಐಟಿ ದಾಳಿ; ಐದನೇ ದಿನವೂ ಮುಂದುವರಿದ ಹಣ ಎಣಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.