ETV Bharat / bharat

ಭಾರತೀಯ ಸಾಮಾಜಿಕ ಮನಸ್ಥಿತಿಯ ಬಗ್ಗೆ ಪ್ರಧಾನಿ ಮೋದಿಯವರಿಗಿದೆ ಅಗಾಧ ಜ್ಞಾನ: ಹಿರಿಯ ಪತ್ರಕರ್ತ ಅಜಯ್ ಸಿಂಗ್

author img

By

Published : Jul 24, 2023, 4:55 PM IST

PM Modi has vast knowledge: ಭಾರತದ ಸಾಮಾಜಿಕ ಮನಸ್ಥಿತಿಯ ಬಗ್ಗೆ ಮಹಾತ್ಮಾ ಗಾಂಧಿ ಅವರನ್ನು ಬಿಟ್ಟರೆ ಪ್ರಧಾನಿ ನರೇಂದ್ರ ಮೋದಿ ಅವರಷ್ಟು ತಿಳಿದುಕೊಂಡಿರುವವರು ಬೇರೆ ಯಾರೂ ಇಲ್ಲ ಎಂದು ಹಿರಿಯ ಪತ್ರಕರ್ತ ಅಜಯ್ ಸಿಂಗ್ ಹೇಳಿದ್ದಾರೆ.

After Mahatma Gandhi, Modi has profound understanding
After Mahatma Gandhi, Modi has profound understanding

ನ್ಯೂಯಾರ್ಕ್: ಮಹಾತ್ಮಾ ಗಾಂಧಿಯವರ ನಂತರ ಪ್ರಧಾನಿ ನರೇಂದ್ರ ಮೋದಿಯವರಷ್ಟು ಭಾರತೀಯ ಸಾಮಾಜಿಕ ಮನಸ್ಥಿತಿಯ ಬಗ್ಗೆ ಆಳವಾಗಿ ತಿಳಿವಳಿಕೆ ಹೊಂದಿದ ವ್ಯಕ್ತಿ ಬೇರೆ ಯಾರೂ ಇಲ್ಲ ಎಂದು ಭಾರತದ ರಾಷ್ಟ್ರಪತಿಗಳ ಪತ್ರಿಕಾ ಕಾರ್ಯದರ್ಶಿ ಮತ್ತು ಹಿರಿಯ ಪತ್ರಕರ್ತ ಅಜಯ್ ಸಿಂಗ್ ಹೇಳಿದ್ದಾರೆ.

'ದಿ ಆರ್ಕಿಟೆಕ್ಟ್ ಆಫ್ ದಿ ನ್ಯೂ ಬಿಜೆಪಿ: ಹೌ ನರೇಂದ್ರ ಮೋದಿ ಟ್ರಾನ್ಸ್‌ಫಾರ್ಮ್ಡ್ ದಿ ಪಾರ್ಟಿ' (The Architect of the New BJP: How Narendra Modi Transformed the Party) ಎಂಬ ತಾವು ಬರೆದ ಪುಸ್ತಕ ಬಿಡುಗಡೆಗಾಗಿ ಅಮೆರಿಕದ ನ್ಯೂಜೆರ್ಸಿಯಲ್ಲಿ ಲಾಭರಹಿತ ಸಂಸ್ಥೆಯಾಗಿರುವ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಇಂಡೋ - ಅಮೆರಿಕನ್ ಆರ್ಟ್ಸ್ ಕೌನ್ಸಿಲ್ (ಐಎಎಸಿ) ಆಯೋಜಿಸಿದ್ದ 'ಇಂಪ್ಯಾಕ್ಟ್ ಮೋದಿ' ಎಂಬ ಶೀರ್ಷಿಕೆಯ ಕಾರ್ಯಕ್ರಮದಲ್ಲಿ ಭಾನುವಾರ ಸಿಂಗ್ ಮಾತನಾಡಿದರು.

ಪ್ರಧಾನಿ ಮೋದಿ ಅವರು ಭಾರತದಾದ್ಯಂತ ವ್ಯಾಪಕವಾಗಿ ಪ್ರವಾಸ ಮಾಡಿದ್ದಾರೆ ಮತ್ತು ಅವರ ಸಾಮಾಜಿಕ ಮನೋವಿಜ್ಞಾನದ ಅವರ ತಿಳಿವಳಿಕೆ ಬಹಳ ಆಳವಾಗಿದೆ. ಇದು ವಿವಿಧ ಸಮಸ್ಯೆಗಳನ್ನು ಎದುರಿಸಲು ಅವರಿಗೆ ಶಕ್ತಿ ನೀಡುತ್ತದೆ ಎಂದು ಸಿಂಗ್ ಹೇಳಿದರು. ಪ್ರಧಾನಿ ಮೋದಿಯವರ ಪ್ರಚಂಡ ಜನಪ್ರಿಯತೆ ಮತ್ತು ನೋಟು ಅಮಾನ್ಯೀಕರಣದಂತಹ ನಿರ್ಧಾರಗಳು ಅವರ ವ್ಯಕ್ತಿತ್ವಕ್ಕೆ ಯಾಕೆ ಧಕ್ಕೆ ತರಲಿಲ್ಲ ಎಂಬ ಪ್ರಶ್ನೆಗೆ ಸಿಂಗ್ ಪ್ರತಿಕ್ರಿಯಿಸಿದರು. 35 ವರ್ಷಗಳ ಅನುಭವ ಹೊಂದಿರುವ ಹಿರಿಯ ಪತ್ರಕರ್ತ ಸಿಂಗ್ ಅವರನ್ನು ಸೆಪ್ಟೆಂಬರ್ 2019 ರಲ್ಲಿ ಅಂದಿನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಪತ್ರಿಕಾ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.

ದಶಕಗಳಿಂದ ಭಾರತೀಯ ಜನತಾ ಪಕ್ಷ ಹೇಗೆ ರೂಪಾಂತರಗೊಂಡಿತು ಎಂಬುದನ್ನು ವಿವರಿಸುವ ಮತ್ತು ಈ ನಿಟ್ಟಿನಲ್ಲಿ ಯಾರಿಗೂ ಗೊತ್ತಿರದ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆಗಳನ್ನು ತಿಳಿಸುವ ಅವರ ಪುಸ್ತಕ ಜುಲೈ 2022 ರಲ್ಲಿ ಭಾರತದಲ್ಲಿ ಪ್ರಕಟವಾಯಿತು. ವ್ಯಕ್ತಿಗಳನ್ನೇ ಮೀರಿಸುವಷ್ಟು ದೃಢವಾದ ಮತ್ತು ಬಲಿಷ್ಠವಾಗಿರುವ ಭಾರತೀಯ ಜನತಾ ಪಕ್ಷವನ್ನು ಹೇಗೆ ಕಟ್ಟಲಾಯಿತು ಎಂಬುದನ್ನು ಸಿಂಗ್ ಪುಸ್ತಕದಲ್ಲಿ ವಿವರಿಸಿದ್ದಾರೆ. ಪ್ರಸ್ತುತ ಈ ಪುಸ್ತಕ ಅಮೆರಿಕದಲ್ಲಿ ಬಿಡುಗಡೆಯಾಗಿದೆ. ನ್ಯೂಯಾರ್ಕ್‌ನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾರತದ ಕಾನ್ಸುಲ್ ಜನರಲ್ ರಣಧೀರ್ ಜೈಸ್ವಾಲ್ ಭಾಗವಹಿಸಿದ್ದರು.

1950 ರ ದಶಕದಲ್ಲಿ ಕಾಂಗ್ರೆಸ್ ಪಕ್ಷವು ಅಂಥ ದೃಢವಾದ ಸಂಘಟನೆಯನ್ನು ಹೊಂದಿತ್ತು ಮತ್ತು ಅದು 2014 ರವರೆಗೆ ಇತ್ತು ಎಂದು ಸಿಂಗ್ ತಿಳಿಸಿದರು. 1951ರಲ್ಲಿ ಸ್ಥಾಪನೆಯಾದ ಭಾರತೀಯ ಜನಸಂಘದ ನಂತರ ಬಿಜೆಪಿ ಬೆಳೆದು ಬಂದ ಬಗೆಯನ್ನು ಮತ್ತು 2014ರಲ್ಲಿ ಬಿಜೆಪಿ ಅಭೂತಪೂರ್ವ ಜಯ ಗಳಿಸಿದ್ದು ಮತ್ತು ನರೇಂದ್ರ ಮೋದಿ ಪ್ರಧಾನಿಯಾದ ವಿಚಾರಗಳ ಬಗ್ಗೆ ಸಿಂಗ್ ಮಾತನಾಡಿದರು.

ಕೆಲ ಪ್ರಶ್ನೆಗಳು ಸುಮಾರು ಒಂದು ದಶಕದಿಂದ ನಮ್ಮ ಮುಂದೆ ಇರುವುದರಿಂದ, ಅವುಗಳಿಗೆ ಅನೇಕ ಉತ್ತರಗಳನ್ನು ಪ್ರಸ್ತಾಪಿಸಲಾಗಿದೆ. ಇದು ಮೋದಿಯವರ ವರ್ಚಸ್ಸು ಮತ್ತು ಮಾತಿನ ಕೌಶಲ್ಯ ಎಂದು ಕೆಲವರು ನಂಬುತ್ತಾರೆ. 'ನೇಷನ್ ಫಸ್ಟ್' ಎಂಬ ಮೋದಿಯವರ ರಾಜಕೀಯ ಸಿದ್ಧಾಂತವೇ ಬಿಜೆಪಿ ಪ್ರಾಬಲ್ಯಕ್ಕೆ ಕಾರಣ ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಮೇಲೆ ಅವರ ಏಕೀಕೃತ ಗಮನದಿಂದ ಇಂಥ ಸಾಧನೆ ಸಾಧ್ಯವಾಗಿದೆ ಎನ್ನುತ್ತಾರೆ ಎಂದು ಸಿಂಗ್ ತಿಳಿಸಿದರು.

ನಿಜ, ಈ ಎಲ್ಲ ಅಂಶಗಳು ಭಾರತದ ರಾಜಕೀಯ ಭೂಪಟದಲ್ಲಿ ಬಿಜೆಪಿಯ ಸ್ಥಾನವನ್ನು ಭದ್ರಪಡಿಸಲು ಕೊಡುಗೆ ನೀಡಿವೆ. ಆದರೆ ಎಲ್ಲವನ್ನೂ ಒಟ್ಟುಗೂಡಿಸಿದಾಗ, ಈ ಕಾರಣಗಳು ಕೂಡ ಬಿಜೆಪಿ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಜಯಗಳಿಸಲು ಹೇಗೆ ಸಾಧ್ಯವಾಯಿತು ಎಂಬುದನ್ನು ವಿವರಿಸಲು ಸಾಧ್ಯವಾಗುವುದಿಲ್ಲ ಎಂದು ಸಿಂಗ್ ಹೇಳಿದರು. ಬಿಜೆಪಿ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೂಡ ಅತ್ಯಂತ ವರ್ಚಸ್ವಿ ಮತ್ತು ಅತ್ಯುತ್ತಮ ವಾಗ್ಮಿಯಾಗಿದ್ದರು. ವಾಜಪೇಯಿ ಸರ್ಕಾರವು ಉತ್ತಮ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಹೆಸರುವಾಸಿಯಾಗಿತ್ತು. ಆದರೂ ಅದು ಸಂಖ್ಯಾಬಲದ ಕೊರತೆ ಎದುರಿಸುತ್ತಿತ್ತು ಎಂದು ಅವರು ಹೇಳಿದರು.

ಪ್ರಧಾನಿಯಾಗಿ ಮೋದಿ ಸಂಖ್ಯಾಬಲ ಹೊಂದಿದ್ದಾರೆ. ಆದ್ದರಿಂದಲೇ ಅವರು 370 ನೇ ವಿಧಿ ರದ್ದತಿಯಂತಹ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಯಿತು. "ಮೋದಿಯವರ ದಿಗ್ಭ್ರಮೆಗೊಳಿಸುವ ಯಶಸ್ಸಿನ ವಿವರಣೆಯನ್ನು ನಾನು ವಿವರಿಸುತ್ತೇನೆ. ನಾನು ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಬೇಕು. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ. ಇಲ್ಲಿರುವುದು ಪ್ರಮುಖ ಅಂಶವೆಂದರೆ ಪಕ್ಷವನ್ನು ಬೆಳೆಸುವುದು. ಅದೇ ಮೋದಿಯವರ ಬೆಳವಣಿಗೆಯ ಸಂಪೂರ್ಣ ವಿವರಣೆಯಾಗಿದೆ ಎಂದು ಸಿಂಗ್ ನುಡಿದರು.

ಇದನ್ನೂ ಓದಿ : ಗ್ರೀಸ್​ ದೇಶದ 82 ಪ್ರದೇಶಗಳಲ್ಲಿ ಭೀಕರ ಕಾಳ್ಗಿಚ್ಚು: 19 ಸಾವಿರ ಜನ ಸ್ಥಳಾಂತರ

ನ್ಯೂಯಾರ್ಕ್: ಮಹಾತ್ಮಾ ಗಾಂಧಿಯವರ ನಂತರ ಪ್ರಧಾನಿ ನರೇಂದ್ರ ಮೋದಿಯವರಷ್ಟು ಭಾರತೀಯ ಸಾಮಾಜಿಕ ಮನಸ್ಥಿತಿಯ ಬಗ್ಗೆ ಆಳವಾಗಿ ತಿಳಿವಳಿಕೆ ಹೊಂದಿದ ವ್ಯಕ್ತಿ ಬೇರೆ ಯಾರೂ ಇಲ್ಲ ಎಂದು ಭಾರತದ ರಾಷ್ಟ್ರಪತಿಗಳ ಪತ್ರಿಕಾ ಕಾರ್ಯದರ್ಶಿ ಮತ್ತು ಹಿರಿಯ ಪತ್ರಕರ್ತ ಅಜಯ್ ಸಿಂಗ್ ಹೇಳಿದ್ದಾರೆ.

'ದಿ ಆರ್ಕಿಟೆಕ್ಟ್ ಆಫ್ ದಿ ನ್ಯೂ ಬಿಜೆಪಿ: ಹೌ ನರೇಂದ್ರ ಮೋದಿ ಟ್ರಾನ್ಸ್‌ಫಾರ್ಮ್ಡ್ ದಿ ಪಾರ್ಟಿ' (The Architect of the New BJP: How Narendra Modi Transformed the Party) ಎಂಬ ತಾವು ಬರೆದ ಪುಸ್ತಕ ಬಿಡುಗಡೆಗಾಗಿ ಅಮೆರಿಕದ ನ್ಯೂಜೆರ್ಸಿಯಲ್ಲಿ ಲಾಭರಹಿತ ಸಂಸ್ಥೆಯಾಗಿರುವ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಇಂಡೋ - ಅಮೆರಿಕನ್ ಆರ್ಟ್ಸ್ ಕೌನ್ಸಿಲ್ (ಐಎಎಸಿ) ಆಯೋಜಿಸಿದ್ದ 'ಇಂಪ್ಯಾಕ್ಟ್ ಮೋದಿ' ಎಂಬ ಶೀರ್ಷಿಕೆಯ ಕಾರ್ಯಕ್ರಮದಲ್ಲಿ ಭಾನುವಾರ ಸಿಂಗ್ ಮಾತನಾಡಿದರು.

ಪ್ರಧಾನಿ ಮೋದಿ ಅವರು ಭಾರತದಾದ್ಯಂತ ವ್ಯಾಪಕವಾಗಿ ಪ್ರವಾಸ ಮಾಡಿದ್ದಾರೆ ಮತ್ತು ಅವರ ಸಾಮಾಜಿಕ ಮನೋವಿಜ್ಞಾನದ ಅವರ ತಿಳಿವಳಿಕೆ ಬಹಳ ಆಳವಾಗಿದೆ. ಇದು ವಿವಿಧ ಸಮಸ್ಯೆಗಳನ್ನು ಎದುರಿಸಲು ಅವರಿಗೆ ಶಕ್ತಿ ನೀಡುತ್ತದೆ ಎಂದು ಸಿಂಗ್ ಹೇಳಿದರು. ಪ್ರಧಾನಿ ಮೋದಿಯವರ ಪ್ರಚಂಡ ಜನಪ್ರಿಯತೆ ಮತ್ತು ನೋಟು ಅಮಾನ್ಯೀಕರಣದಂತಹ ನಿರ್ಧಾರಗಳು ಅವರ ವ್ಯಕ್ತಿತ್ವಕ್ಕೆ ಯಾಕೆ ಧಕ್ಕೆ ತರಲಿಲ್ಲ ಎಂಬ ಪ್ರಶ್ನೆಗೆ ಸಿಂಗ್ ಪ್ರತಿಕ್ರಿಯಿಸಿದರು. 35 ವರ್ಷಗಳ ಅನುಭವ ಹೊಂದಿರುವ ಹಿರಿಯ ಪತ್ರಕರ್ತ ಸಿಂಗ್ ಅವರನ್ನು ಸೆಪ್ಟೆಂಬರ್ 2019 ರಲ್ಲಿ ಅಂದಿನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಪತ್ರಿಕಾ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.

ದಶಕಗಳಿಂದ ಭಾರತೀಯ ಜನತಾ ಪಕ್ಷ ಹೇಗೆ ರೂಪಾಂತರಗೊಂಡಿತು ಎಂಬುದನ್ನು ವಿವರಿಸುವ ಮತ್ತು ಈ ನಿಟ್ಟಿನಲ್ಲಿ ಯಾರಿಗೂ ಗೊತ್ತಿರದ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆಗಳನ್ನು ತಿಳಿಸುವ ಅವರ ಪುಸ್ತಕ ಜುಲೈ 2022 ರಲ್ಲಿ ಭಾರತದಲ್ಲಿ ಪ್ರಕಟವಾಯಿತು. ವ್ಯಕ್ತಿಗಳನ್ನೇ ಮೀರಿಸುವಷ್ಟು ದೃಢವಾದ ಮತ್ತು ಬಲಿಷ್ಠವಾಗಿರುವ ಭಾರತೀಯ ಜನತಾ ಪಕ್ಷವನ್ನು ಹೇಗೆ ಕಟ್ಟಲಾಯಿತು ಎಂಬುದನ್ನು ಸಿಂಗ್ ಪುಸ್ತಕದಲ್ಲಿ ವಿವರಿಸಿದ್ದಾರೆ. ಪ್ರಸ್ತುತ ಈ ಪುಸ್ತಕ ಅಮೆರಿಕದಲ್ಲಿ ಬಿಡುಗಡೆಯಾಗಿದೆ. ನ್ಯೂಯಾರ್ಕ್‌ನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾರತದ ಕಾನ್ಸುಲ್ ಜನರಲ್ ರಣಧೀರ್ ಜೈಸ್ವಾಲ್ ಭಾಗವಹಿಸಿದ್ದರು.

1950 ರ ದಶಕದಲ್ಲಿ ಕಾಂಗ್ರೆಸ್ ಪಕ್ಷವು ಅಂಥ ದೃಢವಾದ ಸಂಘಟನೆಯನ್ನು ಹೊಂದಿತ್ತು ಮತ್ತು ಅದು 2014 ರವರೆಗೆ ಇತ್ತು ಎಂದು ಸಿಂಗ್ ತಿಳಿಸಿದರು. 1951ರಲ್ಲಿ ಸ್ಥಾಪನೆಯಾದ ಭಾರತೀಯ ಜನಸಂಘದ ನಂತರ ಬಿಜೆಪಿ ಬೆಳೆದು ಬಂದ ಬಗೆಯನ್ನು ಮತ್ತು 2014ರಲ್ಲಿ ಬಿಜೆಪಿ ಅಭೂತಪೂರ್ವ ಜಯ ಗಳಿಸಿದ್ದು ಮತ್ತು ನರೇಂದ್ರ ಮೋದಿ ಪ್ರಧಾನಿಯಾದ ವಿಚಾರಗಳ ಬಗ್ಗೆ ಸಿಂಗ್ ಮಾತನಾಡಿದರು.

ಕೆಲ ಪ್ರಶ್ನೆಗಳು ಸುಮಾರು ಒಂದು ದಶಕದಿಂದ ನಮ್ಮ ಮುಂದೆ ಇರುವುದರಿಂದ, ಅವುಗಳಿಗೆ ಅನೇಕ ಉತ್ತರಗಳನ್ನು ಪ್ರಸ್ತಾಪಿಸಲಾಗಿದೆ. ಇದು ಮೋದಿಯವರ ವರ್ಚಸ್ಸು ಮತ್ತು ಮಾತಿನ ಕೌಶಲ್ಯ ಎಂದು ಕೆಲವರು ನಂಬುತ್ತಾರೆ. 'ನೇಷನ್ ಫಸ್ಟ್' ಎಂಬ ಮೋದಿಯವರ ರಾಜಕೀಯ ಸಿದ್ಧಾಂತವೇ ಬಿಜೆಪಿ ಪ್ರಾಬಲ್ಯಕ್ಕೆ ಕಾರಣ ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಮೇಲೆ ಅವರ ಏಕೀಕೃತ ಗಮನದಿಂದ ಇಂಥ ಸಾಧನೆ ಸಾಧ್ಯವಾಗಿದೆ ಎನ್ನುತ್ತಾರೆ ಎಂದು ಸಿಂಗ್ ತಿಳಿಸಿದರು.

ನಿಜ, ಈ ಎಲ್ಲ ಅಂಶಗಳು ಭಾರತದ ರಾಜಕೀಯ ಭೂಪಟದಲ್ಲಿ ಬಿಜೆಪಿಯ ಸ್ಥಾನವನ್ನು ಭದ್ರಪಡಿಸಲು ಕೊಡುಗೆ ನೀಡಿವೆ. ಆದರೆ ಎಲ್ಲವನ್ನೂ ಒಟ್ಟುಗೂಡಿಸಿದಾಗ, ಈ ಕಾರಣಗಳು ಕೂಡ ಬಿಜೆಪಿ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಜಯಗಳಿಸಲು ಹೇಗೆ ಸಾಧ್ಯವಾಯಿತು ಎಂಬುದನ್ನು ವಿವರಿಸಲು ಸಾಧ್ಯವಾಗುವುದಿಲ್ಲ ಎಂದು ಸಿಂಗ್ ಹೇಳಿದರು. ಬಿಜೆಪಿ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೂಡ ಅತ್ಯಂತ ವರ್ಚಸ್ವಿ ಮತ್ತು ಅತ್ಯುತ್ತಮ ವಾಗ್ಮಿಯಾಗಿದ್ದರು. ವಾಜಪೇಯಿ ಸರ್ಕಾರವು ಉತ್ತಮ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಹೆಸರುವಾಸಿಯಾಗಿತ್ತು. ಆದರೂ ಅದು ಸಂಖ್ಯಾಬಲದ ಕೊರತೆ ಎದುರಿಸುತ್ತಿತ್ತು ಎಂದು ಅವರು ಹೇಳಿದರು.

ಪ್ರಧಾನಿಯಾಗಿ ಮೋದಿ ಸಂಖ್ಯಾಬಲ ಹೊಂದಿದ್ದಾರೆ. ಆದ್ದರಿಂದಲೇ ಅವರು 370 ನೇ ವಿಧಿ ರದ್ದತಿಯಂತಹ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಯಿತು. "ಮೋದಿಯವರ ದಿಗ್ಭ್ರಮೆಗೊಳಿಸುವ ಯಶಸ್ಸಿನ ವಿವರಣೆಯನ್ನು ನಾನು ವಿವರಿಸುತ್ತೇನೆ. ನಾನು ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಬೇಕು. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ. ಇಲ್ಲಿರುವುದು ಪ್ರಮುಖ ಅಂಶವೆಂದರೆ ಪಕ್ಷವನ್ನು ಬೆಳೆಸುವುದು. ಅದೇ ಮೋದಿಯವರ ಬೆಳವಣಿಗೆಯ ಸಂಪೂರ್ಣ ವಿವರಣೆಯಾಗಿದೆ ಎಂದು ಸಿಂಗ್ ನುಡಿದರು.

ಇದನ್ನೂ ಓದಿ : ಗ್ರೀಸ್​ ದೇಶದ 82 ಪ್ರದೇಶಗಳಲ್ಲಿ ಭೀಕರ ಕಾಳ್ಗಿಚ್ಚು: 19 ಸಾವಿರ ಜನ ಸ್ಥಳಾಂತರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.