ETV Bharat / bharat

ಪೊಲೀಸ್​​​ ಕಸ್ಟಡಿಯಲ್ಲಿರುವ ಕೋವಿಡ್ ವೈದ್ಯಕೀಯ ವಸ್ತುಗಳ ಬಿಡುಗಡೆ ಕೋರಿ ಸುಪ್ರೀಂಗೆ ಅರ್ಜಿ - release of COVID-19 essentials from custody

ಕೋವಿಡ್ ರೋಗಿಗಳ ಜೀವ ಉಳಿಸುವ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ. ಬ್ಲ್ಯಾಕ್ ಮಾರ್ಕೆಟ್​​​ನಲ್ಲಿ ಹೆಚ್ಚಿನ ಬೆಲೆಗೆ ಅಗತ್ಯ ಔಷಧಗಳು ಮಾರಾಟವಾಗುತ್ತಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಸುಪ್ರೀಂಕೋರ್ಟ್​
ಸುಪ್ರೀಂಕೋರ್ಟ್​
author img

By

Published : May 20, 2021, 7:52 PM IST

ನವದೆಹಲಿ: ನ್ಯಾಯಾಲಯದ ವಿಚಾರಣೆಗೆ ಒಳಪಟ್ಟು ದೇಶದ ನಾನಾ ಪೊಲೀಸ್ ಠಾಣೆಗಳ ಕಷ್ಟಡಿಯಲ್ಲಿರುವ ಕೋವಿಡ್ ಚಿಕಿತ್ಸೆಗೆ ಅಗತ್ಯವಾಗಿ ಬೇಕಾಗಿರುವ ಆಮ್ಲಜನಕ ಸಿಲಿಂಡರ್​ಗಳು, ರೆಮ್ಡೆಸಿವಿರ್​, ಆಕ್ಸಿಮೀಟರ್, ಇಂಜಕ್ಷನ್​​ಗಳನ್ನು ಬಿಡುಗಡೆ ಮಾಡುವಂತೆ ಕೋರಿ ಸುಪ್ರೀಂಕೋರ್ಟ್​​ನಲ್ಲಿ ಪಿಐಎಲ್​ ಸಲ್ಲಿಕೆಯಾಗಿದೆ.

ಈ ಮನವಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಪೊಲೀಸರು ಹಲವು ಪ್ರಕರಣಗಳಡಿ ವಶಪಡಿಸಿಕೊಂಡಿರುವ ಅಗತ್ಯ ವೈದ್ಯಕೀಯ ವಸ್ತುಗಳ ವಿಡಿಯೋಗಳು ಹಾಗೂ ಫೋಟೋಗಳನ್ನು ಬಿಡುಗಡೆ ಮಾಡಬೇಕು ಎಂದು ಸಹ ಕೋರಲಾಗಿದೆ. ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಿರುವಂತೆ, ಸಿಆರ್​ಪಿಸಿ ಕಾನೂನಿನ ಅನುಸರಿಸಿ ಅಗತ್ಯ ವಸ್ತುಗಳ ಬಿಡುಗಡೆಗಾಗಿ ಕೋರಲಾಗಿದೆ.

ಈ ಕುರಿತು ಆದಷ್ಟು ಬೇಗ ಕ್ರಮ ತೆಗೆದುಕೊಳ್ಳುವಂತೆ ಕೋರಿ ಶ್ರೀಕಾಂತ್ ಪ್ರಸಾದ್ ಹಾಗೂ ರಾಜ್​ಕಿಶೋರ್ ಪ್ರಸಾದ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಕೋವಿಡ್ ರೋಗಿಗಳ ಜೀವ ಉಳಿಸುವ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ. ಬ್ಲ್ಯಾಕ್ ಮಾರ್ಕೆಟ್​​​ನಲ್ಲಿ ಹೆಚ್ಚಿನ ಬೆಲೆಗೆ ಅಗತ್ಯ ಔಷಧಗಳು ಮಾರಾಟವಾಗುತ್ತಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಓದಿ: ನಾರದ ಪ್ರಕರಣ: ಅನಿವಾರ್ಯ ಕಾರಣಗಳಿಂದಾಗಿ ವಿಚಾರಣೆ ಮುಂದೂಡಿದ ಕೋಲ್ಕತ್ತಾ ಹೈಕೋರ್ಟ್

ನವದೆಹಲಿ: ನ್ಯಾಯಾಲಯದ ವಿಚಾರಣೆಗೆ ಒಳಪಟ್ಟು ದೇಶದ ನಾನಾ ಪೊಲೀಸ್ ಠಾಣೆಗಳ ಕಷ್ಟಡಿಯಲ್ಲಿರುವ ಕೋವಿಡ್ ಚಿಕಿತ್ಸೆಗೆ ಅಗತ್ಯವಾಗಿ ಬೇಕಾಗಿರುವ ಆಮ್ಲಜನಕ ಸಿಲಿಂಡರ್​ಗಳು, ರೆಮ್ಡೆಸಿವಿರ್​, ಆಕ್ಸಿಮೀಟರ್, ಇಂಜಕ್ಷನ್​​ಗಳನ್ನು ಬಿಡುಗಡೆ ಮಾಡುವಂತೆ ಕೋರಿ ಸುಪ್ರೀಂಕೋರ್ಟ್​​ನಲ್ಲಿ ಪಿಐಎಲ್​ ಸಲ್ಲಿಕೆಯಾಗಿದೆ.

ಈ ಮನವಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಪೊಲೀಸರು ಹಲವು ಪ್ರಕರಣಗಳಡಿ ವಶಪಡಿಸಿಕೊಂಡಿರುವ ಅಗತ್ಯ ವೈದ್ಯಕೀಯ ವಸ್ತುಗಳ ವಿಡಿಯೋಗಳು ಹಾಗೂ ಫೋಟೋಗಳನ್ನು ಬಿಡುಗಡೆ ಮಾಡಬೇಕು ಎಂದು ಸಹ ಕೋರಲಾಗಿದೆ. ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಿರುವಂತೆ, ಸಿಆರ್​ಪಿಸಿ ಕಾನೂನಿನ ಅನುಸರಿಸಿ ಅಗತ್ಯ ವಸ್ತುಗಳ ಬಿಡುಗಡೆಗಾಗಿ ಕೋರಲಾಗಿದೆ.

ಈ ಕುರಿತು ಆದಷ್ಟು ಬೇಗ ಕ್ರಮ ತೆಗೆದುಕೊಳ್ಳುವಂತೆ ಕೋರಿ ಶ್ರೀಕಾಂತ್ ಪ್ರಸಾದ್ ಹಾಗೂ ರಾಜ್​ಕಿಶೋರ್ ಪ್ರಸಾದ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಕೋವಿಡ್ ರೋಗಿಗಳ ಜೀವ ಉಳಿಸುವ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ. ಬ್ಲ್ಯಾಕ್ ಮಾರ್ಕೆಟ್​​​ನಲ್ಲಿ ಹೆಚ್ಚಿನ ಬೆಲೆಗೆ ಅಗತ್ಯ ಔಷಧಗಳು ಮಾರಾಟವಾಗುತ್ತಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಓದಿ: ನಾರದ ಪ್ರಕರಣ: ಅನಿವಾರ್ಯ ಕಾರಣಗಳಿಂದಾಗಿ ವಿಚಾರಣೆ ಮುಂದೂಡಿದ ಕೋಲ್ಕತ್ತಾ ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.