ETV Bharat / bharat

ಕೋವಿಡ್‌ ಲಸಿಕೆ ಕೊರತೆಗೆ ಪ್ರಧಾನಿ ಮೋದಿ ಕಾರಣ: ಅಸಾದುದ್ದೀನ್ ಓವೈಸಿ

author img

By

Published : May 14, 2021, 9:55 AM IST

ಕೋವಿಡ್‌ ಲಸಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರಿಗೆ ಸುಳ್ಳು ಹೇಳುತ್ತಿದೆ. ಪಾರದರ್ಶಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲಿಮೀನ್ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ.

Owaisi
ಅಸಾದುದ್ದೀನ್ ಓವೈಸಿ

ಹೈದರಾಬಾದ್: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳ ವೈಫಲ್ಯವೇ ದೇಶಾದ್ಯಂತ ಕೊರೊನಾ ಲಸಿಕೆ ಕೊರತೆಗೆ ಕಾರಣವಾಗಿದೆ ಎಂದು ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲಿಮೀನ್ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿಯಿಂದಾಗಿ ದೇಶದಲ್ಲಿ ಲಸಿಕೆ ಕೊರತೆ ಉಂಟಾಗಿದೆ. ಅವರು ಲಸಿಕೆಗಳ ಬಗ್ಗೆ ತಡವಾಗಿ ಕ್ರಮ ತೆಗೆದುಕೊಂಡರು. ಲಸಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರಿಗೆ ಸುಳ್ಳು ಹೇಳುತ್ತಿದ್ದು, ಪಾರದರ್ಶಕವಾಗಿ ಕೆಲಸ ಮಾಡುತ್ತಿಲ್ಲ. ಮೊದಲ ಡೋಸ್ ಪಡೆದ 4 ವಾರಗಳ ನಂತರ ಎರಡನೇ ಡೋಸ್ ತೆಗೆದುಕೊಳ್ಳಿ ಎಂದು ಹೇಳಲಾಗಿತ್ತು. ನಂತರ ಅದನ್ನು 6 ವಾರಗಳಿಗೆ ಮುಂದೂಡಲಾಗಿದೆ. ಈಗ ಅದು 12-16 ವಾರಗಳಾಗಿದೆ. ಇದು ಅವರ ನೀತಿಯ ವೈಫಲ್ಯವನ್ನು ತೋರಿಸುತ್ತದೆ" ಎಂದರು.

ಪಾರದರ್ಶಕತೆಯ ಬಗ್ಗೆ ಸರ್ಕಾರವನ್ನು ಮತ್ತಷ್ಟು ಪ್ರಶ್ನಿಸಿದ ಓವೈಸಿ, "ಇಲ್ಲಿಯವರೆಗೆ ಎಷ್ಟು ಪ್ರಮಾಣದ ಲಸಿಕೆಗಳನ್ನು ಸಂಗ್ರಹಿಸಲಾಗಿದೆ?, ರಾಜ್ಯಗಳಿಗೆ ಎಷ್ಟು ಲಸಿಕೆ ಪ್ರಮಾಣವನ್ನು ವಿತರಿಸಲಾಗಿದೆ?, ಇಲ್ಲಿಯವರೆಗೆ ಎಷ್ಟು ಜನರಿಗೆ ಲಸಿಕೆ ನೀಡಲಾಗಿದೆ? ಇನ್ನೂ ಎಷ್ಟು ಲಸಿಕೆ ಪ್ರಮಾಣಗಳು ಇರುತ್ತವೆ? ಭವಿಷ್ಯದಲ್ಲಿ ಸರ್ಕಾರದಿಂದ ಸಂಗ್ರಹಿಸಲಾಗಿದೆಯೇ?" ಎಂದು ಕೇಂದ್ರವನ್ನು ಅವರು ಪ್ರಶ್ನಿಸಿದ್ದಾರೆ.

"ಜನರ ಪ್ರಾಣ ಉಳಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಕೋವಿನ್ ಪೋರ್ಟಲ್ ಸಂಪೂರ್ಣವಾಗಿ ಅನಗತ್ಯ" ಎಂದು ಓವೈಸಿ ಹೇಳಿದ್ದಾರೆ.

ಹೈದರಾಬಾದ್: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳ ವೈಫಲ್ಯವೇ ದೇಶಾದ್ಯಂತ ಕೊರೊನಾ ಲಸಿಕೆ ಕೊರತೆಗೆ ಕಾರಣವಾಗಿದೆ ಎಂದು ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲಿಮೀನ್ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿಯಿಂದಾಗಿ ದೇಶದಲ್ಲಿ ಲಸಿಕೆ ಕೊರತೆ ಉಂಟಾಗಿದೆ. ಅವರು ಲಸಿಕೆಗಳ ಬಗ್ಗೆ ತಡವಾಗಿ ಕ್ರಮ ತೆಗೆದುಕೊಂಡರು. ಲಸಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರಿಗೆ ಸುಳ್ಳು ಹೇಳುತ್ತಿದ್ದು, ಪಾರದರ್ಶಕವಾಗಿ ಕೆಲಸ ಮಾಡುತ್ತಿಲ್ಲ. ಮೊದಲ ಡೋಸ್ ಪಡೆದ 4 ವಾರಗಳ ನಂತರ ಎರಡನೇ ಡೋಸ್ ತೆಗೆದುಕೊಳ್ಳಿ ಎಂದು ಹೇಳಲಾಗಿತ್ತು. ನಂತರ ಅದನ್ನು 6 ವಾರಗಳಿಗೆ ಮುಂದೂಡಲಾಗಿದೆ. ಈಗ ಅದು 12-16 ವಾರಗಳಾಗಿದೆ. ಇದು ಅವರ ನೀತಿಯ ವೈಫಲ್ಯವನ್ನು ತೋರಿಸುತ್ತದೆ" ಎಂದರು.

ಪಾರದರ್ಶಕತೆಯ ಬಗ್ಗೆ ಸರ್ಕಾರವನ್ನು ಮತ್ತಷ್ಟು ಪ್ರಶ್ನಿಸಿದ ಓವೈಸಿ, "ಇಲ್ಲಿಯವರೆಗೆ ಎಷ್ಟು ಪ್ರಮಾಣದ ಲಸಿಕೆಗಳನ್ನು ಸಂಗ್ರಹಿಸಲಾಗಿದೆ?, ರಾಜ್ಯಗಳಿಗೆ ಎಷ್ಟು ಲಸಿಕೆ ಪ್ರಮಾಣವನ್ನು ವಿತರಿಸಲಾಗಿದೆ?, ಇಲ್ಲಿಯವರೆಗೆ ಎಷ್ಟು ಜನರಿಗೆ ಲಸಿಕೆ ನೀಡಲಾಗಿದೆ? ಇನ್ನೂ ಎಷ್ಟು ಲಸಿಕೆ ಪ್ರಮಾಣಗಳು ಇರುತ್ತವೆ? ಭವಿಷ್ಯದಲ್ಲಿ ಸರ್ಕಾರದಿಂದ ಸಂಗ್ರಹಿಸಲಾಗಿದೆಯೇ?" ಎಂದು ಕೇಂದ್ರವನ್ನು ಅವರು ಪ್ರಶ್ನಿಸಿದ್ದಾರೆ.

"ಜನರ ಪ್ರಾಣ ಉಳಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಕೋವಿನ್ ಪೋರ್ಟಲ್ ಸಂಪೂರ್ಣವಾಗಿ ಅನಗತ್ಯ" ಎಂದು ಓವೈಸಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.