ETV Bharat / bharat

'ಥ್ಯಾಂಕ್ಯೂ ಪ್ರಧಾನಿ ಮೋದಿ' ವಿರುದ್ಧ ಹರಿಹಾಯ್ದ ಎನ್ಎಸ್​ಯುಐ

author img

By

Published : Jun 23, 2021, 9:05 AM IST

ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ಸಾಕಷ್ಟು ಹಾನಿ ಮಾಡಿದ್ದರೂ, ಪ್ರಧಾನಿಯ ವರ್ಚಸ್ಸು ಹೆಚ್ಚಿಸಲು ಸರ್ಕಾರ ಗಮನ ಹರಿಸುತ್ತಿದೆ. ಇದರಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಎನ್​ಎಸ್​ಯುಐ ಆಕ್ರೋಶ ವ್ಯಕ್ತಪಡಿಸಿದೆ .

NSUI slams UGC for ''Thank you PM Modi' posters move
'ಥ್ಯಾಂಕ್ಯೂ ಪ್ರಧಾನಿ ಮೋದಿ' ವಿರುದ್ಧ ಹರಿಹಾಯ್ದ ಎನ್ಎಸ್​ಯುಐ

ನವದೆಹಲಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ವಿರುದ್ಧ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘ (ಎನ್‌ಎಸ್‌ಯುಐ) ಹರಿಹಾಯ್ದಿದ್ದು, ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಮುಂದೆ 'ಧನ್ಯವಾದಗಳು ಪ್ರಧಾನಿ ಮೋದಿ' ಎಂದು ಬ್ಯಾನರ್ ಹಾಕಲು ಸೂಚಿಸಿದ ಯುಜಿಸಿ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ವ್ಯಾಕ್ಸಿನೇಷನ್ ಘೋಷಿಸಿದ ಕಾರಣದಿಂದ ಎಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳು 'ಧನ್ಯವಾದಗಳು ಪ್ರಧಾನಿ ಮೋದಿ' ಎಂದು ಬ್ಯಾನರ್ ಹಾಕಬೇಕೆಂದು ಯುಜಿಸಿ ಆದೇಶಿಸಿತ್ತು. ಈ ರೀತಿಯ ಸೂಚನೆ ನೀಡಿದ್ದಕ್ಕೆ ಎನ್‌ಎಸ್‌ಯುಐ ಆಕ್ಷೇಪ ವ್ಯಕ್ತಪಡಿಸಿದ್ದು, ಇದೊಂದು ನಾಚಿಕೆಯಿಲ್ಲದ ಕಾರ್ಯ ಎಂದು ವ್ಯಂಗ್ಯವಾಡಿದೆ.

ಈ ಕುರಿತು ಮಾತನಾಡಿದ ಎನ್‌ಎಸ್‌ಯುಐ ರಾಷ್ಟ್ರೀಯ ಅಧ್ಯಕ್ಷ ನೀರಜ್ ಲುಂಡನ್ ಯಾವುದಕ್ಕಾಗಿ ಪ್ರಧಾನಿಗೆ ಧನ್ಯವಾದಗಳು? ಎಂದು ಪ್ರಶ್ನಿಸಿದ್ದಾರೆ. ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ಸಾಕಷ್ಟು ಹಾನಿ ಮಾಡಿದ್ದರೂ, ಪ್ರಧಾನಿಯ ವರ್ಚಸ್ಸು ಹೆಚ್ಚಿಸಲು ಸರ್ಕಾರ ಗಮನ ಹರಿಸುತ್ತಿದೆ. ಇದರಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಹೊಸ ಅಪಾಯ ತಂದಿಟ್ಟ ಡೆಲ್ಟಾ ಪ್ಲಸ್​: ವ್ಯಾಕ್ಸಿನ್‌ ಕೆಲಸ ಮಾಡುವುದೇ? ಇಲ್ಲಿದೆ ಪೂರ್ತಿ ವಿವರ..

ಕೇಂದ್ರ ಸರ್ಕಾರದಿಂದ ಇದೊಂದು ನಾಚಿಕೆಗೇಡಿನ ನಿರ್ಧಾರವಾಗಿದೆ. ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕವಾಗಿ ಯಾವುದೇ ವ್ಯಾಕ್ಸಿನೇಷನ್ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ವಿದ್ಯಾರ್ಥಿ ಶುಲ್ಕಗಳಲ್ಲಿ ಯಾವುದೇ ವಿನಾಯಿತಿ ನೀಡಿಲ್ಲ. ನಿರುದ್ಯೋಗಿಗಳನ್ನು ನಿರ್ಲಕ್ಷಿಸಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷವನ್ನು ಹಾಳು ಮಾಡಲಾಗಿದೆ ಎಂದು ನೀರಜ್ ಲುಂಡನ್ ಆರೋಪಿಸಿದ್ದು, ಬೇಕಿದ್ದರೆ ಈ ಎಲ್ಲಾ ಕೆಲಸಗಳಿಗೆ ಧನ್ಯವಾದ ಅರ್ಪಿಸುತ್ತೇವೆ ಎಂದು ವ್ಯಂಗ್ಯವಾಡಿದ್ದಾರೆ.

ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಳ್ಳುತ್ತಿದೆ. ತಮ್ಮನ್ನು ತಾವೇ ಮೆಚ್ಚುಗೆ ವ್ಯಕ್ತಪಡಿಸಿಕೊಳ್ಳುವ ಪೋಸ್ಟರ್​ಗಳ ಮೂಲಕ ತಮ್ಮ ವೈಫಲ್ಯ ಮರೆಮಾಚುತ್ತಿದೆ ಎಂದು ಎನ್‌ಎಸ್‌ಯುಐ ಆರೋಪಿಸಿದೆ.

ನವದೆಹಲಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ವಿರುದ್ಧ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘ (ಎನ್‌ಎಸ್‌ಯುಐ) ಹರಿಹಾಯ್ದಿದ್ದು, ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಮುಂದೆ 'ಧನ್ಯವಾದಗಳು ಪ್ರಧಾನಿ ಮೋದಿ' ಎಂದು ಬ್ಯಾನರ್ ಹಾಕಲು ಸೂಚಿಸಿದ ಯುಜಿಸಿ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ವ್ಯಾಕ್ಸಿನೇಷನ್ ಘೋಷಿಸಿದ ಕಾರಣದಿಂದ ಎಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳು 'ಧನ್ಯವಾದಗಳು ಪ್ರಧಾನಿ ಮೋದಿ' ಎಂದು ಬ್ಯಾನರ್ ಹಾಕಬೇಕೆಂದು ಯುಜಿಸಿ ಆದೇಶಿಸಿತ್ತು. ಈ ರೀತಿಯ ಸೂಚನೆ ನೀಡಿದ್ದಕ್ಕೆ ಎನ್‌ಎಸ್‌ಯುಐ ಆಕ್ಷೇಪ ವ್ಯಕ್ತಪಡಿಸಿದ್ದು, ಇದೊಂದು ನಾಚಿಕೆಯಿಲ್ಲದ ಕಾರ್ಯ ಎಂದು ವ್ಯಂಗ್ಯವಾಡಿದೆ.

ಈ ಕುರಿತು ಮಾತನಾಡಿದ ಎನ್‌ಎಸ್‌ಯುಐ ರಾಷ್ಟ್ರೀಯ ಅಧ್ಯಕ್ಷ ನೀರಜ್ ಲುಂಡನ್ ಯಾವುದಕ್ಕಾಗಿ ಪ್ರಧಾನಿಗೆ ಧನ್ಯವಾದಗಳು? ಎಂದು ಪ್ರಶ್ನಿಸಿದ್ದಾರೆ. ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ಸಾಕಷ್ಟು ಹಾನಿ ಮಾಡಿದ್ದರೂ, ಪ್ರಧಾನಿಯ ವರ್ಚಸ್ಸು ಹೆಚ್ಚಿಸಲು ಸರ್ಕಾರ ಗಮನ ಹರಿಸುತ್ತಿದೆ. ಇದರಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಹೊಸ ಅಪಾಯ ತಂದಿಟ್ಟ ಡೆಲ್ಟಾ ಪ್ಲಸ್​: ವ್ಯಾಕ್ಸಿನ್‌ ಕೆಲಸ ಮಾಡುವುದೇ? ಇಲ್ಲಿದೆ ಪೂರ್ತಿ ವಿವರ..

ಕೇಂದ್ರ ಸರ್ಕಾರದಿಂದ ಇದೊಂದು ನಾಚಿಕೆಗೇಡಿನ ನಿರ್ಧಾರವಾಗಿದೆ. ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕವಾಗಿ ಯಾವುದೇ ವ್ಯಾಕ್ಸಿನೇಷನ್ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ವಿದ್ಯಾರ್ಥಿ ಶುಲ್ಕಗಳಲ್ಲಿ ಯಾವುದೇ ವಿನಾಯಿತಿ ನೀಡಿಲ್ಲ. ನಿರುದ್ಯೋಗಿಗಳನ್ನು ನಿರ್ಲಕ್ಷಿಸಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷವನ್ನು ಹಾಳು ಮಾಡಲಾಗಿದೆ ಎಂದು ನೀರಜ್ ಲುಂಡನ್ ಆರೋಪಿಸಿದ್ದು, ಬೇಕಿದ್ದರೆ ಈ ಎಲ್ಲಾ ಕೆಲಸಗಳಿಗೆ ಧನ್ಯವಾದ ಅರ್ಪಿಸುತ್ತೇವೆ ಎಂದು ವ್ಯಂಗ್ಯವಾಡಿದ್ದಾರೆ.

ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಳ್ಳುತ್ತಿದೆ. ತಮ್ಮನ್ನು ತಾವೇ ಮೆಚ್ಚುಗೆ ವ್ಯಕ್ತಪಡಿಸಿಕೊಳ್ಳುವ ಪೋಸ್ಟರ್​ಗಳ ಮೂಲಕ ತಮ್ಮ ವೈಫಲ್ಯ ಮರೆಮಾಚುತ್ತಿದೆ ಎಂದು ಎನ್‌ಎಸ್‌ಯುಐ ಆರೋಪಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.