ETV Bharat / bharat

ಕೇವಲ 19 ವರ್ಷ, 27 ಕಳ್ಳತನ: ಖತರ್ನಾಕ್ ಕಳ್ಳನ ಕತೆ ಇದು..!

author img

By

Published : Apr 7, 2021, 7:39 PM IST

Updated : Apr 7, 2021, 9:03 PM IST

ಕೇವಲ 19 ವರ್ಷ ವಯಸ್ಸಿಗೇ ಹಲವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ, ಈಗ ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಯೊಬ್ಬನ ರೋಚಕ ಕತೆ ಇಲ್ಲಿದೆ.

Ninteen years thief captured at nellore
ಕೇವಲ 19 ವರ್ಷ, 27 ಕಳ್ಳತನ: ಖತರ್ನಾಕ್ ಕಳ್ಳನ ಕತೆಯಿದು..!

ನೆಲ್ಲೂರು, ಆಂಧ್ರ ಪ್ರದೇಶ: ಚೋರನ ವಯಸ್ಸು ಕೇವಲ 19, ಆದರೆ ಅವನು 27 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ 21 ಪ್ರಕರಣಗಳಲ್ಲಿ ಶಿಕ್ಷೆ ಕೂಡಾ ಅನುಭವಿಸಿದ್ದಾನೆ. ಜೈಲಿಗೆ ಹೋಗಿ ಬರುವ ಈತ ಮತ್ತೆ ಕಳ್ಳತನದಲ್ಲಿ ತೊಡಗಿಸಿಕೊಳ್ಳುತ್ತಾನೆ.

ಪೂರ್ವ ಗೋದಾವರಿ ಜಿಲ್ಲೆಯ ಆತ್ರೇಯಪುರಂ ಮಂಡಲದ ಅಂಕಂಪಾಲೇನಿ ಎಂಬ ಸೂರ್ಯತೇಜ ಖತರ್ನಾಕ್ ಕಳ್ಳನಾಗಿದ್ದು, ಸ್ವಂತ ಮನೆ ಹೊಂದಿದ್ದು, ಮನೆಯಲ್ಲಿ ಥಿಯೇಟರ್ ಕೂಡಾ ಹೊಂದಿದ್ದಾನೆ. ಕಷ್ಟಪಡದೇ ಜೀವನ ಸಾಗಿಸೋದಕ್ಕಾಗಿ ಕಳ್ಳತನಕ್ಕೆ ಇಳಿದಿರುವ ಈತನ ತಾಯಿ ಚಿಕ್ಕವಯಸ್ಸಿನಲ್ಲೇ ತೀರಿಕೊಂಡಿದ್ದರು.

ಇದನ್ನೂ ಓದಿ: ಅಪರೂಪದ ಸೂಪರ್​​​​​ನೋವಾ ಸ್ಫೋಟ ಪತ್ತೆ ಮಾಡಿದ ಭಾರತೀಯ ಖಗೋಳಶಾಸ್ತ್ರಜ್ಞರು

ತಂದೆಯಾದವನು ಬೇರೆ ವಿವಾಹವಾದ 16ನೇ ವಯಸ್ಸಿನಲ್ಲೇ ಕಳ್ಳನಾಗಿ ಬದಲಾದ ಸೂರ್ಯತೇಜ ಮೊದಲ ಬಾರಿಗೆ ಪಲುಮಾರ್ಲು ಪೊಲೀಸರಿಗೆ ಸಿಕ್ಕಿ ಬಾಲಾಪರಾಧಿಯಾಗಿ ಜೈಲಿಗೆ ಹೋಗಿದ್ದನು. ಇದಾಗಿ ಬಿಡುಗಡೆಯಾದ ನಂತರ ಮತ್ತೆ ಕಳ್ಳತನ ಪ್ರಾರಂಭಿಸಿದ್ದನು. ಅವನ ಪ್ರಮುಖ ಕಳ್ಳತನಗಳೆಂದರೆ..

  1. ರಾಜಮಂಡ್ರಿಯ ಪ್ರಕಾಶ್ ನಗರದ ಅಂಗಡಿಯಲ್ಲಿ 3 ಸಾವಿರ ರೂಪಾಯಿ ಚಿಲ್ಲರೆ ಹಣ
  2. ಕಾರು ಅಪಹರಣ ಮಾಡಿ, ಏಲೂರಿಗೆ ಪ್ರಯಾಣ, ಅಲ್ಲಿ ಮತ್ತೊಂದು ಕಾರು ಕಳ್ಳತನ, 10 ಸಾವಿರ ದರೋಡೆ
  3. ವಿಜಯವಾಡಕ್ಕೆ ಬಂದು ಅಂಗಡಿಯಲ್ಲಿ ಕಳ್ಳತನ ಮಾಡಿ ಅಮರಾವತಿಗೆ ಪ್ರಯಾಣ
  4. ನಂತರ ಸಿನಿಮಾ ಹಾಲ್​ನಲ್ಲಿ ಸ್ಯಾಟಲೈಟ್ ಪ್ರೊಜೆಕ್ಟರ್ ಕಳ್ಳತನ
  5. ಶ್ರೀಪೊಟ್ಟಿ ಶ್ರೀರಾಮುಲು ನೆಲ್ಲೂರು ಜಿಲ್ಲೆಗೆ ಬರುವ ವೇಳೆ ವೆಲ್ಡಿಂಗ್ ಸಾಮಗ್ರಿಗಳ ಕಳ್ಳತನ
  6. ಇದಾದ ನಂತರ ಮತ್ತೊಂದು ವೆಲ್ಡಿಂಗ್ ಶಾಪ್​ನಲ್ಲಿ ಆಕ್ಸಿಜನ್ ಸಿಲಿಂಡರ್ ಕಳ್ಳತನ

ಎರಡು ದಿನ ನೆಲ್ಲೂರಿನಲ್ಲಿ ಮೊಕ್ಕಾಂ

ಸಣ್ಣ ಪುಟ್ಟ ಕಳ್ಳತನ ಮಾಡುತ್ತಿದ್ದ ಈತ ದೊಡ್ಡ ಮೊತ್ತವನ್ನು ಒಂದೇ ಬಾರಿ ಕಳ್ಳತನ ಮಾಡಬೇಕು ಎಂದು ಪ್ಲಾನ್ ಮಾಡಿ ಎರಡು ದಿನ ಕಾರಿನಲ್ಲಿ ನೆಲ್ಲೂರಿನಲ್ಲಿ ಸಂಚಾರ ಮಾಡಿದ್ದನು. ಒಂದು ಏಟಿಎಂ ಕಳ್ಳತನ ಮಾಡಲು ಪ್ಲಾನ್ ಮಾಡುತ್ತಿದ್ದನು.

ಇದೇ ವೇಳೆ, ಫಾಸ್ಟ್​ಫುಡ್ ಸೆಂಟರ್​ನಲ್ಲಿ ಗ್ಯಾಸ್ ಸಿಲಿಂಡರ್ ಮತ್ತು ಮೂರು ಸಾವಿರ ರೂಪಾಯಿ ಕಳ್ಳತನ ಮಾಡಿದ್ದನು. ಅದೇ ದಿನ ರಾತ್ರಿ ಏಟಿಎಂ ಕಳ್ಳತನ ಮಾಡಲು ಗ್ಯಾಸ್ ಸಿಲಿಂಡರ್, ಕಟ್ಟರ್ ಬಳಸಿ, ವಿಫಲನಾಗಿದ್ದನು.

ನಂತರ ಸುತ್ತಿಗೆಯ ಮೂಲಕ ಏಟಿಎಂ ಒಡೆದು 5,500 ರೂಪಾಯಿ ದೋಚಿದ್ದನು. ಈ ಪ್ರಕರಣ ದಾಖಲಿಸಿಕೊಂಡ ನೆಲ್ಲೂರು ಗ್ರಾಮಾಂತರ ಪೊಲೀಸರು ತನಿಖೆ ನಡೆಸಿ, ಸೂರ್ಯತೇಜನನ್ನು ಬಂಧಿಸಿದ್ದಾರೆ.

ನೆಲ್ಲೂರು, ಆಂಧ್ರ ಪ್ರದೇಶ: ಚೋರನ ವಯಸ್ಸು ಕೇವಲ 19, ಆದರೆ ಅವನು 27 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ 21 ಪ್ರಕರಣಗಳಲ್ಲಿ ಶಿಕ್ಷೆ ಕೂಡಾ ಅನುಭವಿಸಿದ್ದಾನೆ. ಜೈಲಿಗೆ ಹೋಗಿ ಬರುವ ಈತ ಮತ್ತೆ ಕಳ್ಳತನದಲ್ಲಿ ತೊಡಗಿಸಿಕೊಳ್ಳುತ್ತಾನೆ.

ಪೂರ್ವ ಗೋದಾವರಿ ಜಿಲ್ಲೆಯ ಆತ್ರೇಯಪುರಂ ಮಂಡಲದ ಅಂಕಂಪಾಲೇನಿ ಎಂಬ ಸೂರ್ಯತೇಜ ಖತರ್ನಾಕ್ ಕಳ್ಳನಾಗಿದ್ದು, ಸ್ವಂತ ಮನೆ ಹೊಂದಿದ್ದು, ಮನೆಯಲ್ಲಿ ಥಿಯೇಟರ್ ಕೂಡಾ ಹೊಂದಿದ್ದಾನೆ. ಕಷ್ಟಪಡದೇ ಜೀವನ ಸಾಗಿಸೋದಕ್ಕಾಗಿ ಕಳ್ಳತನಕ್ಕೆ ಇಳಿದಿರುವ ಈತನ ತಾಯಿ ಚಿಕ್ಕವಯಸ್ಸಿನಲ್ಲೇ ತೀರಿಕೊಂಡಿದ್ದರು.

ಇದನ್ನೂ ಓದಿ: ಅಪರೂಪದ ಸೂಪರ್​​​​​ನೋವಾ ಸ್ಫೋಟ ಪತ್ತೆ ಮಾಡಿದ ಭಾರತೀಯ ಖಗೋಳಶಾಸ್ತ್ರಜ್ಞರು

ತಂದೆಯಾದವನು ಬೇರೆ ವಿವಾಹವಾದ 16ನೇ ವಯಸ್ಸಿನಲ್ಲೇ ಕಳ್ಳನಾಗಿ ಬದಲಾದ ಸೂರ್ಯತೇಜ ಮೊದಲ ಬಾರಿಗೆ ಪಲುಮಾರ್ಲು ಪೊಲೀಸರಿಗೆ ಸಿಕ್ಕಿ ಬಾಲಾಪರಾಧಿಯಾಗಿ ಜೈಲಿಗೆ ಹೋಗಿದ್ದನು. ಇದಾಗಿ ಬಿಡುಗಡೆಯಾದ ನಂತರ ಮತ್ತೆ ಕಳ್ಳತನ ಪ್ರಾರಂಭಿಸಿದ್ದನು. ಅವನ ಪ್ರಮುಖ ಕಳ್ಳತನಗಳೆಂದರೆ..

  1. ರಾಜಮಂಡ್ರಿಯ ಪ್ರಕಾಶ್ ನಗರದ ಅಂಗಡಿಯಲ್ಲಿ 3 ಸಾವಿರ ರೂಪಾಯಿ ಚಿಲ್ಲರೆ ಹಣ
  2. ಕಾರು ಅಪಹರಣ ಮಾಡಿ, ಏಲೂರಿಗೆ ಪ್ರಯಾಣ, ಅಲ್ಲಿ ಮತ್ತೊಂದು ಕಾರು ಕಳ್ಳತನ, 10 ಸಾವಿರ ದರೋಡೆ
  3. ವಿಜಯವಾಡಕ್ಕೆ ಬಂದು ಅಂಗಡಿಯಲ್ಲಿ ಕಳ್ಳತನ ಮಾಡಿ ಅಮರಾವತಿಗೆ ಪ್ರಯಾಣ
  4. ನಂತರ ಸಿನಿಮಾ ಹಾಲ್​ನಲ್ಲಿ ಸ್ಯಾಟಲೈಟ್ ಪ್ರೊಜೆಕ್ಟರ್ ಕಳ್ಳತನ
  5. ಶ್ರೀಪೊಟ್ಟಿ ಶ್ರೀರಾಮುಲು ನೆಲ್ಲೂರು ಜಿಲ್ಲೆಗೆ ಬರುವ ವೇಳೆ ವೆಲ್ಡಿಂಗ್ ಸಾಮಗ್ರಿಗಳ ಕಳ್ಳತನ
  6. ಇದಾದ ನಂತರ ಮತ್ತೊಂದು ವೆಲ್ಡಿಂಗ್ ಶಾಪ್​ನಲ್ಲಿ ಆಕ್ಸಿಜನ್ ಸಿಲಿಂಡರ್ ಕಳ್ಳತನ

ಎರಡು ದಿನ ನೆಲ್ಲೂರಿನಲ್ಲಿ ಮೊಕ್ಕಾಂ

ಸಣ್ಣ ಪುಟ್ಟ ಕಳ್ಳತನ ಮಾಡುತ್ತಿದ್ದ ಈತ ದೊಡ್ಡ ಮೊತ್ತವನ್ನು ಒಂದೇ ಬಾರಿ ಕಳ್ಳತನ ಮಾಡಬೇಕು ಎಂದು ಪ್ಲಾನ್ ಮಾಡಿ ಎರಡು ದಿನ ಕಾರಿನಲ್ಲಿ ನೆಲ್ಲೂರಿನಲ್ಲಿ ಸಂಚಾರ ಮಾಡಿದ್ದನು. ಒಂದು ಏಟಿಎಂ ಕಳ್ಳತನ ಮಾಡಲು ಪ್ಲಾನ್ ಮಾಡುತ್ತಿದ್ದನು.

ಇದೇ ವೇಳೆ, ಫಾಸ್ಟ್​ಫುಡ್ ಸೆಂಟರ್​ನಲ್ಲಿ ಗ್ಯಾಸ್ ಸಿಲಿಂಡರ್ ಮತ್ತು ಮೂರು ಸಾವಿರ ರೂಪಾಯಿ ಕಳ್ಳತನ ಮಾಡಿದ್ದನು. ಅದೇ ದಿನ ರಾತ್ರಿ ಏಟಿಎಂ ಕಳ್ಳತನ ಮಾಡಲು ಗ್ಯಾಸ್ ಸಿಲಿಂಡರ್, ಕಟ್ಟರ್ ಬಳಸಿ, ವಿಫಲನಾಗಿದ್ದನು.

ನಂತರ ಸುತ್ತಿಗೆಯ ಮೂಲಕ ಏಟಿಎಂ ಒಡೆದು 5,500 ರೂಪಾಯಿ ದೋಚಿದ್ದನು. ಈ ಪ್ರಕರಣ ದಾಖಲಿಸಿಕೊಂಡ ನೆಲ್ಲೂರು ಗ್ರಾಮಾಂತರ ಪೊಲೀಸರು ತನಿಖೆ ನಡೆಸಿ, ಸೂರ್ಯತೇಜನನ್ನು ಬಂಧಿಸಿದ್ದಾರೆ.

Last Updated : Apr 7, 2021, 9:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.