ETV Bharat / bharat

ಹಿಂಡನ್​ಬರ್ಗ್​ ವರದಿ "ಉದ್ದೇಶಪೂರ್ವಕ": ಕಾಂಗ್ರೆಸ್​ ಮಿತ್ರಪಕ್ಷ ನಾಯಕನ ಅಚ್ಚರಿಯ ಹೇಳಿಕೆ

author img

By

Published : Apr 8, 2023, 9:30 AM IST

ಅದಾನಿ ಗ್ರೂಪ್ ವಿರುದ್ಧ ಕೇಳಿಬಂದ ಆರೋಪಗಳ ತನಿಖೆಗೆ ಜೆಪಿಸಿ ಬೇಕಿಲ್ಲ. ಇದು ಉದ್ದೇಶಪೂರ್ವಕವೆಂದು ಕಾಣಿಸುತ್ತಿದೆ ಎಂದು ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್ ಹೇಳಿದ್ದಾರೆ.

ಕಾಂಗ್ರೆಸ್​ ಮಿತ್ರಪಕ್ಷ ನಾಯಕನ ಅಚ್ಚರಿಯ ಹೇಳಿಕೆ
ಕಾಂಗ್ರೆಸ್​ ಮಿತ್ರಪಕ್ಷ ನಾಯಕನ ಅಚ್ಚರಿಯ ಹೇಳಿಕೆ

ನವದೆಹಲಿ: ಅದಾನಿ ಗ್ರೂಪ್​ ಮೇಲೆ ಹಗರಣದ ಆರೋಪ ಹೊರಿಸಿರುವ ಅಮೆರಿಕದ ಹಿಂಡನ್​​ಬರ್ಗ್​ ವರದಿ "ಉದ್ದೇಶಪೂರ್ವಕ" ಎಂದೆನಿಸುತ್ತಿದೆ. ಹೀಗಾಗಿ ಜಂಟಿ ಸಂಸದೀಯ ಸಮಿತಿ ರಚನೆ ಮಾಡುವ ಅಗತ್ಯವಿಲ್ಲ ಎಂದು ಎನ್​ಸಿಪಿ ಮುಖ್ಯಸ್ಥ, ವಿರೋಧ ಪಕ್ಷಗಳ ಪ್ರಮುಖ ನಾಯಕ ಶರದ್​ ಪವಾರ್ ಹೇಳಿದ್ದಾರೆ.

ಅದಾನಿ ಮತ್ತು ಪ್ರಧಾನಿ ಮೋದಿ ಅವರ ಸ್ನೇಹ ಪ್ರಶ್ನಿಸಿ, ಗ್ರೂಪ್​ ಮೇಲೆ ಕೇಳಿ ಬಂದ ಆರೋಪಗಳ ಬಗ್ಗೆ ತನಿಖೆ ನಡೆಸಲು ತೀವ್ರ ಹೋರಾಟ ನಡೆಸುತ್ತಿರುವ ಕಾಂಗ್ರೆಸ್​ಗೆ ಅದರ ಮಿತ್ರಪಕ್ಷದ ನಾಯಕನ ಈ ಹೇಳಿಕೆ ಅಚ್ಚರಿ ತಂದಿದೆ. ಜೆಪಿಸಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್​ ಜೊತೆಗೂಡಿ ಹಲವು ವಿಪಕ್ಷಗಳು ಹೋರಾಟ ನಡೆಸುತ್ತಿದ್ದು, ಸಂಸತ್​ ಕಲಾಪ ಸತತ ವೈಫಲ್ಯ ಕಾಣುತ್ತಿದೆ.

ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಶರದ್​ ಪವಾರ್​ ಅವರು, ಅದಾನಿ ಗ್ರೂಪ್​ ಮೇಲಿನ ಆರೋಪಗಳನ್ನು ತನಿಖೆ ಮಾಡಲು ಸುಪ್ರೀಂಕೋರ್ಟ್ ಸಮಿತಿ ನೇಮಿಸಿದೆ. ಹೀಗಾಗಿ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆಯ ಅಗತ್ಯವಿಲ್ಲ. ಹಿಂಡೆನ್‌ಬರ್ಗ್ ಸಂಶೋಧನಾ ವರದಿಯಲ್ಲಿ ಅದಾನಿ ಗ್ರೂಪ್​ ಅನ್ನು ಉದ್ದೇಶಪೂರ್ವಕವಾಗಿ ಗುರಿಪಡಿಸಲಾಗಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದಿದ್ದಾರೆ.

ವಿದೇಶಿ ವರದಿಯಿಂದ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈ ಹಿಂದೆಯೂ ಇಂತಹ ಹೇಳಿಕೆಗಳನ್ನು ನೀಡಿದ್ದು ಕೋಲಾಹಲ ಸೃಷ್ಟಿಸಿತ್ತು. ಪ್ರತಿ ಬಾರಿಯೂ ಯಾವುದೋ ವರದಿ, ವ್ಯಕ್ತಿಯ ಹೇಳಿಕೆ ಸಮಸ್ಯೆಯನ್ನುಂಟು ಮಾಡುತ್ತದೆ. ಅದಕ್ಕೂ ಮೊದಲು ಆ ಹೇಳಿಕೆಯ ಹಿಂದಿನ ಉದ್ದೇಶ ಮತ್ತು ಆ ವ್ಯಕ್ತಿ ಯಾರು ಎಂಬುದನ್ನು ಅರಿಯಬೇಕು. ವರದಿಯ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕು. ಅದು ದೇಶದ ಆರ್ಥಿಕತೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದು ಮುಖ್ಯ ಎಂದಿದ್ದಾರೆ.

ಈಗ ಕೇಳಿ ಬಂದಿರುವ ಅದಾನಿ ಗ್ರೂಪ್​ ಮೇಲಿನ ವರದಿಯೂ ಇದೇ ರೀತಿಯಲ್ಲಿದೆ. ಯಾವುದೋ ಕಾರಣಕ್ಕಾಗಿ ಟಾರ್ಗೆಟ್​ ಮಾಡಲಾಗಿದೆ. ವರದಿಯ ಮೇಲಿನ ಸತ್ಯಾಸತ್ಯತೆ ಬಗ್ಗೆ ತಿಳಿದುಕೊಳ್ಳಬೇಕು ಎಂದು ಮಾಧ್ಯಮಕ್ಕೆ ಸಂದರ್ಶನದ ವೇಳೆ ಹೇಳಿದ್ದಾರೆ.

ಜೆಪಿಸಿ ತನಿಖೆ ಬೇಕಿಲ್ಲ: ಅದಾನಿ ಗ್ರೂಪ್​ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚನೆಗೆ ಕೇಳಿ ಬಂದಿರುವ ಒತ್ತಾಯ ಅಗತ್ಯವಿಲ್ಲ. ಈಗಾಗಲೇ ಸುಪ್ರೀಂಕೋರ್ಟ್​ ತನಿಖೆಗಾಗಿ ಸಮಿತಿ ಮಾಡಿದೆ. ಅದರಲ್ಲಿ ಸುಪ್ರೀಂಕೋರ್ಟ್​ ನಿವೃತ್ತ ನ್ಯಾಯಾಧೀಶರು, ತಜ್ಞರು, ಆಡಳಿತಗಾರರು ಮತ್ತು ಅರ್ಥಶಾಸ್ತ್ರಜ್ಞರನ್ನು ಹೊಂದಿದೆ. ಅದಕ್ಕೆ ಕಾಲಮಿತಿ ನೀಡಲಾಗಿದ್ದು, ವರದಿ ಸಿದ್ಧ ಮಾಡುತ್ತಿದೆ. ಈ ಮಧ್ಯೆ ಇನ್ನೊಂದು ಸಮಿತಿಯ ತನಿಖೆ ಅಗತ್ಯವಿಲ್ಲ ಎಂದಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಅದಕ್ಕೆ ಬಹುಮತವಿದೆ. ತನಿಖಾ ಸಮಿತಿಯಲ್ಲಿ ಬಹುಮತವಿರುವ ಪಕ್ಷದ ಸದಸ್ಯರೇ ಹೆಚ್ಚಿರುತ್ತಾರೆ. ಸತ್ಯ ನಿಖರವಾಗಿ ಹೊರಬರುವ ಸಾಧ್ಯತೆ ಕಮ್ಮಿ. ಸುಪ್ರೀಂಕೋರ್ಟ್ ಈ ವಿಷಯದ ಬಗ್ಗೆ ತನಿಖೆ ನಡೆಸಿದರೆ, ಅಲ್ಲಿ ಯಾವುದೇ ಪ್ರಭಾವ ಬೀರಲು ಸಾಧ್ಯವಿಲ್ಲ. ಸತ್ಯ ಹೊರಬರಲು ಉತ್ತಮ ಅವಕಾಶವಿದೆ. ಸುಪ್ರೀಕೋರ್ಟ್​ ಈ ಬಗ್ಗೆ ಆದೇಶ ನೀಡಿದಲ್ಲಿ ಜೆಪಿಸಿ ತನಿಖೆಯ ಅಗತ್ಯವಿಲ್ಲ" ಎಂದು ಶರದ್​ ಪವಾರ್​ ಹೇಳಿದ್ದಾರೆ.

ಹಿಂಡನ್‌ಬರ್ಗ್- ಅದಾನಿ ವಿವಾದದ ತನಿಖೆಗಾಗಿ ಜೆಪಿಸಿ ರಚನೆ ಮಾಡಬೇಕು ಎಂದು ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ಸೇರಿದಂತೆ ವಿಪಕ್ಷಗಳು ಪಟ್ಟು ಹಿಡಿದಿವೆ. ಪ್ರತಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ಸಂಸತ್ತಿನಲ್ಲಿ ನಡೆಯಬೇಕಿದ್ದ ಬಜೆಟ್​ ಅಧೀವೇಶನ ಸಂಪೂರ್ಣವಾಗಿ ಹಾಳಾಗಿದೆ. ದಿನವೂ ಪ್ರತಿಭಟನೆಗಳು ನಡೆಯುತ್ತಿದ್ದು, ಕಲಾಪ ಮುಂದೂಡುತ್ತಲೇ ಬರಲಾಗುತ್ತಿದೆ.

ಓದಿ: ಸರ್ಕಾರದ ಕ್ರಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಇಮ್ರಾನ್​ ಖಾನ್​

ನವದೆಹಲಿ: ಅದಾನಿ ಗ್ರೂಪ್​ ಮೇಲೆ ಹಗರಣದ ಆರೋಪ ಹೊರಿಸಿರುವ ಅಮೆರಿಕದ ಹಿಂಡನ್​​ಬರ್ಗ್​ ವರದಿ "ಉದ್ದೇಶಪೂರ್ವಕ" ಎಂದೆನಿಸುತ್ತಿದೆ. ಹೀಗಾಗಿ ಜಂಟಿ ಸಂಸದೀಯ ಸಮಿತಿ ರಚನೆ ಮಾಡುವ ಅಗತ್ಯವಿಲ್ಲ ಎಂದು ಎನ್​ಸಿಪಿ ಮುಖ್ಯಸ್ಥ, ವಿರೋಧ ಪಕ್ಷಗಳ ಪ್ರಮುಖ ನಾಯಕ ಶರದ್​ ಪವಾರ್ ಹೇಳಿದ್ದಾರೆ.

ಅದಾನಿ ಮತ್ತು ಪ್ರಧಾನಿ ಮೋದಿ ಅವರ ಸ್ನೇಹ ಪ್ರಶ್ನಿಸಿ, ಗ್ರೂಪ್​ ಮೇಲೆ ಕೇಳಿ ಬಂದ ಆರೋಪಗಳ ಬಗ್ಗೆ ತನಿಖೆ ನಡೆಸಲು ತೀವ್ರ ಹೋರಾಟ ನಡೆಸುತ್ತಿರುವ ಕಾಂಗ್ರೆಸ್​ಗೆ ಅದರ ಮಿತ್ರಪಕ್ಷದ ನಾಯಕನ ಈ ಹೇಳಿಕೆ ಅಚ್ಚರಿ ತಂದಿದೆ. ಜೆಪಿಸಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್​ ಜೊತೆಗೂಡಿ ಹಲವು ವಿಪಕ್ಷಗಳು ಹೋರಾಟ ನಡೆಸುತ್ತಿದ್ದು, ಸಂಸತ್​ ಕಲಾಪ ಸತತ ವೈಫಲ್ಯ ಕಾಣುತ್ತಿದೆ.

ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಶರದ್​ ಪವಾರ್​ ಅವರು, ಅದಾನಿ ಗ್ರೂಪ್​ ಮೇಲಿನ ಆರೋಪಗಳನ್ನು ತನಿಖೆ ಮಾಡಲು ಸುಪ್ರೀಂಕೋರ್ಟ್ ಸಮಿತಿ ನೇಮಿಸಿದೆ. ಹೀಗಾಗಿ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆಯ ಅಗತ್ಯವಿಲ್ಲ. ಹಿಂಡೆನ್‌ಬರ್ಗ್ ಸಂಶೋಧನಾ ವರದಿಯಲ್ಲಿ ಅದಾನಿ ಗ್ರೂಪ್​ ಅನ್ನು ಉದ್ದೇಶಪೂರ್ವಕವಾಗಿ ಗುರಿಪಡಿಸಲಾಗಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದಿದ್ದಾರೆ.

ವಿದೇಶಿ ವರದಿಯಿಂದ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈ ಹಿಂದೆಯೂ ಇಂತಹ ಹೇಳಿಕೆಗಳನ್ನು ನೀಡಿದ್ದು ಕೋಲಾಹಲ ಸೃಷ್ಟಿಸಿತ್ತು. ಪ್ರತಿ ಬಾರಿಯೂ ಯಾವುದೋ ವರದಿ, ವ್ಯಕ್ತಿಯ ಹೇಳಿಕೆ ಸಮಸ್ಯೆಯನ್ನುಂಟು ಮಾಡುತ್ತದೆ. ಅದಕ್ಕೂ ಮೊದಲು ಆ ಹೇಳಿಕೆಯ ಹಿಂದಿನ ಉದ್ದೇಶ ಮತ್ತು ಆ ವ್ಯಕ್ತಿ ಯಾರು ಎಂಬುದನ್ನು ಅರಿಯಬೇಕು. ವರದಿಯ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕು. ಅದು ದೇಶದ ಆರ್ಥಿಕತೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದು ಮುಖ್ಯ ಎಂದಿದ್ದಾರೆ.

ಈಗ ಕೇಳಿ ಬಂದಿರುವ ಅದಾನಿ ಗ್ರೂಪ್​ ಮೇಲಿನ ವರದಿಯೂ ಇದೇ ರೀತಿಯಲ್ಲಿದೆ. ಯಾವುದೋ ಕಾರಣಕ್ಕಾಗಿ ಟಾರ್ಗೆಟ್​ ಮಾಡಲಾಗಿದೆ. ವರದಿಯ ಮೇಲಿನ ಸತ್ಯಾಸತ್ಯತೆ ಬಗ್ಗೆ ತಿಳಿದುಕೊಳ್ಳಬೇಕು ಎಂದು ಮಾಧ್ಯಮಕ್ಕೆ ಸಂದರ್ಶನದ ವೇಳೆ ಹೇಳಿದ್ದಾರೆ.

ಜೆಪಿಸಿ ತನಿಖೆ ಬೇಕಿಲ್ಲ: ಅದಾನಿ ಗ್ರೂಪ್​ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚನೆಗೆ ಕೇಳಿ ಬಂದಿರುವ ಒತ್ತಾಯ ಅಗತ್ಯವಿಲ್ಲ. ಈಗಾಗಲೇ ಸುಪ್ರೀಂಕೋರ್ಟ್​ ತನಿಖೆಗಾಗಿ ಸಮಿತಿ ಮಾಡಿದೆ. ಅದರಲ್ಲಿ ಸುಪ್ರೀಂಕೋರ್ಟ್​ ನಿವೃತ್ತ ನ್ಯಾಯಾಧೀಶರು, ತಜ್ಞರು, ಆಡಳಿತಗಾರರು ಮತ್ತು ಅರ್ಥಶಾಸ್ತ್ರಜ್ಞರನ್ನು ಹೊಂದಿದೆ. ಅದಕ್ಕೆ ಕಾಲಮಿತಿ ನೀಡಲಾಗಿದ್ದು, ವರದಿ ಸಿದ್ಧ ಮಾಡುತ್ತಿದೆ. ಈ ಮಧ್ಯೆ ಇನ್ನೊಂದು ಸಮಿತಿಯ ತನಿಖೆ ಅಗತ್ಯವಿಲ್ಲ ಎಂದಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಅದಕ್ಕೆ ಬಹುಮತವಿದೆ. ತನಿಖಾ ಸಮಿತಿಯಲ್ಲಿ ಬಹುಮತವಿರುವ ಪಕ್ಷದ ಸದಸ್ಯರೇ ಹೆಚ್ಚಿರುತ್ತಾರೆ. ಸತ್ಯ ನಿಖರವಾಗಿ ಹೊರಬರುವ ಸಾಧ್ಯತೆ ಕಮ್ಮಿ. ಸುಪ್ರೀಂಕೋರ್ಟ್ ಈ ವಿಷಯದ ಬಗ್ಗೆ ತನಿಖೆ ನಡೆಸಿದರೆ, ಅಲ್ಲಿ ಯಾವುದೇ ಪ್ರಭಾವ ಬೀರಲು ಸಾಧ್ಯವಿಲ್ಲ. ಸತ್ಯ ಹೊರಬರಲು ಉತ್ತಮ ಅವಕಾಶವಿದೆ. ಸುಪ್ರೀಕೋರ್ಟ್​ ಈ ಬಗ್ಗೆ ಆದೇಶ ನೀಡಿದಲ್ಲಿ ಜೆಪಿಸಿ ತನಿಖೆಯ ಅಗತ್ಯವಿಲ್ಲ" ಎಂದು ಶರದ್​ ಪವಾರ್​ ಹೇಳಿದ್ದಾರೆ.

ಹಿಂಡನ್‌ಬರ್ಗ್- ಅದಾನಿ ವಿವಾದದ ತನಿಖೆಗಾಗಿ ಜೆಪಿಸಿ ರಚನೆ ಮಾಡಬೇಕು ಎಂದು ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ಸೇರಿದಂತೆ ವಿಪಕ್ಷಗಳು ಪಟ್ಟು ಹಿಡಿದಿವೆ. ಪ್ರತಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ಸಂಸತ್ತಿನಲ್ಲಿ ನಡೆಯಬೇಕಿದ್ದ ಬಜೆಟ್​ ಅಧೀವೇಶನ ಸಂಪೂರ್ಣವಾಗಿ ಹಾಳಾಗಿದೆ. ದಿನವೂ ಪ್ರತಿಭಟನೆಗಳು ನಡೆಯುತ್ತಿದ್ದು, ಕಲಾಪ ಮುಂದೂಡುತ್ತಲೇ ಬರಲಾಗುತ್ತಿದೆ.

ಓದಿ: ಸರ್ಕಾರದ ಕ್ರಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಇಮ್ರಾನ್​ ಖಾನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.