ETV Bharat / bharat

ಅಮಾನವೀಯ ಘಟನೆ: 'ನರಿಕ್ಕುರವ' ಸಮುದಾಯದವರೆಂಬ ಕಾರಣಕ್ಕಾಗಿ ಬಸ್​​​ನಿಂದ ಕೆಳಗಿಸಿದ್ರು.. ಮುಂದಾಗಿದ್ದೇನು?

author img

By

Published : Dec 10, 2021, 5:30 PM IST

ನರಿಕ್ಕುರವ ಸಮುದಾಯದವರು ಎಂಬ ಕಾರಣಕ್ಕಾಗಿ ತಮಿಳುನಾಡಿನಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ನಿಂದ ಮಗು ಸೇರಿದಂತೆ ಮೂವರನ್ನ ಬಸ್​​ನಿಂದ ಕೆಳಗಿಳಿಸಿರುವ ಅಮಾನವೀಯ ಘಟನೆ ನಡೆದಿದೆ.

Narikuravas were dropped off the bus
Narikuravas were dropped off the bus

ಕನ್ಯಾಕುಮಾರಿ(ತಮಿಳುನಾಡು): ಶೋಷಿತ ವರ್ಗದ ಮೇಲೆ ಈ ಹಿಂದಿನಿಂದಲೂ ಅನ್ಯಾಯ, ಸಾಮಾಜಿಕ ಬಹಿಷ್ಕಾರದಂತಹ ಅಮಾನವೀಯ ಘಟನೆ ನಡೆಯುತ್ತಲೇ ಇವೆ. ಇದೇ ವಿಷಯವನ್ನಾಧರಿಸಿ ಕಳೆದ ಕೆಲ ತಿಂಗಳ ಹಿಂದೆ 'ಜೈಭೀಮ್​' ಎಂಬ ಸಿನಿಮಾ ತೆರೆ ಕಂಡಿತ್ತು. ಇದರ ಬೆನ್ನಲ್ಲೇ ಕೀಳು ಸಮುದಾಯದವರು ಎಂಬ ಕಾರಣಕ್ಕಾಗಿ ಬಸ್​​​ ಡ್ರೈವರ್​​, ಹಾಗೂ ನಿರ್ವಾಹಕ ಅವರನ್ನ ಕೆಳಗಿಳಿಸಿರುವ ಅಮಾನವೀಯ ಘಟನೆ ನಡೆದಿದೆ.

'ನರಿಕ್ಕುರವ' ಸಮುದಾಯದವರೆಂಬ ಕಾರಣಕ್ಕಾಗಿ ಬಸ್​​​ನಿಂದ ಕೆಳಗಿಸಿದ್ರು!

ತಮಿಳುನಾಡಿನ ನಾಗರಕೋಯಿಲ್​​ ಎಂಬಲ್ಲಿ ಈ ಘಟನೆ ನಡೆದಿದೆ. ತಿರುನಲ್ವೇಲಿ ಮಾರ್ಗದ ಬಸ್​​ ಮೂಲಕ ವಲ್ಲಿಯೂರಿಗೆ ತೆರಳುತ್ತಿದ್ದ 'ನರಿಕ್ಕುರವ' ಸಮುದಾಯದ ಮೂವರನ್ನ ತಮಿಳುನಾಡಿನ ರಾಜ್ಯ ಸರ್ಕಾರಿ ಬಸ್​​ನಿಂದ ಕೆಳಗಿಳಿಸಲಾಗಿದೆ.

ಬಸ್​​ನಲ್ಲಿ ಓರ್ವ ವ್ಯಕ್ತಿ, ಮಹಿಳೆ ಹಾಗೂ ಮಗು ಪ್ರಯಾಣಿಸುತ್ತಿದ್ದರು. ಅವರು ನರಕ್ಕುರವ ಸಮುದಾಯದವರು ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ಬಸ್​​ ನಿಲ್ಲಿಸಿ, ಕೆಳಗಿಳಿಸಲಾಗಿದ್ದು, ಅವರ ಸಾಮಗ್ರಿಗಳನ್ನ ಬಸ್​​​ನಿಂದ ಹೊರಗೆ ಎಸೆಯಲಾಗಿದೆ. ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಇದರ ವಿಡಿಯೋ ಸೆರೆಹಿಡಿದಿದ್ದು, ಈ ವೇಳೆ ಮಗು ಅಳುತ್ತಿರುವ ದೃಶ್ಯ ವಿಡಿಯೋದಲ್ಲಿ ಕಾಣಿಸಿಕೊಂಡಿದೆ.

ಇದನ್ನೂ ಓದಿರಿ: ನಕಲಿ ಅಂಕಪಟ್ಟಿ ನೀಡಿದ ಪ್ರಕರಣ : ಶಾಸಕ ಸ್ಥಾನ ಕಳೆದುಕೊಂಡು ಜೈಲು ಶಿಕ್ಷೆಗೊಳಗಾದ BJP MLA

ಬಸ್​​ ನಿರ್ವಾಹಕನ ಕೃತ್ಯಕ್ಕೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗಿದ್ದು, ಈ ವಿಡಿಯೋ ವೈರಲ್​​ ಅಗಿದೆ. ಇದರಿಂದಾಗಿ ತಕ್ಷಣವೇ ಬಸ್​​ ಸಿಬ್ಬಂದಿಯನ್ನ ಅಮಾನತುಗೊಳಿಸಲಾಗಿದೆ. ಇನ್ನು ಬಸ್​ ನಿರ್ವಾಹಕ ಹೇಳಿರುವ ಪ್ರಕಾರ ಮಹಿಳೆ ಹಾಗೂ ವ್ಯಕ್ತಿ ಬಸ್​​ ಹತ್ತಿ, ಜಗಳ ಮಾಡ್ತಿದ್ದ ಕಾರಣ ಇತರ ಪ್ರಯಾಣಿಕರಿಗೆ ತೊಂದರೆಯಾಗಿತ್ತು, ಹೀಗಾಗಿ ಅವರನ್ನ ಕೆಳಗಿಳಿಸಲಾಗಿದೆ ಎಂಬ ಸ್ಪಷ್ಟನೆ ಕೊಟ್ಟಿದ್ದಾರೆ. ಆದರೆ, ವಿಡಿಯೋ ವೈರಲ್​​​ ಆಗುತ್ತಿದ್ದಂತೆ ಬಸ್​ ಚಾಲಕ ನೆಲ್ಸನ್​​ ಹಾಗೂ ಕಂಡಕ್ಟರ್​​ ಜಯದಾಸ್​​​​ ವಜಾಗೊಂಡಿದ್ದಾರೆ.

ಕನ್ಯಾಕುಮಾರಿ(ತಮಿಳುನಾಡು): ಶೋಷಿತ ವರ್ಗದ ಮೇಲೆ ಈ ಹಿಂದಿನಿಂದಲೂ ಅನ್ಯಾಯ, ಸಾಮಾಜಿಕ ಬಹಿಷ್ಕಾರದಂತಹ ಅಮಾನವೀಯ ಘಟನೆ ನಡೆಯುತ್ತಲೇ ಇವೆ. ಇದೇ ವಿಷಯವನ್ನಾಧರಿಸಿ ಕಳೆದ ಕೆಲ ತಿಂಗಳ ಹಿಂದೆ 'ಜೈಭೀಮ್​' ಎಂಬ ಸಿನಿಮಾ ತೆರೆ ಕಂಡಿತ್ತು. ಇದರ ಬೆನ್ನಲ್ಲೇ ಕೀಳು ಸಮುದಾಯದವರು ಎಂಬ ಕಾರಣಕ್ಕಾಗಿ ಬಸ್​​​ ಡ್ರೈವರ್​​, ಹಾಗೂ ನಿರ್ವಾಹಕ ಅವರನ್ನ ಕೆಳಗಿಳಿಸಿರುವ ಅಮಾನವೀಯ ಘಟನೆ ನಡೆದಿದೆ.

'ನರಿಕ್ಕುರವ' ಸಮುದಾಯದವರೆಂಬ ಕಾರಣಕ್ಕಾಗಿ ಬಸ್​​​ನಿಂದ ಕೆಳಗಿಸಿದ್ರು!

ತಮಿಳುನಾಡಿನ ನಾಗರಕೋಯಿಲ್​​ ಎಂಬಲ್ಲಿ ಈ ಘಟನೆ ನಡೆದಿದೆ. ತಿರುನಲ್ವೇಲಿ ಮಾರ್ಗದ ಬಸ್​​ ಮೂಲಕ ವಲ್ಲಿಯೂರಿಗೆ ತೆರಳುತ್ತಿದ್ದ 'ನರಿಕ್ಕುರವ' ಸಮುದಾಯದ ಮೂವರನ್ನ ತಮಿಳುನಾಡಿನ ರಾಜ್ಯ ಸರ್ಕಾರಿ ಬಸ್​​ನಿಂದ ಕೆಳಗಿಳಿಸಲಾಗಿದೆ.

ಬಸ್​​ನಲ್ಲಿ ಓರ್ವ ವ್ಯಕ್ತಿ, ಮಹಿಳೆ ಹಾಗೂ ಮಗು ಪ್ರಯಾಣಿಸುತ್ತಿದ್ದರು. ಅವರು ನರಕ್ಕುರವ ಸಮುದಾಯದವರು ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ಬಸ್​​ ನಿಲ್ಲಿಸಿ, ಕೆಳಗಿಳಿಸಲಾಗಿದ್ದು, ಅವರ ಸಾಮಗ್ರಿಗಳನ್ನ ಬಸ್​​​ನಿಂದ ಹೊರಗೆ ಎಸೆಯಲಾಗಿದೆ. ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಇದರ ವಿಡಿಯೋ ಸೆರೆಹಿಡಿದಿದ್ದು, ಈ ವೇಳೆ ಮಗು ಅಳುತ್ತಿರುವ ದೃಶ್ಯ ವಿಡಿಯೋದಲ್ಲಿ ಕಾಣಿಸಿಕೊಂಡಿದೆ.

ಇದನ್ನೂ ಓದಿರಿ: ನಕಲಿ ಅಂಕಪಟ್ಟಿ ನೀಡಿದ ಪ್ರಕರಣ : ಶಾಸಕ ಸ್ಥಾನ ಕಳೆದುಕೊಂಡು ಜೈಲು ಶಿಕ್ಷೆಗೊಳಗಾದ BJP MLA

ಬಸ್​​ ನಿರ್ವಾಹಕನ ಕೃತ್ಯಕ್ಕೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗಿದ್ದು, ಈ ವಿಡಿಯೋ ವೈರಲ್​​ ಅಗಿದೆ. ಇದರಿಂದಾಗಿ ತಕ್ಷಣವೇ ಬಸ್​​ ಸಿಬ್ಬಂದಿಯನ್ನ ಅಮಾನತುಗೊಳಿಸಲಾಗಿದೆ. ಇನ್ನು ಬಸ್​ ನಿರ್ವಾಹಕ ಹೇಳಿರುವ ಪ್ರಕಾರ ಮಹಿಳೆ ಹಾಗೂ ವ್ಯಕ್ತಿ ಬಸ್​​ ಹತ್ತಿ, ಜಗಳ ಮಾಡ್ತಿದ್ದ ಕಾರಣ ಇತರ ಪ್ರಯಾಣಿಕರಿಗೆ ತೊಂದರೆಯಾಗಿತ್ತು, ಹೀಗಾಗಿ ಅವರನ್ನ ಕೆಳಗಿಳಿಸಲಾಗಿದೆ ಎಂಬ ಸ್ಪಷ್ಟನೆ ಕೊಟ್ಟಿದ್ದಾರೆ. ಆದರೆ, ವಿಡಿಯೋ ವೈರಲ್​​​ ಆಗುತ್ತಿದ್ದಂತೆ ಬಸ್​ ಚಾಲಕ ನೆಲ್ಸನ್​​ ಹಾಗೂ ಕಂಡಕ್ಟರ್​​ ಜಯದಾಸ್​​​​ ವಜಾಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.