ETV Bharat / bharat

ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಬುಡಕಟ್ಟು ಮಹಿಳೆ! - Nanchiyamma first tribal woman to win national award for playback singing

ಈ ಪ್ರಶಸ್ತಿಯನ್ನು ಸಚಿ ಸರ್‌ಗೆ ಅರ್ಪಿಸುತ್ತೇನೆ ಎಂದು ನಂಚಿಯಮ್ಮ ಹೇಳಿದ್ದಾರೆ. ನಿರ್ದೇಶಕ ಕೆ.ಆರ್. ಸಚ್ಚಿದಾನಂದನ್ ಸಚಿ ಎಂದೇ ಖ್ಯಾತರು. ನಾನು ಇಲ್ಲಿ ಗುಡ್ಡದ ಮೇಲೆ ಆಡು, ಹಸುಗಳನ್ನು ಮೇಯಿಸುತ್ತಿದ್ದೆ. ನನ್ನ ಬಗ್ಗೆ ಅಥವಾ ಅಟ್ಟಪ್ಪಾಡಿಯ ಹಾಡುಗಳ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಇದಕ್ಕೆಲ್ಲಾ ಅವರೇ ಕಾರಣ ಎಂದಿದ್ದಾರೆ.

ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಬುಡಕಟ್ಟು ಮಹಿಳೆ!
ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಬುಡಕಟ್ಟು ಮಹಿಳೆ!
author img

By

Published : Jul 22, 2022, 10:37 PM IST

ಪಾಲಕ್ಕಾಡ್ (ಕೇರಳ): ಕೇರಳದ ಬುಡಕಟ್ಟು ಗಾಯಕಿ ನಾಂಚಿಯಮ್ಮ ಅವರು ಇತ್ತೀಚೆಗೆ ಪ್ರಕಟಿಸಲಾದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮಹಿಳಾ ಗಾಯಕಿ ಪ್ರಶಸ್ತಿಯನ್ನು ಗೆದ್ದು ಅಪರೂಪದ ಸಾಧನೆ ಮಾಡಿದ್ದಾರೆ. 'ಅಯ್ಯಪ್ಪನುಂ ಕೊಶಿಯುಂ' ಚಿತ್ರದಲ್ಲಿ ಇವರು ಹಾಡು ಹಾಡಿದ್ದು, ಇದಕ್ಕೆ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ಗೆದ್ದ ಮೊದಲ ಬುಡಕಟ್ಟು ಮಹಿಳೆಯಾಗಿದ್ದಾರೆ.

ಈಟಿವಿ ಭಾರತದ ಜೊತೆ ಮಾತನಾಡಿದ ನಂಚಿಯಮ್ಮ, ನಾನು ಈ ಪ್ರಶಸ್ತಿಯನ್ನು ಸಚಿ ಸರ್‌ಗೆ ಅರ್ಪಿಸುತ್ತೇನೆ. ಗುಡ್ಡದ ಮೇಲೆ ಆಡು ಮತ್ತು ಹಸುಗಳನ್ನು ಮೇಯುತ್ತಿದ್ದೆ. ನನ್ನ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಆದರೆ ಸಚಿ ಸರ್​ ನನಗೆ ಅವಕಾಶ ನೀಡಿ ಈ ಮಟ್ಟಕ್ಕೆ ತಂದಿದ್ದಾರೆ ಎಂದು ಕೆ ಆರ್​ ಸಚ್ಚಿದಾನಂದ್​ ಅವರನ್ನು ಸ್ಮರಿಸಿಕೊಂಡರು.

ಎಲ್ಲರೂ ನನ್ನನ್ನು ಸಂತೋಷದಿಂದ ಸ್ವೀಕರಿಸಿ ಜಗತ್ತನ್ನು ನೋಡಲು ಸಹಾಯ ಮಾಡಿದರು. ಆದರೆ, ನನಗೆ ಜಗತ್ತು ತೋರಿಸಿ ಸಚಿ ಸರ್ ಇಹಲೋಕ ತ್ಯಜಿಸಿದರು. ನಾನು ಸಚಿ ಸರ್​ಗೆ ಈ ಪ್ರಶಸ್ತಿಯನ್ನು ಸಂತೋಷದಿಂದ ಅರ್ಪಿಸುತ್ತೇನೆ, ಅದನ್ನು ಬಿಟ್ಟು ನನ್ನ ಕೈಯಲ್ಲಿ ಬೇರೆ ಏನೂ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ: ಕನ್ನಡಕ್ಕೆ ಮೂರು ನ್ಯಾಷನಲ್​ ಅವಾರ್ಡ್​​: ಡೊಳ್ಳು, ತಲೆದಂಡ, ನಾದದ ನವನೀತ ಚಿತ್ರಕ್ಕೆ ಪ್ರಶಸ್ತಿಯ ಗರಿ!

ಪಾಲಕ್ಕಾಡ್ (ಕೇರಳ): ಕೇರಳದ ಬುಡಕಟ್ಟು ಗಾಯಕಿ ನಾಂಚಿಯಮ್ಮ ಅವರು ಇತ್ತೀಚೆಗೆ ಪ್ರಕಟಿಸಲಾದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮಹಿಳಾ ಗಾಯಕಿ ಪ್ರಶಸ್ತಿಯನ್ನು ಗೆದ್ದು ಅಪರೂಪದ ಸಾಧನೆ ಮಾಡಿದ್ದಾರೆ. 'ಅಯ್ಯಪ್ಪನುಂ ಕೊಶಿಯುಂ' ಚಿತ್ರದಲ್ಲಿ ಇವರು ಹಾಡು ಹಾಡಿದ್ದು, ಇದಕ್ಕೆ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ಗೆದ್ದ ಮೊದಲ ಬುಡಕಟ್ಟು ಮಹಿಳೆಯಾಗಿದ್ದಾರೆ.

ಈಟಿವಿ ಭಾರತದ ಜೊತೆ ಮಾತನಾಡಿದ ನಂಚಿಯಮ್ಮ, ನಾನು ಈ ಪ್ರಶಸ್ತಿಯನ್ನು ಸಚಿ ಸರ್‌ಗೆ ಅರ್ಪಿಸುತ್ತೇನೆ. ಗುಡ್ಡದ ಮೇಲೆ ಆಡು ಮತ್ತು ಹಸುಗಳನ್ನು ಮೇಯುತ್ತಿದ್ದೆ. ನನ್ನ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಆದರೆ ಸಚಿ ಸರ್​ ನನಗೆ ಅವಕಾಶ ನೀಡಿ ಈ ಮಟ್ಟಕ್ಕೆ ತಂದಿದ್ದಾರೆ ಎಂದು ಕೆ ಆರ್​ ಸಚ್ಚಿದಾನಂದ್​ ಅವರನ್ನು ಸ್ಮರಿಸಿಕೊಂಡರು.

ಎಲ್ಲರೂ ನನ್ನನ್ನು ಸಂತೋಷದಿಂದ ಸ್ವೀಕರಿಸಿ ಜಗತ್ತನ್ನು ನೋಡಲು ಸಹಾಯ ಮಾಡಿದರು. ಆದರೆ, ನನಗೆ ಜಗತ್ತು ತೋರಿಸಿ ಸಚಿ ಸರ್ ಇಹಲೋಕ ತ್ಯಜಿಸಿದರು. ನಾನು ಸಚಿ ಸರ್​ಗೆ ಈ ಪ್ರಶಸ್ತಿಯನ್ನು ಸಂತೋಷದಿಂದ ಅರ್ಪಿಸುತ್ತೇನೆ, ಅದನ್ನು ಬಿಟ್ಟು ನನ್ನ ಕೈಯಲ್ಲಿ ಬೇರೆ ಏನೂ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ: ಕನ್ನಡಕ್ಕೆ ಮೂರು ನ್ಯಾಷನಲ್​ ಅವಾರ್ಡ್​​: ಡೊಳ್ಳು, ತಲೆದಂಡ, ನಾದದ ನವನೀತ ಚಿತ್ರಕ್ಕೆ ಪ್ರಶಸ್ತಿಯ ಗರಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.