ETV Bharat / bharat

ಗಂಡನ ಗುರುತು ಅಳಿಸಿ ಹಾಕಲು 42 ದಿನದ ಕಂದನನ್ನೇ ಜೀವಂತವಾಗಿ ಸುಟ್ಟು ಹಾಕಿದ ತಾಯಿ!

author img

By

Published : Mar 19, 2021, 8:27 AM IST

ತನ್ನ ಗಂಡನ ಗುರುತು ಉಳಿಯಬಾರದೆಂದು 42 ದಿನದ ಮಗವನ್ನು ಹೆತ್ತ ತಾಯಿಯೇ ನಿರ್ದಾಕ್ಷಿಣ್ಯವಾಗಿ ಸುಟ್ಟು ಹಾಕಿರುವ ಘಟನೆ ಜಾರ್ಖಂಡ್​ನ ರಾಂಚಿಯಲ್ಲಿ ನಡೆದಿದೆ.

Mother burnt 42 day old girl  Mother burnt 42 day old girl in Bhelwatikar  Bhelwatikar village of Ranchi  42 ದಿನದ ಕಂದನನ್ನೇ ಜೀವಂತವಾಗಿ ಸುಟ್ಟು ಹಾಕಿದ ತಾಯಿ  ರಾಂಚಿಯಲ್ಲಿ 42 ದಿನದ ಕಂದನನ್ನೇ ಜೀವಂತವಾಗಿ ಸುಟ್ಟು ಹಾಕಿದ ತಾಯಿ  42 ದಿನದ ಕಂದನನ್ನೇ ಜೀವಂತವಾಗಿ ಸುಟ್ಟು ಹಾಕಿದ ತಾಯಿ ಸುದ್ದಿ  ರಾಂಚಿ ಸುದ್ದಿ  ರಾಂಚಿ ಅಪರಾಧ ಸುದ್ದಿ
42 ದಿನದ ಕಂದನನ್ನೇ ಜೀವಂತವಾಗಿ ಸುಟ್ಟು ಹಾಕಿದ ತಾಯಿ

ರಾಂಚಿ( ಜಾರ್ಖಂಡ್): ಒಂದೂವರೆ ತಿಂಗಳ ಮುಗ್ಧ ಹಸುಳೆಯನ್ನು ತನ್ನ ತಾಯಿಯೇ ಜೀವಂತವಾಗಿ ಸುಟ್ಟುಹಾಕಿರುವ ಘಟನೆ ಅನಗಡ ಪಟ್ಟಣದಲ್ಲಿ ನಡೆದಿದೆ.

ಏನಿದು ಪ್ರಕರಣ?

ರಾಂಚಿಯ ಭೆಲ್ವತಿಕರ್ ಬ್ಲಾಕ್‌ನ ನಿವಾಸಿ ಸುನೀತಾ ಮತ್ತು ಆಕೆಯ ಪತಿ ಭಾವನೇಶ್ವರ್ ಮಹತೋ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ರಾಂಚಿ ಯುವತಿಯೊಂದಿಗೆ ಪತಿಯ ಪ್ರೇಮ ಸಂಬಂಧವಿದೆ ಎಂದು ಸುನೀತಾ ಆರೋಪಿಸಿದ್ದಾರೆ.

ಗಂಡನ ಪ್ರೇಮ ಪುರಾಣದ ಬಗ್ಗೆ ಆಗಾಗ್ಗೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಕಳೆದ ಬುಧವಾರ ಸುನೀತಾ ತನ್ನ ಪತಿಯೊಂದಿಗೆ ಇದೇ ವಿಷಯದ ಬಗ್ಗೆ ಜಗಳವಾಡಿದ್ದಳು. ಅದೇ ಸಮಯದಲ್ಲಿ ಗಂಡನ ಗುರುತು ಅಳಿಸಿಹಾಕಬೇಕೆಂದು ಸುನೀತಾ ನಿರ್ಧರಿಸಿದ್ದಳು.

ಜಗಳವಾಡಿದ ಮರುದಿನ ಅಂದ್ರೆ ಗುರುವಾರ ಬೆಳಗ್ಗೆ ಸುಮಾರು 10 ಗಂಟೆಗೆ ಸುನೀತಾ ತನ್ನ ಮಲಗಿದ್ದ ಮಗಳನ್ನು ಮನೆಯಿಂದ 150 ಮೀಟರ್ ದೂರದಲ್ಲಿ ತೆಗೆದುಕೊಂಡು ಹೋಗಿದ್ದಾಳೆ. ಬಳಿಕ ಚೀಲದಲ್ಲಿ ಸುತ್ತಿ ಕೊಂಡವೊಂದರಲ್ಲಿ ಇರಿಸಿ ಅದರ ಮೇಲೆ ಕಟ್ಟಿಗೆ ಹಾಕಿ ಮಗುವನ್ನು ಜೀವಂತವಾಗಿಯೇ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾಳೆ.

ಬಳಿಕ ಮಗು ನಾಪತ್ತೆಯಾಗಿದೆ ಎಂದು ಹಂಗಾಮ ಎಬ್ಬಿಸಿದ್ದಾಳೆ. ಕೂಡಲೇ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಮಗು ನಾಪತ್ತೆಯಾಗಿರುವುದರ ಬಗ್ಗೆ ಭಾವನೇಶ್ವರ್​ಗೆ ಮಾಹಿತಿ ತಿಳಿಸಿದ್ದರು. ಬಳಿಕ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಮಗುವನ್ನು ಹುಡುಕಲಾರಂಭಿಸಿದ್ದಾಗ ಮನೆಯಿಂದ ಸ್ವಲ್ಪ ದೂರದ ಬಳಿ ಮಗುವಿನ ದೇಹ ಸುಟ್ಟ ಸ್ಥಿತಿಯಲ್ಲಿ ಕಂಡು ಬಂದಿತು.

ತನಿಖೆ ಕೈಗೊಂಡ ಪೊಲೀಸರು ಕೇವಲ ಐದೇ ಗಂಟೆಯಲ್ಲಿ ಈ ಪ್ರಕರಣವನ್ನು ಭೇದಿಸಿ ಆರೋಪಿ ತಾಯಿ ಸುನೀತಾಳನ್ನು ಬಂಧಿಸಿದರು. ಮಗಳನ್ನು ಕಳೆದುಕೊಂಡ ಆ ತಂದೆ ಮತ್ತು ಆತನ ಕುಟುಂಬದ ರೋದನೆ ಮುಗಿಲು ಮುಟ್ಟಿತ್ತು. ವಿಚಾರಣೆ ವೇಳೆ ಆರೋಪಿ ತಾಯಿ ಸುನೀತಾ ನಡೆದ ಘಟನೆ ಬಗ್ಗೆ ತಪ್ಪೊಪ್ಪಿಕೊಂಡಿದ್ದಾಳೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ರಾಂಚಿ( ಜಾರ್ಖಂಡ್): ಒಂದೂವರೆ ತಿಂಗಳ ಮುಗ್ಧ ಹಸುಳೆಯನ್ನು ತನ್ನ ತಾಯಿಯೇ ಜೀವಂತವಾಗಿ ಸುಟ್ಟುಹಾಕಿರುವ ಘಟನೆ ಅನಗಡ ಪಟ್ಟಣದಲ್ಲಿ ನಡೆದಿದೆ.

ಏನಿದು ಪ್ರಕರಣ?

ರಾಂಚಿಯ ಭೆಲ್ವತಿಕರ್ ಬ್ಲಾಕ್‌ನ ನಿವಾಸಿ ಸುನೀತಾ ಮತ್ತು ಆಕೆಯ ಪತಿ ಭಾವನೇಶ್ವರ್ ಮಹತೋ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ರಾಂಚಿ ಯುವತಿಯೊಂದಿಗೆ ಪತಿಯ ಪ್ರೇಮ ಸಂಬಂಧವಿದೆ ಎಂದು ಸುನೀತಾ ಆರೋಪಿಸಿದ್ದಾರೆ.

ಗಂಡನ ಪ್ರೇಮ ಪುರಾಣದ ಬಗ್ಗೆ ಆಗಾಗ್ಗೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಕಳೆದ ಬುಧವಾರ ಸುನೀತಾ ತನ್ನ ಪತಿಯೊಂದಿಗೆ ಇದೇ ವಿಷಯದ ಬಗ್ಗೆ ಜಗಳವಾಡಿದ್ದಳು. ಅದೇ ಸಮಯದಲ್ಲಿ ಗಂಡನ ಗುರುತು ಅಳಿಸಿಹಾಕಬೇಕೆಂದು ಸುನೀತಾ ನಿರ್ಧರಿಸಿದ್ದಳು.

ಜಗಳವಾಡಿದ ಮರುದಿನ ಅಂದ್ರೆ ಗುರುವಾರ ಬೆಳಗ್ಗೆ ಸುಮಾರು 10 ಗಂಟೆಗೆ ಸುನೀತಾ ತನ್ನ ಮಲಗಿದ್ದ ಮಗಳನ್ನು ಮನೆಯಿಂದ 150 ಮೀಟರ್ ದೂರದಲ್ಲಿ ತೆಗೆದುಕೊಂಡು ಹೋಗಿದ್ದಾಳೆ. ಬಳಿಕ ಚೀಲದಲ್ಲಿ ಸುತ್ತಿ ಕೊಂಡವೊಂದರಲ್ಲಿ ಇರಿಸಿ ಅದರ ಮೇಲೆ ಕಟ್ಟಿಗೆ ಹಾಕಿ ಮಗುವನ್ನು ಜೀವಂತವಾಗಿಯೇ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾಳೆ.

ಬಳಿಕ ಮಗು ನಾಪತ್ತೆಯಾಗಿದೆ ಎಂದು ಹಂಗಾಮ ಎಬ್ಬಿಸಿದ್ದಾಳೆ. ಕೂಡಲೇ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಮಗು ನಾಪತ್ತೆಯಾಗಿರುವುದರ ಬಗ್ಗೆ ಭಾವನೇಶ್ವರ್​ಗೆ ಮಾಹಿತಿ ತಿಳಿಸಿದ್ದರು. ಬಳಿಕ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಮಗುವನ್ನು ಹುಡುಕಲಾರಂಭಿಸಿದ್ದಾಗ ಮನೆಯಿಂದ ಸ್ವಲ್ಪ ದೂರದ ಬಳಿ ಮಗುವಿನ ದೇಹ ಸುಟ್ಟ ಸ್ಥಿತಿಯಲ್ಲಿ ಕಂಡು ಬಂದಿತು.

ತನಿಖೆ ಕೈಗೊಂಡ ಪೊಲೀಸರು ಕೇವಲ ಐದೇ ಗಂಟೆಯಲ್ಲಿ ಈ ಪ್ರಕರಣವನ್ನು ಭೇದಿಸಿ ಆರೋಪಿ ತಾಯಿ ಸುನೀತಾಳನ್ನು ಬಂಧಿಸಿದರು. ಮಗಳನ್ನು ಕಳೆದುಕೊಂಡ ಆ ತಂದೆ ಮತ್ತು ಆತನ ಕುಟುಂಬದ ರೋದನೆ ಮುಗಿಲು ಮುಟ್ಟಿತ್ತು. ವಿಚಾರಣೆ ವೇಳೆ ಆರೋಪಿ ತಾಯಿ ಸುನೀತಾ ನಡೆದ ಘಟನೆ ಬಗ್ಗೆ ತಪ್ಪೊಪ್ಪಿಕೊಂಡಿದ್ದಾಳೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.