ETV Bharat / bharat

ಮತ್ತೆ 8 ಜನ ಲಂಕಾ ವಲಸಿಗರು ಭಾರತಕ್ಕೆ ಆಗಮನ

ಸಮುದ್ರ ಭದ್ರತಾ ಪಡೆಗಳು ಸ್ಥಳಕ್ಕೆ ತೆರಳಿ ಶ್ರೀಲಂಕಾ ನಿರಾಶ್ರಿತರನ್ನು ರಕ್ಷಿಸಿ ಧನುಷ್ಕೊಡಿ ಕ್ಯಾಂಪ್​ಗೆ ಕಳುಹಿಸಿವೆ. ಇಲ್ಲಿಂದ ಅವರನ್ನು ಮಂಡಪಮ್ ನಿರಾಶ್ರಿತರ ಶಿಬಿರಕ್ಕೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

author img

By

Published : Jul 5, 2022, 4:32 PM IST

More Sri Lankans arrive in TN
More Sri Lankans arrive in TN

ರಾಮೇಶ್ವರಂ: ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಜೀವನ ದುಸ್ತರಗೊಂಡು ಅಲ್ಲಿನ ನಾಗರಿಕರು ಭಾರತಕ್ಕೆ ವಲಸೆ ಬರುವ ಪ್ರಕ್ರಿಯೆ ಮುಂದುವರೆದಿದೆ. ಮಂಗಳವಾರ ಚಿಕ್ಕ ಮಕ್ಕಳನ್ನು ಒಳಗೊಂಡ ಎರಡು ಕುಟುಂಬಗಳು ಭಾರತಕ್ಕೆ ಬಂದಿವೆ. ಇದಕ್ಕೂ ಮುನ್ನ ಶ್ರೀಲಂಕಾದಲ್ಲಿನ ಕೆಟ್ಟ ಪರಿಸ್ಥಿತಿಯಲ್ಲಿ ಜೀವನ ನಡೆಸಲಾಗದೆ 105 ಜನ ಭಾರತಕ್ಕೆ ಆಗಮಿಸಿದ್ದಾರೆ.

ಮಂಗಳವಾರದಂದು ಅರಿಚಲ್ಮುನೈ ಎಂಬಲ್ಲಿ ಎಂಟು ಜನ ಸಿಕ್ಕಿಹಾಕಿಕೊಂಡಿರುವುದನ್ನು ಭಾರತೀಯ ಮೀನುಗಾರರು ಗಮನಿಸಿದ್ದರು. ಶ್ರೀಲಂಕಾದಿಂದ ಬೋಟ್​ನಲ್ಲಿ ಬಂದು ಇವರು ಅರಿಚಲ್ಮುನೈ ನಲ್ಲಿ ಸಿಕ್ಕಿಹಾಕಿಕೊಂಡಿದ್ದರು.

ಸಮುದ್ರ ಭದ್ರತಾ ಪಡೆಗಳು ಸ್ಥಳಕ್ಕೆ ತೆರಳಿ ಶ್ರೀಲಂಕಾ ನಿರಾಶ್ರಿತರನ್ನು ರಕ್ಷಿಸಿ ಧನುಷ್ಕೊಡಿ ಕ್ಯಾಂಪ್​ಗೆ ಕಳುಹಿಸಿವೆ. ಇಲ್ಲಿಂದ ಅವರನ್ನು ಮಂಡಪಮ್ ನಿರಾಶ್ರಿತರ ಶಿಬಿರಕ್ಕೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ:ಸಂವಿಧಾನವು ಸಾರ್ವಜನಿಕರ ಲೂಟಿ ಮಾಡಲು ಸಹಾಯ ಮಾಡುತ್ತಿದೆ: ವಿವಾದಾತ್ಮಕ ಹೇಳಿಕೆ ನೀಡಿದ ಕೇರಳ ಸಚಿವ

ರಾಮೇಶ್ವರಂ: ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಜೀವನ ದುಸ್ತರಗೊಂಡು ಅಲ್ಲಿನ ನಾಗರಿಕರು ಭಾರತಕ್ಕೆ ವಲಸೆ ಬರುವ ಪ್ರಕ್ರಿಯೆ ಮುಂದುವರೆದಿದೆ. ಮಂಗಳವಾರ ಚಿಕ್ಕ ಮಕ್ಕಳನ್ನು ಒಳಗೊಂಡ ಎರಡು ಕುಟುಂಬಗಳು ಭಾರತಕ್ಕೆ ಬಂದಿವೆ. ಇದಕ್ಕೂ ಮುನ್ನ ಶ್ರೀಲಂಕಾದಲ್ಲಿನ ಕೆಟ್ಟ ಪರಿಸ್ಥಿತಿಯಲ್ಲಿ ಜೀವನ ನಡೆಸಲಾಗದೆ 105 ಜನ ಭಾರತಕ್ಕೆ ಆಗಮಿಸಿದ್ದಾರೆ.

ಮಂಗಳವಾರದಂದು ಅರಿಚಲ್ಮುನೈ ಎಂಬಲ್ಲಿ ಎಂಟು ಜನ ಸಿಕ್ಕಿಹಾಕಿಕೊಂಡಿರುವುದನ್ನು ಭಾರತೀಯ ಮೀನುಗಾರರು ಗಮನಿಸಿದ್ದರು. ಶ್ರೀಲಂಕಾದಿಂದ ಬೋಟ್​ನಲ್ಲಿ ಬಂದು ಇವರು ಅರಿಚಲ್ಮುನೈ ನಲ್ಲಿ ಸಿಕ್ಕಿಹಾಕಿಕೊಂಡಿದ್ದರು.

ಸಮುದ್ರ ಭದ್ರತಾ ಪಡೆಗಳು ಸ್ಥಳಕ್ಕೆ ತೆರಳಿ ಶ್ರೀಲಂಕಾ ನಿರಾಶ್ರಿತರನ್ನು ರಕ್ಷಿಸಿ ಧನುಷ್ಕೊಡಿ ಕ್ಯಾಂಪ್​ಗೆ ಕಳುಹಿಸಿವೆ. ಇಲ್ಲಿಂದ ಅವರನ್ನು ಮಂಡಪಮ್ ನಿರಾಶ್ರಿತರ ಶಿಬಿರಕ್ಕೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ:ಸಂವಿಧಾನವು ಸಾರ್ವಜನಿಕರ ಲೂಟಿ ಮಾಡಲು ಸಹಾಯ ಮಾಡುತ್ತಿದೆ: ವಿವಾದಾತ್ಮಕ ಹೇಳಿಕೆ ನೀಡಿದ ಕೇರಳ ಸಚಿವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.