ETV Bharat / bharat

Modi surname row: ಕ್ಷಮೆ ಕೇಳಲ್ಲ, ಹಾಗನ್ನಿಸಿದ್ದರೆ ಮೊದಲೇ ಕೇಳಿರುತ್ತಿದ್ದೆ; ಸುಪ್ರೀಂಕೋರ್ಟ್​ಗೆ ರಾಹುಲ್​ ಗಾಂಧಿ ಅಫಿಡವಿಟ್​

author img

By

Published : Aug 3, 2023, 6:48 AM IST

ಮೋದಿ ಉಪನಾಮ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಮಾಜಿ ಸಂಸದ ರಾಹುಲ್​ ಗಾಂಧಿ ಅವರು ಸುಪ್ರೀಂಕೋರ್ಟ್​ಗೆ ಮರು ಅಫಿಡವಿಟ್​ ಸಲ್ಲಿಸಿದ್ದು, ಇದರಲ್ಲಿ ಕ್ಷಮೆ ಕೇಳುವ ಮಾತೇ ಬರುವುದಿಲ್ಲ ಎಂದಿದ್ದಾರೆ.

ಸುಪ್ರೀಂಕೋರ್ಟ್​ಗೆ ರಾಹುಲ್​ ಗಾಂಧಿ ಅಫಿಡವಿಟ್​
ಸುಪ್ರೀಂಕೋರ್ಟ್​ಗೆ ರಾಹುಲ್​ ಗಾಂಧಿ ಅಫಿಡವಿಟ್​

ನವದೆಹಲಿ: ಮೋದಿ ಉಪನಾಮ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿ, ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್​ ಮೆಟ್ಟಿಲೇರಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಬುಧವಾರ ಮರು ಅಫಿಡವಿಟ್​ ಸಲ್ಲಿಸಿದ್ದು, 'ತಾನು ಪ್ರಕರಣದಲ್ಲಿ ಯಾವುದೇ ತಪ್ಪು ಮಾಡಿಲ್ಲ. ಕ್ಷಮೆ ಕೇಳುವ ಪ್ರಮೇಯವೇ ಇಲ್ಲ' ಎಂದು ಹೇಳಿದ್ದಾರೆ. ಅಲ್ಲದೇ, ಮೇಲ್ಮನವಿ ಅರ್ಜಿಯನ್ನು ಲೋಕಸಭೆ ಅಧಿವೇಶನ ಮುಗಿಯುವವರೆಗೆ ಬಾಕಿ ಉಳಿಸಿಕೊಳ್ಳಬೇಕು ಎಂದು ಕೋರಿದ್ದಾರೆ.

ಮಾಜಿ ಸಂಸದನ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿರುವ ಗುಜರಾತ್​ ಶಾಸಕ ಪೂರ್ಣೇಶ್​ ಮೋದಿ ಅವರು, ಸುಪ್ರೀಂಕೋರ್ಟ್​ಗೆ ನೀಡಿರುವ ಉತ್ತರದಲ್ಲಿ ರಾಹುಲ್​ ಗಾಂಧಿ ಕ್ಷಮೆಯಾಚಿಸಲು ನಿರಾಕರಿಸಿದ್ದು 'ಅಹಂಕಾರ'ವನ್ನು ತೋರಿಸುತ್ತದೆ ಎಂದು ನಿಂದನಾತ್ಮಕ ಪದ ಬಳಕೆ ಮಾಡಿದ್ದಾರೆ. ನಾನು ಕ್ಷಮೆ ಕೇಳಬೇಕು ಎಂದುಕೊಂಡಿದ್ದರೆ, ಈ ಹಿಂದೆಯೇ ಕೇಳುತ್ತಿದ್ದೆ. ಈಗ ಅದರ ಪ್ರಶ್ನೆಯೇ ಬರುವುದಿಲ್ಲ ಎಂದು ಅಫಿಡವಿಟ್​ನಲ್ಲಿ ಹೇಳಿದ್ದಾರೆ.

ತಮ್ಮ ವಿರುದ್ಧದ ಕೇಸ್​ 'ಅಸಾಧಾರಣ'ವಾಗಿದೆ. ತಾವು ಯಾವುದೇ ಜಾತಿ ಆಧರಿತ ಹೇಳಿಕೆ ನೀಡಿ ನೋವುಂಟು ಮಾಡಿಲ್ಲ. ಅರ್ಜಿದಾರರನ್ನು ಯಾವುದೇ ತಪ್ಪಿಗಾಗಿ ಕ್ಷಮೆಯಾಚಿಸಲು ಜನರ ಪ್ರಾತಿನಿಧ್ಯ ಕಾಯ್ದೆಯನ್ನು ಉಲ್ಲೇಖ ಮಾಡುವುದು ನ್ಯಾಯಾಂಗ ಪ್ರಕ್ರಿಯೆಯ ಸಂಪೂರ್ಣ ದುರುಪಯೋಗವಾಗಿದೆ. ಹೀಗಾಗಿ ಕೋರ್ಟ್​ ಇದನ್ನು ಮಾನ್ಯ ಮಾಡಬಾರದು. ತಾನು ತಪ್ಪಿತಸ್ಥನಲ್ಲ ಮತ್ತು ಶಿಕ್ಷೆ ಸಮರ್ಥವಾಗಿಲ್ಲ. ಕ್ಷಮೆಯಾಚಿಸಬೇಕಾಗಿದ್ದರೆ, ಅಪರಾಧವನ್ನು ಒಪ್ಪಿಕೊಳ್ಳಬೇಕಾದರೆ ಈ ಹಿಂದೆಯೇ ಮಾಡಿರುತ್ತಿದ್ದೆ ಎಂದು ಹೇಳಿದ್ದಾರೆ.

ಲೋಕಸಭೆ ಅಧಿವೇಶನ ಬಳಿಕ ವಿಚಾರಿಸಿ: ತಮ್ಮ ವಿರುದ್ಧದ ಕೇಸ್​ನ ಮೇಲ್ಮನವಿ ಅರ್ಜಿಯನ್ನು ಲೋಕಸಭೆ ಅಧಿವೇಶನ ಮುಗಿದ ಬಳಿಕ ವಿಚಾರಣೆ ನಡೆಸಲು ಇದೇ ವೇಳೆ ರಾಹುಲ್​ ಗಾಂಧಿ ಕೋರಿದ್ದಾರೆ. ಮುಂಗಾರು ಅಧಿವೇಶನ ನಡೆಯುತ್ತಿದೆ. ಇದರ ಬಳಿಕ ತಮ್ಮ ಮೇಲ್ಮನವಿಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಉಳಿದ ಅಧಿವೇಶನದ ಅವಧಿಯಲ್ಲಿ ಭಾಗಿಯಾಗಲು ತಾವು ಬಯಸಿದ್ದಾಗಿ ವಯನಾಡ್​​ ಕ್ಷೇತ್ರದ ಮಾಜಿ ಸಂಸದ ರಾಹುಲ್​ ಗಾಂಧಿ ಕೋರ್ಟ್​ಗೆ ತಿಳಿಸಿದ್ದಾರೆ.

ನಾಳೆ ವಿಚಾರಣೆ: ಇತ್ತ ಪ್ರಕರಣದ ಕುರಿತ ರಾಹುಲ್​ರ ಮೇಲ್ಮನವಿಯನ್ನು ಸುಪ್ರೀಂಕೋರ್ಟ್​ ಆಗಸ್ಟ್​ 4 ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ತಮ್ಮ ವಿರುದ್ಧದ ಶಿಕ್ಷೆಯನ್ನು ತಡೆಹಿಡಿಯಬೇಕು ಎಂದು ಕೋರಿ ಜುಲೈ 7 ರ ಗುಜರಾತ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮಾಜಿ ಸಂಸದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಏನಿದು ಪ್ರಕರಣ?: 2019ರ ಲೋಕಸಭೆಯ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ಭಾಷಣ ಮಾಡಿದ್ದ ರಾಹುಲ್​ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಮೋದಿ ಉಪನಾಮದ ಬಗ್ಗೆ ಹೇಳಿಕೆ ನೀಡಿದ್ದರು. ಎಲ್ಲ ಕಳ್ಳರು ಮೋದಿ ಎಂಬ ಉಪನಾಮ ಹೇಗೆ ಹೊಂದಿದ್ದಾರೆ ಎಂದು ಪ್ರಶ್ನಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ: ರಾಹುಲ್ ಮೇಲ್ಮನವಿ ಕುರಿತು ಪ್ರತಿಕ್ರಿಯೆ ಸಲ್ಲಿಸಲು ಗುಜರಾತ್ ಸರ್ಕಾರ, ಪೂರ್ಣೇಶ್ ಮೋದಿಗೆ ಸುಪ್ರೀಂ ಸೂಚನೆ

ನವದೆಹಲಿ: ಮೋದಿ ಉಪನಾಮ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿ, ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್​ ಮೆಟ್ಟಿಲೇರಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಬುಧವಾರ ಮರು ಅಫಿಡವಿಟ್​ ಸಲ್ಲಿಸಿದ್ದು, 'ತಾನು ಪ್ರಕರಣದಲ್ಲಿ ಯಾವುದೇ ತಪ್ಪು ಮಾಡಿಲ್ಲ. ಕ್ಷಮೆ ಕೇಳುವ ಪ್ರಮೇಯವೇ ಇಲ್ಲ' ಎಂದು ಹೇಳಿದ್ದಾರೆ. ಅಲ್ಲದೇ, ಮೇಲ್ಮನವಿ ಅರ್ಜಿಯನ್ನು ಲೋಕಸಭೆ ಅಧಿವೇಶನ ಮುಗಿಯುವವರೆಗೆ ಬಾಕಿ ಉಳಿಸಿಕೊಳ್ಳಬೇಕು ಎಂದು ಕೋರಿದ್ದಾರೆ.

ಮಾಜಿ ಸಂಸದನ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿರುವ ಗುಜರಾತ್​ ಶಾಸಕ ಪೂರ್ಣೇಶ್​ ಮೋದಿ ಅವರು, ಸುಪ್ರೀಂಕೋರ್ಟ್​ಗೆ ನೀಡಿರುವ ಉತ್ತರದಲ್ಲಿ ರಾಹುಲ್​ ಗಾಂಧಿ ಕ್ಷಮೆಯಾಚಿಸಲು ನಿರಾಕರಿಸಿದ್ದು 'ಅಹಂಕಾರ'ವನ್ನು ತೋರಿಸುತ್ತದೆ ಎಂದು ನಿಂದನಾತ್ಮಕ ಪದ ಬಳಕೆ ಮಾಡಿದ್ದಾರೆ. ನಾನು ಕ್ಷಮೆ ಕೇಳಬೇಕು ಎಂದುಕೊಂಡಿದ್ದರೆ, ಈ ಹಿಂದೆಯೇ ಕೇಳುತ್ತಿದ್ದೆ. ಈಗ ಅದರ ಪ್ರಶ್ನೆಯೇ ಬರುವುದಿಲ್ಲ ಎಂದು ಅಫಿಡವಿಟ್​ನಲ್ಲಿ ಹೇಳಿದ್ದಾರೆ.

ತಮ್ಮ ವಿರುದ್ಧದ ಕೇಸ್​ 'ಅಸಾಧಾರಣ'ವಾಗಿದೆ. ತಾವು ಯಾವುದೇ ಜಾತಿ ಆಧರಿತ ಹೇಳಿಕೆ ನೀಡಿ ನೋವುಂಟು ಮಾಡಿಲ್ಲ. ಅರ್ಜಿದಾರರನ್ನು ಯಾವುದೇ ತಪ್ಪಿಗಾಗಿ ಕ್ಷಮೆಯಾಚಿಸಲು ಜನರ ಪ್ರಾತಿನಿಧ್ಯ ಕಾಯ್ದೆಯನ್ನು ಉಲ್ಲೇಖ ಮಾಡುವುದು ನ್ಯಾಯಾಂಗ ಪ್ರಕ್ರಿಯೆಯ ಸಂಪೂರ್ಣ ದುರುಪಯೋಗವಾಗಿದೆ. ಹೀಗಾಗಿ ಕೋರ್ಟ್​ ಇದನ್ನು ಮಾನ್ಯ ಮಾಡಬಾರದು. ತಾನು ತಪ್ಪಿತಸ್ಥನಲ್ಲ ಮತ್ತು ಶಿಕ್ಷೆ ಸಮರ್ಥವಾಗಿಲ್ಲ. ಕ್ಷಮೆಯಾಚಿಸಬೇಕಾಗಿದ್ದರೆ, ಅಪರಾಧವನ್ನು ಒಪ್ಪಿಕೊಳ್ಳಬೇಕಾದರೆ ಈ ಹಿಂದೆಯೇ ಮಾಡಿರುತ್ತಿದ್ದೆ ಎಂದು ಹೇಳಿದ್ದಾರೆ.

ಲೋಕಸಭೆ ಅಧಿವೇಶನ ಬಳಿಕ ವಿಚಾರಿಸಿ: ತಮ್ಮ ವಿರುದ್ಧದ ಕೇಸ್​ನ ಮೇಲ್ಮನವಿ ಅರ್ಜಿಯನ್ನು ಲೋಕಸಭೆ ಅಧಿವೇಶನ ಮುಗಿದ ಬಳಿಕ ವಿಚಾರಣೆ ನಡೆಸಲು ಇದೇ ವೇಳೆ ರಾಹುಲ್​ ಗಾಂಧಿ ಕೋರಿದ್ದಾರೆ. ಮುಂಗಾರು ಅಧಿವೇಶನ ನಡೆಯುತ್ತಿದೆ. ಇದರ ಬಳಿಕ ತಮ್ಮ ಮೇಲ್ಮನವಿಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಉಳಿದ ಅಧಿವೇಶನದ ಅವಧಿಯಲ್ಲಿ ಭಾಗಿಯಾಗಲು ತಾವು ಬಯಸಿದ್ದಾಗಿ ವಯನಾಡ್​​ ಕ್ಷೇತ್ರದ ಮಾಜಿ ಸಂಸದ ರಾಹುಲ್​ ಗಾಂಧಿ ಕೋರ್ಟ್​ಗೆ ತಿಳಿಸಿದ್ದಾರೆ.

ನಾಳೆ ವಿಚಾರಣೆ: ಇತ್ತ ಪ್ರಕರಣದ ಕುರಿತ ರಾಹುಲ್​ರ ಮೇಲ್ಮನವಿಯನ್ನು ಸುಪ್ರೀಂಕೋರ್ಟ್​ ಆಗಸ್ಟ್​ 4 ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ತಮ್ಮ ವಿರುದ್ಧದ ಶಿಕ್ಷೆಯನ್ನು ತಡೆಹಿಡಿಯಬೇಕು ಎಂದು ಕೋರಿ ಜುಲೈ 7 ರ ಗುಜರಾತ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮಾಜಿ ಸಂಸದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಏನಿದು ಪ್ರಕರಣ?: 2019ರ ಲೋಕಸಭೆಯ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ಭಾಷಣ ಮಾಡಿದ್ದ ರಾಹುಲ್​ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಮೋದಿ ಉಪನಾಮದ ಬಗ್ಗೆ ಹೇಳಿಕೆ ನೀಡಿದ್ದರು. ಎಲ್ಲ ಕಳ್ಳರು ಮೋದಿ ಎಂಬ ಉಪನಾಮ ಹೇಗೆ ಹೊಂದಿದ್ದಾರೆ ಎಂದು ಪ್ರಶ್ನಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ: ರಾಹುಲ್ ಮೇಲ್ಮನವಿ ಕುರಿತು ಪ್ರತಿಕ್ರಿಯೆ ಸಲ್ಲಿಸಲು ಗುಜರಾತ್ ಸರ್ಕಾರ, ಪೂರ್ಣೇಶ್ ಮೋದಿಗೆ ಸುಪ್ರೀಂ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.