ETV Bharat / bharat

ಮೋದಿ- ಶಾ ದಕ್ಷಿಣ ಭಾರತ ದಂಡಯಾತ್ರೆ: ಚುನಾವಣೆಗೂ ಮೊದಲು ಪಕ್ಷ ಸಂಘಟನೆ ಗುರಿ

author img

By

Published : Mar 12, 2023, 12:12 PM IST

ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತೆಲಂಗಾಣದಲ್ಲಿ ಇದೇ ವರ್ಷ ಚುನಾವಣೆ ನಡೆಯಲಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಜೋಡಿ ಇತ್ತ ಗಮನ ಹರಿಸಿದ್ದು, ಓಡಾಟ ಜೋರಾಗಿದೆ.

ಮೋದಿ- ಶಾ ದಕ್ಷಿಣ ಭಾರತದ ದಂಡಯಾತ್ರೆ
ಮೋದಿ- ಶಾ ದಕ್ಷಿಣ ಭಾರತದ ದಂಡಯಾತ್ರೆ

ಹೈದರಾಬಾದ್ (ತೆಲಂಗಾಣ): ಸದ್ಯದ ರಾಜಕೀಯದಲ್ಲಿ ಎರಡು ಹೆಸರುಗಳು ಮಾತ್ರ ವೇಗವಾಗಿ ಸಂಚರಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಮೊದಲಾದರೆ, ಆ ನಂತರದ್ದು ಗೃಹ ಸಚಿವ ಅಮಿತ್​ ಶಾ. ಇಬ್ಬರ ಜುಗಲ್​ಬಂಧಿ ಅದಷ್ಟೋ ಚುನಾವಣೆಗಳನ್ನು ಗೆದ್ದಿದೆ. ಇದೀಗ ಇಬ್ಬರ ಚಿತ್ತ ದಕ್ಷಿಣ ಭಾರತದತ್ತ ನೆಟ್ಟಿದೆ. ಕರ್ನಾಟಕ ವಿಧಾನಸಭೆಗೆ ಕೆಲವೇ ದಿನಗಳಲ್ಲಿ ಚುನಾವಣೆ ಘೋಷಣೆಯಾಗಲಿದೆ. ಪಕ್ಕದ ರಾಜ್ಯ ತೆಲಂಗಾಣ ವಿಧಾನಸಭೆಗೆ ವರ್ಷಾಂತ್ಯದಲ್ಲಿ ವೋಟ್​ ಲೆಕ್ಕ ನಡೆಯಲಿದೆ. ಇದು ಇಬ್ಬರೂ ನಾಯಕರು ದಕ್ಷಿಣ ಭಾರತದ ದಂಡಯಾತ್ರೆಗೆ ಹಾದಿ ಒದಗಿಸಿದೆ.

ಈಗಾಗಲೇ ಕರ್ನಾಟಕದಲ್ಲಿ ಹಲವು ರ್ಯಾಲಿಗಳನ್ನು ನಡೆಸಿರುವ ಉಭಯ ನಾಯಕರು ಸಾವಿರಾರು ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಶಿಲಾನ್ಯಾಸ, ಉದ್ಘಾಟನೆಯನ್ನು ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್​ ಕಠಿಣ ಪ್ರತಿಸ್ಪರ್ಧಿಯಾಗಿರುವ ಕಾರಣ ಮೋದಿ-ಶಾ ಜೋಡಿ ಚುರುಕಾಗಿ ಓಡಾಡುತ್ತಿದೆ. ಇಂದು ಪ್ರಧಾನಿ ಮೋದಿ ಅವರು ರಾಜ್ಯದ ಮಂಡ್ಯ, ಹುಬ್ಬಳ್ಳಿಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರೆ, ಅಮಿತ್​ ಶಾ ತೆಲಂಗಾಣದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಹಾಜರಾಗಿದ್ದಾರೆ.

ಕಾರ್ಯಕರ್ತರ ವಿಶ್ವಾಸ ವೃದ್ಧಿ: ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಚುನಾವಣಾ ಪೂರ್ವ ಸಿದ್ಧತೆ ನಡೆಸುತ್ತಿರುವ ಮೋದಿ- ಅಮಿತ್ ಶಾ ಜೋಡಿ, ಬಿಜೆಪಿಯ ನಾಯಕರು ಮತ್ತು ಕಾರ್ಯಕರ್ತರು ಭೇಟಿ ಮಾಡಿ ಹುರಿದುಂಬಿಸುತ್ತಿದ್ದಾರೆ. ವರ್ಚಸ್ವಿ ನಾಯಕರ ಭೇಟಿಯಿಂದ ಕಾರ್ಯಕರ್ತರಲ್ಲಿಯೂ ಆತ್ಮವಿಶ್ವಾಸ ಇಮ್ಮಡಿಯಾಗುತ್ತಿದೆ.

ಈಶಾನ್ಯ ರಾಜ್ಯಗಳು ಮತ್ತು ಕಳೆದ ವರ್ಷ ನಡೆದ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸಾಧಿಸಿದ ಜಯ ಬೂಸ್ಟರ್​ ನೀಡಿದೆ. ದಕ್ಷಿಣದಲ್ಲಿಯೂ ಇದೇ ತಂತ್ರವನ್ನು ಪುನರಾವರ್ತಿಸುವ ಗುರಿಯನ್ನು ಮೋದಿ- ಅಮಿತ್ ಶಾ ನಿಸ್ಸಂಶಯವಾಗಿ ಹೊಂದಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಅಂದಾಜು. ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕೇಸರಿ ಪಡೆಗೆ ಚುನಾವಣೆಯಲ್ಲಿ ಕಠಿಣ ಪರೀಕ್ಷೆ ಎದುರಾಗುವುದು ಪಕ್ಕಾ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ನಂತರ, ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಓಡಾಡುತ್ತಿದ್ದಾರೆ.

ಕಾಂಗ್ರೆಸ್​ ಮಾಡು ಇಲ್ಲವೇ ಮಡಿ ಫೈಟ್​: ಕರ್ನಾಟಕದಲ್ಲಿ ಇದರ ಭಾಗವಾಗಿ ಪಕ್ಷದ ಚಟುವಟಿಕೆ ತುಸು ಹೆಚ್ಚೇ ಇದೆ. ತೆಲಂಗಾಣದಲ್ಲಿ ಬಿಆರ್​ಎಸ್​ ಪಕ್ಷ ಅಧಿಕಾರ ನಡೆಸುತ್ತಿದ್ದು, ಅದನ್ನೂ ಕಿತ್ತೊಗೆಯುವ ತಂತ್ರ ನಡೆಸುತ್ತಿದೆ. ಕಾಂಗ್ರೆಸ್ ಪಾಲಿಗೆ ಈ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗಳು ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಈಗಾಗಲೇ, 2019 ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ ಒಂದಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದರಿಂದ ದೇಶದ ಹಳೆಯ ಪಕ್ಷ ಧೂಳೀಪಟವಾಗಿತ್ತು.

ತಮಿಳುನಾಡಿನಲ್ಲಿ ಪಕ್ಷ ಮತ್ತೆ ಚಿಗಿತುಕೊಳ್ಳುವುದು ಅವಕಾಶ ತೀರಾ ಕಡಿಮೆ. ಕೇರಳದಲ್ಲೂ ಸಹ ಪಕ್ಷದ ಬೇರುಗಳು ಸಡಿಲಗೊಂಡಿವೆ. ಹೀಗಾಗಿ ದಕ್ಷಿಣ ಭಾರತದ ಉಳಿದ ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣ ಪಕ್ಷಕ್ಕಿರುವ ನೆಲೆಯಾಗಿದೆ.

ಮತ್ತೊಂದೆಡೆ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದ ನಂತರ ಎಐಎಡಿಎಂಕೆಯಲ್ಲಿನ ನಾಯಕತ್ವದ ಕಿತ್ತಾಟದ ಲಾಭವನ್ನು ಪಡೆದು ತಮಿಳುನಾಡಿನಲ್ಲಿ ನೆಲೆಯೂರಲು ಬಿಜೆಪಿ ನಿರಂತರ ಪ್ರಯತ್ನ ನಡೆಸುತ್ತಿದೆ. ಕಮ್ಯುನಿಸ್ಟ್ ಭದ್ರಕೋಟೆಯಾಗಿರುವ ಕೇರಳದಲ್ಲಿ ಪಕ್ಷ ಸಂಘಟನೆ ಮಾಡುವ ಗುರಿಯನ್ನೂ ಹೊಂದಿದೆ. ಸ್ಥಳೀಯ ಪಕ್ಷಗಳ ಹಿಡಿತದಿಂದಾಗಿ ಆಂಧ್ರಪ್ರದೇಶದಲ್ಲಿ ಯಾವುದೇ ಹಿಡಿತ ಸಾಧಿಸಲು ಸಾಧ್ಯವಾಗುತ್ತಿಲ್ಲವಾಗಿದೆ.

ತೆಲಂಗಾಣ ಬಳಿಕ ಕೇರಳಕ್ಕೆ ಅಮಿತ್ ಶಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ತೆಲಂಗಾಣಕ್ಕೆ ಭೇಟಿ ನೀಡಿದ್ದು, ಇದಾದ ಬಳಿಕ ಕೇರಳದ ತ್ರಿಶೂರ್‌ಗೆ ಆಗಮಿಸಲಿದ್ದಾರೆ. ಅಲ್ಲಿ ಸಾರ್ವಜನಿಕ ಕಾರ್ಯಕ್ರಮ ಮತ್ತು ಪಕ್ಷದ ಹಿರಿಯ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ತ್ರಿಶೂರ್‌ಗೆ ಆಗಮಿಸಲಿರುವ ಶಾ, ವಡಕ್ಕುನಾಥನ್ ದೇವಸ್ಥಾನದಲ್ಲಿ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೇರಳದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕವಾಗಿ ಹೇಳಿಕೆ ನೀಡಿದ ಬೆನ್ನಲ್ಲೇ, ಕೇಂದ್ರ ಗೃಹ ಸಚಿವರ ಭೇಟಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. 2021 ರ ವಿಧಾನಸಭಾ ಚುನಾವಣೆಯಲ್ಲಿ ತಿರುವನಂತಪುರಂನ ನೆಮೊಮ್‌ನಲ್ಲಿ ಗೆದ್ದಿದ್ದ ಏಕೈಕ ಸ್ಥಾನವನ್ನು ಕಳೆದುಕೊಂಡ ನಂತರ ಕೇಸರಿ ಪಡೆ ರಾಜ್ಯದಲ್ಲಿ ಮರು ಹೋರಾಟಕ್ಕೆ ಮುಂದಾಗಿದೆ. ಅಲ್ಲಿನ ಬಿಜೆಪಿ ಶಾಸಕ ರಾಜೀನಾಮೆ ನೀಡಿ, ಎಐಎಡಿಎಂಕೆ ಸೇರಿದ್ದರು.

ಇದನ್ನೂ ಓದಿ: ಹೈದರಾಬಾದ್‌ನಲ್ಲಿ 54ನೇ ಸಿಐಎಸ್‌ಎಫ್‌ ಪರೇಡ್‌: ಗೃಹ ಸಚಿವ ಅಮಿತ್ ಶಾ ಭಾಗಿ

ಹೈದರಾಬಾದ್ (ತೆಲಂಗಾಣ): ಸದ್ಯದ ರಾಜಕೀಯದಲ್ಲಿ ಎರಡು ಹೆಸರುಗಳು ಮಾತ್ರ ವೇಗವಾಗಿ ಸಂಚರಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಮೊದಲಾದರೆ, ಆ ನಂತರದ್ದು ಗೃಹ ಸಚಿವ ಅಮಿತ್​ ಶಾ. ಇಬ್ಬರ ಜುಗಲ್​ಬಂಧಿ ಅದಷ್ಟೋ ಚುನಾವಣೆಗಳನ್ನು ಗೆದ್ದಿದೆ. ಇದೀಗ ಇಬ್ಬರ ಚಿತ್ತ ದಕ್ಷಿಣ ಭಾರತದತ್ತ ನೆಟ್ಟಿದೆ. ಕರ್ನಾಟಕ ವಿಧಾನಸಭೆಗೆ ಕೆಲವೇ ದಿನಗಳಲ್ಲಿ ಚುನಾವಣೆ ಘೋಷಣೆಯಾಗಲಿದೆ. ಪಕ್ಕದ ರಾಜ್ಯ ತೆಲಂಗಾಣ ವಿಧಾನಸಭೆಗೆ ವರ್ಷಾಂತ್ಯದಲ್ಲಿ ವೋಟ್​ ಲೆಕ್ಕ ನಡೆಯಲಿದೆ. ಇದು ಇಬ್ಬರೂ ನಾಯಕರು ದಕ್ಷಿಣ ಭಾರತದ ದಂಡಯಾತ್ರೆಗೆ ಹಾದಿ ಒದಗಿಸಿದೆ.

ಈಗಾಗಲೇ ಕರ್ನಾಟಕದಲ್ಲಿ ಹಲವು ರ್ಯಾಲಿಗಳನ್ನು ನಡೆಸಿರುವ ಉಭಯ ನಾಯಕರು ಸಾವಿರಾರು ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಶಿಲಾನ್ಯಾಸ, ಉದ್ಘಾಟನೆಯನ್ನು ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್​ ಕಠಿಣ ಪ್ರತಿಸ್ಪರ್ಧಿಯಾಗಿರುವ ಕಾರಣ ಮೋದಿ-ಶಾ ಜೋಡಿ ಚುರುಕಾಗಿ ಓಡಾಡುತ್ತಿದೆ. ಇಂದು ಪ್ರಧಾನಿ ಮೋದಿ ಅವರು ರಾಜ್ಯದ ಮಂಡ್ಯ, ಹುಬ್ಬಳ್ಳಿಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರೆ, ಅಮಿತ್​ ಶಾ ತೆಲಂಗಾಣದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಹಾಜರಾಗಿದ್ದಾರೆ.

ಕಾರ್ಯಕರ್ತರ ವಿಶ್ವಾಸ ವೃದ್ಧಿ: ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಚುನಾವಣಾ ಪೂರ್ವ ಸಿದ್ಧತೆ ನಡೆಸುತ್ತಿರುವ ಮೋದಿ- ಅಮಿತ್ ಶಾ ಜೋಡಿ, ಬಿಜೆಪಿಯ ನಾಯಕರು ಮತ್ತು ಕಾರ್ಯಕರ್ತರು ಭೇಟಿ ಮಾಡಿ ಹುರಿದುಂಬಿಸುತ್ತಿದ್ದಾರೆ. ವರ್ಚಸ್ವಿ ನಾಯಕರ ಭೇಟಿಯಿಂದ ಕಾರ್ಯಕರ್ತರಲ್ಲಿಯೂ ಆತ್ಮವಿಶ್ವಾಸ ಇಮ್ಮಡಿಯಾಗುತ್ತಿದೆ.

ಈಶಾನ್ಯ ರಾಜ್ಯಗಳು ಮತ್ತು ಕಳೆದ ವರ್ಷ ನಡೆದ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸಾಧಿಸಿದ ಜಯ ಬೂಸ್ಟರ್​ ನೀಡಿದೆ. ದಕ್ಷಿಣದಲ್ಲಿಯೂ ಇದೇ ತಂತ್ರವನ್ನು ಪುನರಾವರ್ತಿಸುವ ಗುರಿಯನ್ನು ಮೋದಿ- ಅಮಿತ್ ಶಾ ನಿಸ್ಸಂಶಯವಾಗಿ ಹೊಂದಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಅಂದಾಜು. ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕೇಸರಿ ಪಡೆಗೆ ಚುನಾವಣೆಯಲ್ಲಿ ಕಠಿಣ ಪರೀಕ್ಷೆ ಎದುರಾಗುವುದು ಪಕ್ಕಾ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ನಂತರ, ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಓಡಾಡುತ್ತಿದ್ದಾರೆ.

ಕಾಂಗ್ರೆಸ್​ ಮಾಡು ಇಲ್ಲವೇ ಮಡಿ ಫೈಟ್​: ಕರ್ನಾಟಕದಲ್ಲಿ ಇದರ ಭಾಗವಾಗಿ ಪಕ್ಷದ ಚಟುವಟಿಕೆ ತುಸು ಹೆಚ್ಚೇ ಇದೆ. ತೆಲಂಗಾಣದಲ್ಲಿ ಬಿಆರ್​ಎಸ್​ ಪಕ್ಷ ಅಧಿಕಾರ ನಡೆಸುತ್ತಿದ್ದು, ಅದನ್ನೂ ಕಿತ್ತೊಗೆಯುವ ತಂತ್ರ ನಡೆಸುತ್ತಿದೆ. ಕಾಂಗ್ರೆಸ್ ಪಾಲಿಗೆ ಈ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗಳು ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಈಗಾಗಲೇ, 2019 ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ ಒಂದಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದರಿಂದ ದೇಶದ ಹಳೆಯ ಪಕ್ಷ ಧೂಳೀಪಟವಾಗಿತ್ತು.

ತಮಿಳುನಾಡಿನಲ್ಲಿ ಪಕ್ಷ ಮತ್ತೆ ಚಿಗಿತುಕೊಳ್ಳುವುದು ಅವಕಾಶ ತೀರಾ ಕಡಿಮೆ. ಕೇರಳದಲ್ಲೂ ಸಹ ಪಕ್ಷದ ಬೇರುಗಳು ಸಡಿಲಗೊಂಡಿವೆ. ಹೀಗಾಗಿ ದಕ್ಷಿಣ ಭಾರತದ ಉಳಿದ ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣ ಪಕ್ಷಕ್ಕಿರುವ ನೆಲೆಯಾಗಿದೆ.

ಮತ್ತೊಂದೆಡೆ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದ ನಂತರ ಎಐಎಡಿಎಂಕೆಯಲ್ಲಿನ ನಾಯಕತ್ವದ ಕಿತ್ತಾಟದ ಲಾಭವನ್ನು ಪಡೆದು ತಮಿಳುನಾಡಿನಲ್ಲಿ ನೆಲೆಯೂರಲು ಬಿಜೆಪಿ ನಿರಂತರ ಪ್ರಯತ್ನ ನಡೆಸುತ್ತಿದೆ. ಕಮ್ಯುನಿಸ್ಟ್ ಭದ್ರಕೋಟೆಯಾಗಿರುವ ಕೇರಳದಲ್ಲಿ ಪಕ್ಷ ಸಂಘಟನೆ ಮಾಡುವ ಗುರಿಯನ್ನೂ ಹೊಂದಿದೆ. ಸ್ಥಳೀಯ ಪಕ್ಷಗಳ ಹಿಡಿತದಿಂದಾಗಿ ಆಂಧ್ರಪ್ರದೇಶದಲ್ಲಿ ಯಾವುದೇ ಹಿಡಿತ ಸಾಧಿಸಲು ಸಾಧ್ಯವಾಗುತ್ತಿಲ್ಲವಾಗಿದೆ.

ತೆಲಂಗಾಣ ಬಳಿಕ ಕೇರಳಕ್ಕೆ ಅಮಿತ್ ಶಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ತೆಲಂಗಾಣಕ್ಕೆ ಭೇಟಿ ನೀಡಿದ್ದು, ಇದಾದ ಬಳಿಕ ಕೇರಳದ ತ್ರಿಶೂರ್‌ಗೆ ಆಗಮಿಸಲಿದ್ದಾರೆ. ಅಲ್ಲಿ ಸಾರ್ವಜನಿಕ ಕಾರ್ಯಕ್ರಮ ಮತ್ತು ಪಕ್ಷದ ಹಿರಿಯ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ತ್ರಿಶೂರ್‌ಗೆ ಆಗಮಿಸಲಿರುವ ಶಾ, ವಡಕ್ಕುನಾಥನ್ ದೇವಸ್ಥಾನದಲ್ಲಿ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೇರಳದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕವಾಗಿ ಹೇಳಿಕೆ ನೀಡಿದ ಬೆನ್ನಲ್ಲೇ, ಕೇಂದ್ರ ಗೃಹ ಸಚಿವರ ಭೇಟಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. 2021 ರ ವಿಧಾನಸಭಾ ಚುನಾವಣೆಯಲ್ಲಿ ತಿರುವನಂತಪುರಂನ ನೆಮೊಮ್‌ನಲ್ಲಿ ಗೆದ್ದಿದ್ದ ಏಕೈಕ ಸ್ಥಾನವನ್ನು ಕಳೆದುಕೊಂಡ ನಂತರ ಕೇಸರಿ ಪಡೆ ರಾಜ್ಯದಲ್ಲಿ ಮರು ಹೋರಾಟಕ್ಕೆ ಮುಂದಾಗಿದೆ. ಅಲ್ಲಿನ ಬಿಜೆಪಿ ಶಾಸಕ ರಾಜೀನಾಮೆ ನೀಡಿ, ಎಐಎಡಿಎಂಕೆ ಸೇರಿದ್ದರು.

ಇದನ್ನೂ ಓದಿ: ಹೈದರಾಬಾದ್‌ನಲ್ಲಿ 54ನೇ ಸಿಐಎಸ್‌ಎಫ್‌ ಪರೇಡ್‌: ಗೃಹ ಸಚಿವ ಅಮಿತ್ ಶಾ ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.