ETV Bharat / bharat

‘ಕುಮಾರ’ ಎಡವಟ್ಟು.. ಜಾಮೀನು ಸಿಕ್ಕರೂ 8 ತಿಂಗಳು ಜೈಲುವಾಸ

author img

By

Published : Dec 21, 2020, 1:08 PM IST

ಜಾಮೀನು ಸಿಕ್ಕರೂ, ಆರೋಪಿ 8 ತಿಂಗಳ ಕಾಲ ಜೈಲುವಾಸ ಅನುಭವಿಸಿರುವ ಘಟನೆ ಉತ್ತರಪ್ರದೇಶ ಪ್ರಯಾಗ್ ರಾಜ್​ನಲ್ಲಿ ನಡೆದಿದೆ. ಜೈಲು ಅಧೀಕ್ಷರ ಬೇಜವಾಬ್ದಾರಿಯಿಂದ ಈ ರೀತಿ ಸಮಸ್ಯೆ ಆಗಿದೆ ಎನ್ನಲಾಗ್ತಿದೆ.

jail
ಜೈಲು ವಾಸ

ಪ್ರಯಾಗ್ ರಾಜ್ (ಉತ್ತರಪ್ರದೇಶ): ಜೈಲಾಧಿಕಾರಿಗಳ ಬೇಜವಾಬ್ದಾರಿತನದಿಂದ ಜಾಮೀನು ಪಡೆದ ಬಳಿಕವೂ ವ್ಯಕ್ತಿ ಎಂಟು ತಿಂಗಳ ಕಾಲ ಜೈಲುವಾಸ ಅನುಭವಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ರಿಮಾಂಡ್ ಶೀಟ್​ನಲ್ಲಿ ಅರ್ಜಿದಾರರ ಹೆಸರು ವಿನೋದ್ ಕುಮಾರ್ ಬರುವಾರ್ ಎಂದು ಇದ್ದು, ನ್ಯಾಯಾಲಯದ ಆದೇಶದಲ್ಲಿ ಅವರ ಹೆಸರನ್ನು ವಿನೋದ್ ಬರುವಾರ್ ಎಂದು ಉಲ್ಲೇಖಿಸಲಾಗಿದೆ.

ಏಪ್ರಿಲ್ 9 ರಂದು ವಿನೋದ್ ಉತ್ತರಪ್ರದೇಶ ಹೈಕೋರ್ಟ್​​ನಿಂದ ಜಾಮೀನು ಪಡೆದಿದ್ದರು. ಆದರೆ, ಹೆಸರಿನಲ್ಲಿ ವ್ಯತ್ಯಾಸವಿರುವುದರಿಂದ ಅಧಿಕಾರಿಗಳು ಆರೋಪಿ ಬಿಡುಗಡೆಗೆ ನಿರಾಕರಿಸಿದ್ದರು. ಇದರಿಂದಾಗಿ ವಿನೋದ್ 8 ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ.

ಆರೋಪಿ ವಿನೋದ್ ಮತ್ತೆ ಹೆಸರು ತಿದ್ದುಪಡಿಗಾಗಿ ಅರ್ಜಿಯನ್ನು ಸಲ್ಲಿಸಿದಾಗ ನ್ಯಾಯಾಲಯಕ್ಕೆ ಆತನ ಜೈಲುವಾಸದ ಬಗ್ಗೆ ತಿಳಿದಿದೆ. ಈ ವೇಳೆ ತಾಂತ್ರಿಕ ಸಮಸ್ಯೆಯಿಂದಾಗಿ ಈ ದೋಷ ನಡೆದಿದೆ ಎಂದು ಕೋರ್ಟ್ ಸ್ಪಷ್ಟನೆ ನೀಡಿದೆ. ಬಳಿಕ ಸಿದ್ದಾರ್ಥ ನಗರ ಜಿಲ್ಲಾ ಕಾರಾಗೃಹದ ಜೈಲು ಅಧೀಕ್ಷಕ ರಾಕೇಶ್​ಸಿಂಗ್​ರನ್ನು ವಿಚಾರಣೆ ನಡೆಸಿ, ತಾಂತ್ರಿಕ ದೋಷದಿಂದ ಈ ಸಮಸ್ಯೆ ಉದ್ಭವಿಸಿದೆ. ನೀವು ಪರಾಮರ್ಶಿಸಿ ಅವರನ್ನು ಬಿಡುಗಡೆ ಮಾಡದೆ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದೀರಿ ಎಂದು ಗರಂ ಆಗಿದೆ. ಈ ಸಮಯದಲ್ಲಿ ರಾಕೇಶ್ ಸಿಂಗ್ ಡಿಸೆಂಬರ್ 8 ರಂದು ಜೈಲಿನಿಂದ ರಿಲೀಸ್ ಮಾಡಲಾಗಿದೆ ಎಂದು ನಮೂದಿಸಿ ಅಫಿಡವಿಟ್ ಸಲ್ಲಿಸಿದರು.

ಇದನ್ನೂ ಓದಿ: ಹೈದರಾಬಾದ್​ ಏರ್​ಪೋರ್ಟ್​ನಲ್ಲಿ ವಿದೇಶಿ ಕರೆನ್ಸಿ ವಶಕ್ಕೆ.. ಓರ್ವ ಅರೆಸ್ಟ್

ಈ ಬಗ್ಗೆ ನ್ಯಾಯಮೂರ್ತಿ ಜೆ.ಜೆ. ಮುನೀರ್ ಪ್ರತಿಕ್ರಿಯಿಸಿ, ಅಫಿಡವಿಟ್​ಅನ್ನು ಪರಿಶೀಲಿಸಲಾಗಿದೆ. ಆರೋಪಿ ಬಿಡುಗಡೆ ವಿಚಾರವಾಗಿ ನ್ಯಾಯಾಲಯದ ಆದೇಶವನ್ನು ಪಾಲಿಸದಿರುವ ಬಗ್ಗೆ ವಿವರಣೆ ನೀಡಲಾಗಿದೆ ಎಂದರು.

ಪ್ರಯಾಗ್ ರಾಜ್ (ಉತ್ತರಪ್ರದೇಶ): ಜೈಲಾಧಿಕಾರಿಗಳ ಬೇಜವಾಬ್ದಾರಿತನದಿಂದ ಜಾಮೀನು ಪಡೆದ ಬಳಿಕವೂ ವ್ಯಕ್ತಿ ಎಂಟು ತಿಂಗಳ ಕಾಲ ಜೈಲುವಾಸ ಅನುಭವಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ರಿಮಾಂಡ್ ಶೀಟ್​ನಲ್ಲಿ ಅರ್ಜಿದಾರರ ಹೆಸರು ವಿನೋದ್ ಕುಮಾರ್ ಬರುವಾರ್ ಎಂದು ಇದ್ದು, ನ್ಯಾಯಾಲಯದ ಆದೇಶದಲ್ಲಿ ಅವರ ಹೆಸರನ್ನು ವಿನೋದ್ ಬರುವಾರ್ ಎಂದು ಉಲ್ಲೇಖಿಸಲಾಗಿದೆ.

ಏಪ್ರಿಲ್ 9 ರಂದು ವಿನೋದ್ ಉತ್ತರಪ್ರದೇಶ ಹೈಕೋರ್ಟ್​​ನಿಂದ ಜಾಮೀನು ಪಡೆದಿದ್ದರು. ಆದರೆ, ಹೆಸರಿನಲ್ಲಿ ವ್ಯತ್ಯಾಸವಿರುವುದರಿಂದ ಅಧಿಕಾರಿಗಳು ಆರೋಪಿ ಬಿಡುಗಡೆಗೆ ನಿರಾಕರಿಸಿದ್ದರು. ಇದರಿಂದಾಗಿ ವಿನೋದ್ 8 ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ.

ಆರೋಪಿ ವಿನೋದ್ ಮತ್ತೆ ಹೆಸರು ತಿದ್ದುಪಡಿಗಾಗಿ ಅರ್ಜಿಯನ್ನು ಸಲ್ಲಿಸಿದಾಗ ನ್ಯಾಯಾಲಯಕ್ಕೆ ಆತನ ಜೈಲುವಾಸದ ಬಗ್ಗೆ ತಿಳಿದಿದೆ. ಈ ವೇಳೆ ತಾಂತ್ರಿಕ ಸಮಸ್ಯೆಯಿಂದಾಗಿ ಈ ದೋಷ ನಡೆದಿದೆ ಎಂದು ಕೋರ್ಟ್ ಸ್ಪಷ್ಟನೆ ನೀಡಿದೆ. ಬಳಿಕ ಸಿದ್ದಾರ್ಥ ನಗರ ಜಿಲ್ಲಾ ಕಾರಾಗೃಹದ ಜೈಲು ಅಧೀಕ್ಷಕ ರಾಕೇಶ್​ಸಿಂಗ್​ರನ್ನು ವಿಚಾರಣೆ ನಡೆಸಿ, ತಾಂತ್ರಿಕ ದೋಷದಿಂದ ಈ ಸಮಸ್ಯೆ ಉದ್ಭವಿಸಿದೆ. ನೀವು ಪರಾಮರ್ಶಿಸಿ ಅವರನ್ನು ಬಿಡುಗಡೆ ಮಾಡದೆ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದೀರಿ ಎಂದು ಗರಂ ಆಗಿದೆ. ಈ ಸಮಯದಲ್ಲಿ ರಾಕೇಶ್ ಸಿಂಗ್ ಡಿಸೆಂಬರ್ 8 ರಂದು ಜೈಲಿನಿಂದ ರಿಲೀಸ್ ಮಾಡಲಾಗಿದೆ ಎಂದು ನಮೂದಿಸಿ ಅಫಿಡವಿಟ್ ಸಲ್ಲಿಸಿದರು.

ಇದನ್ನೂ ಓದಿ: ಹೈದರಾಬಾದ್​ ಏರ್​ಪೋರ್ಟ್​ನಲ್ಲಿ ವಿದೇಶಿ ಕರೆನ್ಸಿ ವಶಕ್ಕೆ.. ಓರ್ವ ಅರೆಸ್ಟ್

ಈ ಬಗ್ಗೆ ನ್ಯಾಯಮೂರ್ತಿ ಜೆ.ಜೆ. ಮುನೀರ್ ಪ್ರತಿಕ್ರಿಯಿಸಿ, ಅಫಿಡವಿಟ್​ಅನ್ನು ಪರಿಶೀಲಿಸಲಾಗಿದೆ. ಆರೋಪಿ ಬಿಡುಗಡೆ ವಿಚಾರವಾಗಿ ನ್ಯಾಯಾಲಯದ ಆದೇಶವನ್ನು ಪಾಲಿಸದಿರುವ ಬಗ್ಗೆ ವಿವರಣೆ ನೀಡಲಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.