ETV Bharat / bharat

ಅಪ್ಪ ಕುಡಿದು ಬಂದು ಅಮ್ಮನಿಗೆ ಹೊಡೀತಾರೆ ಸಾರ್​​.. 9 ವರ್ಷದ ಮಗನಿಂದ ಪೊಲೀಸರಿಗೆ ದೂರು

author img

By

Published : Aug 26, 2022, 7:27 PM IST

ಪ್ರತಿದಿನ ಮದ್ಯ ಸೇವಿಸಿ ಬಂದು ತಾಯಿ ಮೇಲೆ ಹಲ್ಲೆ ನಡೆಸುತ್ತಿದ್ದ ತಂದೆಯ ನಡೆಗೆ ರೋಸಿ ಹೋಗಿದ್ದ ಅಪ್ರಾಪ್ತ ಪುತ್ರನೋರ್ವ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

Minor boy lodges police complaint
Minor boy lodges police complaint

ಸಿರ್ಸಿಲ್ಲಾ(ತೆಲಂಗಾಣ): ಪೊಲೀಸ್ ಠಾಣೆ ಮೆಟ್ಟಿಲೇರಲು ಇಂದಿನ ದಿನಗಳಲ್ಲೂ ಅನೇಕರು ಹಿಂದೇಟು ಹಾಕ್ತಾರೆ. ಆದರೆ, ಮನೆಯಲ್ಲಿ ನಡೆಯುತ್ತಿದ್ದ ತಂದೆ-ತಾಯಿ ಜಗಳದಿಂದ ನೊಂದಿರುವ ಬಾಲಕನೋರ್ವ ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾನೆ. ಅಪ್ಪ ದಿನಾಲೂ ಕುಡಿದು ಬಂದು ಅಮ್ಮನಿಗೆ ಹೊಡೆಯುತ್ತಾರೆ ಸಾರ್​ ಎಂದು 3ನೇ ತರಗತಿ ಪುಟ್ಟ ಬಾಲಕನೋರ್ವ ಪೊಲೀಸರಿಗೆ ತಿಳಿಸಿದ್ದಾನೆ. ತೆಲಂಗಾಣದ ಸಿರ್ಸಿಲ್ಲಾ ಎಂಬಲ್ಲಿ ಈ ಘಟನೆ ನಡೆಯಿತು.

ಪ್ರತಿದಿನ ಕಂಠಪೂರ್ತಿ ಮದ್ಯ ಸೇವಿಸಿ ಮನೆಗೆ ಬರುವ ತಂದೆ ನನ್ನ ತಾಯಿಗೆ ಹಲ್ಲೆ ನಡೆಸುತ್ತಾರೆ. ಇದರಿಂದ ಮನೆಯಲ್ಲಿ ಇಬ್ಬರ ನಡುವೆ ಜಗಳ ನಡೆಯುತ್ತಲೇ ಇರುತ್ತದೆ ಎಂದು ಆತ ಪ್ರಕರಣ ದಾಖಲಿಸಿದ್ದಾನೆ. ಸಿರ್ಸಿಲ್ಲಾ ಜಿಲ್ಲೆಯ ಮುಸ್ತಾಬಾದ್​​ನಲ್ಲಿ ವಾಸವಾಗಿರುವ ದೀಪಿಕಾ-ಬಾಲಕಿಶನ್​ ದಂಪತಿಗೆ ಭರತ್ ಮತ್ತು ಶಿವಾನಿ ಎಂಬಿಬ್ಬರು ಮಕ್ಕಳಿದ್ದಾರೆ. ಬಾಲಕಿಶನ್​ ಮದ್ಯಕ್ಕೆ ದಾಸನಾಗಿ ಪತ್ನಿ ಮನಬಂದಂತೆ ಹಲ್ಲೆ ನಡೆಸುತ್ತಾನೆ. ಇದನ್ನು ನೋಡಿರುವ ಭರತ್​ ದೌರ್ಜನ್ಯ ಸಹಿಸಲಾಗದೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ.

ನಿನ್ನೆ ಬೆಳಗ್ಗೆ ಕೂಡ ಕುಡಿದ ಅಮಲಿನಲ್ಲಿದ್ದ ತಂದೆಯನ್ನು ನೋಡಿರುವ ಮಗ​​ ಪೊಲೀಸ್ ಠಾಣೆಗೆ ತೆರಳಿದ್ದು, ಠಾಣೆಯಲ್ಲಿದ್ದ ಎಸ್​​ಐ ವೆಂಕಟೇಶ್ವರಲು ಅವರಿಗೆ ವಿಷಯ ವಿವರಿಸಿದ್ದಾನೆ. "ಪೊಲೀಸ್ ಠಾಣೆಗೆ ಬರಲು ನಿನಗೆ ಯಾರು ಹೇಳಿದರು?" ಎಂದು ಸಬ್​ ಇನ್ಸ್​​ಪೆಕ್ಟರ್ ಕೇಳಿದ್ದಾರೆ. ಆಗ ಆತ, "ನಾನೇ ಬಂದಿರುವೆ ಸಾರ್" ಎಂದು ಹೇಳಿದ್ದಾನೆ. "ಪೊಲೀಸರು ನಿಮಗೆ ನ್ಯಾಯ ಕೊಡುತ್ತಾರೆ ಎಂಬ ನಂಬಿಕೆ ಇದೆಯೇ?" ಎಂದು ಮರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಹಸು ಕಾಣೆಯಾಗಿದ್ದಕ್ಕೆ ಮನೆಯವರು ಹೊಡೆಯುತ್ತಾರೆಂದು ಹೆದರಿ ಬಾಲಕ ಆತ್ಮಹತ್ಯೆ

ಆ ಹುಡುಗ, "ಸಾರ್, ನೀವು ಸಹಾಯ ಮಾಡುತ್ತೀರಿ ಎಂಬ ನಂಬಿಕೆಯಿಂದ ಬಂದಿದ್ದೇನೆ" ಎಂದಿದ್ದ. ಆ ಬಾಲಕನ ಉತ್ತರದಿಂದ ಪ್ರಭಾವಿತರಾದ ಎಸ್​​ಐ, ತಕ್ಷಣವೇ ಬಾಲಕನ ಪೋಷಕರನ್ನು ಠಾಣೆಗೆ ಕರೆತಂದಿದ್ದಾರೆ. ಬಾಲಕಿಶನ್​ಗೆ ಕೌನ್ಸೆಲಿಂಗ್ ಮಾಡಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದ್ದಾರೆ.

ಸಿರ್ಸಿಲ್ಲಾ(ತೆಲಂಗಾಣ): ಪೊಲೀಸ್ ಠಾಣೆ ಮೆಟ್ಟಿಲೇರಲು ಇಂದಿನ ದಿನಗಳಲ್ಲೂ ಅನೇಕರು ಹಿಂದೇಟು ಹಾಕ್ತಾರೆ. ಆದರೆ, ಮನೆಯಲ್ಲಿ ನಡೆಯುತ್ತಿದ್ದ ತಂದೆ-ತಾಯಿ ಜಗಳದಿಂದ ನೊಂದಿರುವ ಬಾಲಕನೋರ್ವ ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾನೆ. ಅಪ್ಪ ದಿನಾಲೂ ಕುಡಿದು ಬಂದು ಅಮ್ಮನಿಗೆ ಹೊಡೆಯುತ್ತಾರೆ ಸಾರ್​ ಎಂದು 3ನೇ ತರಗತಿ ಪುಟ್ಟ ಬಾಲಕನೋರ್ವ ಪೊಲೀಸರಿಗೆ ತಿಳಿಸಿದ್ದಾನೆ. ತೆಲಂಗಾಣದ ಸಿರ್ಸಿಲ್ಲಾ ಎಂಬಲ್ಲಿ ಈ ಘಟನೆ ನಡೆಯಿತು.

ಪ್ರತಿದಿನ ಕಂಠಪೂರ್ತಿ ಮದ್ಯ ಸೇವಿಸಿ ಮನೆಗೆ ಬರುವ ತಂದೆ ನನ್ನ ತಾಯಿಗೆ ಹಲ್ಲೆ ನಡೆಸುತ್ತಾರೆ. ಇದರಿಂದ ಮನೆಯಲ್ಲಿ ಇಬ್ಬರ ನಡುವೆ ಜಗಳ ನಡೆಯುತ್ತಲೇ ಇರುತ್ತದೆ ಎಂದು ಆತ ಪ್ರಕರಣ ದಾಖಲಿಸಿದ್ದಾನೆ. ಸಿರ್ಸಿಲ್ಲಾ ಜಿಲ್ಲೆಯ ಮುಸ್ತಾಬಾದ್​​ನಲ್ಲಿ ವಾಸವಾಗಿರುವ ದೀಪಿಕಾ-ಬಾಲಕಿಶನ್​ ದಂಪತಿಗೆ ಭರತ್ ಮತ್ತು ಶಿವಾನಿ ಎಂಬಿಬ್ಬರು ಮಕ್ಕಳಿದ್ದಾರೆ. ಬಾಲಕಿಶನ್​ ಮದ್ಯಕ್ಕೆ ದಾಸನಾಗಿ ಪತ್ನಿ ಮನಬಂದಂತೆ ಹಲ್ಲೆ ನಡೆಸುತ್ತಾನೆ. ಇದನ್ನು ನೋಡಿರುವ ಭರತ್​ ದೌರ್ಜನ್ಯ ಸಹಿಸಲಾಗದೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ.

ನಿನ್ನೆ ಬೆಳಗ್ಗೆ ಕೂಡ ಕುಡಿದ ಅಮಲಿನಲ್ಲಿದ್ದ ತಂದೆಯನ್ನು ನೋಡಿರುವ ಮಗ​​ ಪೊಲೀಸ್ ಠಾಣೆಗೆ ತೆರಳಿದ್ದು, ಠಾಣೆಯಲ್ಲಿದ್ದ ಎಸ್​​ಐ ವೆಂಕಟೇಶ್ವರಲು ಅವರಿಗೆ ವಿಷಯ ವಿವರಿಸಿದ್ದಾನೆ. "ಪೊಲೀಸ್ ಠಾಣೆಗೆ ಬರಲು ನಿನಗೆ ಯಾರು ಹೇಳಿದರು?" ಎಂದು ಸಬ್​ ಇನ್ಸ್​​ಪೆಕ್ಟರ್ ಕೇಳಿದ್ದಾರೆ. ಆಗ ಆತ, "ನಾನೇ ಬಂದಿರುವೆ ಸಾರ್" ಎಂದು ಹೇಳಿದ್ದಾನೆ. "ಪೊಲೀಸರು ನಿಮಗೆ ನ್ಯಾಯ ಕೊಡುತ್ತಾರೆ ಎಂಬ ನಂಬಿಕೆ ಇದೆಯೇ?" ಎಂದು ಮರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಹಸು ಕಾಣೆಯಾಗಿದ್ದಕ್ಕೆ ಮನೆಯವರು ಹೊಡೆಯುತ್ತಾರೆಂದು ಹೆದರಿ ಬಾಲಕ ಆತ್ಮಹತ್ಯೆ

ಆ ಹುಡುಗ, "ಸಾರ್, ನೀವು ಸಹಾಯ ಮಾಡುತ್ತೀರಿ ಎಂಬ ನಂಬಿಕೆಯಿಂದ ಬಂದಿದ್ದೇನೆ" ಎಂದಿದ್ದ. ಆ ಬಾಲಕನ ಉತ್ತರದಿಂದ ಪ್ರಭಾವಿತರಾದ ಎಸ್​​ಐ, ತಕ್ಷಣವೇ ಬಾಲಕನ ಪೋಷಕರನ್ನು ಠಾಣೆಗೆ ಕರೆತಂದಿದ್ದಾರೆ. ಬಾಲಕಿಶನ್​ಗೆ ಕೌನ್ಸೆಲಿಂಗ್ ಮಾಡಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.