ETV Bharat / bharat

ಭಾರತದ ಅತಿ ಉದ್ದದ ಉಕ್ಕಿನ ಸೇತುವೆ ಉದ್ಘಾಟಿಸಿದ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ - ಉಕ್ಕಿನ ಸೇತುವೆ'

ಬಾಂಗ್ಲಾದೇಶ ಹಾಗೂ ಭಾರತದ ಗಡಿ ಭಾಗದ ವಾಹ್ರೂ ನದಿ ತಟದಲ್ಲಿ ದೇಶದ ಅತಿ ಉದ್ದದ ಉಕ್ಕಿನ ಸೇತುವೆ ನಿರ್ಮಾಣ ಮಾಡಲಾಗಿದ್ದು, ಶುಕ್ರವಾರ ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಈ ಸೇತುವೆಯ ಉದ್ಘಾಟನೆಯ ಕಾರ್ಯ ನೆರವೇರಿಸಿದ್ದಾರೆ.

s India's longest steel arch bridge
ಭಾರತದ ಅತಿ ಉದ್ದದ ಉಕ್ಕಿನ ಸೇತುವೆ
author img

By

Published : Jan 23, 2021, 1:02 PM IST

ಶಿಲ್ಲಾಂಗ್(ಮೇಘಾಲಯ): ಪ್ರವಾಸೋದ್ಯಮ ಹಾಗೂ ಬಾಂಗ್ಲಾ ದೇಶದೊಂದಿಗಿನ ವ್ಯಾಪಾರ ವಹಿವಾಟಿಗೆ ಉತ್ತೇಜನ ನೀಡುವ ದೃಷ್ಠಿಯಿಂದ ವಹ್ರೂ ನದಿಯ ತಟದಲ್ಲಿ ನಿರ್ಮಿಸಲಾಗಿರುವ ದೇಶದ ಅತಿ ದೊಡ್ಡ ಉಕ್ಕಿನ ಸೇತುವೆಯನ್ನು ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಶುಕ್ರವಾರ ಉದ್ಘಾಟಿಸಿದರು.

ಬಾಂಗ್ಲಾದೇಶದ ಗಡಿಯಲ್ಲಿ ನಿರ್ಮಿಸಲಾಗಿರುವ ಈ ಸೇತುವೆ, ಭೋಲಗಂಜ್ ಮತ್ತು ಸಾಬಾರ್​ ನಡುವೆ ಸಂಪರ್ಕ ಕಲ್ಪಿಸುವ ಸುಗಮ ಹಾದಿಯಾಗಿದೆ. ಈ ಸೇತುವೆ 169.350 ಮೀಟರ್ ಉದ್ದವಿದೆ. ಕೇಂದ್ರ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯ ಸೇತುವೆ ನಿರ್ಮಾಣಕ್ಕೆ ಹಣ ಮಂಜೂರು ಮಾಡಿದ್ದು, 49.395 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ.

ಸೇತುವೆ ಉದ್ಘಾಟಿಸಿ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಂಗ್ಮಾ, ಇದು ನಮ್ಮ ದೇಶದ ಅತ್ಯಂತ ಉದ್ದದ ಉಕ್ಕಿನ ಸೇತುವೆಯಾಗಿದೆ. ಇದು ಭೋಲಗಂಜ್ ಮತ್ತು ಸಾಬಾರ್​ ಪ್ರದೇಶವನ್ನು ವಾಹ್ರೂ ನದಿಯ ಮೇಲಿರುವ ನೊಂಗಿರಿ ಜೊತೆ ಸಂಪರ್ಕಿಸಲು ಅತ್ಯಂತ ಅನುಕೂಲಕಾರಿಯಾಗಿದೆ. ಈ ಸೇತುವೆ ಮೇಘಾಲಯದ ಜನರ ಬಹು ದಿನದ ಕನಸಾಗಿತ್ತು ಎಂದು ಬಣ್ಣಿಸಿದರು.

ಈ ಸೇತುವೆ ನಿರ್ಮಾಣದಿಂದಾಗಿ ರಾಜ್ಯದಲ್ಲಿ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಅದಲ್ಲದೆ, ಬಾಂಗ್ಲಾದೇಶದೊಂದಿಗೆ ವ್ಯಾಪಾರ ವಹಿವಾಟು ನಡೆಸಲೂ ಸಹ ಅನುಕೂಲವಾಗಲಿದೆ.

ಸೇತುವೆ ಉದ್ಘಾಟನೆ ಕಾರ್ಯಕ್ರಮದ ವೇಳೆ ಉಪಮುಖ್ಯಮಂತ್ರಿ ಪ್ರೆಸ್ಟೋನ್ ಟಿನ್ಸೊಂಗ್, ಸ್ಪೀಕರ್ ಮೆಟ್ಬಾ ಲಿಂಗ್ಡೊ, ಸ್ಥಳೀಯ ಶಾಸಕ ಬಾಲಾಜೀದ್ ಸಿನ್ರೆಮ್ ಮತ್ತು ಸರ್ಕಾರಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಶಿಲ್ಲಾಂಗ್(ಮೇಘಾಲಯ): ಪ್ರವಾಸೋದ್ಯಮ ಹಾಗೂ ಬಾಂಗ್ಲಾ ದೇಶದೊಂದಿಗಿನ ವ್ಯಾಪಾರ ವಹಿವಾಟಿಗೆ ಉತ್ತೇಜನ ನೀಡುವ ದೃಷ್ಠಿಯಿಂದ ವಹ್ರೂ ನದಿಯ ತಟದಲ್ಲಿ ನಿರ್ಮಿಸಲಾಗಿರುವ ದೇಶದ ಅತಿ ದೊಡ್ಡ ಉಕ್ಕಿನ ಸೇತುವೆಯನ್ನು ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಶುಕ್ರವಾರ ಉದ್ಘಾಟಿಸಿದರು.

ಬಾಂಗ್ಲಾದೇಶದ ಗಡಿಯಲ್ಲಿ ನಿರ್ಮಿಸಲಾಗಿರುವ ಈ ಸೇತುವೆ, ಭೋಲಗಂಜ್ ಮತ್ತು ಸಾಬಾರ್​ ನಡುವೆ ಸಂಪರ್ಕ ಕಲ್ಪಿಸುವ ಸುಗಮ ಹಾದಿಯಾಗಿದೆ. ಈ ಸೇತುವೆ 169.350 ಮೀಟರ್ ಉದ್ದವಿದೆ. ಕೇಂದ್ರ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯ ಸೇತುವೆ ನಿರ್ಮಾಣಕ್ಕೆ ಹಣ ಮಂಜೂರು ಮಾಡಿದ್ದು, 49.395 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ.

ಸೇತುವೆ ಉದ್ಘಾಟಿಸಿ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಂಗ್ಮಾ, ಇದು ನಮ್ಮ ದೇಶದ ಅತ್ಯಂತ ಉದ್ದದ ಉಕ್ಕಿನ ಸೇತುವೆಯಾಗಿದೆ. ಇದು ಭೋಲಗಂಜ್ ಮತ್ತು ಸಾಬಾರ್​ ಪ್ರದೇಶವನ್ನು ವಾಹ್ರೂ ನದಿಯ ಮೇಲಿರುವ ನೊಂಗಿರಿ ಜೊತೆ ಸಂಪರ್ಕಿಸಲು ಅತ್ಯಂತ ಅನುಕೂಲಕಾರಿಯಾಗಿದೆ. ಈ ಸೇತುವೆ ಮೇಘಾಲಯದ ಜನರ ಬಹು ದಿನದ ಕನಸಾಗಿತ್ತು ಎಂದು ಬಣ್ಣಿಸಿದರು.

ಈ ಸೇತುವೆ ನಿರ್ಮಾಣದಿಂದಾಗಿ ರಾಜ್ಯದಲ್ಲಿ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಅದಲ್ಲದೆ, ಬಾಂಗ್ಲಾದೇಶದೊಂದಿಗೆ ವ್ಯಾಪಾರ ವಹಿವಾಟು ನಡೆಸಲೂ ಸಹ ಅನುಕೂಲವಾಗಲಿದೆ.

ಸೇತುವೆ ಉದ್ಘಾಟನೆ ಕಾರ್ಯಕ್ರಮದ ವೇಳೆ ಉಪಮುಖ್ಯಮಂತ್ರಿ ಪ್ರೆಸ್ಟೋನ್ ಟಿನ್ಸೊಂಗ್, ಸ್ಪೀಕರ್ ಮೆಟ್ಬಾ ಲಿಂಗ್ಡೊ, ಸ್ಥಳೀಯ ಶಾಸಕ ಬಾಲಾಜೀದ್ ಸಿನ್ರೆಮ್ ಮತ್ತು ಸರ್ಕಾರಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.