ಬಿಲಾಸ್ಪುರ : ಹಾಂಗ್ಕಾಂಗ್ನಲ್ಲಿ ವಾಸಿಸುತ್ತಿರುವ ಬಿಲಾಸ್ಪುರದ ನೋವಾ ಗ್ರಾಮದ ನಿವಾಸಿ ಮಾಯಾಂಕ್ ವೈದ್ 24 ಆಮ್ಲಜನಕ ಸಾಂದ್ರಕಗಳನ್ನು ಯಂತ್ರಗಳನ್ನು ಕೊರೊನಾ ರೋಗಿಗಳ ನೆರವಿಗಾಗಿ ಕಳುಹಿಸಿದ್ದಾರೆ.

ಮಾಯಾಂಕ್ ಬಹುರಾಷ್ಟ್ರೀಯ ಕಂಪನಿಯ ಹಿರಿಯ ವಕೀಲ. ಮಾಯಾಂಕ್ ವೈದ್ ಕಳುಹಿಸಿದ ಈ ಯಂತ್ರಗಳು ಮುಂದಿನ ವಾರ ಬಿಲಾಸ್ಪುರವನ್ನು ತಲುಪಲಿವೆ.
ಈ ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ಜನರಿಗೆ ಅಲ್ಪ ಸಹಾಯ ಮಾಡಲೆಂದು ಆಮ್ಲಜನಕ ಸಾಂದ್ರಕಗಳನ್ನು ಕಳುಹಿಸಿಕೊಟ್ಟಿದ್ದೇನೆ ಎಂದಿದ್ದಾರೆ.
ಓದಿ:22 ಟನ್ ಆಮ್ಲಜನಕ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತ..
ಅಗತ್ಯಕ್ಕೆ ಅನುಗುಣವಾಗಿ ಸಾಂದ್ರಕಗಳನ್ನು ಜಿಲ್ಲಾಸ್ಪತ್ರೆ ಮತ್ತು ಕೋವಿಡ್ ಕೇಂದ್ರಗಳಿಗೆ ಕಳುಹಿಸಲಾಗುವುದು ಎಂದು ಮಾಯಾಂಕ್ ವೈದ್ ಸಹೋದರ ಲಕ್ಷ್ಯ ವೈದ್ ತಿಳಿಸಿದ್ದಾರೆ. ಮಾಯಾಂಕ್ ವೈದ್ 463 ಕಿ.ಮೀ ಎಂಡ್ಯೂರೋಮನ್ ರೇಸ್ ಗೆಲ್ಲುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ.
