ETV Bharat / bharat

ವ್ಯಕ್ತಿಗೆ ಕಪಾಳಮೋಕ್ಷ ಮಾಡಿ ಮೊಬೈಲ್‌ ಕಿತ್ತೆಸೆದ ಜಿಲ್ಲಾಧಿಕಾರಿ: ಘಟನೆಗೆ ವ್ಯಾಪಕ ಖಂಡನೆ, ಡಿಸಿ ಎತ್ತಂಗಡಿ

ಛತ್ತೀಸ್‌ಗಢದಲ್ಲೂ ಕಟ್ಟುನಿಟ್ಟಿನ ಕೋವಿಡ್ ಲಾಕ್​ಡೌನ್‌ ಮಾರ್ಗಸೂಚಿಗಳು ಜಾರಿಯಲ್ಲಿವೆ. ಸರ್ಕಾರ ಸೂಚಿಸಿದ ಕಾಲಾವಧಿ ಹೊರತುಪಡಿಸಿ ಜನರಿಗೆ ಬೇಕಾಬಿಟ್ಟಿ ಸುತ್ತಾಡಲು ಅವಕಾಶವಿಲ್ಲ. ಛತ್ತೀಸ್‌ಗಢದ ಸೂರಜ್‌ಪುರದ ಜಿಲ್ಲಾಧಿಕಾರಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯನ್ನು ತಡೆದು ಆತನಿಗೆ ಕಪಾಳಮೋಕ್ಷ ಮಾಡಿ, ಮೊಬೈಲ್‌ ಕಿತ್ತೆಸೆದ ಘಟನೆ ನಡೆಯಿತು. ಜನಸಾಮಾನ್ಯನ ಮೇಲೆ ಡಿಸಿ ತೋರಿದ ವಿವೇಚನಾರಹಿತ ವರ್ತನೆಯನ್ನು ಛತ್ತೀಸ್‌ಗಢ ಸಿಎಂ ಗಂಭೀರವಾಗಿ ಪರಿಗಣಿಸಿದ್ದು, ಅವರನ್ನು ತಕ್ಷಣದಿಂದಲೇ ಎತ್ತಂಗಡಿ ಮಾಡಿದ್ದಾರೆ.

author img

By

Published : May 23, 2021, 6:57 AM IST

Updated : May 23, 2021, 11:05 AM IST

Man Going To Buy Medicine Thrashed In Chhattisgarh
ಔಷಧಿ ತರಲು ಹೋಗುತ್ತಿದ್ದ ವ್ಯಕ್ತಿ ಮೇಲೆ ಪೊಲೀಸರಿಂದ ಹಲ್ಲೆ ಆರೋಪ

ರಾಯಪುರ: ಛತ್ತೀಸ್‌ಗಢದ ಸೂರಜ್‌ಪುರದಲ್ಲಿ ಲಾಕ್‌ಡೌನ್ ಮಧ್ಯೆ ಔಷಧಿ ಖರೀದಿಸಲು ಹೊರಟಿದ್ದ ವ್ಯಕ್ತಿಯೊಬ್ಬನನ್ನು ಜಿಲ್ಲಾಧಿಕಾರಿಯೊಬ್ಬರು ತಡೆದು, ಆತನಿಗೆ ಕಪಾಳಮೋಕ್ಷ ಮಾಡಿ ಮೊಬೈಲ್‌ ಕಸಿದು ರಸ್ತೆಗೆಸೆದ ಪ್ರಸಂಗ ನಡೆದಿದೆ. ಈ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿದ್ದು, ಡೀಸಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಮೊಬೈಲ್​ನಲ್ಲಿ ಸೆರೆಹಿಡಿಯಲಾದ ವಿಡಿಯೋವೊಂದರಲ್ಲಿ ಜಿಲ್ಲಾಧಿಕಾರಿ ರಣಬೀರ್ ಶರ್ಮಾ ಅವರು ವ್ಯಕ್ತಿಯೋರ್ವನ ಬಳಿಗೆ ಬಂದು ಆತನ ಬಳಿಯಿದ್ದ ಗುರುತಿನ ಚೀಟಿ ಪಡೆಯುತ್ತಾರೆ. ನಂತರ ಮೊಬೈಲ್ ಫೋನ್ ನೀಡುವಂತೆ ಕೇಳುತ್ತಾರೆ. ಆತ ಮೊಬೈಲ್​ ಕೊಟ್ಟ ತಕ್ಷಣ ಅದನ್ನು ನೆಲಕ್ಕೆಸೆಯುತ್ತಾರೆ. ಸಿಟ್ಟಿಗೆದ್ದು ಇದ್ದಕ್ಕಿದ್ದಂತೆ ವ್ಯಕ್ತಿಯ ಕಪಾಳಕ್ಕೂ ಹೊಡೆಯುತ್ತಾರೆ.

ಈ ವ್ಯಕ್ತಿಯನ್ನು ಸಾಹಿಲ್ ಗುಪ್ತಾ ಎಂದು ಗುರುತಿಸಲಾಗಿದ್ದು, ಕೋವಿಡ್ ನಿಯಮ ಉಲ್ಲಂಘಸಿದ ಕಾರಣಕ್ಕೆ ಆತನ ವಿರುದ್ಧ ಪೊಲೀಸರು ಪ್ರಕರಣವನ್ನೂ ದಾಖಲಿಸಿಕೊಂಡಿದ್ದರು.

ಜಿಲ್ಲಾಧಿಕಾರಿ ನಡೆಗೆ ಸಿಎಂ ಗರಂ: ಡಿಸಿಗೆ ಎತ್ತಂಗಡಿ ಶಿಕ್ಷೆ

‘ಯಾವುದೇ ಅಧಿಕಾರಿಯ ವೃತ್ತಿ ಜೀವನದಲ್ಲಿ ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ. ಘಟನೆ ಸಂಬಂಧ ನಾನು ಆ ಯುವಕ ಮತ್ತು ಕುಟುಂಬದ ಕ್ಷಮೆ ಯಾಚಿಸುತ್ತೇನೆ. ಛತ್ತೀಸ್‌ಗಢದಲ್ಲಿ ಇಂತಹ ಯಾವುದೇ ಕೃತ್ಯವನ್ನು ಸಹಿಸುವುದಿಲ್ಲ. ಡಿಸಿ ರಣಬೀರ್ ಶರ್ಮಾ ಅವರ ಸ್ಥಳಾಂತರಕ್ಕೆ ತಕ್ಷಣದಿಂದ ಜಾರಿಯಾಗುವಂತೆ ಸೂಚನೆ ನೀಡಲಾಗಿದೆ’ ಎಂದು ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಟ್ವೀಟ್​ ಮಾಡಿದ್ದಾರೆ.

  • सोशल मीडिया के माध्यम से सूरजपुर कलेक्टर रणबीर शर्मा द्वारा एक नवयुवक से दुर्व्यवहार का मामला मेरे संज्ञान में आया है।

    यह बेहद दुखद और निंदनीय है। छत्तीसगढ़ में इस तरह का कोई कृत्य कतई बर्दाश्त नहीं किया जाएगा।

    कलेक्टर रणबीर शर्मा को तत्काल प्रभाव से हटाने के निर्देश दिए हैं।

    — Bhupesh Baghel (@bhupeshbaghel) May 23, 2021 " class="align-text-top noRightClick twitterSection" data=" ">

ಐಎಎಸ್ ಅಸೋಸಿಯೇಷನ್ ಖಂಡನೆ:

‘ಛತ್ತೀಸ್‌ಗಢದ ಸೂರಜ್‌ಪುರದ ಜಿಲ್ಲಾಧಿಕಾರಿ ನಡವಳಿಕೆಯನ್ನು ಐಎಎಸ್ ಅಸೋಸಿಯೇಷನ್ ಕೂಡಾ ತೀವ್ರವಾಗಿ ಖಂಡಿಸಿದೆ. ಇದು ಸ್ವೀಕಾರಾರ್ಹವಲ್ಲ. ಸೇವೆ ಮತ್ತು ನಾಗರಿಕತೆಯ ಮೂಲ ಸಿದ್ಧಾಂತಗಳಿಗೆ ವಿರುದ್ಧವಾಗಿದೆ. ಸಾರ್ವಜನಿಕರ ಸೇವೆಯಲ್ಲಿರುವವರು ಎಲ್ಲಾ ಸಮಯದಲ್ಲೂ ಪರಾನುಭೂತಿ ಹೊಂದಿರಬೇಕು. ಈ ಕಷ್ಟ ಕಾಲದಲ್ಲಿ ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು’ ಎಂದು ಐಎಎಸ್ ಅಸೋಸಿಯೇಷನ್ ಹೇಳಿದೆ.

ರಾಯಪುರ: ಛತ್ತೀಸ್‌ಗಢದ ಸೂರಜ್‌ಪುರದಲ್ಲಿ ಲಾಕ್‌ಡೌನ್ ಮಧ್ಯೆ ಔಷಧಿ ಖರೀದಿಸಲು ಹೊರಟಿದ್ದ ವ್ಯಕ್ತಿಯೊಬ್ಬನನ್ನು ಜಿಲ್ಲಾಧಿಕಾರಿಯೊಬ್ಬರು ತಡೆದು, ಆತನಿಗೆ ಕಪಾಳಮೋಕ್ಷ ಮಾಡಿ ಮೊಬೈಲ್‌ ಕಸಿದು ರಸ್ತೆಗೆಸೆದ ಪ್ರಸಂಗ ನಡೆದಿದೆ. ಈ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿದ್ದು, ಡೀಸಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಮೊಬೈಲ್​ನಲ್ಲಿ ಸೆರೆಹಿಡಿಯಲಾದ ವಿಡಿಯೋವೊಂದರಲ್ಲಿ ಜಿಲ್ಲಾಧಿಕಾರಿ ರಣಬೀರ್ ಶರ್ಮಾ ಅವರು ವ್ಯಕ್ತಿಯೋರ್ವನ ಬಳಿಗೆ ಬಂದು ಆತನ ಬಳಿಯಿದ್ದ ಗುರುತಿನ ಚೀಟಿ ಪಡೆಯುತ್ತಾರೆ. ನಂತರ ಮೊಬೈಲ್ ಫೋನ್ ನೀಡುವಂತೆ ಕೇಳುತ್ತಾರೆ. ಆತ ಮೊಬೈಲ್​ ಕೊಟ್ಟ ತಕ್ಷಣ ಅದನ್ನು ನೆಲಕ್ಕೆಸೆಯುತ್ತಾರೆ. ಸಿಟ್ಟಿಗೆದ್ದು ಇದ್ದಕ್ಕಿದ್ದಂತೆ ವ್ಯಕ್ತಿಯ ಕಪಾಳಕ್ಕೂ ಹೊಡೆಯುತ್ತಾರೆ.

ಈ ವ್ಯಕ್ತಿಯನ್ನು ಸಾಹಿಲ್ ಗುಪ್ತಾ ಎಂದು ಗುರುತಿಸಲಾಗಿದ್ದು, ಕೋವಿಡ್ ನಿಯಮ ಉಲ್ಲಂಘಸಿದ ಕಾರಣಕ್ಕೆ ಆತನ ವಿರುದ್ಧ ಪೊಲೀಸರು ಪ್ರಕರಣವನ್ನೂ ದಾಖಲಿಸಿಕೊಂಡಿದ್ದರು.

ಜಿಲ್ಲಾಧಿಕಾರಿ ನಡೆಗೆ ಸಿಎಂ ಗರಂ: ಡಿಸಿಗೆ ಎತ್ತಂಗಡಿ ಶಿಕ್ಷೆ

‘ಯಾವುದೇ ಅಧಿಕಾರಿಯ ವೃತ್ತಿ ಜೀವನದಲ್ಲಿ ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ. ಘಟನೆ ಸಂಬಂಧ ನಾನು ಆ ಯುವಕ ಮತ್ತು ಕುಟುಂಬದ ಕ್ಷಮೆ ಯಾಚಿಸುತ್ತೇನೆ. ಛತ್ತೀಸ್‌ಗಢದಲ್ಲಿ ಇಂತಹ ಯಾವುದೇ ಕೃತ್ಯವನ್ನು ಸಹಿಸುವುದಿಲ್ಲ. ಡಿಸಿ ರಣಬೀರ್ ಶರ್ಮಾ ಅವರ ಸ್ಥಳಾಂತರಕ್ಕೆ ತಕ್ಷಣದಿಂದ ಜಾರಿಯಾಗುವಂತೆ ಸೂಚನೆ ನೀಡಲಾಗಿದೆ’ ಎಂದು ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಟ್ವೀಟ್​ ಮಾಡಿದ್ದಾರೆ.

  • सोशल मीडिया के माध्यम से सूरजपुर कलेक्टर रणबीर शर्मा द्वारा एक नवयुवक से दुर्व्यवहार का मामला मेरे संज्ञान में आया है।

    यह बेहद दुखद और निंदनीय है। छत्तीसगढ़ में इस तरह का कोई कृत्य कतई बर्दाश्त नहीं किया जाएगा।

    कलेक्टर रणबीर शर्मा को तत्काल प्रभाव से हटाने के निर्देश दिए हैं।

    — Bhupesh Baghel (@bhupeshbaghel) May 23, 2021 " class="align-text-top noRightClick twitterSection" data=" ">

ಐಎಎಸ್ ಅಸೋಸಿಯೇಷನ್ ಖಂಡನೆ:

‘ಛತ್ತೀಸ್‌ಗಢದ ಸೂರಜ್‌ಪುರದ ಜಿಲ್ಲಾಧಿಕಾರಿ ನಡವಳಿಕೆಯನ್ನು ಐಎಎಸ್ ಅಸೋಸಿಯೇಷನ್ ಕೂಡಾ ತೀವ್ರವಾಗಿ ಖಂಡಿಸಿದೆ. ಇದು ಸ್ವೀಕಾರಾರ್ಹವಲ್ಲ. ಸೇವೆ ಮತ್ತು ನಾಗರಿಕತೆಯ ಮೂಲ ಸಿದ್ಧಾಂತಗಳಿಗೆ ವಿರುದ್ಧವಾಗಿದೆ. ಸಾರ್ವಜನಿಕರ ಸೇವೆಯಲ್ಲಿರುವವರು ಎಲ್ಲಾ ಸಮಯದಲ್ಲೂ ಪರಾನುಭೂತಿ ಹೊಂದಿರಬೇಕು. ಈ ಕಷ್ಟ ಕಾಲದಲ್ಲಿ ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು’ ಎಂದು ಐಎಎಸ್ ಅಸೋಸಿಯೇಷನ್ ಹೇಳಿದೆ.

Last Updated : May 23, 2021, 11:05 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.