ETV Bharat / bharat

ಮಥುರಾದಲ್ಲಿ ಎನ್‌ಕೌಂಟರ್‌: ಪೊಲೀಸ್​ ಗುಂಡೇಟಿಗೆ ದರೋಡೆ, ಕೊಲೆ ಪ್ರಕರಣದ ಆರೋಪಿ ಬಲಿ

author img

By PTI

Published : Nov 12, 2023, 7:08 PM IST

Encounter in UP: ಉತ್ತರಪ್ರದೇಶದ ಮಥುರಾದಲ್ಲಿ ದರೋಡೆ ಪ್ರಕರಣದ ಆರೋಪಿಯನ್ನು ಪೊಲೀಸರು ಎನ್​ಕೌಂಟರ್​ ಮಾಡಿದ್ದಾರೆ.

ಮಥುರಾದಲ್ಲಿ ಎನ್‌ಕೌಂಟರ್‌
ಮಥುರಾದಲ್ಲಿ ಎನ್‌ಕೌಂಟರ್‌

ಮಥುರಾ (ಉತ್ತರಪ್ರದೇಶ) : ವ್ಯಕ್ತಿಯೊಬ್ಬರ ಕೊಲೆ, ದರೋಡೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿ ಪೊಲೀಸ್​ ಎನ್​ಕೌಂಟರ್​ನಲ್ಲಿ ಹತನಾಗಿದ್ದಾನೆ. ಇಲ್ಲಿನ ಪೊಲೀಸ್‌ ಠಾಣೆ ವ್ಯಾಪ್ತಿಯ ಹೋಟೆಲ್​ ಬಳಿ ಆರೋಪಿಯನ್ನು ಬೆನ್ನಟ್ಟಿ ಹಿಡಿಯುತ್ತಿರುವಾಗ ಶೂಟೌಟ್​ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ದರ್ವಾಜಾ ನಿವಾಸಿ ಫಾರೂಖ್‌ ಹತನಾದ ವ್ಯಕ್ತಿ. ಫಾರೂಖ್​ ತನ್ನ ಸಹಚರ ಮೊಹ್ಸಿನ್ ಎಂಬಾತನ ಜೊತೆ ಸೇರಿಕೊಂಡು ನವೆಂಬರ್ 4 ರಂದು ಉದ್ಯಮಿ ಕೃಷ್ಣ ಕುಮಾರ್ ಅಗರ್ವಾಲ್ ಮತ್ತು ಅವರ ಪತ್ನಿ ಕಲ್ಪನಾ ಅಗರ್ವಾಲ್ ಮೇಲೆ ದಾಳಿ ಮಾಡಿ, ಅವರ ನಿವಾಸದಲ್ಲಿ ಲೂಟಿ ಮಾಡಿದ್ದರು. ಈ ವೇಳೆ ಉದ್ಯಮಿ ಗಂಭೀರ ಗಾಯಗೊಂಡು, ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅವರ ಪತ್ನಿ ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದರು.

ಆರೋಪಿ ತಲೆಗೆ 50 ಸಾವಿರ: ಈ ಬಗ್ಗೆ ದೂರು ದಾಖಲಾಗಿದ್ದು, ಹೆದ್ದಾರಿ ಪೊಲೀಸ್​ ಠಾಣೆ ಸಿಬ್ಬಂದಿ ಆರೋಪಿಗಳಾದ ಫಾರೂಖ್​ ಮತ್ತು ಮೊಹ್ಸಿನ್​ ಬಂಧನಕ್ಕೆ ಜಾಲ ಬೀಸಿದ್ದರು. ಅಲ್ಲದೇ, ಫಾರೂಖ್​ ತಲೆಗೆ 50 ಸಾವಿರ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ತಲೆಮರೆಸಿಕೊಂಡು ತಿರುಗುತ್ತಿದ್ದ ಫಾರೂಖ್​​ ಶನಿವಾರ ರಾತ್ರಿ (ನವೆಂಬರ್​ 11)ದಂದು ಮಥುರಾದಲ್ಲಿ ಕಾಣಿಸಿಕೊಂಡ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆತನನ್ನು ಪತ್ತೆ ಮಾಡಿದ್ದರು.

ಪೊಲೀಸರು ಆತನ ಬಂಧನಕ್ಕೆ ಮುಂದಾದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಗುಂಡು ಹಾರಿಸಿದ್ದಾರೆ. ತೀವ್ರ ಗಾಯಗೊಂಡಿದ್ದ ಫಾರೂಖ್​​ನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ.

ಆರೋಪಿಗಳಿಂದ ದರೋಡೆ ಹಣ ವಶ: ಮಥುರಾ ಎಸ್‌ಎಸ್‌ಪಿ ಸೈಲೇಶ್‌ ಕುಮಾರ್‌ ಪಾಂಡೆ ಮಾತನಾಡಿ, ಶನಿವಾರ ರಾತ್ರಿ ಹೆದ್ದಾರಿ ಪೊಲೀಸ್‌ ಠಾಣೆ ವ್ಯಾಪ್ತಿಯ ಹೋಟೆಲ್​ ಬಳಿ ಆರೋಪಿ ಫಾರೂಖ್​ ಕಾಣಿಸಿಕೊಂಡಾಗ, ಪೊಲೀಸರು ಬಂಧನಕ್ಕೆ ಹೋದಾಗ ಆತ ತಪ್ಪಿಸಿಕೊಂಡಿದ್ದಾನೆ. ಪೊಲೀಸರು ಎನ್‌ಕೌಂಟರ್‌ ಮಾಡಿದ್ದು, ಫಾರೂಖ್‌ ಗಾಯಗೊಂಡು ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ನವೆಂಬರ್ 10 ರಂದು ಪೊಲೀಸರು ಇನ್ನೊಬ್ಬ ಆರೋಪಿ ಮೊಹ್ಸಿನ್​ನನ್ನು ಬಂಧಿಸಿ ಆತನ ಬಳಿಯಿದ್ದ ಹಣವನ್ನು ವಶಪಡಿಸಿಕೊಂಡಿದ್ದರು. ಫಾರೂಖ್‌ನಿಂದ 21.8 ಲಕ್ಷ ರೂಪಾಯಿ, ಆಭರಣಗಳು ಮತ್ತು ಪಿಸ್ತೂಲ್ ಒಳಗೊಂಡ ಬ್ಯಾಗ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರತ್ಯೇಕ ಪ್ರಕರಣ- ಕೋಚಿಂಗ್​ ಸೆಂಟರ್​ ಮಾಲೀಕನ ಹತ್ಯೆ: ಉತ್ತರಪ್ರದೇಶದ ಔನ್​ಪುರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್​ ಸೆಂಟರ್​ ನಡೆಸುತ್ತಿದ್ದ ವ್ಯಕ್ತಿಯನ್ನು ಕೋಚಿಂಗ್​ ಸೆಂಟರ್​ನಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ. ಅಜಯ್​ ಕುಶ್ವಾಹ್​ ಕೊಲೆಯಾದ ಕೋಚಿಂಗ್​ ಸೆಂಟರ್​ ಮಾಲೀಕ. ಭಾನುವಾರ ಕೋಚಿಂಗ್ ಸೆಂಟರ್​ನಲ್ಲಿ ಮಲಗಿದ್ದಾಗ ದುಷ್ಕರ್ಮಿಗಳು ಅಜಯ್​ ಅವರ ಎದೆಗೆ ಗುಂಡಿಕ್ಕಿದ್ದಾರೆ.

ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಕೋಚಿಂಗ್ ಸೆಂಟರ್​ ಮಾಲೀಕನ ಎದೆಗೆ ಗುಂಡಿಕ್ಕಿ ಹತ್ಯೆ

ಮಥುರಾ (ಉತ್ತರಪ್ರದೇಶ) : ವ್ಯಕ್ತಿಯೊಬ್ಬರ ಕೊಲೆ, ದರೋಡೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿ ಪೊಲೀಸ್​ ಎನ್​ಕೌಂಟರ್​ನಲ್ಲಿ ಹತನಾಗಿದ್ದಾನೆ. ಇಲ್ಲಿನ ಪೊಲೀಸ್‌ ಠಾಣೆ ವ್ಯಾಪ್ತಿಯ ಹೋಟೆಲ್​ ಬಳಿ ಆರೋಪಿಯನ್ನು ಬೆನ್ನಟ್ಟಿ ಹಿಡಿಯುತ್ತಿರುವಾಗ ಶೂಟೌಟ್​ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ದರ್ವಾಜಾ ನಿವಾಸಿ ಫಾರೂಖ್‌ ಹತನಾದ ವ್ಯಕ್ತಿ. ಫಾರೂಖ್​ ತನ್ನ ಸಹಚರ ಮೊಹ್ಸಿನ್ ಎಂಬಾತನ ಜೊತೆ ಸೇರಿಕೊಂಡು ನವೆಂಬರ್ 4 ರಂದು ಉದ್ಯಮಿ ಕೃಷ್ಣ ಕುಮಾರ್ ಅಗರ್ವಾಲ್ ಮತ್ತು ಅವರ ಪತ್ನಿ ಕಲ್ಪನಾ ಅಗರ್ವಾಲ್ ಮೇಲೆ ದಾಳಿ ಮಾಡಿ, ಅವರ ನಿವಾಸದಲ್ಲಿ ಲೂಟಿ ಮಾಡಿದ್ದರು. ಈ ವೇಳೆ ಉದ್ಯಮಿ ಗಂಭೀರ ಗಾಯಗೊಂಡು, ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅವರ ಪತ್ನಿ ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದರು.

ಆರೋಪಿ ತಲೆಗೆ 50 ಸಾವಿರ: ಈ ಬಗ್ಗೆ ದೂರು ದಾಖಲಾಗಿದ್ದು, ಹೆದ್ದಾರಿ ಪೊಲೀಸ್​ ಠಾಣೆ ಸಿಬ್ಬಂದಿ ಆರೋಪಿಗಳಾದ ಫಾರೂಖ್​ ಮತ್ತು ಮೊಹ್ಸಿನ್​ ಬಂಧನಕ್ಕೆ ಜಾಲ ಬೀಸಿದ್ದರು. ಅಲ್ಲದೇ, ಫಾರೂಖ್​ ತಲೆಗೆ 50 ಸಾವಿರ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ತಲೆಮರೆಸಿಕೊಂಡು ತಿರುಗುತ್ತಿದ್ದ ಫಾರೂಖ್​​ ಶನಿವಾರ ರಾತ್ರಿ (ನವೆಂಬರ್​ 11)ದಂದು ಮಥುರಾದಲ್ಲಿ ಕಾಣಿಸಿಕೊಂಡ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆತನನ್ನು ಪತ್ತೆ ಮಾಡಿದ್ದರು.

ಪೊಲೀಸರು ಆತನ ಬಂಧನಕ್ಕೆ ಮುಂದಾದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಗುಂಡು ಹಾರಿಸಿದ್ದಾರೆ. ತೀವ್ರ ಗಾಯಗೊಂಡಿದ್ದ ಫಾರೂಖ್​​ನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ.

ಆರೋಪಿಗಳಿಂದ ದರೋಡೆ ಹಣ ವಶ: ಮಥುರಾ ಎಸ್‌ಎಸ್‌ಪಿ ಸೈಲೇಶ್‌ ಕುಮಾರ್‌ ಪಾಂಡೆ ಮಾತನಾಡಿ, ಶನಿವಾರ ರಾತ್ರಿ ಹೆದ್ದಾರಿ ಪೊಲೀಸ್‌ ಠಾಣೆ ವ್ಯಾಪ್ತಿಯ ಹೋಟೆಲ್​ ಬಳಿ ಆರೋಪಿ ಫಾರೂಖ್​ ಕಾಣಿಸಿಕೊಂಡಾಗ, ಪೊಲೀಸರು ಬಂಧನಕ್ಕೆ ಹೋದಾಗ ಆತ ತಪ್ಪಿಸಿಕೊಂಡಿದ್ದಾನೆ. ಪೊಲೀಸರು ಎನ್‌ಕೌಂಟರ್‌ ಮಾಡಿದ್ದು, ಫಾರೂಖ್‌ ಗಾಯಗೊಂಡು ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ನವೆಂಬರ್ 10 ರಂದು ಪೊಲೀಸರು ಇನ್ನೊಬ್ಬ ಆರೋಪಿ ಮೊಹ್ಸಿನ್​ನನ್ನು ಬಂಧಿಸಿ ಆತನ ಬಳಿಯಿದ್ದ ಹಣವನ್ನು ವಶಪಡಿಸಿಕೊಂಡಿದ್ದರು. ಫಾರೂಖ್‌ನಿಂದ 21.8 ಲಕ್ಷ ರೂಪಾಯಿ, ಆಭರಣಗಳು ಮತ್ತು ಪಿಸ್ತೂಲ್ ಒಳಗೊಂಡ ಬ್ಯಾಗ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರತ್ಯೇಕ ಪ್ರಕರಣ- ಕೋಚಿಂಗ್​ ಸೆಂಟರ್​ ಮಾಲೀಕನ ಹತ್ಯೆ: ಉತ್ತರಪ್ರದೇಶದ ಔನ್​ಪುರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್​ ಸೆಂಟರ್​ ನಡೆಸುತ್ತಿದ್ದ ವ್ಯಕ್ತಿಯನ್ನು ಕೋಚಿಂಗ್​ ಸೆಂಟರ್​ನಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ. ಅಜಯ್​ ಕುಶ್ವಾಹ್​ ಕೊಲೆಯಾದ ಕೋಚಿಂಗ್​ ಸೆಂಟರ್​ ಮಾಲೀಕ. ಭಾನುವಾರ ಕೋಚಿಂಗ್ ಸೆಂಟರ್​ನಲ್ಲಿ ಮಲಗಿದ್ದಾಗ ದುಷ್ಕರ್ಮಿಗಳು ಅಜಯ್​ ಅವರ ಎದೆಗೆ ಗುಂಡಿಕ್ಕಿದ್ದಾರೆ.

ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಕೋಚಿಂಗ್ ಸೆಂಟರ್​ ಮಾಲೀಕನ ಎದೆಗೆ ಗುಂಡಿಕ್ಕಿ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.