ETV Bharat / bharat

ಗಂಗಾ ನದಿಯಲ್ಲಿ ತೇಲುತ್ತಿರುವ ಮೃತದೇಹಗಳ ದೃಶ್ಯ ಭಯಾನಕ: ಮಲ್ಲಿಕಾರ್ಜುನ​ ಖರ್ಗೆ

ಬಿಹಾರದ ಮಹಾದೇವ್​ ಘಾಟ್​ನಿಂದ ಸುಮಾರು ಒಂದು ಕಿಲೋ ಮೀಟರ್​ ದೂರದಲ್ಲಿ ಈ ಮೃತದೇಹಗಳು ಕಂಡು ಬಂದಿವೆ. ಕೊರೊನಾ ಸಮಯದಲ್ಲಿ ಮನೆಯಲ್ಲೇ ಮೃತಪಟ್ಟವರ ದೇಹಗಳನ್ನು ಆಯಾ ಕುಟುಂಬಸ್ಥರು ಗಂಗಾ ನದಿಗೆ ಬಿಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ನಿನ್ನೆ ಈಟಿವಿ ಭಾರತದಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಇದೀಗ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

author img

By

Published : May 11, 2021, 1:19 PM IST

Updated : May 11, 2021, 1:27 PM IST

ಮಲ್ಲಿಕಾರ್ಜುನ್​ ಖರ್ಗೆ
ಮಲ್ಲಿಕಾರ್ಜುನ್​ ಖರ್ಗೆ

ಹೈದರಾಬಾದ್: ನಿನ್ನೆ ಬಿಹಾರದ ಬಕ್ಸಾರ್‌ ಎಂಬಲ್ಲಿ ಗಂಗಾ ನದಿ ದಡದ ಬಳಿಯಿರುವ ಮಹಾದೇವ ಘಾಟ್​ನಲ್ಲಿ ಸುಮಾರು 50ಕ್ಕೂ ಹೆಚ್ಚು ಮೃತದೇಹಗಳು ತೇಲಿ ಬಂದಿದ್ದು, ಮೃತದೇಹಗಳನ್ನು ನಾಯಿಗಳು ತಿನ್ನುತ್ತಿರುವ ದೃಶ್ಯ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಕೊರೊನಾ ಸಮಯದಲ್ಲಿ ಮನೆಯಲ್ಲೇ ಮೃತಪಟ್ಟವರ ದೇಹಗಳನ್ನು ಆಯಾ ಕುಟುಂಬಸ್ಥರು ಗಂಗಾ ನದಿಗೆ ಬಿಟ್ಟಿರುವ ಶಂಕೆ ವ್ಯಕ್ತವಾಗಿತ್ತು.

ಈ ಬಗ್ಗೆ ಟ್ವೀಟ್​ ಮಾಡಿರುವ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ​ ಖರ್ಗೆ, ನಮ್ಮ ದೇಶ ಎಲ್ಲಿಗೆ ಬಂದು ನಿಂತಿದೆ ನೋಡಿ? ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

  • The visuals of dead bodies floating in Ganga & Yamuna are horrifying. Painful to see that even last rites cannot be accorded to loved ones. Is this what our great nation has come to? @BJP4India Govt has no respect either for the living or dead. Our pleas are falling on deaf ears

    — Leader of Opposition, Rajya Sabha (@LoPIndia) May 11, 2021 " class="align-text-top noRightClick twitterSection" data=" ">

"ಗಂಗಾ ಮತ್ತು ಯಮುನಾದಲ್ಲಿ ತೇಲುತ್ತಿರುವ ಮೃತದೇಹಗಳ ದೃಶ್ಯಗಳು ಭಯಾನಕವಾಗಿವೆ. ತಮ್ಮ ಮನೆಯಲ್ಲಿ ಸತ್ತವರ ಕೊನೆಯ ವಿಧಿಗಳನ್ನೂ ಸಹ ಪ್ರೀತಿಪಾತ್ರರು ಮಾಡಲಾಗದಂತಹ ಸ್ಥಿತಿ ಬಂದೋದಗಿರುವುದನ್ನು ನೋಡುವುದು ನೋವಿನ ಸಂಗತಿ. ಜೀವಂತ ಅಥವಾ ಸತ್ತವರ ಬಗ್ಗೆ ಈ ಸರ್ಕಾರಕ್ಕೆ ಗೌರವವಿಲ್ಲ. ನಮ್ಮ ಮನವಿ ಅವರ ಕಿವಿಗೂ ಬೀಳುತ್ತಿಲ್ಲ" ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಈಟಿವಿ ಭಾರತ ಎಕ್ಸ್​ಕ್ಲೂಸಿವ್..​ ಗಂಗಾ ನದಿಯಲ್ಲಿ ತೇಲಿ ಬಂದ್ವು 50ಕ್ಕೂ ಹೆಚ್ಚು ಮೃತದೇಹಗಳು!

ಹೈದರಾಬಾದ್: ನಿನ್ನೆ ಬಿಹಾರದ ಬಕ್ಸಾರ್‌ ಎಂಬಲ್ಲಿ ಗಂಗಾ ನದಿ ದಡದ ಬಳಿಯಿರುವ ಮಹಾದೇವ ಘಾಟ್​ನಲ್ಲಿ ಸುಮಾರು 50ಕ್ಕೂ ಹೆಚ್ಚು ಮೃತದೇಹಗಳು ತೇಲಿ ಬಂದಿದ್ದು, ಮೃತದೇಹಗಳನ್ನು ನಾಯಿಗಳು ತಿನ್ನುತ್ತಿರುವ ದೃಶ್ಯ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಕೊರೊನಾ ಸಮಯದಲ್ಲಿ ಮನೆಯಲ್ಲೇ ಮೃತಪಟ್ಟವರ ದೇಹಗಳನ್ನು ಆಯಾ ಕುಟುಂಬಸ್ಥರು ಗಂಗಾ ನದಿಗೆ ಬಿಟ್ಟಿರುವ ಶಂಕೆ ವ್ಯಕ್ತವಾಗಿತ್ತು.

ಈ ಬಗ್ಗೆ ಟ್ವೀಟ್​ ಮಾಡಿರುವ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ​ ಖರ್ಗೆ, ನಮ್ಮ ದೇಶ ಎಲ್ಲಿಗೆ ಬಂದು ನಿಂತಿದೆ ನೋಡಿ? ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

  • The visuals of dead bodies floating in Ganga & Yamuna are horrifying. Painful to see that even last rites cannot be accorded to loved ones. Is this what our great nation has come to? @BJP4India Govt has no respect either for the living or dead. Our pleas are falling on deaf ears

    — Leader of Opposition, Rajya Sabha (@LoPIndia) May 11, 2021 " class="align-text-top noRightClick twitterSection" data=" ">

"ಗಂಗಾ ಮತ್ತು ಯಮುನಾದಲ್ಲಿ ತೇಲುತ್ತಿರುವ ಮೃತದೇಹಗಳ ದೃಶ್ಯಗಳು ಭಯಾನಕವಾಗಿವೆ. ತಮ್ಮ ಮನೆಯಲ್ಲಿ ಸತ್ತವರ ಕೊನೆಯ ವಿಧಿಗಳನ್ನೂ ಸಹ ಪ್ರೀತಿಪಾತ್ರರು ಮಾಡಲಾಗದಂತಹ ಸ್ಥಿತಿ ಬಂದೋದಗಿರುವುದನ್ನು ನೋಡುವುದು ನೋವಿನ ಸಂಗತಿ. ಜೀವಂತ ಅಥವಾ ಸತ್ತವರ ಬಗ್ಗೆ ಈ ಸರ್ಕಾರಕ್ಕೆ ಗೌರವವಿಲ್ಲ. ನಮ್ಮ ಮನವಿ ಅವರ ಕಿವಿಗೂ ಬೀಳುತ್ತಿಲ್ಲ" ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಈಟಿವಿ ಭಾರತ ಎಕ್ಸ್​ಕ್ಲೂಸಿವ್..​ ಗಂಗಾ ನದಿಯಲ್ಲಿ ತೇಲಿ ಬಂದ್ವು 50ಕ್ಕೂ ಹೆಚ್ಚು ಮೃತದೇಹಗಳು!

Last Updated : May 11, 2021, 1:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.