ETV Bharat / bharat

ಪ್ರತಿಭಟನಾ ನಿರತ ರೈತರ ಸ್ಥಳಕ್ಕೆ ಭೇಟಿ ನೀಡಿದ ಮಹಾತ್ಮ ಗಾಂಧಿ ಮೊಮ್ಮಗಳು

author img

By

Published : Feb 14, 2021, 4:32 AM IST

ರಾಷ್ಟ್ರೀಯ ಗಾಂಧಿ ವಸ್ತುಸಂಗ್ರಹಾಲಯದ ಅಧ್ಯಕ್ಷರೂ ಆಗಿರುವ 84 ವರ್ಷದ ತಾರಾ ಗಾಂಧಿ ಭಟ್ಟಾಚಾರ್ಜಿ ಅವರು ತಮ್ಮ ಪ್ರತಿಭಟನೆಯಲ್ಲಿ ಶಾಂತಿಯುತವಾಗಿರಲು ರೈತರನ್ನು ಪ್ರೋತ್ಸಾಹಿಸಿದರು. ಕೃಷಿ ಸಮುದಾಯದ ಬಗ್ಗೆ ಕಾಳಜಿ ವಹಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

protest site in Ghazipur
protest site in Ghazipur

ಘಾಜಿಯಾಬಾದ್: ಕೇಂದ್ರದ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಆಂದೋಲನಕ್ಕೆ ಬೆಂಬಲ ನೀಡಲು ಮಹಾತ್ಮ ಗಾಂಧಿ ಅವರ ಮೊಮ್ಮಗಳು ತಾರಾ ಗಾಂಧಿ ಭಟ್ಟಾಚಾರ್ಜಿ ಶನಿವಾರ ದೆಹಲಿ- ಉತ್ತರ ಪ್ರದೇಶದ ಗಡಿಯಲ್ಲಿ ಇರುವ ಘಾಜಿಪುರಕ್ಕೆ ಭೇಟಿ ನೀಡಿದರು.

ರಾಷ್ಟ್ರೀಯ ಗಾಂಧಿ ವಸ್ತುಸಂಗ್ರಹಾಲಯದ ಅಧ್ಯಕ್ಷರೂ ಆಗಿರುವ 84 ವರ್ಷದ ಭಟ್ಟಾಚಾರ್ಜಿ ಅವರು ತಮ್ಮ ಪ್ರತಿಭಟನೆಯಲ್ಲಿ ಶಾಂತಿಯುತವಾಗಿ ಇರಲು ರೈತರನ್ನು ಪ್ರೋತ್ಸಾಹಿಸಿದರು. ಕೃಷಿ ಸಮುದಾಯದ ಬಗ್ಗೆ ಕಾಳಜಿ ವಹಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಇದನ್ನೂ ಓದಿ: ಮಾಘ ಮೇಳದ ಕ್ರಿಯಾ ಯೋಗದಲ್ಲಿ ವಿದೇಶಿ ಪ್ರವಾಸಿಗರು.. 'ಯೋಗ ಗುರು ಭಾರತ'

ಅವರೊಂದಿಗೆ ಗಾಂಧಿ ಸ್ಮಾರಕ್ ನಿಧಿ ಅಧ್ಯಕ್ಷ ರಾಮಚಂದ್ರ ರಾಹಿ, ಅಖಿಲ ಭಾರತ ಸೇವಾ ವ್ಯವಸ್ಥಾಪಕ ಟ್ರಸ್ಟಿ ಅಶೋಕ್ ಸರನ್, ಗಾಂಧಿ ಸ್ಮಾರಕ್ ನಿಧಿ ನಿರ್ದೇಶಕ ಸಂಜಯ್ ಸಿಂಘಾ ಮತ್ತು ರಾಷ್ಟ್ರೀಯ ಗಾಂಧಿ ಮ್ಯೂಸಿಯಂ ನಿರ್ದೇಶಕ ಎ ಅಣ್ಣಾಮಲೈ ಇದ್ದರು.

ನಾವು ಯಾವುದೇ ರಾಜಕೀಯ ಕಾರ್ಯಕ್ರಮದ ಭಾಗವಾಗಿ ಇಲ್ಲಿಗೆ ಬಂದಿಲ್ಲ. ನಮ್ಮ ಇಡೀ ಜೀವನವನ್ನು ಪೋಷಿಸಿದ ರೈತರಿಗಾಗಿ ನಾವು ಇಂದು ಇಲ್ಲಿಗೆ ಬಂದಿದ್ದೇವೆ ಎಂದು ಭಟ್ಟಾಚಾರ್ಜಿ ಹೇಳಿದ್ದಾರೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಪ್ರಕಟಣೆಯಲ್ಲಿ ತಿಳಿಸಿದೆ.

ನಾವು ನಿಮ್ಮೆಲ್ಲರ ಕಾರಣದಿಂದಾಗಿ ಇಲ್ಲಿದ್ದೇವೆ. ರೈತರ ಹಿತದೃಷ್ಟಿಯಿಂದ ದೇಶದ ಮತ್ತು ನಮ್ಮೆಲ್ಲರ ಯೋಗಕ್ಷೇಮ ಅಡಗಿದೆ. 1857ರಲ್ಲಿ ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯಕ್ಕಾಗಿ ಮೊದಲ ಹೋರಾಟವು ಪಶ್ಚಿಮ ಉತ್ತರ ಪ್ರದೇಶದ ಮೀರತ್‌ನಿಂದ ಪ್ರಾರಂಭವಾಗಿತ್ತು ಎಂದು ನೆನಪಿಸಿಕೊಂಡರು.

ಘಾಜಿಯಾಬಾದ್: ಕೇಂದ್ರದ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಆಂದೋಲನಕ್ಕೆ ಬೆಂಬಲ ನೀಡಲು ಮಹಾತ್ಮ ಗಾಂಧಿ ಅವರ ಮೊಮ್ಮಗಳು ತಾರಾ ಗಾಂಧಿ ಭಟ್ಟಾಚಾರ್ಜಿ ಶನಿವಾರ ದೆಹಲಿ- ಉತ್ತರ ಪ್ರದೇಶದ ಗಡಿಯಲ್ಲಿ ಇರುವ ಘಾಜಿಪುರಕ್ಕೆ ಭೇಟಿ ನೀಡಿದರು.

ರಾಷ್ಟ್ರೀಯ ಗಾಂಧಿ ವಸ್ತುಸಂಗ್ರಹಾಲಯದ ಅಧ್ಯಕ್ಷರೂ ಆಗಿರುವ 84 ವರ್ಷದ ಭಟ್ಟಾಚಾರ್ಜಿ ಅವರು ತಮ್ಮ ಪ್ರತಿಭಟನೆಯಲ್ಲಿ ಶಾಂತಿಯುತವಾಗಿ ಇರಲು ರೈತರನ್ನು ಪ್ರೋತ್ಸಾಹಿಸಿದರು. ಕೃಷಿ ಸಮುದಾಯದ ಬಗ್ಗೆ ಕಾಳಜಿ ವಹಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಇದನ್ನೂ ಓದಿ: ಮಾಘ ಮೇಳದ ಕ್ರಿಯಾ ಯೋಗದಲ್ಲಿ ವಿದೇಶಿ ಪ್ರವಾಸಿಗರು.. 'ಯೋಗ ಗುರು ಭಾರತ'

ಅವರೊಂದಿಗೆ ಗಾಂಧಿ ಸ್ಮಾರಕ್ ನಿಧಿ ಅಧ್ಯಕ್ಷ ರಾಮಚಂದ್ರ ರಾಹಿ, ಅಖಿಲ ಭಾರತ ಸೇವಾ ವ್ಯವಸ್ಥಾಪಕ ಟ್ರಸ್ಟಿ ಅಶೋಕ್ ಸರನ್, ಗಾಂಧಿ ಸ್ಮಾರಕ್ ನಿಧಿ ನಿರ್ದೇಶಕ ಸಂಜಯ್ ಸಿಂಘಾ ಮತ್ತು ರಾಷ್ಟ್ರೀಯ ಗಾಂಧಿ ಮ್ಯೂಸಿಯಂ ನಿರ್ದೇಶಕ ಎ ಅಣ್ಣಾಮಲೈ ಇದ್ದರು.

ನಾವು ಯಾವುದೇ ರಾಜಕೀಯ ಕಾರ್ಯಕ್ರಮದ ಭಾಗವಾಗಿ ಇಲ್ಲಿಗೆ ಬಂದಿಲ್ಲ. ನಮ್ಮ ಇಡೀ ಜೀವನವನ್ನು ಪೋಷಿಸಿದ ರೈತರಿಗಾಗಿ ನಾವು ಇಂದು ಇಲ್ಲಿಗೆ ಬಂದಿದ್ದೇವೆ ಎಂದು ಭಟ್ಟಾಚಾರ್ಜಿ ಹೇಳಿದ್ದಾರೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಪ್ರಕಟಣೆಯಲ್ಲಿ ತಿಳಿಸಿದೆ.

ನಾವು ನಿಮ್ಮೆಲ್ಲರ ಕಾರಣದಿಂದಾಗಿ ಇಲ್ಲಿದ್ದೇವೆ. ರೈತರ ಹಿತದೃಷ್ಟಿಯಿಂದ ದೇಶದ ಮತ್ತು ನಮ್ಮೆಲ್ಲರ ಯೋಗಕ್ಷೇಮ ಅಡಗಿದೆ. 1857ರಲ್ಲಿ ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯಕ್ಕಾಗಿ ಮೊದಲ ಹೋರಾಟವು ಪಶ್ಚಿಮ ಉತ್ತರ ಪ್ರದೇಶದ ಮೀರತ್‌ನಿಂದ ಪ್ರಾರಂಭವಾಗಿತ್ತು ಎಂದು ನೆನಪಿಸಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.