ETV Bharat / bharat

ಪಂಜಾಬ್​​ನಲ್ಲಿ ಹಿಂದೂ ಮುಖಂಡರಿಗೆ ಬುಲೆಟ್​ಪ್ರೂಫ್​ ಜಾಕೆಟ್​ ನೀಡಿದ ಪೊಲೀಸರು

author img

By

Published : Nov 7, 2022, 8:21 PM IST

ಪಂಜಾಬ್​ನಲ್ಲಿ ಹೈ-ಪ್ರೊಫೈಲ್​ ಹತ್ಯೆಗಳು ಹೆಚ್ಚಾಗುತ್ತಿದ್ದು, ಪೊಲೀಸರು ಈಗ ಹಿಂದು ಮುಖಂಡರಿಗೆ ಬುಲೆಟ್​ ಪ್ರೂಫ್​ ಜಾಕೆಟ್​ ನೀಡುತ್ತಿದ್ದಾರೆ.

bullet-proof-jackets-to-hindu-leaders
ಹಿಂದು ಮುಖಂಡರಿಗೆ ಬುಲೆಟ್​ಪ್ರೂಫ್​ ಜಾಕೆಟ್​

ಲೂಧಿಯಾನ(ಪಂಜಾಬ್​): ಶಿವಸೇನೆ ನಾಯಕನ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆ ಮಾಡಿದ ಪ್ರಕರಣದ ಬಳಿಕ ಪಂಜಾಬ್​ನ ಲೂಧಿಯಾನ ಪೊಲೀಸರು ಹಿಂದೂ ಮುಖಂಡರಿಗೆ ಜೀವರಕ್ಷಕವಾದ ಬುಲೆಟ್​ ಪ್ರೂಫ್​ ಜಾಕೆಟ್​ಗಳನ್ನು ನೀಡುತ್ತಿದ್ದಾರೆ. ರಾಜ್ಯದಲ್ಲಿ ಹಿಂದೂಗಳ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ. ಭದ್ರತೆ ಇಲ್ಲವಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಲಾಗಿದೆ.

ಕೆಲ ದಿನಗಳ ಹಿಂದೆ ಶಿವಸೇನೆ ನಾಯಕ ಸುಧೀರ್ ಸೂರಿ ಎಂಬುವವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದು ರಾಜ್ಯದಲ್ಲಿ ಭದ್ರತೆಯ ಬಗ್ಗೆಯೇ ಅಪಸ್ವರ ಕೇಳಿ ಬಂದಿತ್ತು. ಇದರಿಂದ ಲೂಧಿಯಾನ ಪೊಲೀಸರು ಹಿಂದುತ್ವ ಪ್ರತಿಪಾದಕರಿಗೆ ಬುಲೆಟ್​ ಪ್ರೂಫ್​ ಜಾಕೆಟ್ ನೀಡಿದ್ದಾರೆ.

ಶಿವಸೇನೆ ನಾಯಕ ಅಮಿತ್ ಅರೋರಾ ಬುಲೆಟ್ ಪ್ರೂಫ್ ಜಾಕೆಟ್ ಧರಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಣ ಪಡೆದು ಬುಲೆಟ್ ಪ್ರೂಫ್ ಜಾಕೆಟ್​​ ನೀಡಲಾಗಿದೆಯೇ ಅಥವಾ ಸರ್ಕಾರವೇ ಇದನ್ನು ವಿತರಿಸಿದೆಯೇ ಎಂಬುದು ತಿಳಿದುಬಂದಿಲ್ಲ.

ಓದಿ: ಕುನೋ ಕಾಡಲ್ಲಿ ಹಂಟಿಂಗ್​ ಶುರು.. 24 ತಾಸಲ್ಲೇ ಮೊದಲ ಬೇಟೆಯಾಡಿದ ಚೀತಾಗಳು

ಲೂಧಿಯಾನ(ಪಂಜಾಬ್​): ಶಿವಸೇನೆ ನಾಯಕನ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆ ಮಾಡಿದ ಪ್ರಕರಣದ ಬಳಿಕ ಪಂಜಾಬ್​ನ ಲೂಧಿಯಾನ ಪೊಲೀಸರು ಹಿಂದೂ ಮುಖಂಡರಿಗೆ ಜೀವರಕ್ಷಕವಾದ ಬುಲೆಟ್​ ಪ್ರೂಫ್​ ಜಾಕೆಟ್​ಗಳನ್ನು ನೀಡುತ್ತಿದ್ದಾರೆ. ರಾಜ್ಯದಲ್ಲಿ ಹಿಂದೂಗಳ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ. ಭದ್ರತೆ ಇಲ್ಲವಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಲಾಗಿದೆ.

ಕೆಲ ದಿನಗಳ ಹಿಂದೆ ಶಿವಸೇನೆ ನಾಯಕ ಸುಧೀರ್ ಸೂರಿ ಎಂಬುವವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದು ರಾಜ್ಯದಲ್ಲಿ ಭದ್ರತೆಯ ಬಗ್ಗೆಯೇ ಅಪಸ್ವರ ಕೇಳಿ ಬಂದಿತ್ತು. ಇದರಿಂದ ಲೂಧಿಯಾನ ಪೊಲೀಸರು ಹಿಂದುತ್ವ ಪ್ರತಿಪಾದಕರಿಗೆ ಬುಲೆಟ್​ ಪ್ರೂಫ್​ ಜಾಕೆಟ್ ನೀಡಿದ್ದಾರೆ.

ಶಿವಸೇನೆ ನಾಯಕ ಅಮಿತ್ ಅರೋರಾ ಬುಲೆಟ್ ಪ್ರೂಫ್ ಜಾಕೆಟ್ ಧರಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಣ ಪಡೆದು ಬುಲೆಟ್ ಪ್ರೂಫ್ ಜಾಕೆಟ್​​ ನೀಡಲಾಗಿದೆಯೇ ಅಥವಾ ಸರ್ಕಾರವೇ ಇದನ್ನು ವಿತರಿಸಿದೆಯೇ ಎಂಬುದು ತಿಳಿದುಬಂದಿಲ್ಲ.

ಓದಿ: ಕುನೋ ಕಾಡಲ್ಲಿ ಹಂಟಿಂಗ್​ ಶುರು.. 24 ತಾಸಲ್ಲೇ ಮೊದಲ ಬೇಟೆಯಾಡಿದ ಚೀತಾಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.