ETV Bharat / bharat

ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಕಾಂಗ್ರೆಸ್​ ಪ್ರಸ್ತಾಪ, ದಿನಾಂಕ ನಿಗದಿಯೊಂದೇ ಬಾಕಿ!

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಸ್ಪೀಕರ್​ ಓಂ ಬಿರ್ಲಾ ಅವರು ಪ್ರಸ್ತಾವನೆ ಒಪ್ಪಿದ್ದಾರೆ. ಇಂದಿನಿಂದ 10 ದಿನಗಳ ಒಳಗೆ ನಿರ್ಣಯ ಮಂಡನೆಯಾಗಲಿದೆ. ನಿರ್ಣಯದ ಸಂಪೂರ್ಣ ವಿವರ ಇಲ್ಲಿದೆ.

author img

By

Published : Jul 26, 2023, 4:26 PM IST

ಅವಿಶ್ವಾಸ ನಿರ್ಣಯಕ್ಕೆ ಕಾಂಗ್ರೆಸ್​ ಪ್ರಸ್ತಾಪ
ಅವಿಶ್ವಾಸ ನಿರ್ಣಯಕ್ಕೆ ಕಾಂಗ್ರೆಸ್​ ಪ್ರಸ್ತಾಪ

ನವದೆಹಲಿ: ಮಣಿಪುರ ಹಿಂಸಾಚಾರದ ಕುರಿತು ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಬೇಕು ಎಂದು ಒತ್ತಾಯಿಸುತ್ತಿರುವ ವಿಪಕ್ಷಗಳು, ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆಗೆ ಲೋಕಸಭೆ ಸ್ಪೀಕರ್​ ಮುಂದೆ ಪ್ರಸ್ತಾಪ ಸಲ್ಲಿಸಿವೆ. ಸರ್ವಪಕ್ಷಗಳ ಜೊತೆಗೆ ನಡೆದ ಚರ್ಚೆಯ ಬಳಿಕ ದಿನಾಂಕ ನಿಗದಿಯಾಗಲಿದೆ. ಈ ಮೂಲಕ 8 ವರ್ಷಗಳ ಬಳಿಕ ಸರ್ಕಾರದ ವಿರುದ್ಧ ಇಂತಹ ಪ್ರಸ್ತಾಪ ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ನಮಗೆ ವಿಶ್ವಾಸವಿಲ್ಲ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಮುಂದೆ ಬುಧವಾರ ಅವಿಶ್ವಾಸ ನಿರ್ಣಯವನ್ನು ಮಂಡಿಸಿದರು. ಇದನ್ನು ಸ್ಪೀಕರ್​ ಕೂಡ ಒಪ್ಪಿಕೊಂಡಿದ್ದು, ಮಣಿಪುರ ಮತ್ತು ಇತರ ಜ್ವಲಂತ ಸಮಸ್ಯೆಗಳ ಕುರಿತು ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷಗಳ ನಡುವಿನ ಹಣಾಹಣಿಗೆ ವೇದಿಕೆ ಸಿದ್ಧಪಡಿಸಿದರು.

ಮಧ್ಯಾಹ್ನ 12 ಗಂಟೆಗೆ ಲೋಕಸಭೆ ಸದನ ಮರು ಆರಂಭವಾದಾಗ ಕಾಂಗ್ರೆಸ್​ ಸಲ್ಲಿಸಿದ ಅವಿಶ್ವಾಸ ನಿರ್ಣಯವನ್ನು ಸ್ಪೀಕರ್​ ಬಿರ್ಲಾ ಅವರು ಸದನದ ಮುಂದೆ ಓದಿ ಹೇಳಿದರು. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಗೌರವ್​ ಗೊಗೊಯ್ ಅವರಿಂದ 198 ರ ಅಡಿಯಲ್ಲಿ ಪ್ರಸ್ತಾಪ ಬಂದಿದೆ. ಅದನ್ನು ನಾನು ಸ್ವೀಕರಿಸಿದ್ದೇನೆ ಎಂದು ಸದನಕ್ಕೆ ತಿಳಿಸಲು ಬಯಸುವೆ. ಪ್ರಸ್ತಾಪ ಮಂಡಿಸಲು ಸದನದ ಅನುಮತಿ ಪಡೆಯಲು ಗೌರವ್ ಗೊಗೋಯ್ ಅವರಲ್ಲಿ ಕೋರುತ್ತೇನೆ ಎಂದರು.

ಆಗ ಗೊಗೊಯ್ ಅವರು ಈ ಪ್ರಸ್ತಾವನೆಗೆ ಸದನದ ಅನುಮತಿಯನ್ನು ಕೋರಿದರು. ಆಗ ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಡಿಎಂಕೆಯ ಟಿ ಆರ್ ಬಾಲು ಮತ್ತು ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ, ಆಪ್​ ನಾಯಕರು ಸೇರಿದಂತೆ INDIA ಮೈತ್ರಿಕೂಟದ ಸದಸ್ಯ ಪಕ್ಷಗಳ ಸಂಸದರು ಎದ್ದು ನಿಂತು ತಲೆ ಎಣಿಕೆಗೆ ನಿಂತರು. ನಂತರ ಸ್ಪೀಕರ್​ ಅವಿಶ್ವಾಸ ನಿರ್ಣಯ ಮಂಡನೆಗೆ ಒಪ್ಪಿಕೊಂಡರು.

ಬಿಆರ್​​ಎಸ್​ನಿಂದಲೂ ಪ್ರಸ್ತಾಪ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್​ ಪ್ರಸ್ತಾಪ ಸಲ್ಲಿಸುವ ಮೊದಲು INDIA ಮೈತ್ರಿಕೂಟದ ಭಾಗವಾಗಿರದ ತೆಲಂಗಾಣ ಸಿಎಂ ಕೆ ಚಂದ್ರಶೇಖರ್​ರಾವ್​ ಅವರ ಮುಂದಾಳತ್ವದ ಬಿಆರ್​ಎಸ್​ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸ್ಪೀಕರ್​ಗೆ ಮನವಿ ಮಾಡಿದೆ. ಬಿಆರ್​ಎಸ್​ ಸಂಸದ ನಾಮ ನಾಗೇಶ್ವರ ರಾವ್ ಅವರು ಕೇಂದ್ರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ನೋಟಿಸ್‌ ಸಲ್ಲಿಸಿದ್ದಾರೆ.

ಅವಿಶ್ವಾಸಕ್ಕೆ ಸೋಲು ಖಚಿತ, ಆದರೆ: 26 ವಿರೋಧ ಪಕ್ಷಗಳ INDIA ಮೈತ್ರಿಕೂಟ ಕೇಂದ್ರ ಸರ್ಕಾರದ ವಿರುದ್ಧ ಪ್ರಸ್ತಾಪಿಸಿರುವ ಅವಿಶ್ವಾಸ ನಿರ್ಣಯಕ್ಕೆ ಅಂಕಿ - ಸಂಖ್ಯೆಗಳ ಪ್ರಕಾರ ಸೋಲಾಗುವುದು ಖಚಿತ. ಆದರೆ, ಗೊತ್ತುವಳಿಯ ಮೇಲೆ ನಡೆಯುವ ಚರ್ಚೆಯ ವೇಳೆ ಮಣಿಪುರ ಹಿಂಸಾಚಾರದ ಕುರಿತು ಪ್ರಧಾನಿ ಮೋದಿ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ಲೆಕ್ಕಾಚಾರ ವಿಪಕ್ಷಗಳದ್ದಾಗಿದೆ. ಮಣಿಪುರ ಸಂಘರ್ಷ ಚರ್ಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರ ನೀಡಲು ಮುಂದಾಗಿದ್ದರೂ, ಈ ವಿಷಯದ ಮೇಲೆ ಪ್ರಧಾನಿಯೇ ಮಾತನಾಡುವಂತೆ ಮಾಡುವುದು ವಿಪಕ್ಷಗಳ ತಂತ್ರವಾಗಿದೆ.

ಹೇಗಿರುತ್ತೆ ಅವಿಶ್ವಾಸ ನಿರ್ಣಯದ ಪ್ರಕ್ರಿಯೆ : ಲೋಕಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 198 ರ ಪ್ರಕಾರ ಲೋಕಸಭೆಯ ಯಾವುದೇ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಬಹುದು. ಸದಸ್ಯರು ಕಲಾಪ ಆರಂಭವಾದ ಬಳಿಕ ಮೊದಲು ಲಿಖಿತವಾಗಿ ಪ್ರಸ್ತಾಪ ಮಂಡಿಸುವ ಕುರಿತು ಸಭಾಧ್ಯಕ್ಷರಿಗೆ ನೋಟಿಸ್​ ರವಾನಿಸಬೇಕು. ಅದನ್ನು ಸ್ಪೀಕರ್ ಅವರು ಪಡೆದು ಸದನದಲ್ಲಿ ಓದುತ್ತಾರೆ.

ಈ ನಿರ್ಣಯ ಮಂಡನೆಗೆ ಕನಿಷ್ಠ 50 ಸದಸ್ಯರು ಪ್ರಸ್ತಾವನೆಯನ್ನು ಬೆಂಬಲಿಸಬೇಕು. ಅದರಂತೆ ಸ್ಪೀಕರ್ ಅವರು ಪ್ರಸ್ತಾಪದ ಚರ್ಚೆಯ ದಿನಾಂಕವನ್ನು ನಿಗದಿ ಮಾಡುತ್ತಾರೆ. ಪ್ರಸ್ತಾವಕ್ಕೆ ಒಪ್ಪಿಗೆ ಸಿಕ್ಕ 10 ದಿನಗಳ ಒಳಗೆ ಇಚ್ಚಿಸಿದ ಸದಸ್ಯ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕು. ಇದರ ಬಳಿಕ ಪ್ರಸ್ತಾವದ ಪರ ಮತ್ತು ವಿರುದ್ಧದ ಸದಸ್ಯರ ತಲೆ ಎಣಿಕೆ ನಡೆಯುತ್ತದೆ. ಪರವಾಗಿ ಹೆಚ್ಚು ಸದಸ್ಯರು ಬೆಂಬಲಿಸಿದರೆ, ಪಾಸಾಗಿ ಸರ್ಕಾರ ಪತನವಾಗಲಿದೆ. ಇಲ್ಲವಾದಲ್ಲಿ ನಿರ್ಣಯಕ್ಕೆ ಸೋಲಾಗಿದೆ ಎಂದು ಸ್ಪೀಕರ್​ ಸದನದಲ್ಲೇ ಘೋಷಣೆ ಮಾಡುವರು.

ಸಂಸತ್​ 543 ಸ್ಥಾನಗಳನ್ನು ಹೊಂದಿದ್ದು, 5 ಸ್ಥಾನಗಳು ಖಾಲಿ ಇವೆ. ಬಿಜೆಪಿ ನೇತೃತ್ವದ ಎನ್‌ಡಿಎ 330 ಕ್ಕೂ ಹೆಚ್ಚು ಸದಸ್ಯ ಬಲವನ್ನು ಹೊಂದಿದೆ. ವಿರೋಧ ಪಕ್ಷಗಳ ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲೈಯನ್ಸ್ (ಇಂಡಿಯಾ) ಮೈತ್ರಿಕೂಟ 140 ಸದಸ್ಯರು ಮತ್ತು 60 ಇತರ ಸದಸ್ಯರು ಇದ್ದಾರೆ.

ಇದನ್ನೂ ಓದಿ: ಮಣಿಪುರ ಹಿಂಸಾಚಾರ ಖಂಡಿಸಿ ಸಂಸತ್​ನಲ್ಲಿ ಗದ್ದಲ.. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರತಿಪಕ್ಷಗಳ ಒಕ್ಕೂಟ ನಿರ್ಧಾರ

ನವದೆಹಲಿ: ಮಣಿಪುರ ಹಿಂಸಾಚಾರದ ಕುರಿತು ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಬೇಕು ಎಂದು ಒತ್ತಾಯಿಸುತ್ತಿರುವ ವಿಪಕ್ಷಗಳು, ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆಗೆ ಲೋಕಸಭೆ ಸ್ಪೀಕರ್​ ಮುಂದೆ ಪ್ರಸ್ತಾಪ ಸಲ್ಲಿಸಿವೆ. ಸರ್ವಪಕ್ಷಗಳ ಜೊತೆಗೆ ನಡೆದ ಚರ್ಚೆಯ ಬಳಿಕ ದಿನಾಂಕ ನಿಗದಿಯಾಗಲಿದೆ. ಈ ಮೂಲಕ 8 ವರ್ಷಗಳ ಬಳಿಕ ಸರ್ಕಾರದ ವಿರುದ್ಧ ಇಂತಹ ಪ್ರಸ್ತಾಪ ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ನಮಗೆ ವಿಶ್ವಾಸವಿಲ್ಲ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಮುಂದೆ ಬುಧವಾರ ಅವಿಶ್ವಾಸ ನಿರ್ಣಯವನ್ನು ಮಂಡಿಸಿದರು. ಇದನ್ನು ಸ್ಪೀಕರ್​ ಕೂಡ ಒಪ್ಪಿಕೊಂಡಿದ್ದು, ಮಣಿಪುರ ಮತ್ತು ಇತರ ಜ್ವಲಂತ ಸಮಸ್ಯೆಗಳ ಕುರಿತು ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷಗಳ ನಡುವಿನ ಹಣಾಹಣಿಗೆ ವೇದಿಕೆ ಸಿದ್ಧಪಡಿಸಿದರು.

ಮಧ್ಯಾಹ್ನ 12 ಗಂಟೆಗೆ ಲೋಕಸಭೆ ಸದನ ಮರು ಆರಂಭವಾದಾಗ ಕಾಂಗ್ರೆಸ್​ ಸಲ್ಲಿಸಿದ ಅವಿಶ್ವಾಸ ನಿರ್ಣಯವನ್ನು ಸ್ಪೀಕರ್​ ಬಿರ್ಲಾ ಅವರು ಸದನದ ಮುಂದೆ ಓದಿ ಹೇಳಿದರು. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಗೌರವ್​ ಗೊಗೊಯ್ ಅವರಿಂದ 198 ರ ಅಡಿಯಲ್ಲಿ ಪ್ರಸ್ತಾಪ ಬಂದಿದೆ. ಅದನ್ನು ನಾನು ಸ್ವೀಕರಿಸಿದ್ದೇನೆ ಎಂದು ಸದನಕ್ಕೆ ತಿಳಿಸಲು ಬಯಸುವೆ. ಪ್ರಸ್ತಾಪ ಮಂಡಿಸಲು ಸದನದ ಅನುಮತಿ ಪಡೆಯಲು ಗೌರವ್ ಗೊಗೋಯ್ ಅವರಲ್ಲಿ ಕೋರುತ್ತೇನೆ ಎಂದರು.

ಆಗ ಗೊಗೊಯ್ ಅವರು ಈ ಪ್ರಸ್ತಾವನೆಗೆ ಸದನದ ಅನುಮತಿಯನ್ನು ಕೋರಿದರು. ಆಗ ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಡಿಎಂಕೆಯ ಟಿ ಆರ್ ಬಾಲು ಮತ್ತು ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ, ಆಪ್​ ನಾಯಕರು ಸೇರಿದಂತೆ INDIA ಮೈತ್ರಿಕೂಟದ ಸದಸ್ಯ ಪಕ್ಷಗಳ ಸಂಸದರು ಎದ್ದು ನಿಂತು ತಲೆ ಎಣಿಕೆಗೆ ನಿಂತರು. ನಂತರ ಸ್ಪೀಕರ್​ ಅವಿಶ್ವಾಸ ನಿರ್ಣಯ ಮಂಡನೆಗೆ ಒಪ್ಪಿಕೊಂಡರು.

ಬಿಆರ್​​ಎಸ್​ನಿಂದಲೂ ಪ್ರಸ್ತಾಪ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್​ ಪ್ರಸ್ತಾಪ ಸಲ್ಲಿಸುವ ಮೊದಲು INDIA ಮೈತ್ರಿಕೂಟದ ಭಾಗವಾಗಿರದ ತೆಲಂಗಾಣ ಸಿಎಂ ಕೆ ಚಂದ್ರಶೇಖರ್​ರಾವ್​ ಅವರ ಮುಂದಾಳತ್ವದ ಬಿಆರ್​ಎಸ್​ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸ್ಪೀಕರ್​ಗೆ ಮನವಿ ಮಾಡಿದೆ. ಬಿಆರ್​ಎಸ್​ ಸಂಸದ ನಾಮ ನಾಗೇಶ್ವರ ರಾವ್ ಅವರು ಕೇಂದ್ರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ನೋಟಿಸ್‌ ಸಲ್ಲಿಸಿದ್ದಾರೆ.

ಅವಿಶ್ವಾಸಕ್ಕೆ ಸೋಲು ಖಚಿತ, ಆದರೆ: 26 ವಿರೋಧ ಪಕ್ಷಗಳ INDIA ಮೈತ್ರಿಕೂಟ ಕೇಂದ್ರ ಸರ್ಕಾರದ ವಿರುದ್ಧ ಪ್ರಸ್ತಾಪಿಸಿರುವ ಅವಿಶ್ವಾಸ ನಿರ್ಣಯಕ್ಕೆ ಅಂಕಿ - ಸಂಖ್ಯೆಗಳ ಪ್ರಕಾರ ಸೋಲಾಗುವುದು ಖಚಿತ. ಆದರೆ, ಗೊತ್ತುವಳಿಯ ಮೇಲೆ ನಡೆಯುವ ಚರ್ಚೆಯ ವೇಳೆ ಮಣಿಪುರ ಹಿಂಸಾಚಾರದ ಕುರಿತು ಪ್ರಧಾನಿ ಮೋದಿ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ಲೆಕ್ಕಾಚಾರ ವಿಪಕ್ಷಗಳದ್ದಾಗಿದೆ. ಮಣಿಪುರ ಸಂಘರ್ಷ ಚರ್ಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರ ನೀಡಲು ಮುಂದಾಗಿದ್ದರೂ, ಈ ವಿಷಯದ ಮೇಲೆ ಪ್ರಧಾನಿಯೇ ಮಾತನಾಡುವಂತೆ ಮಾಡುವುದು ವಿಪಕ್ಷಗಳ ತಂತ್ರವಾಗಿದೆ.

ಹೇಗಿರುತ್ತೆ ಅವಿಶ್ವಾಸ ನಿರ್ಣಯದ ಪ್ರಕ್ರಿಯೆ : ಲೋಕಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 198 ರ ಪ್ರಕಾರ ಲೋಕಸಭೆಯ ಯಾವುದೇ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಬಹುದು. ಸದಸ್ಯರು ಕಲಾಪ ಆರಂಭವಾದ ಬಳಿಕ ಮೊದಲು ಲಿಖಿತವಾಗಿ ಪ್ರಸ್ತಾಪ ಮಂಡಿಸುವ ಕುರಿತು ಸಭಾಧ್ಯಕ್ಷರಿಗೆ ನೋಟಿಸ್​ ರವಾನಿಸಬೇಕು. ಅದನ್ನು ಸ್ಪೀಕರ್ ಅವರು ಪಡೆದು ಸದನದಲ್ಲಿ ಓದುತ್ತಾರೆ.

ಈ ನಿರ್ಣಯ ಮಂಡನೆಗೆ ಕನಿಷ್ಠ 50 ಸದಸ್ಯರು ಪ್ರಸ್ತಾವನೆಯನ್ನು ಬೆಂಬಲಿಸಬೇಕು. ಅದರಂತೆ ಸ್ಪೀಕರ್ ಅವರು ಪ್ರಸ್ತಾಪದ ಚರ್ಚೆಯ ದಿನಾಂಕವನ್ನು ನಿಗದಿ ಮಾಡುತ್ತಾರೆ. ಪ್ರಸ್ತಾವಕ್ಕೆ ಒಪ್ಪಿಗೆ ಸಿಕ್ಕ 10 ದಿನಗಳ ಒಳಗೆ ಇಚ್ಚಿಸಿದ ಸದಸ್ಯ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕು. ಇದರ ಬಳಿಕ ಪ್ರಸ್ತಾವದ ಪರ ಮತ್ತು ವಿರುದ್ಧದ ಸದಸ್ಯರ ತಲೆ ಎಣಿಕೆ ನಡೆಯುತ್ತದೆ. ಪರವಾಗಿ ಹೆಚ್ಚು ಸದಸ್ಯರು ಬೆಂಬಲಿಸಿದರೆ, ಪಾಸಾಗಿ ಸರ್ಕಾರ ಪತನವಾಗಲಿದೆ. ಇಲ್ಲವಾದಲ್ಲಿ ನಿರ್ಣಯಕ್ಕೆ ಸೋಲಾಗಿದೆ ಎಂದು ಸ್ಪೀಕರ್​ ಸದನದಲ್ಲೇ ಘೋಷಣೆ ಮಾಡುವರು.

ಸಂಸತ್​ 543 ಸ್ಥಾನಗಳನ್ನು ಹೊಂದಿದ್ದು, 5 ಸ್ಥಾನಗಳು ಖಾಲಿ ಇವೆ. ಬಿಜೆಪಿ ನೇತೃತ್ವದ ಎನ್‌ಡಿಎ 330 ಕ್ಕೂ ಹೆಚ್ಚು ಸದಸ್ಯ ಬಲವನ್ನು ಹೊಂದಿದೆ. ವಿರೋಧ ಪಕ್ಷಗಳ ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲೈಯನ್ಸ್ (ಇಂಡಿಯಾ) ಮೈತ್ರಿಕೂಟ 140 ಸದಸ್ಯರು ಮತ್ತು 60 ಇತರ ಸದಸ್ಯರು ಇದ್ದಾರೆ.

ಇದನ್ನೂ ಓದಿ: ಮಣಿಪುರ ಹಿಂಸಾಚಾರ ಖಂಡಿಸಿ ಸಂಸತ್​ನಲ್ಲಿ ಗದ್ದಲ.. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರತಿಪಕ್ಷಗಳ ಒಕ್ಕೂಟ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.