ETV Bharat / bharat

ಪ್ರಿಯತಮೆ ಜೊತೆಗೆ ಲಿವ್​ ಇನ್​, ಆಕೆಯ ತಂಗಿಯ ಮೇಲೆ ರೇಪ್​: ಲವ್ ಜಿಹಾದ್ ಶಂಕೆ

ಯುವತಿಯೊಂದಿಗೆ ಸಹಜೀವನ ನಡೆಸುತ್ತಿದ್ದ ಪ್ರಿಯಕರ- ಲವರ್​ನ್ನು ಗರ್ಭಿಣಿ ಮಾಡಿದ್ದಲ್ಲದೇ, ಆಕೆಯ ತಂಗಿ ಮೇಲೂ ಅತ್ಯಾಚಾರ- ಜಾರ್ಖಂಡ್​​ನಲ್ಲಿ ಪ್ರಕರಣ

author img

By

Published : Jul 24, 2022, 9:24 PM IST

love-jihad-in-simdega-a-man-sexually-assaulted-girlfriend-and-raped-her-minor-sister
ಪ್ರಿಯತಮೆ ಜೊತೆಗೆ ಲಿವ್​ ಇನ್​, ಆಕೆಯ ಅಪ್ರಾಪ್ತ ತಂಗಿಯ ಮೇಲೆ ರೇಪ್​: ಲವ್ ಜಿಹಾದ್ ಶಂಕೆ

ಸಿಮಡೇಗಾ (ಜಾರ್ಖಂಡ್​): ಜಾರ್ಖಂಡ್​​ನಲ್ಲಿ ಲವ್ ಜಿಹಾದ್ ಆರೋಪ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಿಂದೂಯೇತರ ಯುವಕನೊಬ್ಬ ತನ್ನ ಹೆಸರು ಮರೆಮಾಚಿಕೊಂಡು ಯುವತಿಯೊಂದಿಗೆ ಐದು ವರ್ಷಗಳಿಂದ ಲಿವ್​ ಇನ್ ರಿಲೇಶನ್​ಶಿಪ್​​ನಲ್ಲಿದ್ದು, ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗ್ತಿದೆ.

ಸಿಮಡೇಗಾ ಜಿಲ್ಲೆಯ ಮಾತ್ರಮೇಟಾ ನಿವಾಸಿ ಹಿಂದೂಯೇತರ ಯುವಕ ಕೃತ್ಯ ಎಂದು ಸಂತ್ರಸ್ತ ಯುವತಿ ಟೈಪೈತಾಂಗರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಹಿಂದೂ ಯುವಕನ ಹೆಸರು ಹೇಳಿಕೊಂಡು ಆರೋಪಿ ಪರಿಚಯವಾಗಿದ್ದ. ಆತನೊಂದಿಗೆ ಲಿವ್ ಇನ್‌ನಲ್ಲಿ ವಾಸಿಸುತ್ತಿದ್ದಾಗ ಕಳೆದ ಐದು ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಾನು ಗರ್ಭಿಣಿ ಎಂದು ತಿಳಿದಾಗ ಮದುವೆಯಾಗಲು ನಿರಾಕರಿಸಿ, ವಂಚಿಸಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾಳೆ.

ಅಲ್ಲದೇ, ಆರೋಪಿಯು ತನ್ನ ಅಪ್ರಾಪ್ತ ತಂಗಿಯ ಮೇಲೂ ಅತ್ಯಾಚಾರ ಎಸಗಿದ್ದು, ಆಕೆಯ ವಿಡಿಯೋ ಮಾಡಿಕೊಂಡು ಕಿರುಕುಳ ನೀಡಲಾರಂಭಿಸಿದ್ದಾನೆ ಎಂದೂ ಸಂತ್ರಸ್ತೆ ಆರೋಪಿಸಿದ್ದಾಳೆ. ಯುವತಿಗೆ ಆದ ಅನ್ಯಾಯ ತಿಳಿದ ಬಿಜೆಪಿ ಜಿಲ್ಲಾಧ್ಯಕ್ಷ ಲಕ್ಷ್ಮಣ ಬಡಾಯಿಕ್ ಹಾಗೂ ಸಂಸದ ಸುಶೀಲ್ ಶ್ರೀವಾಸ್ತವ್​ ಅವರು ನೊಂದ ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ. ಅಲ್ಲದೇ, ಸಂತ್ರಸ್ತ ಯುವತಿಗೆ ಧೈರ್ಯ ತುಂಬಿ, ಪೊಲೀಸ್ ಠಾಣೆಯಲ್ಲಿ ದೂರು ನೀಡುವಲ್ಲಿ ಸಹಾಯ ಮಾಡಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆಗಾಗಿ ಕ್ರಮ ವಹಿಸಿದ್ದಾರೆ.

ಇದನ್ನೂ ಓದಿ: UPSC ಪರೀಕ್ಷೆ ಪಾಸ್​ ಆಗಲಿಲ್ಲ, ನೋಡೋಕೆ ಚೆನ್ನಾಗಿಲ್ಲ ಅಂತಾ ನೆಪ.. ವಿಚ್ಛೇದನಕ್ಕೆ ಮುಂದಾದ ಪತಿ!

ಸಿಮಡೇಗಾ (ಜಾರ್ಖಂಡ್​): ಜಾರ್ಖಂಡ್​​ನಲ್ಲಿ ಲವ್ ಜಿಹಾದ್ ಆರೋಪ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಿಂದೂಯೇತರ ಯುವಕನೊಬ್ಬ ತನ್ನ ಹೆಸರು ಮರೆಮಾಚಿಕೊಂಡು ಯುವತಿಯೊಂದಿಗೆ ಐದು ವರ್ಷಗಳಿಂದ ಲಿವ್​ ಇನ್ ರಿಲೇಶನ್​ಶಿಪ್​​ನಲ್ಲಿದ್ದು, ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗ್ತಿದೆ.

ಸಿಮಡೇಗಾ ಜಿಲ್ಲೆಯ ಮಾತ್ರಮೇಟಾ ನಿವಾಸಿ ಹಿಂದೂಯೇತರ ಯುವಕ ಕೃತ್ಯ ಎಂದು ಸಂತ್ರಸ್ತ ಯುವತಿ ಟೈಪೈತಾಂಗರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಹಿಂದೂ ಯುವಕನ ಹೆಸರು ಹೇಳಿಕೊಂಡು ಆರೋಪಿ ಪರಿಚಯವಾಗಿದ್ದ. ಆತನೊಂದಿಗೆ ಲಿವ್ ಇನ್‌ನಲ್ಲಿ ವಾಸಿಸುತ್ತಿದ್ದಾಗ ಕಳೆದ ಐದು ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಾನು ಗರ್ಭಿಣಿ ಎಂದು ತಿಳಿದಾಗ ಮದುವೆಯಾಗಲು ನಿರಾಕರಿಸಿ, ವಂಚಿಸಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾಳೆ.

ಅಲ್ಲದೇ, ಆರೋಪಿಯು ತನ್ನ ಅಪ್ರಾಪ್ತ ತಂಗಿಯ ಮೇಲೂ ಅತ್ಯಾಚಾರ ಎಸಗಿದ್ದು, ಆಕೆಯ ವಿಡಿಯೋ ಮಾಡಿಕೊಂಡು ಕಿರುಕುಳ ನೀಡಲಾರಂಭಿಸಿದ್ದಾನೆ ಎಂದೂ ಸಂತ್ರಸ್ತೆ ಆರೋಪಿಸಿದ್ದಾಳೆ. ಯುವತಿಗೆ ಆದ ಅನ್ಯಾಯ ತಿಳಿದ ಬಿಜೆಪಿ ಜಿಲ್ಲಾಧ್ಯಕ್ಷ ಲಕ್ಷ್ಮಣ ಬಡಾಯಿಕ್ ಹಾಗೂ ಸಂಸದ ಸುಶೀಲ್ ಶ್ರೀವಾಸ್ತವ್​ ಅವರು ನೊಂದ ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ. ಅಲ್ಲದೇ, ಸಂತ್ರಸ್ತ ಯುವತಿಗೆ ಧೈರ್ಯ ತುಂಬಿ, ಪೊಲೀಸ್ ಠಾಣೆಯಲ್ಲಿ ದೂರು ನೀಡುವಲ್ಲಿ ಸಹಾಯ ಮಾಡಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆಗಾಗಿ ಕ್ರಮ ವಹಿಸಿದ್ದಾರೆ.

ಇದನ್ನೂ ಓದಿ: UPSC ಪರೀಕ್ಷೆ ಪಾಸ್​ ಆಗಲಿಲ್ಲ, ನೋಡೋಕೆ ಚೆನ್ನಾಗಿಲ್ಲ ಅಂತಾ ನೆಪ.. ವಿಚ್ಛೇದನಕ್ಕೆ ಮುಂದಾದ ಪತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.