ETV Bharat / bharat

ದಿ.ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಕೊನೆಯ ಸಂದೇಶ ಕೇಳಿ..

author img

By

Published : Dec 12, 2021, 12:21 PM IST

'ಸ್ವರ್ಣಿಮ್ ವಿಜಯ್ ಪರ್ವ್'ಗಾಗಿ ಸಿಡಿಎಸ್​ ಆಗಿದ್ದ ಬಿಪಿನ್ ರಾವತ್ ಅವರ ಮಾತುಗಳನ್ನು ಡಿಸೆಂಬರ್​ 7ರಂದು ರೆಕಾರ್ಡ್​ ಮಾಡಲಾಗಿತ್ತು. ಇಂದು ಕಾರ್ಯಕ್ರಮದ ಉದ್ಘಾಟನೆ ವೇಳೆ ಅವರ ಕೊನೆಯ ವಿಡಿಯೋ ಸಂದೇಶವನ್ನು ಪ್ರಸಾರ ಮಾಡಲಾಯಿತು.

CDS General Bipin Rawat's pre-recorded message
ಬಿಪಿನ್ ರಾವತ್ ಅವರ ಕೊನೆಯ ಸಂದೇಶ ಕೇಳಿ

ನವದೆಹಲಿ: ಹೆಲಿಕಾಪ್ಟರ್​​ ದುರಂತದಲ್ಲಿ ಹುತಾತ್ಮರಾಗುವ ಒಂದು ದಿನದ ಮುನ್ನ ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಕೊಟ್ಟ ಕೊನೆಯ ಸಂದೇಶ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

  • #WATCH Late CDS General Bipin Rawat's pre-recorded message played at an event on the occasion 'Swarnim Vijay Parv' inaugurated today at India Gate lawns in Delhi. This message was recorded on December 7.

    (Source: Indian Army) pic.twitter.com/trWYx7ogSy

    — ANI (@ANI) December 12, 2021 " class="align-text-top noRightClick twitterSection" data=" ">

1971ರ ಭಾರತ-ಪಾಕ್ ಯುದ್ಧದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಜಯಗಳಿಸಿ 50 ವರ್ಷಗಳನ್ನು ಪೂರೈಸಿರುವ ಹಾಗೂ ಭಾರತ-ಬಾಂಗ್ಲಾದೇಶದ ಸ್ನೇಹದ ಭಾರತ-ಬಾಂಗ್ಲಾದೇಶದ ಸ್ನೇಹದ ಸ್ಮರಣಾರ್ಥವಾಗಿ ಇಂದು ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂಡಿಯಾ ಗೇಟ್‌ನಲ್ಲಿ 'ಸ್ವರ್ಣಿಮ್ ವಿಜಯ್ ಪರ್ವ್' ಅನ್ನು ಉದ್ಘಾಟಿಸಿದರು.

ಇದನ್ನೂ ಓದಿ: ಗಂಗೆಯಲ್ಲಿ ಬಿಪಿನ್​ ರಾವತ್​​-ಮಧುಲಿಕಾ ಅಸ್ಥಿ ವಿಸರ್ಜಿಸಿದ ಪುತ್ರಿಯರು

'ಸ್ವರ್ಣಿಮ್ ವಿಜಯ್ ಪರ್ವ್'ಗಾಗಿ ಬಿಪಿನ್ ರಾವತ್ ಅವರ ಮಾತುಗಳನ್ನು ಡಿಸೆಂಬರ್​ 7ರಂದು ರೆಕಾರ್ಡ್​ ಮಾಡಿಡಲಾಗಿತ್ತು. ಇಂದು ಕಾರ್ಯಕ್ರಮದ ಉದ್ಘಾಟನೆ ವೇಳೆ ಅವರ ಕೊನೆಯ ವಿಡಿಯೋ ಸಂದೇಶವನ್ನು ಪ್ರಸಾರ ಮಾಡಲಾಯಿತು. ಈ ವಿಡಿಯೋದಲ್ಲಿ ಬಿಪಿನ್​ ರಾವತ್​ ಅವರು ಸಶಸ್ತ್ರ ಪಡೆಗಳಿಗೆ ಅಭಿನಂದಿಸಿ, 1971ರ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮಿಸಿದ್ದಾರೆ.

ಕೂನೂರು ಹೆಲಿಕಾಪ್ಟರ್​ ಅಪಘಾತ

ಡಿಸೆಂಬರ್ 8 ರಂದು ತಮಿಳುನಾಡಿನ ಕೂನೂರಿನಲ್ಲಿ ಹೆಲಿಕಾಪ್ಟರ್ ಪತನಗೊಂಡು ಬಿಪಿನ್​ ರಾವತ್, ಮಧುಲಿಕಾ ಹಾಗೂ ಇತರ 11 ಮಂದಿ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು. ದೆಹಲಿಯಲ್ಲಿ ಶನಿವಾರ ಬಿಪಿನ್​ ರಾವತ್ ಮತ್ತು ಮಧುಲಿಕಾ ಅವರ ಅಂತ್ಯಕ್ರಿಯೆಯನ್ನು ಸಕಲ ಸೇನಾ ಗೌರವಗಳೊಂದಿಗೆ ನೆರವೇರಿಸಲಾಗಿತ್ತು.

ನವದೆಹಲಿ: ಹೆಲಿಕಾಪ್ಟರ್​​ ದುರಂತದಲ್ಲಿ ಹುತಾತ್ಮರಾಗುವ ಒಂದು ದಿನದ ಮುನ್ನ ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಕೊಟ್ಟ ಕೊನೆಯ ಸಂದೇಶ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

  • #WATCH Late CDS General Bipin Rawat's pre-recorded message played at an event on the occasion 'Swarnim Vijay Parv' inaugurated today at India Gate lawns in Delhi. This message was recorded on December 7.

    (Source: Indian Army) pic.twitter.com/trWYx7ogSy

    — ANI (@ANI) December 12, 2021 " class="align-text-top noRightClick twitterSection" data=" ">

1971ರ ಭಾರತ-ಪಾಕ್ ಯುದ್ಧದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಜಯಗಳಿಸಿ 50 ವರ್ಷಗಳನ್ನು ಪೂರೈಸಿರುವ ಹಾಗೂ ಭಾರತ-ಬಾಂಗ್ಲಾದೇಶದ ಸ್ನೇಹದ ಭಾರತ-ಬಾಂಗ್ಲಾದೇಶದ ಸ್ನೇಹದ ಸ್ಮರಣಾರ್ಥವಾಗಿ ಇಂದು ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂಡಿಯಾ ಗೇಟ್‌ನಲ್ಲಿ 'ಸ್ವರ್ಣಿಮ್ ವಿಜಯ್ ಪರ್ವ್' ಅನ್ನು ಉದ್ಘಾಟಿಸಿದರು.

ಇದನ್ನೂ ಓದಿ: ಗಂಗೆಯಲ್ಲಿ ಬಿಪಿನ್​ ರಾವತ್​​-ಮಧುಲಿಕಾ ಅಸ್ಥಿ ವಿಸರ್ಜಿಸಿದ ಪುತ್ರಿಯರು

'ಸ್ವರ್ಣಿಮ್ ವಿಜಯ್ ಪರ್ವ್'ಗಾಗಿ ಬಿಪಿನ್ ರಾವತ್ ಅವರ ಮಾತುಗಳನ್ನು ಡಿಸೆಂಬರ್​ 7ರಂದು ರೆಕಾರ್ಡ್​ ಮಾಡಿಡಲಾಗಿತ್ತು. ಇಂದು ಕಾರ್ಯಕ್ರಮದ ಉದ್ಘಾಟನೆ ವೇಳೆ ಅವರ ಕೊನೆಯ ವಿಡಿಯೋ ಸಂದೇಶವನ್ನು ಪ್ರಸಾರ ಮಾಡಲಾಯಿತು. ಈ ವಿಡಿಯೋದಲ್ಲಿ ಬಿಪಿನ್​ ರಾವತ್​ ಅವರು ಸಶಸ್ತ್ರ ಪಡೆಗಳಿಗೆ ಅಭಿನಂದಿಸಿ, 1971ರ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮಿಸಿದ್ದಾರೆ.

ಕೂನೂರು ಹೆಲಿಕಾಪ್ಟರ್​ ಅಪಘಾತ

ಡಿಸೆಂಬರ್ 8 ರಂದು ತಮಿಳುನಾಡಿನ ಕೂನೂರಿನಲ್ಲಿ ಹೆಲಿಕಾಪ್ಟರ್ ಪತನಗೊಂಡು ಬಿಪಿನ್​ ರಾವತ್, ಮಧುಲಿಕಾ ಹಾಗೂ ಇತರ 11 ಮಂದಿ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು. ದೆಹಲಿಯಲ್ಲಿ ಶನಿವಾರ ಬಿಪಿನ್​ ರಾವತ್ ಮತ್ತು ಮಧುಲಿಕಾ ಅವರ ಅಂತ್ಯಕ್ರಿಯೆಯನ್ನು ಸಕಲ ಸೇನಾ ಗೌರವಗಳೊಂದಿಗೆ ನೆರವೇರಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.