ETV Bharat / bharat

ಉದ್ಯೋಗಕ್ಕಾಗಿ ಭೂ ಹಗರಣ: ಸಿಬಿಐ ತನಿಖೆಯಿಂದ ತೇಜಸ್ವಿ ಸ್ಕಿಪ್, ಹೆಚ್ಚಿನ ಸಮಯ ಬೇಡಿಕೆ

author img

By

Published : Mar 11, 2023, 1:28 PM IST

ಪತ್ನಿಯ ಆರೋಗ್ಯ ಸಮಸ್ಯೆ ಹಿನ್ನೆಲೆ ವಿಚಾರಣೆಗೆ ಸಮಯ ಕೇಳಿದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ - ಉದ್ಯೋಗಕ್ಕಾಗಿ ಭೂ ಹಗರಣ ಪ್ರಕರಣದಲ್ಲಿ ವಿಚಾರಣೆ - ಮೂರನೇ ಬಾರಿಗೆ ಸಮನ್ಸ್ ನೀಡಿರುವ ಸಿಬಿಐ

Land for job scam
ಉದ್ಯೋಗಕ್ಕಾಗಿ ಭೂ ಹಗರಣ

ನವದೆಹಲಿ: ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ತಮ್ಮ ಪತ್ನಿಯ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ, ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಹಕರಿಸಲು ಕೇಂದ್ರೀಯ ತನಿಖಾ ದಳ (ಸಿಬಿಐ) ಬಳಿ ಹೆಚ್ಚಿನ ಸಮಯ ಕೋರಿದ್ದಾರೆ. ಉದ್ಯೋಗಕ್ಕಾಗಿ ಭೂ ಹಗರಣ ಸಂಬಂಧ ಹೇಳಿಕೆ ದಾಖಲಿಸಿಕೊಳ್ಳಲು ಸಿಬಿಐ ಶನಿವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು.

ಇದಕ್ಕೂ ಮೊದಲು, ಮಾರ್ಚ್ 4 ರಂದು ತನಿಖೆಗೆ ಸೇರಲು ಆರ್‌ಜೆಡಿ ನಾಯಕನಿಗೆ ಸಮನ್ಸ್ ನೀಡಲಾಗಿತ್ತು, ಅದನ್ನು ತೇಜಸ್ವಿ ಯಾದವ್ ತಪ್ಪಿಸಿಕೊಂಡಿದ್ದರು. ಇದೀಗ, ಮುಂದಿನ ದಿನಗಳಲ್ಲಿ ತನಿಖಾ ಸಂಸ್ಥೆ ಅವರಿಗೆ ಮೂರನೇ ಸಮನ್ಸ್ ಕಳುಹಿಸಿತ್ತು. ಈ ವಿಚಾರದಲ್ಲಿ ಸಿಬಿಐ ಇತ್ತೀಚೆಗೆ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮತ್ತು ಕೇಂದ್ರದ ಮಾಜಿ ರೈಲ್ವೆ ಸಚಿವ ಲಾಲೂ ಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.

ಉದ್ಯೋಗಕ್ಕಾಗಿ ಭೂ ಹಗರಣ ಪ್ರಕರಣದಲ್ಲಿ ಆರೋಪಿಗಳು, ಆಗಿನ ರೈಲ್ವೆಯ ಜಿಎಂ ಮತ್ತು ಸಿಪಿಒ ಜೊತೆಗಿನ ಪಿತೂರಿಯಲ್ಲಿ, ತಮ್ಮ ಹೆಸರಿನಲ್ಲಿ ಅಥವಾ ಲಾಲೂ ಕುಟುಂಬದ ಹತ್ತಿರದ ಸಂಬಂಧಿಗಳ ಹೆಸರಿನಲ್ಲಿ ಭೂಮಿಗೆ ಬದಲಾಗಿ ವ್ಯಕ್ತಿಗಳನ್ನು ತೊಡಗಿಸಿಕೊಂಡಿದ್ದಾರೆ ಎಂದು ಸಿಬಿಐ ದಾಖಲಿಸಿದೆ. ಆಗಿನ ರೈಲ್ವೆ ಸಚಿವ ಲಾಲೂ ಪ್ರಸಾದ್, ಅವರ ಪತ್ನಿ ರಾಬ್ಡಿ ದೇವಿ, ಇಬ್ಬರು ಪುತ್ರಿಯರು ಮತ್ತು ಅಪರಿಚಿತ ಸಾರ್ವಜನಿಕ ಸೇವಕರು ಮತ್ತು ಖಾಸಗಿ ವ್ಯಕ್ತಿಗಳು ಸೇರಿದಂತೆ 15 ಜನರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

"2004-2009ರ ಅವಧಿಯಲ್ಲಿ, ಯಾದವ್ ಅವರು ರೈಲ್ವೆಯ ವಿವಿಧ ವಲಯಗಳಲ್ಲಿನ ಗ್ರೂಪ್ 'ಡಿ' ಪೋಸ್ಟ್‌ಗಳಲ್ಲಿ ನೇಮಕಾತಿಯ ಬದಲಿಗೆ ತಮ್ಮ ಕುಟುಂಬದ ಸದಸ್ಯರ ಹೆಸರಿಗೆ ಭೂ ಆಸ್ತಿಯನ್ನು ವರ್ಗಾಯಿಸುವ ರೂಪದಲ್ಲಿ ಹಣದ ಅನುಕೂಲಗಳನ್ನು ಪಡೆದಿದ್ದರು," ಎಂದು ಅಧಿಕಾರಿ ಹೇಳಿದರು.

ಪಾಟ್ನಾದ ಹಲವಾರು ನಿವಾಸಿಗಳು ಸ್ವತಃ ಅಥವಾ ಅವರ ಕುಟುಂಬದ ಸದಸ್ಯರ ಮೂಲಕ ತಮ್ಮ ಭೂಮಿಯನ್ನು ಯಾದವ್ ಅವರ ಕುಟುಂಬ ಸದಸ್ಯರು ಮತ್ತು ಯಾದವ್ ಅವರ ಕುಟುಂಬದವರು ನಿಯಂತ್ರಿಸುವ ಖಾಸಗಿ ಕಂಪನಿಯ ಪರವಾಗಿ ಮಾರಾಟ ಮಾಡಿದರು ಮತ್ತು ಉಡುಗೊರೆಯಾಗಿ ನೀಡಿರುವ ಬಗ್ಗೆ ಅಧಿಕಾರಿಗಳು ದಾಖಲೆ ಸಂಗ್ರಹಿಸಿದ್ದಾರೆ.

"ಝೋನಲ್ ರೈಲ್ವೇಗಳಲ್ಲಿ ಅಂತಹ ಬದಲಿ ನೇಮಕಾತಿಗಾಗಿ ಯಾವುದೇ ಜಾಹೀರಾತು ಅಥವಾ ಯಾವುದೇ ಸಾರ್ವಜನಿಕ ಸೂಚನೆಯನ್ನು ನೀಡಲಾಗಿಲ್ಲ, ಆದರೂ ನೇಮಕಗೊಂಡ ಪಾಟ್ನಾದ ನಿವಾಸಿಗಳನ್ನು ಮುಂಬೈ, ಜಬಲ್ಪುರ, ಕೋಲ್ಕತ್ತಾ, ಜೈಪುರ ಮತ್ತು ಹಾಜಿಪುರದಲ್ಲಿರುವ ವಿವಿಧ ವಲಯ ರೈಲ್ವೆಗಳಲ್ಲಿ ನೇಮಿಸಲಾಗಿತ್ತು.

"ಉದ್ಯೋಗಕ್ಕಾಗಿ ಭೂಮಿ ವಿಧಾನದಲ್ಲಿ ಸುಮಾರು 1,05,292 ಚದರ ಅಡಿ ಸ್ಥಿರಾಸ್ತಿಯನ್ನು ಯಾದವ್ ಮತ್ತು ಅವರ ಕುಟುಂಬದ ಸದಸ್ಯರು ಐದು ಮಾರಾಟ ಪತ್ರಗಳು ಮತ್ತು ಎರಡು ಉಡುಗೊರೆ ಪತ್ರಗಳ ಮೂಲಕ ಸ್ವಾಧೀನಪಡಿಸಿಕೊಂಡಿದ್ದರು. ಮಾರಾಟಗಾರನಿಗೆ ಹೆಚ್ಚಿನ ಮೊತ್ತದಲ್ಲಿ ನಗದು ರೂಪದಲ್ಲಿ ಪಾವತಿ ಆಗಿರುವುದು ತಿಳಿದುಬಂದಿತ್ತು" ಎಂದು ಸಿಬಿಐ ಮಾಹಿತಿ ನೀಡಿತ್ತು.

ಇದನ್ನೂ ಓದಿ: ತಂದೆಗೆ ಅನಗತ್ಯ ಕಿರುಕುಳ.. ಅವರಿಗೆ ಸಮಸ್ಯೆಯಾದರೆ ಯಾರನ್ನೂ ಬಿಡುವುದಿಲ್ಲ: ಲಾಲು ಪುತ್ರಿ ರೋಹಿಣಿ ಕಿಡಿ

ನವದೆಹಲಿ: ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ತಮ್ಮ ಪತ್ನಿಯ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ, ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಹಕರಿಸಲು ಕೇಂದ್ರೀಯ ತನಿಖಾ ದಳ (ಸಿಬಿಐ) ಬಳಿ ಹೆಚ್ಚಿನ ಸಮಯ ಕೋರಿದ್ದಾರೆ. ಉದ್ಯೋಗಕ್ಕಾಗಿ ಭೂ ಹಗರಣ ಸಂಬಂಧ ಹೇಳಿಕೆ ದಾಖಲಿಸಿಕೊಳ್ಳಲು ಸಿಬಿಐ ಶನಿವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು.

ಇದಕ್ಕೂ ಮೊದಲು, ಮಾರ್ಚ್ 4 ರಂದು ತನಿಖೆಗೆ ಸೇರಲು ಆರ್‌ಜೆಡಿ ನಾಯಕನಿಗೆ ಸಮನ್ಸ್ ನೀಡಲಾಗಿತ್ತು, ಅದನ್ನು ತೇಜಸ್ವಿ ಯಾದವ್ ತಪ್ಪಿಸಿಕೊಂಡಿದ್ದರು. ಇದೀಗ, ಮುಂದಿನ ದಿನಗಳಲ್ಲಿ ತನಿಖಾ ಸಂಸ್ಥೆ ಅವರಿಗೆ ಮೂರನೇ ಸಮನ್ಸ್ ಕಳುಹಿಸಿತ್ತು. ಈ ವಿಚಾರದಲ್ಲಿ ಸಿಬಿಐ ಇತ್ತೀಚೆಗೆ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮತ್ತು ಕೇಂದ್ರದ ಮಾಜಿ ರೈಲ್ವೆ ಸಚಿವ ಲಾಲೂ ಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.

ಉದ್ಯೋಗಕ್ಕಾಗಿ ಭೂ ಹಗರಣ ಪ್ರಕರಣದಲ್ಲಿ ಆರೋಪಿಗಳು, ಆಗಿನ ರೈಲ್ವೆಯ ಜಿಎಂ ಮತ್ತು ಸಿಪಿಒ ಜೊತೆಗಿನ ಪಿತೂರಿಯಲ್ಲಿ, ತಮ್ಮ ಹೆಸರಿನಲ್ಲಿ ಅಥವಾ ಲಾಲೂ ಕುಟುಂಬದ ಹತ್ತಿರದ ಸಂಬಂಧಿಗಳ ಹೆಸರಿನಲ್ಲಿ ಭೂಮಿಗೆ ಬದಲಾಗಿ ವ್ಯಕ್ತಿಗಳನ್ನು ತೊಡಗಿಸಿಕೊಂಡಿದ್ದಾರೆ ಎಂದು ಸಿಬಿಐ ದಾಖಲಿಸಿದೆ. ಆಗಿನ ರೈಲ್ವೆ ಸಚಿವ ಲಾಲೂ ಪ್ರಸಾದ್, ಅವರ ಪತ್ನಿ ರಾಬ್ಡಿ ದೇವಿ, ಇಬ್ಬರು ಪುತ್ರಿಯರು ಮತ್ತು ಅಪರಿಚಿತ ಸಾರ್ವಜನಿಕ ಸೇವಕರು ಮತ್ತು ಖಾಸಗಿ ವ್ಯಕ್ತಿಗಳು ಸೇರಿದಂತೆ 15 ಜನರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

"2004-2009ರ ಅವಧಿಯಲ್ಲಿ, ಯಾದವ್ ಅವರು ರೈಲ್ವೆಯ ವಿವಿಧ ವಲಯಗಳಲ್ಲಿನ ಗ್ರೂಪ್ 'ಡಿ' ಪೋಸ್ಟ್‌ಗಳಲ್ಲಿ ನೇಮಕಾತಿಯ ಬದಲಿಗೆ ತಮ್ಮ ಕುಟುಂಬದ ಸದಸ್ಯರ ಹೆಸರಿಗೆ ಭೂ ಆಸ್ತಿಯನ್ನು ವರ್ಗಾಯಿಸುವ ರೂಪದಲ್ಲಿ ಹಣದ ಅನುಕೂಲಗಳನ್ನು ಪಡೆದಿದ್ದರು," ಎಂದು ಅಧಿಕಾರಿ ಹೇಳಿದರು.

ಪಾಟ್ನಾದ ಹಲವಾರು ನಿವಾಸಿಗಳು ಸ್ವತಃ ಅಥವಾ ಅವರ ಕುಟುಂಬದ ಸದಸ್ಯರ ಮೂಲಕ ತಮ್ಮ ಭೂಮಿಯನ್ನು ಯಾದವ್ ಅವರ ಕುಟುಂಬ ಸದಸ್ಯರು ಮತ್ತು ಯಾದವ್ ಅವರ ಕುಟುಂಬದವರು ನಿಯಂತ್ರಿಸುವ ಖಾಸಗಿ ಕಂಪನಿಯ ಪರವಾಗಿ ಮಾರಾಟ ಮಾಡಿದರು ಮತ್ತು ಉಡುಗೊರೆಯಾಗಿ ನೀಡಿರುವ ಬಗ್ಗೆ ಅಧಿಕಾರಿಗಳು ದಾಖಲೆ ಸಂಗ್ರಹಿಸಿದ್ದಾರೆ.

"ಝೋನಲ್ ರೈಲ್ವೇಗಳಲ್ಲಿ ಅಂತಹ ಬದಲಿ ನೇಮಕಾತಿಗಾಗಿ ಯಾವುದೇ ಜಾಹೀರಾತು ಅಥವಾ ಯಾವುದೇ ಸಾರ್ವಜನಿಕ ಸೂಚನೆಯನ್ನು ನೀಡಲಾಗಿಲ್ಲ, ಆದರೂ ನೇಮಕಗೊಂಡ ಪಾಟ್ನಾದ ನಿವಾಸಿಗಳನ್ನು ಮುಂಬೈ, ಜಬಲ್ಪುರ, ಕೋಲ್ಕತ್ತಾ, ಜೈಪುರ ಮತ್ತು ಹಾಜಿಪುರದಲ್ಲಿರುವ ವಿವಿಧ ವಲಯ ರೈಲ್ವೆಗಳಲ್ಲಿ ನೇಮಿಸಲಾಗಿತ್ತು.

"ಉದ್ಯೋಗಕ್ಕಾಗಿ ಭೂಮಿ ವಿಧಾನದಲ್ಲಿ ಸುಮಾರು 1,05,292 ಚದರ ಅಡಿ ಸ್ಥಿರಾಸ್ತಿಯನ್ನು ಯಾದವ್ ಮತ್ತು ಅವರ ಕುಟುಂಬದ ಸದಸ್ಯರು ಐದು ಮಾರಾಟ ಪತ್ರಗಳು ಮತ್ತು ಎರಡು ಉಡುಗೊರೆ ಪತ್ರಗಳ ಮೂಲಕ ಸ್ವಾಧೀನಪಡಿಸಿಕೊಂಡಿದ್ದರು. ಮಾರಾಟಗಾರನಿಗೆ ಹೆಚ್ಚಿನ ಮೊತ್ತದಲ್ಲಿ ನಗದು ರೂಪದಲ್ಲಿ ಪಾವತಿ ಆಗಿರುವುದು ತಿಳಿದುಬಂದಿತ್ತು" ಎಂದು ಸಿಬಿಐ ಮಾಹಿತಿ ನೀಡಿತ್ತು.

ಇದನ್ನೂ ಓದಿ: ತಂದೆಗೆ ಅನಗತ್ಯ ಕಿರುಕುಳ.. ಅವರಿಗೆ ಸಮಸ್ಯೆಯಾದರೆ ಯಾರನ್ನೂ ಬಿಡುವುದಿಲ್ಲ: ಲಾಲು ಪುತ್ರಿ ರೋಹಿಣಿ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.