ETV Bharat / bharat

ಜೈಲಿನಿಂದ ಹೊರಬರಲಿದ್ದಾರೆ ಲಾಲು ಪ್ರಸಾದ್​.. ಬಿಡುಗಡೆಗೆ ನ್ಯಾಯಾಲಯದಿಂದ ಆದೇಶ ಪ್ರತಿ

author img

By

Published : Apr 29, 2021, 4:55 PM IST

ಜೈಲಿನಲ್ಲಿರುವ ಲಾಲು ಪ್ರಸಾದ್​ ಯಾದವ್​ ಬಿಡುಗಡೆಗೆ ಇದೀಗ ದಿನಗಣನೆ ಆರಂಭಗೊಂಡಿದ್ದು, ಸಿಬಿಐ ನ್ಯಾಯಾಲಯದಿಂದ ಅವರ ಬಿಡುಗಡೆ ಆದೇಶ ಪ್ರತಿ ಪಡೆದುಕೊಳ್ಳಲಾಗಿದೆ.

Lalu Prasad Yadav
Lalu Prasad Yadav

ರಾಂಚಿ: ಮೇವು ಹಗರಣಕ್ಕೆ ಸಂಬಂಧಿಸಿದಂತೆ ದುಮ್ಕಾ ಖಜಾನೆಯಿಂದ ಅಕ್ರಮವಾಗಿ ಹಣ ಪಡೆದಿರುವ ಪ್ರಕರಣದಲ್ಲಿ ಈಗಾಗಲೇ ಆರ್​​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್​ ಯಾದವ್​ ಅವರಿಗೆ ಜಾರ್ಖಂಡ್​ನ ಹೈಕೋರ್ಟ್​​ ಜಾಮೀನು ಮುಂಜೂರು ಮಾಡಿದೆ. ಇದರ ಮಧ್ಯೆ ಅವರ ಪರ ವಕೀಲರು ರಾಂಚಿ ಸಿಬಿಐ ನ್ಯಾಯಾಲಯದಲ್ಲಿ ಬಿಡುಗಡೆ ಆದೇಶ ಪ್ರತಿ ಪಡೆದುಕೊಂಡಿದ್ದಾರೆ.

ವಕೀಲ ಪ್ರಭಾತ್​ ಕುಮಾರ್​ 10 ಲಕ್ಷ ರೂ.ಗಳ ಜಾಮೀನು ಬಾಂಡ್​ ಪಾವತಿ ಮಾಡಿದ್ದು, ಲಾಲು ಪ್ರಸಾದ್​ ಯಾದವ್​ ಬಿಡುಗಡೆಗೆ ಆದೇಶ ಪಡೆದುಕೊಂಡಿದ್ದಾರೆ.

ಸದ್ಯ ಲಾಲು ಪ್ರಸಾದ್​ ಯಾದವ್​​ ದೆಹಲಿಯ ಏಮ್ಸ್​​ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮೇವು ಹಗರಣಕ್ಕೆ ಸಂಬಂಧಿಸಿದಂತೆ ದುಮ್ಕಾ ಖಜಾನೆ ಪ್ರಕರಣದಲ್ಲಿ ಏಪ್ರಿಲ್​ 17ರಂದು ಹೈಕೋರ್ಟ್ ಜಾಮೀನು ನೀಡಿತ್ತು. ಬಿಡುಗಡೆಯ ಆದೇಶ ಪ್ರತಿ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ದೆಹಲಿ ತಲುಪಲಿದೆ.

ಇದನ್ನೂ ಓದಿ: ಕೋವಿಡ್​ನಿಂದ ಚೇತರಿಸಿಕೊಂಡ ಮಾಜಿ ಪಿಎಂ: ಆಸ್ಪತ್ರೆಯಿಂದ ಡಿಸ್ಚಾರ್ಜ್​

ಮೇವು ಹಗರಣಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳಲ್ಲಿ ಲಾಲು ಪ್ರಸಾದ್​ ಯಾದವ್​ ಅವರಿಗೆ ಶಿಕ್ಷೆ ಆಗಿತ್ತು. ಆದರೆ ಈಗಾಗಲೇ ಮೂರು ಪ್ರಕರಣಗಳಲ್ಲಿ ಜಾಮೀನು ಪಡೆದುಕೊಂಡಿದ್ದಾರೆ. ಇದೀಗ ನಾಲ್ಕನೇ ಪ್ರಕರಣದಲ್ಲೂ ಜಾರ್ಖಂಡ್ ಹೈಕೋರ್ಟ್​​ನಿಂದ ಜಾಮೀನು ಸಿಕ್ಕಿರುವ ಕಾರಣ ಇದೀಗ ಹೊರಬರಲಿದ್ದಾರೆ.

ರಾಂಚಿ: ಮೇವು ಹಗರಣಕ್ಕೆ ಸಂಬಂಧಿಸಿದಂತೆ ದುಮ್ಕಾ ಖಜಾನೆಯಿಂದ ಅಕ್ರಮವಾಗಿ ಹಣ ಪಡೆದಿರುವ ಪ್ರಕರಣದಲ್ಲಿ ಈಗಾಗಲೇ ಆರ್​​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್​ ಯಾದವ್​ ಅವರಿಗೆ ಜಾರ್ಖಂಡ್​ನ ಹೈಕೋರ್ಟ್​​ ಜಾಮೀನು ಮುಂಜೂರು ಮಾಡಿದೆ. ಇದರ ಮಧ್ಯೆ ಅವರ ಪರ ವಕೀಲರು ರಾಂಚಿ ಸಿಬಿಐ ನ್ಯಾಯಾಲಯದಲ್ಲಿ ಬಿಡುಗಡೆ ಆದೇಶ ಪ್ರತಿ ಪಡೆದುಕೊಂಡಿದ್ದಾರೆ.

ವಕೀಲ ಪ್ರಭಾತ್​ ಕುಮಾರ್​ 10 ಲಕ್ಷ ರೂ.ಗಳ ಜಾಮೀನು ಬಾಂಡ್​ ಪಾವತಿ ಮಾಡಿದ್ದು, ಲಾಲು ಪ್ರಸಾದ್​ ಯಾದವ್​ ಬಿಡುಗಡೆಗೆ ಆದೇಶ ಪಡೆದುಕೊಂಡಿದ್ದಾರೆ.

ಸದ್ಯ ಲಾಲು ಪ್ರಸಾದ್​ ಯಾದವ್​​ ದೆಹಲಿಯ ಏಮ್ಸ್​​ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮೇವು ಹಗರಣಕ್ಕೆ ಸಂಬಂಧಿಸಿದಂತೆ ದುಮ್ಕಾ ಖಜಾನೆ ಪ್ರಕರಣದಲ್ಲಿ ಏಪ್ರಿಲ್​ 17ರಂದು ಹೈಕೋರ್ಟ್ ಜಾಮೀನು ನೀಡಿತ್ತು. ಬಿಡುಗಡೆಯ ಆದೇಶ ಪ್ರತಿ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ದೆಹಲಿ ತಲುಪಲಿದೆ.

ಇದನ್ನೂ ಓದಿ: ಕೋವಿಡ್​ನಿಂದ ಚೇತರಿಸಿಕೊಂಡ ಮಾಜಿ ಪಿಎಂ: ಆಸ್ಪತ್ರೆಯಿಂದ ಡಿಸ್ಚಾರ್ಜ್​

ಮೇವು ಹಗರಣಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳಲ್ಲಿ ಲಾಲು ಪ್ರಸಾದ್​ ಯಾದವ್​ ಅವರಿಗೆ ಶಿಕ್ಷೆ ಆಗಿತ್ತು. ಆದರೆ ಈಗಾಗಲೇ ಮೂರು ಪ್ರಕರಣಗಳಲ್ಲಿ ಜಾಮೀನು ಪಡೆದುಕೊಂಡಿದ್ದಾರೆ. ಇದೀಗ ನಾಲ್ಕನೇ ಪ್ರಕರಣದಲ್ಲೂ ಜಾರ್ಖಂಡ್ ಹೈಕೋರ್ಟ್​​ನಿಂದ ಜಾಮೀನು ಸಿಕ್ಕಿರುವ ಕಾರಣ ಇದೀಗ ಹೊರಬರಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.