ETV Bharat / bharat

ಕೇರಳದಲ್ಲಿ ಆಮ್ಲಜನಕ ‘ವಾರ್’​ರೂಂ ಸ್ಥಾಪನೆ.. 10 ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರಿಗೆ ವಕ್ಕರಿಸಿದ ಕೋವಿಡ್.. - oxygen war rooms in Kerala news

ಕೇರಳದಲ್ಲಿ ಸೋಮವಾರ 27,487 ಹೊಸ ಕೋವಿಡ್-19 ಪ್ರಕರಣಗಳು ಮತ್ತು 65 ಸಾವುಗಳು ದಾಖಲಾಗಿವೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,19,726 ತಲುಪಿದೆ. ಪಾಸಿಟಿವ್​ ಪ್ರಮಾಣವು ಶೇ. 27.56 ರಷ್ಟಿದೆ ಎಂದು ರಾಜ್ಯ ಸರ್ಕಾರ ತನ್ನ ದೈನಂದಿನ ಆರೋಗ್ಯ ಬುಲೆಟಿನ್‌ನಲ್ಲಿ ತಿಳಿಸಿದೆ..

Kerala sets up oxygen war rooms to prevent shortage issues
ಕೇರಳದಲ್ಲಿ ಆಮ್ಲಜನಕ ‘ವಾರ್’​ರೂಂ ಸ್ಥಾಪನೆ
author img

By

Published : May 11, 2021, 12:41 PM IST

ತಿರುವನಂತಪುರಂ (ಕೇರಳ) : ದೇಶದಲ್ಲಿ ಹದಗೆಡುತ್ತಿರುವ ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆ ಕೇರಳ ಸರ್ಕಾರ ರಾಜ್ಯಾದ್ಯಂತ ಆಸ್ಪತ್ರೆಗಳ ಬೇಡಿಕೆಗಳನ್ನು ಪೂರೈಸಲು ‘ಆಮ್ಲಜನಕ ವಾರ್​ರೂಂ’ ಮತ್ತು ‘ಆಮ್ಲಜನಕ ಸಂಗ್ರಹ ಕೇಂದ್ರ’ ಸ್ಥಾಪಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆ ಆಸ್ಪತ್ರೆಗಳ ಬೇಡಿಕೆಗಳನ್ನು ಪೂರೈಸಲು ತಿರುವನಂತಪುರಂನ ಸರ್ಕಾರಿ ಕಾಲೇಜಿನಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ.

"ನಮ್ಮನ್ನು ಜಿಲ್ಲಾಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ನಾವು 24/7 ಕೆಲಸ ಮಾಡುತ್ತೇವೆ. ನಮ್ಮಲ್ಲಿ ಆಸ್ಪತ್ರೆಗಳಿಗೆ ನೋಂದಣಿಗೆ ಪೋರ್ಟಲ್ ವ್ಯವಸ್ಥೆ ಇದೆ. ನಾವು ಸರ್ಕಾರಿ ಮತ್ತು ಸರ್ಕಾರೇತರ ಆಸ್ಪತ್ರೆಗಳಿಗೆ ಆಮ್ಲಜನಕ ಒದಗಿಸುತ್ತೇವೆ.

ಆಮ್ಲಜನಕದ ಅಗತ್ಯವಿರುವ ಆಸ್ಪತ್ರೆಗಳು ಪೋರ್ಟಲ್​ ಮೂಲಕ ನೋಂದಾಯಿಸಿಕೊಳ್ಳಬಹುದು. ಅದರ ಆಧಾರದ ಮೇಲೆ, ನಾವು ಆಮ್ಲಜನಕವನ್ನು ಒದಗಿಸುತ್ತೇವೆ. ಇದನ್ನು ಮೇಲ್ವಿಚಾರಣೆ ಮಾಡುವ 20 ಸ್ವಯಂಸೇವಕರು ಮತ್ತು 4 ವೈದ್ಯರು ಇಲ್ಲಿದ್ದಾರೆ. ನಮ್ಮಲ್ಲಿ ಬಫರ್ ವ್ಯವಸ್ಥೆ ಇದೆ ಮತ್ತು ಸಾಕಷ್ಟು ಆಮ್ಲಜನಕವಿದೆ" ಎಂದು ಆಮ್ಲಜನಕ ವಾರ್​ರೂಂ ಉಸ್ತುವಾರಿ ಡಾ.ಜಾಕೋಬ್ ಹೇಳಿದರು.

ಇದನ್ನೂ ಓದಿ: ಹಿರಿಯ ಕಮ್ಯುನಿಸ್ಟ್ ನಾಯಕಿ, ಕೇರಳದ ಮೊದಲ ಕಂದಾಯ ಸಚಿವೆ ಗೌರಿಯಮ್ಮ ಇನ್ನಿಲ್ಲ

ಕೇರಳದಲ್ಲಿ ಸೋಮವಾರ 27,487 ಹೊಸ ಕೋವಿಡ್-19 ಪ್ರಕರಣಗಳು ಮತ್ತು 65 ಸಾವುಗಳು ದಾಖಲಾಗಿವೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,19,726 ತಲುಪಿದೆ. ಪಾಸಿಟಿವ್​ ಪ್ರಮಾಣವು ಶೇ. 27.56 ರಷ್ಟಿದೆ ಎಂದು ರಾಜ್ಯ ಸರ್ಕಾರ ತನ್ನ ದೈನಂದಿನ ಆರೋಗ್ಯ ಬುಲೆಟಿನ್‌ನಲ್ಲಿ ತಿಳಿಸಿದೆ.

ಏತನ್ಮಧ್ಯೆ, ಕಳೆದ 10 ದಿನಗಳಲ್ಲಿ ರಾಜ್ಯದಲ್ಲಿ 1,000 ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು ಕೋವಿಡ್ -19 ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ರಾಜ್ಯ ವೈದ್ಯಕೀಯ ಅಧಿಕಾರಿಗಳ ಸಂಸ್ಥೆ ತಿಳಿಸಿದೆ.

ತಿರುವನಂತಪುರಂ (ಕೇರಳ) : ದೇಶದಲ್ಲಿ ಹದಗೆಡುತ್ತಿರುವ ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆ ಕೇರಳ ಸರ್ಕಾರ ರಾಜ್ಯಾದ್ಯಂತ ಆಸ್ಪತ್ರೆಗಳ ಬೇಡಿಕೆಗಳನ್ನು ಪೂರೈಸಲು ‘ಆಮ್ಲಜನಕ ವಾರ್​ರೂಂ’ ಮತ್ತು ‘ಆಮ್ಲಜನಕ ಸಂಗ್ರಹ ಕೇಂದ್ರ’ ಸ್ಥಾಪಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆ ಆಸ್ಪತ್ರೆಗಳ ಬೇಡಿಕೆಗಳನ್ನು ಪೂರೈಸಲು ತಿರುವನಂತಪುರಂನ ಸರ್ಕಾರಿ ಕಾಲೇಜಿನಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ.

"ನಮ್ಮನ್ನು ಜಿಲ್ಲಾಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ನಾವು 24/7 ಕೆಲಸ ಮಾಡುತ್ತೇವೆ. ನಮ್ಮಲ್ಲಿ ಆಸ್ಪತ್ರೆಗಳಿಗೆ ನೋಂದಣಿಗೆ ಪೋರ್ಟಲ್ ವ್ಯವಸ್ಥೆ ಇದೆ. ನಾವು ಸರ್ಕಾರಿ ಮತ್ತು ಸರ್ಕಾರೇತರ ಆಸ್ಪತ್ರೆಗಳಿಗೆ ಆಮ್ಲಜನಕ ಒದಗಿಸುತ್ತೇವೆ.

ಆಮ್ಲಜನಕದ ಅಗತ್ಯವಿರುವ ಆಸ್ಪತ್ರೆಗಳು ಪೋರ್ಟಲ್​ ಮೂಲಕ ನೋಂದಾಯಿಸಿಕೊಳ್ಳಬಹುದು. ಅದರ ಆಧಾರದ ಮೇಲೆ, ನಾವು ಆಮ್ಲಜನಕವನ್ನು ಒದಗಿಸುತ್ತೇವೆ. ಇದನ್ನು ಮೇಲ್ವಿಚಾರಣೆ ಮಾಡುವ 20 ಸ್ವಯಂಸೇವಕರು ಮತ್ತು 4 ವೈದ್ಯರು ಇಲ್ಲಿದ್ದಾರೆ. ನಮ್ಮಲ್ಲಿ ಬಫರ್ ವ್ಯವಸ್ಥೆ ಇದೆ ಮತ್ತು ಸಾಕಷ್ಟು ಆಮ್ಲಜನಕವಿದೆ" ಎಂದು ಆಮ್ಲಜನಕ ವಾರ್​ರೂಂ ಉಸ್ತುವಾರಿ ಡಾ.ಜಾಕೋಬ್ ಹೇಳಿದರು.

ಇದನ್ನೂ ಓದಿ: ಹಿರಿಯ ಕಮ್ಯುನಿಸ್ಟ್ ನಾಯಕಿ, ಕೇರಳದ ಮೊದಲ ಕಂದಾಯ ಸಚಿವೆ ಗೌರಿಯಮ್ಮ ಇನ್ನಿಲ್ಲ

ಕೇರಳದಲ್ಲಿ ಸೋಮವಾರ 27,487 ಹೊಸ ಕೋವಿಡ್-19 ಪ್ರಕರಣಗಳು ಮತ್ತು 65 ಸಾವುಗಳು ದಾಖಲಾಗಿವೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,19,726 ತಲುಪಿದೆ. ಪಾಸಿಟಿವ್​ ಪ್ರಮಾಣವು ಶೇ. 27.56 ರಷ್ಟಿದೆ ಎಂದು ರಾಜ್ಯ ಸರ್ಕಾರ ತನ್ನ ದೈನಂದಿನ ಆರೋಗ್ಯ ಬುಲೆಟಿನ್‌ನಲ್ಲಿ ತಿಳಿಸಿದೆ.

ಏತನ್ಮಧ್ಯೆ, ಕಳೆದ 10 ದಿನಗಳಲ್ಲಿ ರಾಜ್ಯದಲ್ಲಿ 1,000 ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು ಕೋವಿಡ್ -19 ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ರಾಜ್ಯ ವೈದ್ಯಕೀಯ ಅಧಿಕಾರಿಗಳ ಸಂಸ್ಥೆ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.