ETV Bharat / bharat

ಸಿಖ್​ ಯಾತ್ರಿಗಳಿಗಾಗಿ ನಾಳೆಯಿಂದ ಕರ್ತಾರ್​ಪುರ ಸಾಹಿಬ್​ ಕಾರಿಡಾರ್​ ಪುನಾರಂಭ - ಸಿಖ್​ ಯಾತ್ರಾರ್ಥಿಗಳು ತೆರಳಲು ಅನುಕೂಲ

ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ದೇಗುಲದಿಂದ ಸಿಖ್ಖರ ಪವಿತ್ರ ಸ್ಥಳವಾದ ಪಾಕಿಸ್ತಾನದಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್​ಗೆ(Gurdwara Darbar Sahib in Pakistan)ಸಂಪರ್ಕ ಕಲ್ಪಿಸುವ ಕರ್ತಾರ್​ಪುರ ಕಾರಿಡಾರ್​ ನಾಳೆಯಿಂದ (Kartarpur corridor to reopen)ಪುನಾರಂಭವಾಗಲಿದೆ.

Kartarpur corridor
ಕರ್ತಾರ್​ಪುರ ಸಾಹಿಬ್​ ಕಾರಿಡಾರ್​
author img

By

Published : Nov 16, 2021, 5:25 PM IST

ನವದೆಹಲಿ: ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ದೇಗುಲದಿಂದ ಸಿಖ್ಖರ ಪವಿತ್ರ ಸ್ಥಳವಾದ ಪಾಕಿಸ್ತಾನದಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್​ಗೆ (Gurdwara Darbar Sahib in Pakistan)ಸಂಪರ್ಕ ಕಲ್ಪಿಸುವ ಕರ್ತಾರ್​ಪುರ ಸಾಹಿಬ್​ ಕಾರಿಡಾರ್​(Kartarpur corridor to reopen) ನಾಳೆಯಿಂದ ಪುನಾರಂಭವಾಗಲಿದೆ.

ಈ ಬಗ್ಗೆ ಟ್ವೀಟ್​ ಮಾಡಿ ಮಾಹಿತಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ 'ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಅನ್ನು ಬುಧವಾರದಿಂದ(ನ.17) ಪುನಾರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ಗುರುನಾನಕ್ ದೇವ್ ಮತ್ತು ಸಿಖ್ ಸಮುದಾಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೊಂದಿರುವ ಅಪಾರ ಗೌರವವನ್ನು ಪ್ರತಿಬಿಂಬಿಸುತ್ತದೆ ಎಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಯುವತಿ ಕೊಂದು ಅಂಗಾಂಗ ಸುಟ್ಹಾಕಿದ ಕೀಚಕರು.. ಮತ್ತೊಂದು ಅತ್ಯಾಚಾರ-ಕೊಲೆ ಶಂಕೆ

ಈ ಹಿಂದೆ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಗುರುನಾನಕ್ ಜಯಂತಿಗೂ ಮುಂಚಿತವಾಗಿ ಕರ್ತಾರ್​ಪುರ ಕಾರಿಡಾರ್​ ಅನ್ನು ಆರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಪ್ರಧಾನಿ ಮೋದಿಯನ್ನು ಕೋರಿದ್ದರು.

ಇದರಂತೆ ಗುರುನಾನಕ್ ದೇವ್ ಅವರ ಜಯಂತಿಯಂದು ಅವರ ಪವಿತ್ರ ಸ್ಥಳವಾದ ಗುರುದ್ವಾರ ದರ್ಬಾರ್​ ಸಾಹಿಬ್​ಗೆ ಸಿಖ್​ ಯಾತ್ರಾರ್ಥಿಗಳು ತೆರಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದಕ್ಕೆ ಪಾಕಿಸ್ತಾನವೂ ಸಮ್ಮತಿಸಿದೆ.

ನವದೆಹಲಿ: ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ದೇಗುಲದಿಂದ ಸಿಖ್ಖರ ಪವಿತ್ರ ಸ್ಥಳವಾದ ಪಾಕಿಸ್ತಾನದಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್​ಗೆ (Gurdwara Darbar Sahib in Pakistan)ಸಂಪರ್ಕ ಕಲ್ಪಿಸುವ ಕರ್ತಾರ್​ಪುರ ಸಾಹಿಬ್​ ಕಾರಿಡಾರ್​(Kartarpur corridor to reopen) ನಾಳೆಯಿಂದ ಪುನಾರಂಭವಾಗಲಿದೆ.

ಈ ಬಗ್ಗೆ ಟ್ವೀಟ್​ ಮಾಡಿ ಮಾಹಿತಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ 'ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಅನ್ನು ಬುಧವಾರದಿಂದ(ನ.17) ಪುನಾರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ಗುರುನಾನಕ್ ದೇವ್ ಮತ್ತು ಸಿಖ್ ಸಮುದಾಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೊಂದಿರುವ ಅಪಾರ ಗೌರವವನ್ನು ಪ್ರತಿಬಿಂಬಿಸುತ್ತದೆ ಎಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಯುವತಿ ಕೊಂದು ಅಂಗಾಂಗ ಸುಟ್ಹಾಕಿದ ಕೀಚಕರು.. ಮತ್ತೊಂದು ಅತ್ಯಾಚಾರ-ಕೊಲೆ ಶಂಕೆ

ಈ ಹಿಂದೆ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಗುರುನಾನಕ್ ಜಯಂತಿಗೂ ಮುಂಚಿತವಾಗಿ ಕರ್ತಾರ್​ಪುರ ಕಾರಿಡಾರ್​ ಅನ್ನು ಆರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಪ್ರಧಾನಿ ಮೋದಿಯನ್ನು ಕೋರಿದ್ದರು.

ಇದರಂತೆ ಗುರುನಾನಕ್ ದೇವ್ ಅವರ ಜಯಂತಿಯಂದು ಅವರ ಪವಿತ್ರ ಸ್ಥಳವಾದ ಗುರುದ್ವಾರ ದರ್ಬಾರ್​ ಸಾಹಿಬ್​ಗೆ ಸಿಖ್​ ಯಾತ್ರಾರ್ಥಿಗಳು ತೆರಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದಕ್ಕೆ ಪಾಕಿಸ್ತಾನವೂ ಸಮ್ಮತಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.