ETV Bharat / bharat

ಕಾನ್ಪುರ​ ಹಿಂಸಾಚಾರ; ಕಲ್ಲು ತೂರಾಟಕ್ಕೆ ಹುಡುಗರಿಗೆ 500-1000 ಕೊಡಲಾಗಿತ್ತು: ಆರೋಪಿ ಮುಖ್ತಾರ್​!

author img

By

Published : Jun 24, 2022, 1:54 PM IST

ಉತ್ತರಪ್ರದೇಶದ ಕಾನ್ಪುರ ಹಿಂಸಾಚಾರ ಪ್ರಕರಣದ ತನಿಖೆಯಲ್ಲಿ ದಿನಕ್ಕೊಂದು ಹೊಸ ಹೊಸ ಸಂಗತಿಗಳು ಹೊರಬೀಳುತ್ತಿವೆ. ಆರೋಪಿ ಮುಕ್ತಾರ್ ಬಾಬಾ ಎಸ್‌ಐಟಿಯ ವಿಚಾರಣೆಯಲ್ಲಿ ಹಲವು ರಹಸ್ಯಗಳನ್ನು ಬಹಿರಂಗಪಡಿಸಿದ್ದಾನೆ.

kanpur mukhtar baba revelations  kanpur parede bawal  kanpur parade violence  kanpur violence conspiracy  kanpur news in hindi  ಉತ್ತರಪ್ರದೇಶದ ಕಾನ್ಪುರ ಹಿಂಸಾಚಾರ ಪ್ರಕರಣ  ಉತ್ತರಪ್ರದೇಶದ ಕಾನ್ಪುರ ಹಿಂಸಾಚಾರದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಮುಖ್ತಾರ್​ ಕಾನ್ಪುರ್​ ಹಿಂಸಾಚಾರ ಸುದ್ದಿ  ಕಾನ್ಪುರ್​ ಪರೇಡ್​ ಮೇಲೆ ಕಲ್ಲು ತೂರಾಟ  ಉತ್ತರಪ್ರದೇಶ ಹಿಂಸಾಚಾರ ಸುದ್ದಿ
ಕಾನ್ಪುರ್​ ಹಿಂಸಾಚಾರದಲ್ಲಿ ಕಲ್ಲು ತೂರಾಟ

ಕಾನ್ಪುರ (ಉತ್ತರಪ್ರದೇಶ): ಜೂನ್ 3 ರಂದು ನಡೆದ ಕಾನ್ಪುರ್​ ಹಿಂಸಾಚಾರದಲ್ಲಿ ಆರೋಪಿ ಮುಕ್ತಾರ್ ಬಾಬಾನನ್ನು ಬಂಧಿಸಿದ ನಂತರ ಎಸ್‌ಐಟಿಯ ವಿಚಾರಣೆ ವೇಳೆ ಹಲವು ರಹಸ್ಯಗಳು ಹೊರಬಂದಿವೆ. ಗಲಭೆಯಲ್ಲಿ 500 ರಿಂದ 1000 ರೂಪಾಯಿವರೆಗೆ ಹಣ ನೀಡಿ ಕಲ್ಲು ತೂರಾಟ ನಡೆಸಲು ಹುಡುಗರನ್ನು ಕರೆ ತರಲಾಗಿದೆ ಎಂದು ಆರೋಪಿ ಮುಖ್ತಾರ್ ಬಾಯ್ಬಿಟ್ಟಿದ್ದಾನೆ.

ಶುಕ್ರವಾರದ ಪ್ರಾರ್ಥನೆಯ ನಂತರ ಕಲ್ಲು ತೂರಾಟ ನಡೆಸಬೇಕೆಂದು ಹುಡುಗರಿಗೆ ತಿಳಿಸಲಾಗಿತ್ತು. ಚಂದೇಶ್ವರ ಹಟ ವಶಕ್ಕೆ ಪಡೆಯುವ ಗುರಿ ಮುಖ್ತಾರ್​ದಾಗಿತ್ತು. ಈ ಹಿಂದೆಯೂ ಕರಪತ್ರದ ಬಗ್ಗೆ ಕಾನ್ಪುರದಲ್ಲಿ ಗಲಾಟೆ ನಡೆದಿತ್ತು. ಚಂದೇಶ್ವರ ಹಟದಲ್ಲಿ ಸದಾ ಸಂಘರ್ಷದ ಪರಿಸ್ಥಿತಿ ಇರುತ್ತದೆ. ಇದು ಸಂಪೂರ್ಣವಾಗಿ ಸಂಚಿನಿಂದ ನಡೆದ ಗಲಭೆಯಾಗಿದೆ ಎಂದು ಮುಖ್ತಾರ್ ಬಾಬಾ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಎಸ್​ಐಟಿ ಹೇಳಿದೆ.

ಓದಿ: ಯುಪಿ ಹಿಂಸಾಚಾರ: ಪೊಲೀಸರಿಗೆ ಕಲ್ಲು ತೂರಿದವರಲ್ಲಿ ಅಪ್ರಾಪ್ತರೇ ಹೆಚ್ಚು!

ಜೂನ್ 3 ರಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ವಿಐಪಿಗಳು ನಗರದಲ್ಲಿ ಬೀಡುಬಿಟ್ಟಿದ್ದರು. ಈ ಬಗ್ಗೆ ತಿಳಿದ ಮುಖ್ತಾರ್​ ಗಲಭೆ ವಾತಾವರಣ ಸೃಷ್ಟಿಸಿದರು. ಈ ನಡುವೆ ಜಿಲ್ಲಾಡಳಿತ ಮುಖ್ತಾರ್​ನ ಎಲ್ಲ ಆಸ್ತಿಗಳನ್ನು ಪರಿಶೀಲಿಸುತ್ತಿದೆ. ಮುಖ್ತಾರ್ ತಮ್ಮ ಮಗಳು ಮತ್ತು ಪತ್ನಿ ಹೆಸರಿನಲ್ಲಿ ಅನೇಕ ಆಸ್ತಿಗಳನ್ನು ತಪ್ಪಾಗಿ ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಮುಖ್ತಾರ್ ಅವರಿಂದ ಬಂದಿರುವ ಮಾಹಿತಿ ಪ್ರಕಾರ ಪೊಲೀಸರು ನಿರಂತರ ಕ್ರಮಕೈಗೊಳ್ಳುತ್ತಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಆರೋಪಿಗಳನ್ನು ಬಂಧಿಸಬಹುದಾಗಿದೆ ಎಂದು ಪೊಲೀಸರು ಹೇಳಿದ್ದಾರೆ.


ಕಾನ್ಪುರ (ಉತ್ತರಪ್ರದೇಶ): ಜೂನ್ 3 ರಂದು ನಡೆದ ಕಾನ್ಪುರ್​ ಹಿಂಸಾಚಾರದಲ್ಲಿ ಆರೋಪಿ ಮುಕ್ತಾರ್ ಬಾಬಾನನ್ನು ಬಂಧಿಸಿದ ನಂತರ ಎಸ್‌ಐಟಿಯ ವಿಚಾರಣೆ ವೇಳೆ ಹಲವು ರಹಸ್ಯಗಳು ಹೊರಬಂದಿವೆ. ಗಲಭೆಯಲ್ಲಿ 500 ರಿಂದ 1000 ರೂಪಾಯಿವರೆಗೆ ಹಣ ನೀಡಿ ಕಲ್ಲು ತೂರಾಟ ನಡೆಸಲು ಹುಡುಗರನ್ನು ಕರೆ ತರಲಾಗಿದೆ ಎಂದು ಆರೋಪಿ ಮುಖ್ತಾರ್ ಬಾಯ್ಬಿಟ್ಟಿದ್ದಾನೆ.

ಶುಕ್ರವಾರದ ಪ್ರಾರ್ಥನೆಯ ನಂತರ ಕಲ್ಲು ತೂರಾಟ ನಡೆಸಬೇಕೆಂದು ಹುಡುಗರಿಗೆ ತಿಳಿಸಲಾಗಿತ್ತು. ಚಂದೇಶ್ವರ ಹಟ ವಶಕ್ಕೆ ಪಡೆಯುವ ಗುರಿ ಮುಖ್ತಾರ್​ದಾಗಿತ್ತು. ಈ ಹಿಂದೆಯೂ ಕರಪತ್ರದ ಬಗ್ಗೆ ಕಾನ್ಪುರದಲ್ಲಿ ಗಲಾಟೆ ನಡೆದಿತ್ತು. ಚಂದೇಶ್ವರ ಹಟದಲ್ಲಿ ಸದಾ ಸಂಘರ್ಷದ ಪರಿಸ್ಥಿತಿ ಇರುತ್ತದೆ. ಇದು ಸಂಪೂರ್ಣವಾಗಿ ಸಂಚಿನಿಂದ ನಡೆದ ಗಲಭೆಯಾಗಿದೆ ಎಂದು ಮುಖ್ತಾರ್ ಬಾಬಾ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಎಸ್​ಐಟಿ ಹೇಳಿದೆ.

ಓದಿ: ಯುಪಿ ಹಿಂಸಾಚಾರ: ಪೊಲೀಸರಿಗೆ ಕಲ್ಲು ತೂರಿದವರಲ್ಲಿ ಅಪ್ರಾಪ್ತರೇ ಹೆಚ್ಚು!

ಜೂನ್ 3 ರಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ವಿಐಪಿಗಳು ನಗರದಲ್ಲಿ ಬೀಡುಬಿಟ್ಟಿದ್ದರು. ಈ ಬಗ್ಗೆ ತಿಳಿದ ಮುಖ್ತಾರ್​ ಗಲಭೆ ವಾತಾವರಣ ಸೃಷ್ಟಿಸಿದರು. ಈ ನಡುವೆ ಜಿಲ್ಲಾಡಳಿತ ಮುಖ್ತಾರ್​ನ ಎಲ್ಲ ಆಸ್ತಿಗಳನ್ನು ಪರಿಶೀಲಿಸುತ್ತಿದೆ. ಮುಖ್ತಾರ್ ತಮ್ಮ ಮಗಳು ಮತ್ತು ಪತ್ನಿ ಹೆಸರಿನಲ್ಲಿ ಅನೇಕ ಆಸ್ತಿಗಳನ್ನು ತಪ್ಪಾಗಿ ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಮುಖ್ತಾರ್ ಅವರಿಂದ ಬಂದಿರುವ ಮಾಹಿತಿ ಪ್ರಕಾರ ಪೊಲೀಸರು ನಿರಂತರ ಕ್ರಮಕೈಗೊಳ್ಳುತ್ತಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಆರೋಪಿಗಳನ್ನು ಬಂಧಿಸಬಹುದಾಗಿದೆ ಎಂದು ಪೊಲೀಸರು ಹೇಳಿದ್ದಾರೆ.


ETV Bharat Logo

Copyright © 2024 Ushodaya Enterprises Pvt. Ltd., All Rights Reserved.