ETV Bharat / bharat

ಪ್ರತಿಭಟನಾಕಾರರು ಭಯೋತ್ಪಾದಕರು, ಅವರಿಗೆ ಬೆಂಬಲಿಸಿದ ಎಲ್ಲರನ್ನೂ ಬಂಧಿಸಿ : ಕಂಗನಾ

author img

By

Published : Jan 26, 2021, 9:24 PM IST

Updated : Jan 26, 2021, 9:30 PM IST

ಪೊಲೀಸ್​ ಬ್ಯಾರಿಕೇಡ್​ಗಳನ್ನು ಮುರಿದು ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನಾಕಾರರು, ಕೆಂಪುಕೋಟೆಯ ಮೇಲೆ ನಿಶಾನ್‌ ಸಾಹಿಬ್‌ ಧ್ವಜ ಹಾರಿಸಿದರು. ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ವಿವರಿಸಿ ಎಂದು ನಟಿ ಪ್ರಿಯಾಂಕಾ ಚೋಪ್ರಾ, ನಟ ಮತ್ತು ಗಾಯಕ ದಿಲ್ಜಿತ್​ ದೋಸಾಂಜ್ ಅವರಿಗೆ ಟ್ಯಾಗ್​ ಮಾಡಿದ್ದಾರೆ..

Kangana Ranaut
ನಟಿ ಕಂಗನಾ ರಣಾವತ್

ನವದೆಹಲಿ : ರೈತರ ಪ್ರತಿಭಟನೆಯನ್ನು ಬೆಂಬಲಿಸುವ ಎಲ್ಲರನ್ನೂ ಬಂಧಿಸಬೇಕು. ಪ್ರತಿಭಟನೆ ಸಂದರ್ಭದಲ್ಲಿ ಹಾನಿಗೊಳಗಾದ ಸರ್ಕಾರಿ ಆಸ್ತಿಪಾಸ್ತಿಯನ್ನು ಅವರಿಂದಲೇ ಭರಿಸಿಕೊಳ್ಳಬೇಕು ಎಂದು ಬಾಲಿವುಡ್ ನಟಿ ಕಂಗನಾ ರಣಾವತ್​ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಟಿ ಕಂಗನಾ ರಣಾವತ್​

ಕೆಂಪುಕೋಟೆಯಲ್ಲಿ ಕಂಡು ಬಂದ ದೃಶ್ಯ ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ. ಮತ್ತು ಈ ಪ್ರತಿಭಟನೆಗೆ ಹೆಚ್ಚು ಪ್ರೋತ್ಸಾಹ ನೀಡಿದವರನ್ನೂ ಜೈಲಿಗಟ್ಟಿ ಎಂದು ವಿಡಿಯೋ ಮೂಲಕ ಹೇಳಿರುವ ಕಂಗನಾ, ಪ್ರತಿಭಟನಾಕಾರರನ್ನು 'ಭಯೋತ್ಪಾದಕರು' ಎಂದು ಕರೆದಿದ್ದಾರೆ.

ಪೊಲೀಸ್​ ಬ್ಯಾರಿಕೇಡ್​ಗಳನ್ನು ಮುರಿದು ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನಾಕಾರರು, ಕೆಂಪುಕೋಟೆಯ ಮೇಲೆ ನಿಶಾನ್‌ ಸಾಹಿಬ್‌ ಧ್ವಜ ಹಾರಿಸಿದರು. ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ವಿವರಿಸಿ ಎಂದು ನಟಿ ಪ್ರಿಯಾಂಕಾ ಚೋಪ್ರಾ, ನಟ ಮತ್ತು ಗಾಯಕ ದಿಲ್ಜಿತ್​ ದೋಸಾಂಜ್ ಅವರಿಗೆ ಟ್ಯಾಗ್​ ಮಾಡಿದ್ದಾರೆ.

ದೆಹಲಿಯಲ್ಲಿ ನಡೆದ ಬೆಳವಣಿಗೆಗನ್ನು ನೋಡಿ ಇಡೀ ವಿಶ್ವವೇ ನಗುವಂತಾಗಿದೆ. ಇದೆಲ್ಲಾ ನಿಮಗೆ ಬೇಕಿತ್ತೇ.. ದೇಶದ ಮರ್ಯಾದೆ ಕಳೆದಿರುವ ನಿಮಗೆ ಅಭಿನಂದನೆಗಳು ಎಂದು ಟ್ವೀಟ್​​ನಲ್ಲಿ ಬರೆದುಕೊಂಡಿದ್ದಾರೆ.

  • The Tricolour CANNOT be disrespected.
    Absolutely unacceptable.
    Must be condemned unequivocally.

    — Gul Panag (@GulPanag) January 26, 2021 " class="align-text-top noRightClick twitterSection" data=" ">

ಈ ಟ್ಯಾಗ್​ಗೆ ಪ್ರತಿಕ್ರಿಯಿಸಿದ ದೋಸಾಂಜ್​ ಅವರು, ತ್ರಿವರ್ಣ ಧ್ವಜಕ್ಕೆ ಅಗೌರವ ತೋರಿರುವುದು ಸ್ವೀಕಾರಾರ್ಹವಲ್ಲ. ಇದನ್ನು ನಿಸ್ಸಂದಿಗ್ಧವಾಗಿ ಖಂಡಿಸಬೇಕು. ಶಾಂತಿಯುತ ಪ್ರತಿಭಟನೆಯನ್ನು ಮೊದಲ ದಿನದಿಂದ ಬೆಂಬಲಿಸಿದ್ದೇನೆ.

ಆದರೆ, ಈ ಹಿಂಸಾತ್ಮಕ ತಿರುವು ಖಂಡನೀಯ ಎಂದಿರುವ ಅವರು, ಈ ಪವಿತ್ರ ದಿನದಂದು (ಗಣರಾಜ್ಯೋತ್ಸವ ದಿನ) ತ್ರಿವರ್ಣ ಧ್ವಜ ಮಾತ್ರ ಕೆಂಪು ಕೋಟೆಯ ಮೇಲೆ ಹಾರಬೇಕು ಎಂದು ಉತ್ತರ ನೀಡಿದ್ದಾರೆ.

ರೈತರು ನಮ್ಮ ಸೈನಿಕರು. ಅವರ ಎಲ್ಲ ಭಯಗಳನ್ನು ಹೋಗಲಾಡಿಸುವುದು ಅಗತ್ಯ. ಅವರ ನಿರೀಕ್ಷೆಗಳನ್ನು ಈಡೇರಿಸಬೇಕು. ಪ್ರಜಾಪ್ರಭುತ್ವವಾಗಿ ಈ ವಿವಾದವನ್ನು ಶೀಘ್ರದಲ್ಲೇ ಪರಿಹರಿಸಬೇಕಿದೆ ಎಂದು ಕಳೆದ ಎರಡು ತಿಂಗಳಿನಿಂದ ರೈತರು ನಡೆಸುತ್ತಿರುವ ಹೋರಾಟಕ್ಕೆ ಈ ಹಿಂದೆ ಬೆಂಬಲ ಸೂಚಿಸಿದ್ದರು. ಹೀಗಾಗಿ, ಕಂಗನಾ ಅವರಿಗೆ ಟ್ಯಾಗ್​ ಮಾಡಿದ್ದಾರೆ. ಆದರೆ, ಪ್ರಿಯಾಂಕಾ ಚೋಪ್ರಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗಣರಾಜ್ಯೋತ್ಸವ ಶುಭಾಶಯ ಮಾತ್ರ ಹಂಚಿಕೊಂಡಿದ್ದಾರೆ.

ನವದೆಹಲಿ : ರೈತರ ಪ್ರತಿಭಟನೆಯನ್ನು ಬೆಂಬಲಿಸುವ ಎಲ್ಲರನ್ನೂ ಬಂಧಿಸಬೇಕು. ಪ್ರತಿಭಟನೆ ಸಂದರ್ಭದಲ್ಲಿ ಹಾನಿಗೊಳಗಾದ ಸರ್ಕಾರಿ ಆಸ್ತಿಪಾಸ್ತಿಯನ್ನು ಅವರಿಂದಲೇ ಭರಿಸಿಕೊಳ್ಳಬೇಕು ಎಂದು ಬಾಲಿವುಡ್ ನಟಿ ಕಂಗನಾ ರಣಾವತ್​ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಟಿ ಕಂಗನಾ ರಣಾವತ್​

ಕೆಂಪುಕೋಟೆಯಲ್ಲಿ ಕಂಡು ಬಂದ ದೃಶ್ಯ ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ. ಮತ್ತು ಈ ಪ್ರತಿಭಟನೆಗೆ ಹೆಚ್ಚು ಪ್ರೋತ್ಸಾಹ ನೀಡಿದವರನ್ನೂ ಜೈಲಿಗಟ್ಟಿ ಎಂದು ವಿಡಿಯೋ ಮೂಲಕ ಹೇಳಿರುವ ಕಂಗನಾ, ಪ್ರತಿಭಟನಾಕಾರರನ್ನು 'ಭಯೋತ್ಪಾದಕರು' ಎಂದು ಕರೆದಿದ್ದಾರೆ.

ಪೊಲೀಸ್​ ಬ್ಯಾರಿಕೇಡ್​ಗಳನ್ನು ಮುರಿದು ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನಾಕಾರರು, ಕೆಂಪುಕೋಟೆಯ ಮೇಲೆ ನಿಶಾನ್‌ ಸಾಹಿಬ್‌ ಧ್ವಜ ಹಾರಿಸಿದರು. ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ವಿವರಿಸಿ ಎಂದು ನಟಿ ಪ್ರಿಯಾಂಕಾ ಚೋಪ್ರಾ, ನಟ ಮತ್ತು ಗಾಯಕ ದಿಲ್ಜಿತ್​ ದೋಸಾಂಜ್ ಅವರಿಗೆ ಟ್ಯಾಗ್​ ಮಾಡಿದ್ದಾರೆ.

ದೆಹಲಿಯಲ್ಲಿ ನಡೆದ ಬೆಳವಣಿಗೆಗನ್ನು ನೋಡಿ ಇಡೀ ವಿಶ್ವವೇ ನಗುವಂತಾಗಿದೆ. ಇದೆಲ್ಲಾ ನಿಮಗೆ ಬೇಕಿತ್ತೇ.. ದೇಶದ ಮರ್ಯಾದೆ ಕಳೆದಿರುವ ನಿಮಗೆ ಅಭಿನಂದನೆಗಳು ಎಂದು ಟ್ವೀಟ್​​ನಲ್ಲಿ ಬರೆದುಕೊಂಡಿದ್ದಾರೆ.

  • The Tricolour CANNOT be disrespected.
    Absolutely unacceptable.
    Must be condemned unequivocally.

    — Gul Panag (@GulPanag) January 26, 2021 " class="align-text-top noRightClick twitterSection" data=" ">

ಈ ಟ್ಯಾಗ್​ಗೆ ಪ್ರತಿಕ್ರಿಯಿಸಿದ ದೋಸಾಂಜ್​ ಅವರು, ತ್ರಿವರ್ಣ ಧ್ವಜಕ್ಕೆ ಅಗೌರವ ತೋರಿರುವುದು ಸ್ವೀಕಾರಾರ್ಹವಲ್ಲ. ಇದನ್ನು ನಿಸ್ಸಂದಿಗ್ಧವಾಗಿ ಖಂಡಿಸಬೇಕು. ಶಾಂತಿಯುತ ಪ್ರತಿಭಟನೆಯನ್ನು ಮೊದಲ ದಿನದಿಂದ ಬೆಂಬಲಿಸಿದ್ದೇನೆ.

ಆದರೆ, ಈ ಹಿಂಸಾತ್ಮಕ ತಿರುವು ಖಂಡನೀಯ ಎಂದಿರುವ ಅವರು, ಈ ಪವಿತ್ರ ದಿನದಂದು (ಗಣರಾಜ್ಯೋತ್ಸವ ದಿನ) ತ್ರಿವರ್ಣ ಧ್ವಜ ಮಾತ್ರ ಕೆಂಪು ಕೋಟೆಯ ಮೇಲೆ ಹಾರಬೇಕು ಎಂದು ಉತ್ತರ ನೀಡಿದ್ದಾರೆ.

ರೈತರು ನಮ್ಮ ಸೈನಿಕರು. ಅವರ ಎಲ್ಲ ಭಯಗಳನ್ನು ಹೋಗಲಾಡಿಸುವುದು ಅಗತ್ಯ. ಅವರ ನಿರೀಕ್ಷೆಗಳನ್ನು ಈಡೇರಿಸಬೇಕು. ಪ್ರಜಾಪ್ರಭುತ್ವವಾಗಿ ಈ ವಿವಾದವನ್ನು ಶೀಘ್ರದಲ್ಲೇ ಪರಿಹರಿಸಬೇಕಿದೆ ಎಂದು ಕಳೆದ ಎರಡು ತಿಂಗಳಿನಿಂದ ರೈತರು ನಡೆಸುತ್ತಿರುವ ಹೋರಾಟಕ್ಕೆ ಈ ಹಿಂದೆ ಬೆಂಬಲ ಸೂಚಿಸಿದ್ದರು. ಹೀಗಾಗಿ, ಕಂಗನಾ ಅವರಿಗೆ ಟ್ಯಾಗ್​ ಮಾಡಿದ್ದಾರೆ. ಆದರೆ, ಪ್ರಿಯಾಂಕಾ ಚೋಪ್ರಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗಣರಾಜ್ಯೋತ್ಸವ ಶುಭಾಶಯ ಮಾತ್ರ ಹಂಚಿಕೊಂಡಿದ್ದಾರೆ.

Last Updated : Jan 26, 2021, 9:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.